ಆ್ಯಪ್ನಗರ

ನಿಶ್ಚಿತಾರ್ಥ ಮಾಡಿಕೊಂಡ 'ನನ್ನರಸಿ ರಾಧೆ' ಧಾರಾವಾಹಿ ನಟಿ ವಿಹಾರಿಕಾ; ಡಿಸೆಂಬರ್‌ನಲ್ಲಿ ಕಲ್ಯಾಣ

'ನನ್ನರಸಿ ರಾಧೆ' ಧಾರಾವಾಹಿ ನಟಿ ವಿಹಾರಿಕಾ ಅವರು ಬೆಂಗಳೂರಿನಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದು, ಡಿಸೆಂಬರ್‌ನಲ್ಲಿ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರಂತೆ. ವಿಹಾರಿಕಾ ಮದುವೆ ಆಗುತ್ತಿರುವ ಹುಡುಗ ಕೂಡ ನಟ. ಯಾರದು?

Authored byಪದ್ಮಶ್ರೀ ಭಟ್ | Vijaya Karnataka Web 12 Oct 2021, 11:09 am

ಹೈಲೈಟ್ಸ್‌:


  • 'ನನ್ನರಸಿ ರಾಧೆ' ಧಾರಾವಾಹಿಯಲ್ಲಿ ಶಿವಾನಿ ಪಾತ್ರ ಮಾಡುತ್ತಿರುವ ನಟಿ ವಿಹಾರಿಕಾ
  • ಬೆಂಗಳೂರಿನಲ್ಲಿ ನಿಶ್ಚಿತಾರ್ಥ ಮಾಡಿಕೊಂಡ ನಟಿ ವಿಹಾರಿಕಾ
  • ಡಿಸೆಂಬರ್‌ನಲ್ಲಿ ನಡೆಯಲಿದೆ ವಿಹಾರಿಕಾ ಮದುವೆ
  • ವಿಹಾರಿಕಾ ಮದುವೆ ಆಗುತ್ತಿರುವ ಹುಡುಗ ಯಾರು?

ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web Nannarasi Radhe Serial
'ನನ್ನರಸಿ ರಾಧೆ' ಧಾರಾವಾಹಿಯಲ್ಲಿ ಶಿವಾನಿ ಎಂಬ ನೆಗೆಟಿವ್ ಶೇಡ್‌ನಲ್ಲಿ ಕಾಣಿಸಿಕೊಳ್ಳುತ್ತಿರುವ ನಟಿ ವಿಹಾರಿಕಾ ಅವರು ಬೆಂಗಳೂರಿನಲ್ಲಿ ಅಕ್ಟೋಬರ್ 10ರಂದು ನಟ ಕಿರಣ್ ಬಗಾಡೆ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಈ ವಿಷಯವನ್ನು ಅವರು ಹಂಚಿಕೊಂಡಿದ್ದಾರೆ. ಆನಂತರದಲ್ಲಿ ನಿಶ್ಚಿತಾರ್ಥ, ಮದುವೆ ಬಗ್ಗೆ 'ವಿಜಯ ಕರ್ನಾಟಕ ವೆಬ್' ಜೊತೆ ವಿಹಾರಿಕಾ ಹಂಚಿಕೊಂಡಿದ್ದಾರೆ.
"4 ವರ್ಷದಿಂದ ಮನೆಯಲ್ಲಿ ನನಗೆ ಮದುವೆ ಮಾಡಲು ಪ್ರಯತ್ನಪಡುತ್ತಿದ್ದರು. ಟಿಂಡರ್‌ನಲ್ಲಿ ನಾನು ಸೀರಿಯಸ್ ರಿಲೇಶನ್‌ಶಿಪ್‌ ಬೇಕು ಎಂದು ವಿವರಣೆ ಬರೆದಿದ್ದೆ, ಟಿಂಡರ್‌ನಲ್ಲಿಯೂ ನಾನು ವರನ ಹುಡುಕಾಟ ಮಾಡಿದ್ದೆ. ಅಂತೆಯೇ ಕಿರಣ್ ಬಗಾಡೆ ಕೂಡ ಟಿಂಡರ್‌ನಲ್ಲಿ ಸೀರಿಯಸ್ ರಿಲೇಶನ್‌ಶಿಪ್ ಬೇಕು ಎಂದು ಅವರು ಬರೆದಿದ್ದರು. ನಾನು ಕಿರಣ್ ಪ್ರೊಫೈಲ್ ನೋಡಿ ಮೆಸೇಜ್ ಕಳಿಸಿದೆ, ತದನಂತರದಲ್ಲಿ ಕಿರಣ್ ರಿಯಲ್ ಅಕೌಂಟ್ ಹೌದೋ ಇಲ್ಲವೋ ಎಂಬ ಬಗ್ಗೆ ಪರೀಕ್ಷೆ ಮಾಡಿದೆ. ಆಮೇಲೆ ಇಬ್ಬರ ಮಾತುಕತೆ ನಡೆಯಿತು" ಎಂದು ವಿಹಾರಿಕಾ ಹೇಳಿದ್ದಾರೆ.

'ನನ್ನರಸಿ ರಾಧೆ' ನಟಿಗಿದೆ ವಿಶಿಷ್ಟ ಕನಸು: ಕೌಸ್ತುಭ ಮಣಿಗೆ ಪ್ರಿಯತಮ ಹೀಗೆ ಪ್ರಪೋಸ್ ಮಾಡಬೇಕಂತೆ!

"ಮನೆಯಲ್ಲಿಯೂ ತಿಳಿಸಿದ ನಂತರದಲ್ಲಿ ನಾವಿಬ್ಬರೂ ಮುಖಾಮುಖಿ ಭೇಟಿ ಆದೆವು. ನಮ್ಮ ತಂದೆ ಕಿರಣ್ ಕುಟುಂಬದವರನ್ನು ಭೇಟಿ ಮಾಡಿದರು. ಮನೆಯಲ್ಲಿಯೂ ಯಾವುದೇ ತರಕಾರು ಇರಲಿಲ್ಲ. ಎಲ್ಲರೂ ಖುಷಿಯಿಂದ ಇಬ್ಬರೂ ಮದುವೆ ಮಾಡಿಕೊಳ್ಳಲು ಒಪ್ಪಿದ್ದಾರೆ. ಕಿರಣ್ ಸಹೋದರ ಕೂಡ ನಿರ್ದೇಶಕ. ಕಿರಣ್ ನಟನೆಯ ಜೊತೆಗೆ ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದಾರೆ" ಎಂದು ನಟಿ ವಿಹಾರಿಕಾ 'ವಿಜಯ ಕರ್ನಾಟಕ ವೆಬ್'ಗೆ ಹೇಳಿದ್ದಾರೆ.

ಉಚಿತ ವೃದ್ಧಾಶ್ರಮಗಳನ್ನು ನಡೆಸುತ್ತಿರುವ 'ನನ್ನರಸಿ ರಾಧೆ' ಧಾರಾವಾಹಿ ಕುಟುಂಬಸ್ಥರು!

"ನಾವಿಬ್ಬರೂ ಕಲಾವಿದರು, ನಮ್ಮ ಯೋಚನೆಗಳು ಒಂದೇ ರೀತಿ ಇವೆ. ನಾನು ಮದುವೆ ನಂತರ ನಟಿಸುತ್ತೇನೆ ಎಂದರೂ ಕಿರಣ್ ಕುಟುಂಬ ತುಂಬ ಬೆಂಬಲ ನೀಡುತ್ತದೆ. ಕಿರಣ್ ಮೂಲತಃ ಕೊಪ್ಪಳದವರು. ಬಹಳ ಬೇಗ ಮದುವೆ ಮಾಡೋಣ ಎಂದುಕೊಂಡಿದ್ದಾರೆ. ಅಕ್ಟೋಬರ್ 10ರಂದು ನಿಶ್ಚಿತಾರ್ಥ ನಡೆದಿದೆ. ಡಿಸೆಂಬರ್‌ 6ಕ್ಕೆ ಬೆಂಗಳೂರಿನಲ್ಲಿ ಮದುವೆ ನಡೆಯಲಿದೆ" ಎಂದು ನಟಿ ವಿಹಾರಿಕಾ ಹೇಳಿದ್ದಾರೆ.

"'ಆತ್ಮಬಂಧನ' ಧಾರಾವಾಹಿಯಲ್ಲಿ ಕಿರಣ್ ಅಘೋರಿ ಪಾತ್ರ ಮಾಡಿದ್ದಾರೆ. 'ಮಾರ್ಟೀನ್', 'ರಾಮಾರ್ಜುನ', 'ಕ್ರಾಂತಿ ಕಹಳೆ', 'ಬಿಲ್ ಗೇಟ್ಸ್' ಮುಂತಾದ ಸಿನಿಮಾಗಳಲ್ಲಿ ಕಿರಣ್ ಪೋಷಕ ಪಾತ್ರ ಮಾಡಿದ್ದಾರೆ. ನಟನೆ ಬಿಡುವ ಯಾವ ಆಲೋಚನೆ ಕೂಡ ನನಗೆ ಇಲ್ಲ. ಆರಂಭದಲ್ಲಿ ನಮ್ಮ ಮನೆಯಲ್ಲಿ ನಟನೆಗೆ ವಿರೋಧವಿದ್ದರೂ ಕೂಡ, ಆನಂತರದಲ್ಲಿ ನನ್ನ ಗಂಡ ಏನು ಹೇಳ್ತಾನೋ ಅದರ ಮೇಲೆ ಆಧರಿತವಾಗಿರುತ್ತದೆ ಎಂದರು" ಎಂದು ನಟಿ ವಿಹಾರಿಕಾ ಹೇಳಿದ್ದಾರೆ.

ನಟಿ ವಿಹಾರಿಕಾ ಅವರು ಜಿಮ್ ಟ್ರೇನರ್ ಆಗಿ ಕೂಡ ಕೆಲಸ ಮಾಡುತ್ತಿದ್ದರು. ಫಿಟ್‌ನೆಸ್ ಕಡೆಗೆ ವಿಹಾರಿಕಾ ತುಂಬ ಗ ಮನ ನೀಡುತ್ತಾರೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಧಾರಾವಾಹಿ, ಸಿನಿಮಾಗಳಲ್ಲಿ ನಟಿಸುವ ಆಸೆ ವಿಹಾರಿಕಾಗೆ ಇದೆ.

'ನನ್ನರಸಿ ರಾಧೆ' ಧಾರಾವಾಹಿಯಲ್ಲಿ ನಟ ಅಭಿನವ್ ವಿಶ್ವನಾಥನ್, ಕೌಸ್ತುಭ ಮಣಿ, ಸಿಹಿಕಹಿ ಚಂದ್ರು, ವೀಣಾ ರಾವ್ ಮುಂತಾದವರು ನಟಿಸುತ್ತಿದ್ದಾರೆ.
ಲೇಖಕರ ಬಗ್ಗೆ
ಪದ್ಮಶ್ರೀ ಭಟ್
ವಿಜಯ ಕರ್ನಾಟಕ' ವೆಬ್‌ನಲ್ಲಿ ಸಿನಿಮಾ ಪತ್ರಕರ್ತೆಯಾಗಿ 2019ರಿಂದ ಪದ್ಮಶ್ರೀ ಭಟ್ ಕಾರ್ಯನಿರ್ವಹಿಸುತ್ತಿದ್ದಾರೆ. ಇದಕ್ಕೂ ಮುನ್ನ ರಾಜ್ಯಮಟ್ಟದಲ್ಲಿ ಪತ್ರಿಕೆಯಲ್ಲಿ ಕೆಲಸ ಮಾಡಿದ ಅನುಭವ ಇವರಿಗೆ ಇದೆ. 'ವಿಜಯ ಕರ್ನಾಟಕ' ವೆಬ್‌ನಲ್ಲಿ ಲೇಖನಗಳನ್ನು ಬರೆಯುವುದರ ಜೊತೆಗೆ ಸೆಲೆಬ್ರಿಟಿಗಳ ಸಂದರ್ಶನಗಳನ್ನು ಮಾಡುತ್ತಿದ್ದಾರೆ. ಪುಸ್ತಕ ಓದುವುದು, ಪ್ರವಾಸ ಪದ್ಮಶ್ರೀ ಅವರ ಇಷ್ಟದ ಹವ್ಯಾಸಗಳು.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ