ಆ್ಯಪ್ನಗರ

ಐದು ವರ್ಷಗಳ ಬಳಿಕ ಧಾರಾವಾಹಿಯಲ್ಲಿ ಬಣ್ಣಹಚ್ಚಿದ ನಟಿ ಅಪರ್ಣಾ

ಬರೋಬ್ಬರಿ ಐದು ವರ್ಷಗಳ ಗ್ಯಾಪ್ ಬಳಿಕ ನಟಿ, ನಿರೂಪಕಿ ಅಪರ್ಣಾ ವಸ್ತಾರೆ ಅವರು ಮತ್ತೆ ಧಾರಾವಾಹಿಯಲ್ಲಿ ಬಣ್ಣ ಹಚ್ಚುತ್ತಿದ್ದಾರೆ. ಈ ಸಲ ತಾಯಿಯಾಗಿ ಮಜಾ ಟಾಕೀಸ್‌ನ ಒನ್ ಅಂಡ್ ಓನ್ಲಿ ವರಲಕ್ಷ್ಮಿ ಕಾಣಿಸಿಕೊಳ್ಳುತ್ತಿದ್ದಾರೆ.

Vijaya Karnataka Web 9 Sep 2019, 12:08 pm

ನಟಿ ಅಪರ್ಣಾ ಅವರನ್ನು ನಟಿ ಎಂಬುದಕ್ಕಿಂತ ಹೆಚ್ಚಾಗಿ ಜನ ಗುರುತಿಸಿದ್ದು ಅಚ್ಚಗನ್ನಡದ ನಿರೂಪಕಿಯಾಗಿ. ಬೆಂಗಳೂರು ಮೆಟ್ರೋದಲ್ಲಿ ಕಿವಿಗೆ ಬೀಳುವ ಅಚ್ಚಗನ್ನಡದ ಮುದ್ರಿತ ಧ್ವನಿ ಅಪರ್ಣಾ ಅವರದು ಎಂಬುದು ಬಹಳಷ್ಟು ಮಂದಿಗೆ ಗೊತ್ತಿಲ್ಲ.
Vijaya Karnataka Web aparna


ಇದಕ್ಕಿಂತಲೂ ಹೆಚ್ಚು ಜನಪ್ರಿಯತೆಯನ್ನು ತಂದುಕೊಟ್ಟಿದ್ದು ಮಜಾ ಟಾಕೀಸ್ ಶೋ. ಇದರಲ್ಲಿ ಒನ್ ಅಂಡ್ ಒನ್ಲಿ ವರಲಕ್ಷ್ಮಿಯಾಗಿ ಅಪರ್ಣಾ ಕಿರುತೆರೆ ವೀಕ್ಷಕರಿಗೆ ಚಿರಪರಿಚಿತ. ಇದೀಗ ಐದು ವರ್ಷಗಳ ಗ್ಯಾಪ್ ಬಳಿಕ ಧಾರಾವಾಹಿಗೆ ಮರಳಿದ್ದಾರೆ.
ಬೆಳ್ಳಿಪರದೆಗೆ ಒನ್ ಅಂಡ್ ಓನ್ಲಿ ಅಪರ್ಣಾ

ಯಶವಂತ್ ಪೋಷಿಸಿರುವ ಪಾರ್ಥ ಪಾತ್ರಕ್ಕೆ ತಾಯಿಯಾಗಿ ಅಭಿನಯಿಸಿದ್ದಾರೆ ಅಪರ್ಣಾ. ತನ್ನ ಮಗನಿಗೆ ಜಟಿಲ ಪರಿಸ್ಥಿತಿಯಲ್ಲಿ ಆಸರೆಯಾಗಿ ನಿಲ್ಲುವ ಮಹತ್ವದ ಪಾತ್ರ ಅಪರ್ಣಾ ಅವರದು. ಅಂದಹಾಗೆ ಇದು ಮರಾಠಿಯ 'ಹೇ ಮನ್ ಬವಾರೆ' ಧಾರಾವಾಹಿಯ ರೀಮೇಕ್.

ಪುಟ್ಟಣ್ಣ ಕಣಗಾಲ್ ನಿರ್ದೇಶನದ 'ಮಸಣದ ಹೂವು' ಧಾರಾವಾಹಿ ಮೂಲಕ ಬೆಳ್ಳಿಪರದೆಗೆ ಅಡಿಯಿಟ್ಟ ಅಪರ್ಣಾ ಅವರು ಬಳಿಕ ಇನ್ಸ್‌ಪೆಕ್ಟರ್ ವಿಕ್ರಂ, ನಮ್ಮೂರ ರಾಜ, ಒಂದಾಗಿ ಬಾಳು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಕಿರುತೆರೆಯಲ್ಲಿ ಮೂಡಲಮನೆ, ಮುಕ್ತ ಧಾರಾವಾಹಿಗಳ ಮೂಲಕ ವೀಕ್ಷಕರಿಗೆ ಇನ್ನಷ್ಟು ಹತ್ತಿರವಾಗಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ