ನಟ ಪುನೀತ್ ರಾಜ್ಕುಮಾರ್ ದಂಪತಿಯ ದೊಡ್ಡಗುಣದ ಉದಾಹರಣೆ ನೀಡಿದ 'ಜೊತೆ ಜೊತೆಯಲಿ' ನಟಿ ಆಶಿತಾ ಚಂದ್ರಪ್ಪ!
'ಜೊತೆ ಜೊತೆಯಲಿ', 'ರಾಧಾ ರಮಣ' ಧಾರಾವಾಹಿ ನಟಿ ಆಶಿತಾ ಚಂದ್ರಪ್ಪ ಅವರು 'ಪವರ್ ಸ್ಟಾರ್' ಪುನೀತ್ ರಾಜ್ಕುಮಾರ್ ದಂಪತಿಯ ದೊಡ್ಡಗುಣದ ಉದಾಹರಣೆ ನೀಡಿದ್ದಾರೆ. ಆ ಬಗ್ಗೆ ಆಶಿತಾ ಚಂದ್ರಪ್ಪ ಹೇಳಿದ್ದೇನು?
Vijaya Karnataka Web 6 Apr 2021, 3:58 pm
ಹೈಲೈಟ್ಸ್:
- ಕನ್ನಡ ಧಾರಾವಾಹಿಗಳಲ್ಲಿ ನಟಿಸಿರುವ ಆಶಿತಾ ಚಂದ್ರಪ್ಪ
- ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋನ ಸ್ಪರ್ಧಿ ಆಶಿತಾ ಸಿನಿಮಾದಲ್ಲಿಯೂ ಅಭಿನಯಿಸಿದ್ದರು
- ಇತ್ತೀಚೆಗೆ ರೋಹನ್ ರಾಘವೇಂದ್ರ ಜೊತೆ ಆಶಿತಾ ಚಂದ್ರಪ್ಪ ಮದುವೆಯಾಗಿದ್ದಾರೆ.
ನಟಿ ಆಶಿತಾ ಚಂದ್ರಪ್ಪ ಅವರು ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿರುತ್ತಾರೆ. ಸಮಾಜದಲ್ಲಿ ನಡೆಯುವ ಘಟನೆಗಳ ಬಗ್ಗೆ ಅವರು ಪ್ರತಿಕ್ರಿಯೆ ನೀಡುತ್ತಾರೆ. ಇನ್ನು 'ಪವರ್ ಸ್ಟಾರ್' ಪುನೀತ್ ರಾಜ್ಕುಮಾರ್ ದೊಡ್ಡಮನಸ್ಸಿನ ಬಗ್ಗೆಯೂ ಅವರು ಮಾತನಾಡಿದ್ದಾರೆ.
ಆಶಿತಾ ಚಂದ್ರಪ್ಪ ಅವರು ಅಪ್ಪು ಬಗ್ಗೆ ಹೇಳಿದ್ದಿಷ್ಟು
"ನೀವು ಕೆಲವೊಮ್ಮೆ ನಿರೀಕ್ಷೆ ಮಾಡಿದಂತೆ ಕೆಲವರು ಕೆಲ ಕ್ಷಣವನ್ನು ಎಂದಿಗೂ ನೆನಪಿಡುವಂತೆ ಮಾಡುತ್ತಾರೆ. ಕೆಲವರಿಂದ ನಿಮಗೆ ನಿರೀಕ್ಷೆ ಮಾಡಿದಾಗ ಬೇಸರವೂ ಆಗುತ್ತದೆ. ಆದರೆ ಕೆಲವೊಂದು ಸ್ನೇಹವೂ ಪ್ರಾಮಾಣಿಕವಾಗಿರುತ್ತದೆ. ಕೊರೊನಾ ವೈರಸ್ ಇದೆ ಅಂತ ಕೆಲವರು ಕಾರಣ ನೀಡಿ ಮದುವೆಗೆ ಬಂದಿರಲಿಲ್ಲ. ನನಗೆ ಹಾಗೂ ನನ್ನ ತಂದೆಗೆ ಕೊರೊನಾ ವೈರಸ್ ಪಾಸಿಟಿವ್ ಆಗಿತ್ತು. ಹೀಗಾಗಿ ನಾವು ಮದುವೆಯನ್ನು ಮುಂದಕ್ಕೆ ಹಾಕಲು ನಿರ್ಧಾರ ಮಾಡಿ, ಎಲ್ಲವನ್ನು ಕ್ಯಾನ್ಸಲ್ ಮಾಡಿದೆವು. ಯಾರಿಗೂ ನಮ್ಮಿಂದ ತೊಂದರೆಯಾಗೋದು ಕಷ್ಟವಿರಲಿಲ್ಲ. ಸಿಕ್ಕಾಪಟ್ಟೆ ಬ್ಯುಸಿಯಿದ್ದರೂ ಕೂಡ 'ಪವರ್ ಸ್ಟಾರ್' ಪುನೀತ್ ರಾಜ್ಕುಮಾರ್ ಅವರು ನಮ್ಮ ಮದುವೆಗೆ ಬಂದು ಶುಭಾ ಹಾರೈಸಿದರು. ಮದುವೆಯ ಮುಂದಿನ ದಿನವೇ ಅವರ ನಟನೆಯ 'ಯುವರತ್ನ' ಸಿನಿಮಾ ರಿಲೀಸ್ ಆಗಬೇಕಿತ್ತು. ಇದು ಆದ್ಯತೆ ಅಂದರೆ. ಸುಂದರವಾದ ಸರ್ಪ್ರೈಸ್ ನೀಡಿದ್ದಕ್ಕೆ ಪುನೀತ್ ರಾಜ್ಕುಮಾರ್ ಹಾಗೂ ಅಶ್ವಿನಿ ಅಕ್ಕ ಅವರಿಗೆ ಧನ್ಯವಾದಗಳು, ನಾನು ಹಾಗೂ ನನ್ನ ತಂದೆಗೆ ತುಂಬ ಖುಷಿಯಾಯ್ತು" ಎಂದು ಆಶಿತಾ ಸೋಶಿಯಲ್ ಮೀಡಿಯಾ ಪೋಸ್ಟ್ ಹಾಕಿದ್ದಾರೆ.
Also Read-ವೈವಾಹಿಕ ಜೀವನಕ್ಕೆ ಕಾಲಿಟ್ಟ 'ಜೊತೆ ಜೊತೆಯಲಿ' ಧಾರಾವಾಹಿ ನಟಿ, ಬಿಗ್ ಬಾಸ್ ಕನ್ನಡ 5 ಸ್ಪರ್ಧಿ ಆಶಿತಾ ಚಂದ್ರಪ್ಪ!
ಕಳೆದ ಮಾರ್ಚ್ 31ರಂದು 'ಜೊತೆ ಜೊತೆಯಲಿ', 'ರಾಧಾ ರಮಣ' ಧಾರಾವಾಹಿ ನಟಿ ಆಶಿತಾ ಚಂದ್ರಪ್ಪ ಹಾಗೂ ರೋಹನ್ ರಾಘವೇಂದ್ರ ಅವರ ಮದುವೆ ಬೆಂಗಳೂರಿನಲ್ಲಿ ನಡೆದಿತ್ತು. ಕೊರೊನಾ ಕಾರಣದಿಂದ ಕೆಲವೇ ಕೆಲವು ಮಂದಿಯ ಸಾಕ್ಷಿಯಾಗಿ ಆಶಿತಾ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಇನ್ನು ನಟ ಜೆಕೆ, ಜಗನ್ ಚಂದ್ರಶೇಖರ್, ತೇಜಸ್ವಿನಿ ಪ್ರಕಾಶ್ ಮುಂತಾದವರು ಈ ಮದುವೆಗೆ ಆಗಮಿಸಿದ್ದರು. 'ರಾಧಾ ರಮಣ' ಧಾರಾವಾಹಿ ನಂತರದಲ್ಲಿ ಆಶಿತಾ ನಟನೆಯಿಂದ ದೂರವಿದ್ದಾರೆ. ಮತ್ತೆ ಅವರು ಯಾವಾಗ ಅಭಿನಯ ರಂಗಕ್ಕೆ ಕಾಲಿಡುತ್ತಾರೆ ಎಂದು ಕಾದು ನೋಡಬೇಕಿದೆ.
Also Read-ಅಮ್ಮನಿಲ್ಲದೆ ನಡೆದ ಮದುವೆ ಬಗ್ಗೆ ಭಾವನಾತ್ಮಕ ಪೋಸ್ಟ್ ಹಾಕಿದ 'ಜೊತೆ ಜೊತೆಯಲಿ' ನಟಿ ಆಶಿತಾ ಚಂದ್ರಪ್ಪ!
ಆಶಿತಾ ಚಂದ್ರಪ್ಪ ಅವರು ಅಪ್ಪು ಬಗ್ಗೆ ಹೇಳಿದ್ದಿಷ್ಟು
"ನೀವು ಕೆಲವೊಮ್ಮೆ ನಿರೀಕ್ಷೆ ಮಾಡಿದಂತೆ ಕೆಲವರು ಕೆಲ ಕ್ಷಣವನ್ನು ಎಂದಿಗೂ ನೆನಪಿಡುವಂತೆ ಮಾಡುತ್ತಾರೆ. ಕೆಲವರಿಂದ ನಿಮಗೆ ನಿರೀಕ್ಷೆ ಮಾಡಿದಾಗ ಬೇಸರವೂ ಆಗುತ್ತದೆ. ಆದರೆ ಕೆಲವೊಂದು ಸ್ನೇಹವೂ ಪ್ರಾಮಾಣಿಕವಾಗಿರುತ್ತದೆ. ಕೊರೊನಾ ವೈರಸ್ ಇದೆ ಅಂತ ಕೆಲವರು ಕಾರಣ ನೀಡಿ ಮದುವೆಗೆ ಬಂದಿರಲಿಲ್ಲ. ನನಗೆ ಹಾಗೂ ನನ್ನ ತಂದೆಗೆ ಕೊರೊನಾ ವೈರಸ್ ಪಾಸಿಟಿವ್ ಆಗಿತ್ತು. ಹೀಗಾಗಿ ನಾವು ಮದುವೆಯನ್ನು ಮುಂದಕ್ಕೆ ಹಾಕಲು ನಿರ್ಧಾರ ಮಾಡಿ, ಎಲ್ಲವನ್ನು ಕ್ಯಾನ್ಸಲ್ ಮಾಡಿದೆವು. ಯಾರಿಗೂ ನಮ್ಮಿಂದ ತೊಂದರೆಯಾಗೋದು ಕಷ್ಟವಿರಲಿಲ್ಲ.
Also Read-ವೈವಾಹಿಕ ಜೀವನಕ್ಕೆ ಕಾಲಿಟ್ಟ 'ಜೊತೆ ಜೊತೆಯಲಿ' ಧಾರಾವಾಹಿ ನಟಿ, ಬಿಗ್ ಬಾಸ್ ಕನ್ನಡ 5 ಸ್ಪರ್ಧಿ ಆಶಿತಾ ಚಂದ್ರಪ್ಪ!
ಕಳೆದ ಮಾರ್ಚ್ 31ರಂದು 'ಜೊತೆ ಜೊತೆಯಲಿ', 'ರಾಧಾ ರಮಣ' ಧಾರಾವಾಹಿ ನಟಿ ಆಶಿತಾ ಚಂದ್ರಪ್ಪ ಹಾಗೂ ರೋಹನ್ ರಾಘವೇಂದ್ರ ಅವರ ಮದುವೆ ಬೆಂಗಳೂರಿನಲ್ಲಿ ನಡೆದಿತ್ತು. ಕೊರೊನಾ ಕಾರಣದಿಂದ ಕೆಲವೇ ಕೆಲವು ಮಂದಿಯ ಸಾಕ್ಷಿಯಾಗಿ ಆಶಿತಾ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಇನ್ನು ನಟ ಜೆಕೆ, ಜಗನ್ ಚಂದ್ರಶೇಖರ್, ತೇಜಸ್ವಿನಿ ಪ್ರಕಾಶ್ ಮುಂತಾದವರು ಈ ಮದುವೆಗೆ ಆಗಮಿಸಿದ್ದರು. 'ರಾಧಾ ರಮಣ' ಧಾರಾವಾಹಿ ನಂತರದಲ್ಲಿ ಆಶಿತಾ ನಟನೆಯಿಂದ ದೂರವಿದ್ದಾರೆ. ಮತ್ತೆ ಅವರು ಯಾವಾಗ ಅಭಿನಯ ರಂಗಕ್ಕೆ ಕಾಲಿಡುತ್ತಾರೆ ಎಂದು ಕಾದು ನೋಡಬೇಕಿದೆ.
Also Read-ಅಮ್ಮನಿಲ್ಲದೆ ನಡೆದ ಮದುವೆ ಬಗ್ಗೆ ಭಾವನಾತ್ಮಕ ಪೋಸ್ಟ್ ಹಾಕಿದ 'ಜೊತೆ ಜೊತೆಯಲಿ' ನಟಿ ಆಶಿತಾ ಚಂದ್ರಪ್ಪ!