ಆ್ಯಪ್ನಗರ

ಕಿರುತೆರೆಯಲ್ಲಿ ಚಂದನ್ ಎರಡನೇ ಇನ್ನಿಂಗ್ಸ್

ನಟ ಚಂದನ್ ಮತ್ತೆ ಕಿರುತೆರೆಗೆ ಮರಳಿದ್ದಾರೆ. ಕಿರುತೆರೆಯಲ್ಲಿ ಜುಲೈ 30ರಿಂದ ಪ್ರಸಾರವಾಗಲಿರುವ 'ಸರ್ವಮಂಗಳ ಮಾಂಗಲ್ಯೇ' ಧಾರಾವಾಹಿಯಲ್ಲಿ ಅಭಿನಯಿಸಿದ್ದಾರೆ ಹಾಟೆಸ್ಟ್ ಸ್ಟಾರ್ ಚಂದನ್ ಕುಮಾರ್.

TIMESOFINDIA.COM 21 Jul 2018, 5:35 pm
ನಟ ಚಂದನ್ ಮತ್ತೆ ಕಿರುತೆರೆಗೆ ಮರಳಿದ್ದಾರೆ. ಕಿರುತೆರೆಯಲ್ಲಿ ಜುಲೈ 30ರಿಂದ ಪ್ರಸಾರವಾಗಲಿರುವ 'ಸರ್ವಮಂಗಳ ಮಾಂಗಲ್ಯೇ' ಧಾರಾವಾಹಿಯಲ್ಲಿ ಅಭಿನಯಿಸಿದ್ದಾರೆ ಹಾಟೆಸ್ಟ್ ಸ್ಟಾರ್ ಚಂದನ್ ಕುಮಾರ್. ಲಕ್ಷ್ಮಿ ಬಾರಮ್ಮ ಧಾರಾವಾಹಿ ಮೂಲಕ ಮನೆಮಾತಾದ ಚಂದನ್ ಇದೀಗ ಮತ್ತೆ ಕಿರುತೆರೆಗೆ ಮರಳಿರುವುದು ವೀಕ್ಷಕರಲ್ಲಿ ಕುತೂಹಲ ಕೆರಳಿಸಿದೆ.
Vijaya Karnataka Web chandan


ಆ್ಯಕ್ಷನ್ ಕಿಂಗ್ ಅರ್ಜುನ್ ಸರ್ಜಾ ನಿರ್ದೇಶನದಲ್ಲಿ ಮೂಡಿಬಂದ ಪ್ರೇಮ ಬರಹ ಚಿತ್ರದ ಮೂಲಕ ಸ್ಯಾಂಡಲ್‍ವುಡ್‌ಗೆ ಪ್ರವೇಶಿಸಿದ್ದರು ಚಂದನ್. ಈ ಚಿತ್ರದಲ್ಲಿ ಅರ್ಜುನ್ ಸರ್ಜಾ ಪುತ್ರಿ ಐಶ್ವರ್ಯಾ ಅರ್ಜುನ್ ನಾಯಕಿ. [ಚಂದನ್ ಅಭಿನಯದ ಪ್ರೇಮ ಬರಹ ಸಿನಿಮಾ ವಿಮರ್ಶೆ]

ಸರ್ವಮಂಗಳ ಮಾಂಗಲ್ಯೇ ಧಾರಾವಾಹಿ ಹಿಂದಿಯ ತು ಸೂರಜ್, ಮೈ ಸಂಜಾಹ್ ಪಿಯಾಜಿ ರೀಮೇಕ್. ಈಗಾಗಲೆ ಪ್ರಸಾರವಾಗಿರುವ ಧಾರಾವಾಹಿಯ ಪ್ರಮೋ ಕಿರುತೆರೆ ವೀಕ್ಷಕರನ್ನು ಸೆಳೆದಿದೆ. ಶಂಕರ ಮತ್ತು ಪಾರ್ವತಿ ನಡುವಿನ ಕ್ಯೂಟ್ ಲವ್ ಸ್ಟೋರಿಯೇ ಸರ್ವಮಂಗಳ ಮಾಂಗಲ್ಯೇ ಧಾರಾವಾಹಿಯ ಕಥಾವಸ್ತು. ಎಕ್ಸಪ್ರೆಷನ್ ಕ್ವೀನ್ ಎಂದೇ ಕರೆಸಿಕೊಂಡಿರುವ ಐಶ್ವರ್ಯಾ ಧಾರಾವಾಹಿಯ ಹೀರೋಯಿನ್.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ