ಆ್ಯಪ್ನಗರ

ಶೂಟಿಂಗ್ ವೇಳೆ ಈ ವಿಚಾರಕ್ಕೇನೇ 'ಪಾರು' ಧಾರಾವಾಹಿ ನಟಿ ಮೋಕ್ಷಿತಾಗೆ ಕಷ್ಟ ಆಗೋದು!

'ಪಾರು' ಧಾರಾವಾಹಿ ಕನ್ನಡದ ಜನಪ್ರಿಯ ಧಾರಾವಾಹಿಯಾಗಿದೆ. ಈ ಧಾರಾವಾಹಿಯಲ್ಲಿ ವಿನಯಾ ಪ್ರಸಾದ್ ಕೂಡ ನಟಿಸುತ್ತಿದ್ದಾರೆ. ಈ ಸೀರಿಯಲ್ ನಟಿ ಮೋಕ್ಷಿತಾ ಪೈ ಅವರು ಸಂದರ್ಶನದಲ್ಲಿ ಹಲವು ಮುಖ್ಯ ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ಏನದು?

Vijaya Karnataka Web 24 May 2020, 9:54 pm
'ಪಾರು' ಧಾರಾವಾಹಿ ಟಿಆರ್‌ಪಿಯಲ್ಲಿ ಒಳ್ಳೆಯ ಸ್ಥಾನದಲ್ಲಿತ್ತು. ಲಾಕ್ ಡೌನ್ ನಂತರದಲ್ಲಿ ಹೊಸ ಎಪಿಸೋಡ್‌ನೊಂದಿಗೆ, ಹೊಸ ತನದೊಂದಿಗೆ ಆರಂಭವಾಗಲಿದೆ. ಬೆಂಗಳೂರು ಟೈಮ್ಸ್ ಜೊತೆಗಿನ ಸಂದರ್ಶನದಲ್ಲಿ 'ಪಾರು' ಧಾರಾವಾಹಿ ನಟಿ ಮೋಕ್ಷಿತಾ ಪೈ ಹಲವು ವಿಚಾರಗಳ ಬಗ್ಗೆ ಮಾತನಾಡಿದ್ದಾರೆ.
Vijaya Karnataka Web 123gh


'ಪಾರು'ಗಿಂತ ಮುನ್ನ ಟ್ಯೂಶನ್ ಹೇಳಿಕೊಡುತ್ತಿದ್ದರಿ, ಅದರ ಬಗ್ಗೆ ಹೇಳಿ

ನಾನು ಮೊದಲ ಪಿಯುಸಿ ಓದುತ್ತಿದ್ದಾಗಲೇ ನಾನು ಟ್ಯೂಶನ್ ಹೇಳಿಕೊಡುತ್ತಿದ್ದೆ. ವೈಯಕ್ತಿಕವಾಗಿ ಪಾಕೆಟ್ ಮನಿ ಗಳಿಸಬೇಕು ಎಂದು ಬಯಸುತ್ತಿದ್ದೆ. ಆಗ ನನಗೆ ಕೆಲವು ವಿದ್ಯಾರ್ಥಿಗಳಿದ್ದರು. ಡಿಗ್ರಿ ಮುಗಿಯುವವರೆಗೂ ನಾನು ಕ್ಲಾಸ್ ತೆಗೆದುಕೊಳ್ಳುತ್ತಿದ್ದೆ. ಪ್ರತಿದಿನ ನಾನು ವಿದ್ಯಾರ್ಥಿಗಳೊಂದಿಗೆ ಟಚ್‌ನಲ್ಲಿದ್ದೆ. ಧಾರಾವಾಹಿ ಲೋಕಕ್ಕೆ ಪ್ರವೇಶ ಮಾಡುವವರೆಗೂ ನಾನು ಕ್ಲಾಸ್ ತೆಗೆದುಕೊಳ್ಳುತ್ತಿದ್ದೆ. ನನ್ನ ಹುಟ್ಟುಹಬ್ಬದ ದಿನ ಯಾರೂ ನನಗೆ ವಿಶ್ ಮಾಡಿರಲಿಲ್ಲ, ಆಗ ನನ್ನ ವಿದ್ಯಾರ್ಥಿಗಳೆಲ್ಲರೂ ನನ್ನನ್ನು ಮರೆತರು ಎಂದುಕೊಂಡೆ. ನಾನು ಬೆಳಗಿನ ಜಾವ ನಾಲ್ಕು ಗಂಟೆಗೆ ಮನೆಗೆ ಬಂದಾಗ ಅವರೆಲ್ಲರೂ ಆಗ ಹುಟ್ಟುಹಬ್ಬ ಆಚರಿಸಿದರು. ಇದು ಎಂದಿಗೂ ನೆನಪಿಡುವಂತಹದ್ದು.

ನಿಮ್ಮ ತೆರೆ ಮೇಲಿನ ಪಾತ್ರಕ್ಕೂ ನಿಮಗೂ ಏನಾದರೂ ಸಾಮ್ಯತೆ ಇದೆಯಾ?

ಪಾರು ಅಪ್ಪ-ಅಮ್ಮ-ತಮ್ಮನ ಬಗ್ಗೆ ತುಂಬ ಕಾಳಜಿ ಮಾಡುತ್ತಾಳೆ. ನನ್ನ ನಿಜ ಜೀವನದಲ್ಲಿ ನನಗೆ ಕುಟುಂಬವೇ ಪ್ರಧಾನ. ಪಾರು ಅಗತ್ಯವಿದ್ದವರಿಗೆ ಸಹಾಯ ಮಾಡುತ್ತಾಳೆ. ನಾನೂ ಕೂಡ ಸಮಸ್ಯೆಯಿದ್ದವರಿಗೆ ಸಹಾಯ ಮಾಡಲು ಬಯಸುತ್ತೇನೆ.

ನೀವೇ ನಿಮ್ಮ ಮನೆಯಲ್ಲಿ ನಟನಾ ಕ್ಷೇತ್ರಕ್ಕೆ ಮೊದಲು ಎಂಟ್ರಿ ಕೊಟ್ಟಿದ್ದು, ನಿಮ್ಮ ಪಾಲಕರು ಹೇಗೆ ಪ್ರೋತ್ಸಾಹ ನೀಡುತ್ತಾರೆ?
ನಾನು ಧಾರಾವಾಹಿಗಳಲ್ಲಿ ನಟಿಸ್ತೀನಿ ಅಂತಾಗ ನನ್ನ ಪಾಲಕರು ಹಿಂಜರಿದಿದ್ದರು. ಆದರೆ ಇಂದು ನನ್ನನ್ನು ನೋಡಿ ಅವರು ಹೆಮ್ಮೆಪಡುತ್ತಿದ್ದಾರೆ. ಗೋವಾದಲ್ಲಿ ನನ್ನ ಜೊತೆಗೆ ಅಭಿಮಾನಿಗಳು ಸೆಲ್ಫಿ ಬೇಕು ಎಂದಾಗ ನನ್ನ ತಂದೆ ತುಂಬ ಹೆಮ್ಮೆಪಡುತ್ತಾರೆ.

ಟಿವಿ ಉದ್ಯಮಕ್ಕೆ ಸಂಬಂಧಪಟ್ಟಂತೆ ನೀವು ಧಾರಾವಾಹಿ ಲೋಕಕ್ಕೆ ಬರುವ ಮುನ್ನ ಏನು ನಿರೀಕ್ಷೆಯಿತ್ತು?
ನಾನು ಇಂದು ಎಷ್ಟು ಸಾಧನೆ ಮಾಡಿದ್ದೀನೋ ಅದರ ಬಗ್ಗೆ ನನಗೆ ನಿರೀಕ್ಷೆಯಿರಲಿಲ್ಲ. ವೀಕ್ಷಕರು ನನ್ನ ಮೇಲೆ ತೋರಿಸುವ ಪ್ರೀತಿ ನೋಡಿದರೆ ತುಂಬ ಖುಷಿಯಾಗತ್ತೆ

ಎಲ್ಲರೂ ಮೆಚ್ಚುವಂಥ ಅರ್ಥಪೂರ್ಣ ಕೆಲಸ ಮಾಡಿದ 'ಪಾರು' ಧಾರಾವಾಹಿಯ ನಟಿ ಮೋಕ್ಷಿತಾ ಪೈ

ನಿಮಗೆ ನಟನೆಯಲ್ಲಿ ಯಾವುದು ತುಂಬ ಕಷ್ಟ?
ರೊಮ್ಯಾನ್ಸ್ ಮಾಡೋದು ತುಂಬ ಕಷ್ಟ

ಶೂಟಿಂಗ್ ಮಾಡುವಾಗ ಮುಂಜಾಗ್ರತೆ ತೆಗೆದುಕೊಳ್ಳಬೇಕಾಗಿದೆ. ಇದು ಎಷ್ಟು ಕಷ್ಟವಾಗಲಿದೆ?

ಮುಂಜಾಗ್ರತೆ ಕ್ರಮಗಳನ್ನು ನಮ್ಮ ಆರೋಗ್ಯ ಸುರಕ್ಷತೆ ದೃಷ್ಟಿಯಿಂದ ಮಾಡಿಕೊಳ್ಳಲಾಗುತ್ತಿದೆ. ಮನೆಯಿಂದ ಊಟದ ತಟ್ಟೆ, ಲೋಟವನ್ನು ತರಲು ಕೂಡ ಹೇಳಿದ್ದಾರೆ. ಹಲವು ಜನರ ಜೊತೆಗೆ ಟ್ರಾವೆಲಿಂಗ್‌

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ