ಆ್ಯಪ್ನಗರ

ರಚಿತಾ ರಾಮ್ ಬಳಿ ಹಣ ಕೇಳಿದ್ದೇಕೆ ಪುನೀತ್ ರಾಜ್‌ಕುಮಾರ್?

'ಕನ್ನಡದ ಕೋಟ್ಯಧಿಪತಿ ಸೀಸನ್ 4'ರ ಗ್ರ್ಯಾಡ್ ಫಿನಾಲೆಯಲ್ಲಿ ರಚಿತಾ ರಾಮ್ ನಿರೂಪಕರಾಗಿ ಕೆಲಸ ಮಾಡಿದ್ದಾರೆ. ಹಾಟ್‌ಸೀಟ್‌ನಲ್ಲಿ ಕುಳಿತ ಪುನೀತ್ ರಾಜ್‌ಕುಮಾರ್‌ಗೆ ಅವರು ವಿಧ ವಿಧದ ಪ್ರಶ್ನೆ ಕೇಳಲಿದ್ದಾರೆ.

Vijaya Karnataka Web 13 Nov 2019, 2:05 pm
ರಚಿತಾ ರಾಮ್ ಮತ್ತು ಪುನೀತ್ ಮುಖಾಮುಖಿಯಾಗುತ್ತಿದ್ದಾರೆ. ಅದು 'ಕನ್ನಡದ ಕೋಟ್ಯದಿಪತಿ' ವೇದಿಕೆಯಲ್ಲಿ. ಈ ವೇಳೆ ಪುನೀತ್ ನಿರೂಪಣೆ ಕೆಲಸ ಬಿಟ್ಟು ಹಾಟ್‌ಸೀಟ್‌ನಲ್ಲಿ ಕುಳಿತು ರಚಿತಾ ಕೇಳುವ ಪ್ರಶ್ನೆಗಳಿಗೆ ಉತ್ತರ ನೀಡಲಿದ್ದಾರೆ.
Vijaya Karnataka Web rachita ram participates in kannadada kotyadhipati season 4
ರಚಿತಾ ರಾಮ್ ಬಳಿ ಹಣ ಕೇಳಿದ್ದೇಕೆ ಪುನೀತ್ ರಾಜ್‌ಕುಮಾರ್?



ಕೋಟ್ಯಧಿಪತಿಯಲ್ಲಿ ರಚಿತಾ ರಾಮ್

ಈಗಾಗಲೇ ರಿಯಾಲಿಟಿ ಶೋ ಮತ್ತು ಸಿನಿಮಾಗಳಲ್ಲಿ ಬಿಜಿಯಿರುವ ರಚಿತಾ ರಾಮ್ 'ಕನ್ನಡದ ಕೋಟ್ಯಧಿಪತಿ'ಯಲ್ಲೂ ಕೂಡ ನಿರೂಪಕರಾಗಲಿದ್ದಾರೆ. ಹಾಗಿದ್ರೆ ಪುನೀತ್ ಈ ಶೋದಿಂದ ಹೊರಬೀಳಲಿದ್ದಾರಾ? ಖಂಡಿತ ಇಲ್ಲ. 'ಕನ್ನಡದ ಕೋಟ್ಯಧಿಪತಿ' ಗ್ರ್ಯಾಂಡ್ ಫಿನಾಲೆಯಲ್ಲಿ ಪುನೀತ್ ಹಾಟ್‌ ಸೀಟ್‌ನಲ್ಲಿ ಕೂತು ರಚಿತಾ ರಾಮ್ ಅವರು ಕೇಳುವ ಪ್ರಶ್ನೆಗಳಿಗೆ ಉತ್ತರ ನೀಡಲಿದ್ದಾರೆ.

ಪುನೀತ್‌ಗೆ ಕೇಳುವ ಪ್ರಶ್ನೆಗಳಾವುವು?

ಕೋಟ್ಯಧಿಪತಿ ಶೋ ಬಗ್ಗೆ, ಕೋಟ್ಯಧಿಪತಿ ಶೋ ಅನುಭವದ ಬಗ್ಗೆ, ಪುನೀತ್ ಅವರ ವೈಯಕ್ತಿಕ ಜೀವನದ ಬಗ್ಗೆ, ಪುನೀತ್ ಅವರ ಸಿನಿಮಾ ಪಯಣದ ಬಗ್ಗೆ ರಚಿತಾ ರಾಮ್ ಪ್ರಶ್ನೆಗಳನ್ನು ಪುನೀತ್‌ಗೆ ಕೇಳುತ್ತಾರೆ, ಜೊತೆಗೆ ಅದಕ್ಕೆ ನಾಲ್ಕು ಆಪ್ಶನ್ ಕೂಡ ಕೊಡುತ್ತಾರೆ. ಅವುಗಳಿಗೆ ಪುನೀತ್ ಉತ್ತರಕೊಡಬೇಕು. ಈಗಾಗಲೇ ಈ ಎಪಿಸೋಡ್‌ನ ಪ್ರೋಮೋ ಪ್ರಸಾರವಾಗಿದೆ. ಈ ಪ್ರೋಮೋದಲ್ಲಿ ಪುನೀತ್ ಅವರು ಪ್ರಶ್ನೆ ಕೇಳಿದರೆ ದುಡ್ಡು ನೀಡಬೇಕು ಎಂದು ಕೇಳುತ್ತಾರೆ, ಆಗ ರಚಿತಾ ನಮಗೆ ಕೋಟಿ ಕೊಡೋಕಾಗಲ್ಲ, ಪ್ರೀತಿ ಕೊಡುತ್ತೇವೆ" ಎಂದಿದ್ದಾರೆ.
View this post on Instagram Dum power ye dumm powerey Dum tarikita dhum dham powerey💥 Me with The Dhum PowerStar🙂😎 @puneethrajkumar.official #kannadadhakotyadhipathi . . . Outfit @zaraindiaofficial Styling @pavithrareddyfd H&M @paramesh_kammari & @mohanrao931 Photography @chandan_gowda_photography A post shared by Rachita Ram (@rachita_instaofficial) on Nov 12, 2019 at 7:20am PST
'ಜಗ್ಗೇಶ್ ಬಳಿ ಹಣ ಇಲ್ವಾ? ದುಡ್ಡು ಮಾಡೋಕೆ ಅಂಥ ಕೋಟ್ಯಧಿಪತಿಗೆ ಬಂದ್ರಾ?'

ಕನ್ನಡದ ಕೋಟ್ಯಧಿಪತಿ ಪ್ರಸಾರ ಯಾವಾಗ?
ನವೆಂಬರ್ 17ರಂದು ಭಾನುವಾರ ಸಂಜೆ 7.30ಕ್ಕೆ 'ಕನ್ನಡದ ಕೋಟ್ಯಧಿಪತಿ' ಗ್ರ್ಯಾಂಡ್‌ ಫಿನಾಲೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿದೆ. ಇದು ನಾಲ್ಕನೇ ಸೀಸನ್‌ ಆಗಿದ್ದು, ಈವರೆಗೆ 39 ಎಪಿಸೋಡ್‌ಗಳು ಪ್ರಸಾರವಾಗಿದೆ. ಮೊದಲ ಮತ್ತು ಎರಡನೇ ಸೀಸನ್‌ನ್ನು ಪುನೀತ್ ನಿರೂಪಣೆ ಮಾಡಿದ್ದರು. ಮೂರನೇ ಸೀಸನ್‌ನ್ನು ರಮೇಶ್‌ ಅರವಿಂದ್ ನಿರೂಪಿಸಿದ್ದರು. ನಾಲ್ಕನೇ ಸೀಸನ್‌ನ್ನು ಮತ್ತೆ ಪುನೀತ್ ನಿರೂಪಣೆ ಮಾಡಿದ್ದಾರೆ.

ಪ್ರತಾಪ್ ಸಿಂಹ್‌, ತೇಜಸ್ವಿ ಸೂರ್ಯರಿಗೆ ಸಾಲು ಸಾಲು ಪ್ರಶ್ನೆ ಕೇಳಿದ ಪುನೀತ್‌

ನಟಿ, ನಿರೂಪಕಿ, ರಚಿತಾ ರಾಮ್‌
ನಟಿ ರಚಿತಾ ರಾಮ್ ಕನ್ನಡದ ಬಹುಪಾಲು ಸ್ಟಾರ್ ನಟರ ಜೊತೆ ತೆರೆ ಹಂಚಿಕೊಂಡಿದ್ದಾರೆ. ರಿಯಾಲಿಟಿ ಶೋದ ಜಡ್ಜ್ ಆಗಿ ಕೂಡ ಕೆಲಸ ಮಾಡುತ್ತಿದ್ದಾರೆ. ಅಷ್ಟೇ ಅಲ್ಲದೆ ಅವರು ಮೂಲತಃ 'ಅರಸಿ' ಎಂಬ ಧಾರಾವಾಹಿ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟವರು. ಈ ಒಂದು ಸೀರಿಯಲ್ ನಂತರದಲ್ಲಿ ದರ್ಶನ್ ಜೊತೆಗೆ 'ಬುಲ್ ಬುಲ್' ಸಿನಿಮಾದಲ್ಲಿ ಅಭಿನಯಿಸಿದ ನಂತರ ಅವರಿಗೆ ಸಾಲು ಸಾಲು ಆಫರ್‌ಗಳು ಹುಡುಕಿಕೊಂಡು ಬಂದವು. ಇತ್ತೀಚೆಗೆ ನಡೆದ 'ಅನುಬಂಧ ಅವಾರ್ಡ್ಸ್‌'ನಲ್ಲಿ ಮೊದಲ ಬಾರಿಗೆ ಅವರು ನಿರೂಪಣೆ ಮಾಡಿದ್ದರು.

ತಮಗೆ 'ಮುಠ್ಠಾಳ' ಎಂದವನನ್ನು ನೆನಪಿಸಿಕೊಂಡ 'ಪವರ್ ಸ್ಟಾರ್' ಪುನೀತ್ ರಾಜ್‌ಕುಮಾರ್!!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ