ಆ್ಯಪ್ನಗರ

ಪುಟ್ಟಗೌರಿ ಮದುವೆಯಿಂದ ಗಟ್ಟಿಮೇಳಕ್ಕೆ ಹಾರಿದ ನಟ ರಕ್ಷಿತ್

ಮಹೇಶ್ ಪುಟ್ಟಗೌರಿ ಮದುವೆ ಧಾರಾವಾಹಿಯಿಂದ ಹೊರಬಂದರು ಎಂದು ಕೆಲವರು ಮಾತನಾಡುತ್ತಿದ್ದರೆ ಇನ್ನೂ ಹಲವರು ಅಂತೂ ಇಂತೂ ಪುಟ್ಟಗೌರಿ ಮದುವೆ ಮಹೇಶ್ ನೋಡುವ ಹಿಂಸೆ ನಮಗೆ ತಪ್ಪಿತು ಎಂದು ಸಂತೋಷ ವ್ಯಕ್ತಪಡಿಸುತ್ತಿದ್ದಾರೆ.

Vijaya Karnataka Web 28 Feb 2019, 6:11 pm
ಕನ್ನಡದ 'ಕಲರ್ಸ್ ಕನ್ನಡ' ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಪುಟ್ಟಗೌರಿ ಮದುವೆ' ಧಾರಾವಾಹಿ ನಾಯಕ ಮಹೇಶ್ ಪಾತ್ರಧಾರಿ ರಕ್ಷಿತ್ ಮತ್ತೊಂದು ಧಾರಾವಾಹಿಯಲ್ಲಿ ಸದ್ಯವೇ ಕಾಣಿಸಿಕೊಳ್ಳಲಿದ್ದಾರೆ. ಬಹಳ ವರ್ಷಗಳಿಂದ ಪುಟ್ಟಗೌರಿ ಮದುವೆ ಸೀರಿಯಲ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದ ರಕ್ಷಿತ್ ಅವರನ್ನು ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಮಾಡಲು ಪ್ರಾರಂಭಿಸಿದ್ದರು. ಯಾಕೆಂದರೆ, ಅಷ್ಟು ವರ್ಷಗಳಿಂದ ಅದೇ ಸೀರಿಯಲ್‌ನಲ್ಲಿ ಅವರನ್ನು ನೋಡಿ ನೋಡಿ ಕಿರುತೆರೆ ವೀಕ್ಷಕರಿಗೆ ಬೇಸರ ಶುರುವಾಗಿತ್ತು ಎನ್ನಲಾಗಿದೆ.
Vijaya Karnataka Web rakshith28


ಆದರೆ ಈಗ ಹೊಸ ಸುದ್ದಿಯೊಂದು ಸ್ಫೋಟವಾಗಿದೆ. ಇನ್ಮುಂದೆ ರಕ್ಷಿತ್ ಅವರು ಇನ್ನೊಂದು ಖಾಸಗಿ ವಾಹಿನಿಯಾದ 'ಜೀ ಕನ್ನಡ' ದಲ್ಲಿ ಶುರುವಾಗಲಿರುವ ಹೊಸ ಧಾರಾವಾಹಿ "ಗಟ್ಟಿಮೇಳ'ದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ಈ ಧಾರಾವಾಹಿಯು ಮಾರ್ಚ್ 11ರಿಂದ ಪ್ರತಿ ದಿನ ರಾತ್ರಿ, ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 8-00 ಗಂಟಗೆ ಪ್ರಸಾರವಾಗಲಿದೆ ಎನ್ನಲಾಗಿದೆ. ಈಗಾಗಲೇ 'ಪಾರು' ಧಾರಾವಾಹಿಯ ಮೂಲಕ ಪುಟ್ಟಗೌರಿ ಮದುವೆ ಹೊರತುಪಡಿಸಿ ಕಾಣಿಸಿಕೊಂಡಿದ್ದ ರಕ್ಷಿತ್ ಈಗ ಹೊಸ ಧಾರಾವಾಹಿ ಗಟ್ಟಿಮೇಳದಲ್ಲಿ 'ಉದ್ಯಮಿ ವೇಧಾಂತ್ ವಸಿಷ್ಠ' ಪಾತ್ರದ ಮೂಲಕ ಮನೆಮನೆಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಮಹೇಶ್ ಪುಟ್ಟಗೌರಿ ಮದುವೆ ಧಾರಾವಾಹಿಯಿಂದ ಹೊರಬಂದರು ಎಂದು ಕೆಲವರು ಮಾತನಾಡುತ್ತಿದ್ದರೆ ಇನ್ನೂ ಹಲವರು ಅಂತೂ ಇಂತೂ ಪುಟ್ಟಗೌರಿ ಮದುವೆ ಮಹೇಶ್ ನೋಡುವ ಹಿಂಸೆ ನಮಗೆ ತಪ್ಪಿತು ಎಂದು ಸಂತೋಷ ವ್ಯಕ್ತಪಡಿಸುತ್ತಿದ್ದಾರೆ. ಆದರೆ, ನಿಜವಾಗಿಯೂ ಪುಟ್ಟಗೌರಿ ಮದುವೆಯಿಂದ ರಕ್ಷಿತ್ ಅವರಿಗೆ ಗೇಟ್ ಪಾಸ್ ಕೊಡಲಾಗಿದೆಯೇ ಅಥವಾ ಅವರೂ ಅಲ್ಲೂ ಇಲ್ಲೂ ಕಾಣಿಸಿಕೊಳ್ಳಲಿದ್ದಾರೆಯೇ ಎಂಬ ಬಗ್ಗೆ ಸದ್ಯದಲ್ಲೇ ಗೊತ್ತಾಗಲಿದೆ. ಒಟ್ಟಿನಲ್ಲಿ, ರಕ್ಷಿತ್ ಅವರನ್ನು ಅವರ ಅಭಿಮಾನಿಗಳು ಬೇರೆ ರೂಪದಲ್ಲಿ ನೋಡಬಹುದು ಎಂದು ಘಂಟಾಘೋಷವಾಗಿ ಹೇಳಬಹುದು.

ಅಂದಹಾಗೆ, ಪುಟ್ಟಗೌರಿ ಸೀರಿಯಲ್ ಮೂಲಕ ಬಣ್ಣದ ಬದುಕಿಗೆ ಕಾಲಿಟ್ಟ ಮಹೇಶ್ ಪಾತ್ರಧಾರಿ ರಕ್ಷಿತ್ ಅವರು ಸಿನಿಮಾದಲ್ಲಿ ಕೂಡ ತಮ್ಮ ಅದೃಷ್ಟ ಪರೀಕ್ಷೆಗೆ ಹೊರಟಿದ್ದಾರೆ. ಈಗಾಗಲೇ ಶೂಟಿಂಗ್ ಮುಗಿಸಿ ಬಿಡುಗಡೆಗೆ ಸಜ್ಜಾಗಿರುವ ರಕ್ಷಿತ್ ಚಿತ್ರವು ಬೆಳ್ಳಿತೆರೆಯಲ್ಲೂ ಅವರಿಗೆ ಅಭಿಮಾನಿ ಬಳಗವನ್ನು ಸೃಷ್ಟಿಸಬಹುದೇ ಎಂಬುದನ್ನು ಕಾದು ನೋಡಬೇಕಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ