ಆ್ಯಪ್ನಗರ

ಮುದ್ದಿನ ಮಗಳು ಸಮನ್ವಿ ಅಗಲಿದ ದುಃಖದಲ್ಲಿ ತಾಯಿ ಅಮೃತಾ ನಾಯ್ಡು ಮಾಡಿದ ಮನವಿ ಏನು?

'ನನ್ನಮ್ಮ ಸೂಪರ್ ಸ್ಟಾರ್' ರಿಯಾಲಿಟಿ ಶೋ ಮೂಲಕ ಜನರ ಪ್ರೀತಿ ಗಳಿಸಿದ್ದ ಪುಟ್ಟ ಕಂದ ಸಮನ್ವಿ ಗುರುವಾರ (ಜ.13) ನಡೆದ ಅಪಘಾತದಲ್ಲಿ ಸಾವನ್ನಪ್ಪಿದ್ದಳು. ಇದೀಗ ಪುಟ್ಟ ಕಂದನ ಬಗ್ಗೆ ತಾಯಿ ಅಮೃತಾ ನಾಯ್ಡು ಒಂದು ಪೋಸ್ಟ್‌ ಹಾಕಿದ್ದಾರೆ.

Vijaya Karnataka Web 16 Jan 2022, 6:42 pm

ಹೈಲೈಟ್ಸ್‌:

  • ಕೋಣನಕುಂಟೆ ಬಳಿ ನಡೆದ ರಸ್ತೆ ಅಪಘಾತದಲ್ಲಿ ಸಮನ್ವಿ ನಿಧನ
  • ತಾಯಿ ಜೊತೆಗೆ ಸ್ಕೂಟರ್‌ನಲ್ಲಿ ಹೋಗುವಾಗ ಲಾರಿ ಡಿಕ್ಕಿಯಾಗಿ ಸಂಭವಿಸಿದ್ದ ಅವಘಡ
  • ಮಗಳ ಬಗ್ಗೆ ಪೋಸ್ಟ್ ಹಾಕಿದ ತಾಯಿ ಅಮೃತಾ ನಾಯ್ಡು

ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web Samanvi
'ನನ್ನಮ್ಮ ಸೂಪರ್ ಸ್ಟಾರ್' ರಿಯಾಲಿಟಿ ಶೋ ಮೂಲಕ ರಾಜ್ಯದ ಮನೆ ಮಾತಾಗಿದ್ದ ಪುಟಾಣಿ ಸಮನ್ವಿ ಈಚೆಗಷ್ಟೇ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಳು. ಮುದ್ದಿನ ಮಗಳ ಅಗಲಿಕೆ ಅಮೃತಾ ನಾಯ್ಡು ದಂಪತಿಗೆ ತೀವ್ರ ನೋವನ್ನುಂಟು ಮಾಡಿದೆ. ಇದೀಗ ಇದೇ ಮೊದಲ ಬಾರಿಗೆ ಮಗಳ ಕುರಿತು ಅಮೃತಾ ನಾಯ್ಡು ಪ್ರತಿಕ್ರಿಯಿಸಿದ್ದಾರೆ. ಮಗಳಿಗಾಗಿ ಒಂದು ಮನವಿ ಮಾಡಿಕೊಂಡಿದ್ದಾರೆ. ಅದನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.
ತಾಯಿ ಅಮೃತಾ ನಾಯ್ಡು ಹೇಳಿದ್ದೇನು?
'ದೇವರ ಪ್ರತಿರೂಪವಾಗಿ ಕಾಣುತ್ತಿರುವ ನಿಮ್ಮೆಲ್ಲರಲ್ಲಿ ನನ್ನದೊಂದು ಪ್ರಾರ್ಥನೆ. ನಾನು ಈಗ ನಾಲ್ಕು ತಿಂಗಳ ಗರ್ಭಿಣಿ. ಮತ್ತೆ ನನ್ನ ಮುದ್ದು ಕಂದಮ್ಮ ಸಮನ್ವಿಯ ಬರುವಿಕೆಗಾಗಿ ಈ ತಾಯಿ ಜೀವ ಹಂಬಲಿಸುತಿದೆ. ದಯಮಾಡಿ ನನಗೊಂದು ಸಹಾಯ ಮಾಡಿ. ಆ ಭಗವಂತನಲ್ಲಿ ಪ್ರಾರ್ಥಿಸಿ, ನಿಮ್ಮೆಲ್ಲರ ಪ್ರಾರ್ಥನೆಯ ಒತ್ತಾಯದಿಂದಾರೂ, ನನ್ನ ಕಂದಮ್ಮನನ್ನು ಆ ಭಗವಂತ ಮರಳಿ ಕಳಿಸಿಬಿಡಲಿ. ಅವಳನ್ನು ನನ್ನ ಗರ್ಭದಲ್ಲಿ ಜೋಪಾನ ಮಾಡಿಕೊಳ್ಳುತ್ತೇನೆ. ದಯಮಾಡಿ ಈ ತಾಯಿ ಕರೆಗೆ ಕೈಜೋಡಿಸಿ, ನನ್ನ ಸಮನ್ವಿಯ ಪುನಃ ಬರುವಿಕೆಗೆ ಸಹಾಯ ಮಾಡಿ, ಪ್ರಾರ್ಥಿಸಿ. ಅವಳೇ ಮತ್ತೆ ನನ್ನ ಮಗಳಾಗಿ ಬರಬೇಕು. ನಿಮ್ಮೆಲ್ಲರ ಪ್ರಾರ್ಥನೆಯಿಂದ ಇದು ಸಾಧ್ಯ. ಅವಳು ಮರಳಿ ಬರಲಿ ಎಂದು ದಯವಿಟ್ಟು ಎಲ್ಲರೂ ಪ್ರಾರ್ಥನೆ ಮಾಡಿ. ಆಗಷ್ಟೇ ನಾನು ಮತ್ತೆ ಬದುಕು ಕಟ್ಟಿಕೊಳ್ಳಲು ಸಾಧ್ಯ' ಎಂದು ಭಾವುಕ ಮನವಿಯೊಂದನ್ನು ಮಾಡಿದ್ದಾರೆ ಅಮೃತಾ ನಾಯ್ಡು.

ಅಪಘಾತ ಆಗಿದ್ದೆಲ್ಲಿ?
ಕೋಣನಕುಂಟೆಯ ವಾಜರಹಳ್ಳಿಯ ಬಳಿ ಪುತ್ರಿ ಸಮನ್ವಿ ಜೊತೆಗೆ ಅಮೃತಾ ನಾಯ್ಡು ಸ್ಕೂಟರ್‌ನಲ್ಲಿ ತೆರಳುತ್ತಿದ್ದರು. ಆ ವೇಳೆ ಟಿಪ್ಪರ್ ಲಾರಿಯೊಂದು ಅಮೃತಾ ಮತ್ತು ಸಮನ್ವಿ ಇದ್ದ ಸ್ಕೂಟರ್‌ಗೆ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ 6 ವರ್ಷದ ಸಮನ್ವಿ ಸ್ಥಳದಲ್ಲೇ ಸಾವನ್ನಪ್ಪಿದಳು. ಅಮೃತಾಗೆ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಲಾರಿ ಚಾಲಕನನ್ನು ಕುಮಾರಸ್ವಾಮಿ ಲೇಔಟ್ ಪೊಲೀಸರು ವಶಕ್ಕೆ ಪಡೆದು, ವಿಚಾರಣೆ ಮುಂದುವರಿಸಿದ್ದಾರೆ.

Samanvi: ಅಮೃತಾ ನಾಯ್ಡು ದಂಪತಿಯ ಬಾಳಿಗೆ ವರವಾಗಿ ಬಂದಿದ್ದ ಸಮನ್ವಿ

ಆಕ್ರೋಶ ವ್ಯಕ್ತಪಡಿಸಿದ್ದ ರಿಷಿ ಕುಮಾರ ಸ್ವಾಮೀಜಿ
ಸಮನ್ವಿ ನಿಧನದ ಬಗ್ಗೆ ಮಾತನಾಡಿದ್ದ ರಿಷಿ ಕುಮಾರ ಸ್ವಾಮೀಜಿ ಅವರು, 'ಈ ವಾರ ಗುಂಡಿ ತೆಗೆದರೆ, ಎರಡು ತಿಂಗಳು ಆ ಗುಂಡಿ ಮುಚ್ಚಲ್ಲ, ಹಾಗೇ ಬಿಡ್ತಾರೆ. ಸ್ಮಾರ್ಟ್ ಸಿಟಿ ಮಾಡ್ತೀರಾ? ನಿಮ್ ಸ್ಮಾರ್ಟ್ ಸಿಟಿಗೆ ಬಲಿ ಇದು. ಹಿಂದೆ ಡ್ಯಾಮ್‌ ಕಟ್ಟುವಾಗ ಮನುಷ್ಯರನ್ನು ಬಲಿ ಕೋಡೋರು ಅಂತ ಹೇಳ್ತಾ ಇದ್ರು. ನೀವು ರೋಡ್ ಮಾಡುವಾಗ ಎಲ್ಲ ಮನುಷ್ಯರನ್ನು ಬಲಿ ಕೊಟ್ಟುಬಿಡಿ. ನಾನು ಸರ್ಕಾರವನ್ನು ದೂಷಣೆ ಮಾಡ್ತಿಲ್ಲ. ಮಾಡೋ ಕೆಲಸವನ್ನು ನ್ಯಾಯವಾಗಿ ಮಾಡಿ' ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.

ಸಮನ್ವಿ ನಿಧನಕ್ಕೆ ಕಂಬನಿ ಮಿಡಿದ ಅನು ಪ್ರಭಾಕರ್‌; 'ದೇವರು ಇದ್ದಾನೋ, ಇಲ್ಲವೋ' ಎಂದ ಸೃಜನ್ ಲೋಕೇಶ್‌

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ