ಆ್ಯಪ್ನಗರ

'ಮಜಾ ಟಾಕೀಸ್'ನ ಕುಡುಕ ಪಾತ್ರಧಾರಿ ನವೀನ್ ಪಡೀಲ್ ಯಾರು? ಎಲ್ಲಿಯವರು ?

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿರುವ 'ಮಜಾ ಟಾಕೀಸ್‌' ಶೋನಲ್ಲಿ ಹಲವು ಪ್ರತಿಭೆಗಳಿವೆ. ಅವರಲ್ಲಿ ನವೀನ್ ಡಿ ಪಡೀಲ್ ಕೂಡ ಒಬ್ಬರು. ನವೀನ್ ಯಾರು? ಎಲ್ಲಿಯವರು? ಎಂಬ ಬಗ್ಗೆ ಇಲ್ಲಿದೆ ಮಾಹಿತಿ.

THE TIMES OF INDIA NEWS SERVICE 25 Aug 2020, 3:32 pm
ರಂಗಭೂಮಿ ಹಾಗೂ ತುಳು ಸಿನಿಮಾಗಳಲ್ಲಿ ನಟ ನವೀನ್ ಡಿ ಪಡೀಲ್ ಹೆಸರು ಚಿರಪರಿಚಿತ. ಇವರಿಗೆ ತುಳು ಇಂಡಸ್ಟ್ರಿಯಲ್ಲಿ ಸಾಕಷ್ಟು ಜನರು ಅಭಿಮಾನಿ ಬಳಗವಿದೆ. ಕೆಲ ವರ್ಷಗಳ ಹಿಂದೆ ನವೀನ್ ಅವರು ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟಿದ್ದರು. ಈಗ ಅವರು 'ಮಜಾ ಟಾಕೀಸ್‌'ನಲ್ಲಿ ಭಾಗವಹಿಸಲು ಕಾಯುತ್ತಿದ್ದಾರೆ. ನವೀನ್ 'ಟೈಮ್ಸ್ ಆಫ್ ಇಂಡಿಯಾ'ಕ್ಕೆ ನೀಡಿದ ಸಂದರ್ಶನದಲ್ಲಿ ಅವರು ಹಲವು ವಿಚಾರಗಳನ್ನು ಹೇಳಿದ್ದಾರೆ.
Vijaya Karnataka Web naveen d padil speaks about srujan lokesh starrer maja talkies show
'ಮಜಾ ಟಾಕೀಸ್'ನ ಕುಡುಕ ಪಾತ್ರಧಾರಿ ನವೀನ್ ಪಡೀಲ್ ಯಾರು? ಎಲ್ಲಿಯವರು ?


ನವೀನ್ ಮಂಗಳೂರು ಭಾಷೆಗೆ ಫುಲ್ ಡಿಮ್ಯಾಂಡ್!

'ಕರಾವಳಿ ಭಾಗದ ವ್ಯಕ್ತಿಯಾಗಿ ನಾನು ನನ್ನ ಪ್ರತಿಭೆಯನ್ನು ನಾನು ದೊಡ್ಡ ಮಟ್ಟದಲ್ಲಿ ಜನರಿಗೆ ತೋರಿಸಬೇಕು ಎಂದುಕೊಂಡಿದ್ದೆ. ಹೀಗಾಗಿ 'ಮಜಾ ಟಾಕೀಸ್ ' ಸೀಸನ್ 1 & 2ರಲ್ಲಿ ನಾನು ಭಾಗವಹಿಸಿದೆ. ಮೊದಲು ಮೂರು ಎಪಿಸೋಡ್‌ನಲ್ಲಿ ಭಾಗವಹಿಸಿದೆ. ಆಮೇಲೆ ಮಂಗಳೂರಿನ ಶೂಟಿಂಗ್ ಶೆಡ್ಯೂಲ್‌ನಲ್ಲಿ ಪರ್ಮಿಶನ್ ಸಿಕ್ಕಿದಾಗ 'ಮಜಾ ಟಾಕೀಸ್‌'ನ ಹಲವು ಸಂಚಿಕೆಗಳಲ್ಲಿ ಭಾಗವಹಿಸಲು ಸಾಧ್ಯವಾಯ್ತು. ನನ್ನ ಪಾತ್ರ ಹಾಗೂ ಮಂಗಳೂರು ಕನ್ನಡ ಮಾತನಾಡುವುದನ್ನು ಕಂಡು ಜನರು ನನಗೆ ಅಪಾರ ಪ್ರೀತಿ ತೋರಿಸಿದ್ದಾರೆ. ಲಾಕ್‌ಡೌನ್ ಟೈಮ್‌ನಲ್ಲಿ ನಾನು ಲೈವ್ ಪ್ರೇಕ್ಷಕರನ್ನು, ಶೂಟಿಂಗ್‌ನ್ನು ಮಿಸ್ ಮಾಡಿಕೊಳ್ಳುತ್ತಿದ್ದೆ. ಆದರೆ ಸುರಕ್ಷತೆ ಮೊದಲ ಆದ್ಯತೆಯಾಗಿರಬೇಕಲ್ಲವೇ!' ಎಂದು ನವೀನ್ ಹೇಳಿದ್ದಾರೆ.

ನವೀನ್ ಕೈಯಲ್ಲಿ ಈಗ ಸಾಕಷ್ಟು ಪ್ರಾಜೆಕ್ಟ್‌ಗಳಿವೆ
ನಟ/ ನಿರ್ದೇಶಕ ರೂಪೇಶ್ ಶೆಟ್ಟಿ ಜೊತೆ ಸೇರಿ ನವೀನ್ ಪಡೀಲ್ ಅವರು ವೆಬ್ ಸಿರೀಸ್‌ನಲ್ಲಿ ನಟಿಸುತ್ತಿದ್ದಾರೆ. 'ಪೆಪ್ಪೆರೆರೆ ಪೆರೆರೆ', 'ಬಬನ್ನಾನಾ ಟ್ಯಾಕ್ಸಿ', 'ಸರ್ಕಸ್' ಮುಂತಾದ ಪ್ರಾಜೆಕ್ಟ್‌ಗಳಲ್ಲಿ ನವೀನ್ ಪಡೀಲ್ ಅವರು ಬಣ್ಣ ಹಚ್ಚುತ್ತಿದ್ದಾರೆ. 'ಗಿರ್‌ಗಿಟ್' ಸಿನಿಮಾ ಮೂಲಕ ನವೀನ್ ತುಳು ಉದ್ಯಮದಲ್ಲಿ ಸಾಕಷ್ಟು ಮೆಚ್ಚುಗೆ ಗಳಿಸಿದ್ದರು.

Also Read-Kuri Prathap: 'ಮಜಾ ಟಾಕೀಸ್‌' ಪ್ರಸಾರಕ್ಕೆ ಡೇಟ್ ಫಿಕ್ಸ್! ನಗಿಸಲು ಕುರಿ ಪ್ರತಾಪ್‌ ರೆಡಿ

ಮಜಾ ಟಾಕೀಸ್ ಮತ್ತೆ ಆರಂಭ!
ನಟ, ನಿರೂಪಕ ಸೃಜನ್ ಲೋಕೇಶ್ ಸಾರಥ್ಯದ ಕನ್ನಡ ಕಿರುತೆರೆಯ ಜನಪ್ರಿಯ ಶೋ 'ಮಜಾ ಟಾಕೀಸ್‌' ಮತ್ತೆ ಆರಂಭಗೊಳ್ಳಲಿದೆ. ಆಗಸ್ಟ್ 29, ರಾತ್ರಿ 8 ಗಂಟೆಗೆ ಗ್ರ್ಯಾಂಡ್ ಆಗಿ 'ಮಜಾ ಟಾಕೀಸ್‌' ಲಾಂಚ್ ಆಗಲಿದ್ದು, ಈಗಾಗಲೇ ವಿಭಿನ್ನವಾದ ಪ್ರೋಮೋ ರಿಲೀಸ್ ಆಗಿವೆ. ಸೃಜನ್‌ ಲೋಕೇಶ್‌, ಕುರಿ ಪ್ರತಾಪ್‌, ಮಂಡ್ಯ ರಮೇಶ್‌, ಅಪರ್ಣಾ, ಪವನ್‌, ವಿಶ್ವ, ವಿ. ಮನೋಹರ್, ಮಿಮಿಕ್ರಿ ದಯಾನಂದ್, ನವೀನ್ ಪಡೀಲ್ ಮುಂತಾದವರು ಇದ್ದಾರೆ. ಈ ಬಾರಿ ಶ್ವೇತಾ ಚೆಂಗಪ್ಪ ಈ ಕಾರ್ಯಕ್ರಮದಲ್ಲಿ ಇರಲಿದ್ದಾರೋ ಇಲ್ಲವೋ ಎಂಬ ಬಗ್ಗೆ ಖಚಿತತೆ ಇಲ್ಲ!
Also Read-'ಮಜಾ ಟಾಕೀಸ್‌' ಹೊಸ ಸೀಸನ್‌ ಸದ್ಯದಲ್ಲೇ ಶುರು! ಸೃಜನ್‌ ಮಾಡಿಕೊಂಡ ಸೂಪರ್‌ ಪ್ಲ್ಯಾನ್‌ ಇಲ್ಲಿದೆ!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ