ಆಗಾಗ ಹಲವು ಸಾಮಾಜಿಕ ವಿಷಯಗಳ ಬಗ್ಗೆ ಅಭಿಪ್ರಾಯ ಹೊರಹಾಕುವ ಆಶಿತಾ, ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿರುತ್ತಾರೆ. ಅಷ್ಟೇ ಅಲ್ಲದೆ ಚಿತ್ರರಂಗದ ಕಲಾವಿದರ ಜೊತೆ ಉತ್ತಮ ಬಾಂಧವ್ಯ ಹೊಂದಿರುವ ಇವರು ಬಣ್ಣದ ಲೋಕದಿಂದ ಯಾಕೆ ಹೊರಗೆ ಹೋದ್ರು ಎಂಬ ಪ್ರಶ್ನೆ ಮೂಡುವುದು ಸಹಜ. ಒಂದು ವರ್ಷದಿಂದ ಅವರು ಕ್ಯಾಮರಾ ಮುಂದೆ ನಟಿಸಿಲ್ಲ.
ಸಂಭಾವನೆ ಇಷ್ಟೇ ಕೊಡಿ ಅಂತ ಕೇಳಿರಲಿಲ್ಲ ಆಶಿತಾ
'ಬಿಗ್ ಬಾಸ್ನಿಂದ ಹೊರಗೆ ಬಂದಮೇಲೆ 'ರಾಧಾ ರಮಣ'ದಲ್ಲಿ ನಟಿಸುವ ಅವಕಾಶ ಬಂತು. ನಾನು ಸಾಮ್ಯಾನ್ಯವಾಗಿ ಪ್ರೊಡಕ್ಷನ್ ಹೌಸ್ ಪ್ರಾಜೆಕ್ಟ್ ಒಪ್ಪಿಕೊಳ್ಳೋದಿಲ್ಲ. ಆದರೆ ಚಾನೆಲ್ ಬ್ಯುಸಿನೆಸ್ ಹೆಡ್ ಅವರೇ ನನಗೆ ಈ ಅವಕಾಶ ಕೊಟ್ಟಿದ್ದಕ್ಕಾಗಿ ನಾನು ಒಪ್ಪಿಕೊಂಡೆ. ಅವರೇ ಹೇಳಿದ್ದಂತೆ ನಾನು ರಮಣ್ ಅವರ ತಂಗಿ ಪಾತ್ರ ಮಾಡಬೇಕಿತ್ತು. ನಾನು ಒಪ್ಪಿಕೊಂಡೆ. ಪಾತ್ರ ಆಯ್ಕೆ ಮಾಡುವಾಗ ನಾನು ತುಂಬ ಗಮನಹರಿಸುತ್ತೇನೆ. ಧಾರಾವಾಹಿ ಪಾತ್ರ ನನಗೆ ತುಂಬ ಮುಖ್ಯ ಎಂದೆನಿಸುತ್ತೆ. ಆದರೆ 'ರಾಧಾ ರಮಣ' ಧಾರಾವಾಹಿಯಲ್ಲಿ ಲೀಡ್ ಪಾತ್ರದ ಬದಲು ಪೋಷಕ ಪಾತ್ರ ಒಪ್ಪಿಕೊಂಡಿದ್ದು ಯಾಕೆ ಅಂತ ನನ್ನನ್ನು ಹಲವರು ಪ್ರಶ್ನಿಸಿದ್ದರು. ಆದರೆ ನನ್ನ ಪಾತ್ರದ ಆಯ್ಕೆ ಬಗ್ಗೆ ನನಗೆ ಸ್ಪಷ್ಟತೆ ಸಿಕ್ಕಿತ್ತು. ಆ ಸಮಯದಲ್ಲಿ ಕಥೆ 'ಅವನಿ' ಮತ್ತು 'ರಾಣಿ' ಸುತ್ತವೇ ಕಥೆ ಸಾಗುತ್ತಿತ್ತು. ನನಗೆ ಈ ಪಾತ್ರದ ಮಹತ್ವ ಗೊತ್ತಿತ್ತು. ನಿಜ ಹೇಳಬೇಕು ಅಂದ್ರೆ ನಾನು ಇಷ್ಟೇ ಸಂಭಾವನೆ ಕೊಡಿ ಅಂತ ನಾನು ಕೇಳಿರಲಿಲ್ಲ' ಎಂದು ಹೇಳುತ್ತಾರೆ ಆಶಿತಾ.
ಮದುವೆಯಾಗುತ್ತಿದ್ದಾರೆ 'ರಾಧಾ ರಮಣ' ಖ್ಯಾತಿಯ ದೀಪಿಕಾ; ಗಾಸಿಪ್ಗಳಿಗೆ ತೆರೆ ಎಳೆದ ಅನುಷಾ
'ದೇವಯಾನಿ' ಧಾರಾವಾಹಿ ತಂಡದಿಂದಲೂ ನನಗೆ ಆಫರ್ ಬಂದಿತ್ತು! ಆದರೆ ಮೂರನೇಯವರಿಂದಾಗಿ ಅವಕಾಶ ಹೋಯ್ತು!
'ಸತ್ಯ ಹೇಳಬೇಕು ಅಂದ್ರೆ 'ದೇವಯಾನಿ' ಧಾರಾವಾಹಿಗೆ ನಂಗೆ ಆಫರ್ ಬಂದಿತ್ತು. 'ಜೊತೆ ಜೊತೆಯಲಿ' ಧಾರಾವಾಹಿ ತಂಡದವರೇ ಈ ಧಾರಾವಾಹಿ ಕೂಡ ಮಾಡುತ್ತಿದ್ದರು. ಆದರೆ ತಾಂತ್ರಿಕ ಸಮಸ್ಯೆಯಿಂದಾಗಿ 'ದೇವಯಾನಿ' ಆರಂಭವಾಗೋದು ಸ್ವಲ್ಪ ತಡವಾಯ್ತು. 'ದೇವಯಾನಿ' ಮತ್ತು 'ರಾಧಾ ರಮಣ' ಧಾರಾವಾಹಿ ಎರಡನ್ನೂ ಬ್ಯಾಲೆನ್ಸ್ ಮಾಡಬಹುದು ಎಂದು ಹೇಳಿದ್ದರು. ಆಗ ನಾನು ಈ ಎರಡೂ ಪ್ರಾಜೆಕ್ಟ್ ಮಾಡುತ್ತೇನೆ ಎಂದು ಹೇಳಿರಲಿಲ್ಲ. 'ರಾಧಾ ರಮಣ' ಧಾರಾವಾಹಿ ತಂಡದ ಸದಸ್ಯರೊಬ್ಬರು 'ದೇವಯಾನಿ' ತಂಡಕ್ಕೆ ಫೋನ್ ಕರೆ ಮಾಡಿ ನಾನು 'ರಾಧಾ ರಮಣ'ಕ್ಕೆ ಲುಕ್ ಟೆಸ್ಟ್ ಕೊಟ್ಟಿದ್ದರ ಬಗ್ಗೆ ತಿಳಿಸಿದ್ದರು. 'ದೇವಯಾನಿ' ತಂಡದವರು ಈ ಬಗ್ಗೆ ವಿವರಣೆ ಕೇಳಿದಾಗ 'ರಾಧಾ ರಮಣ'ದ ಪರ ನಾನು ನಿಂತುಕೊಂಡೆ' ಎಂದು ಹೇಳುತ್ತಾರೆ ಆಶಿತಾ.
ಗಾಯವಾಗಿತ್ತು, ತಾಯಿ ಆರೋಗ್ಯ ಹದಗೆಟ್ಟಿತ್ತು, ಆಗಲೂ ನಾನು ಶೂಟಿಂಗ್ನಲ್ಲಿ ಪಾಲ್ಗೊಂಡೆ
'ರಾಧಾ ರಮಣ' ಶೂಟಿಂಗ್ ಸಮಯ ನಿಜಕ್ಕೂ ನನ್ನ ಜೀವನದ ತುಂಬ ಕಷ್ಟದ ಸಮಯವಾಗಿತ್ತು. ನನಗೆ ಆಗ ಗಾಯವಾಗಿತ್ತು. ಅದೇ ಸಮಯಕ್ಕೆ ಸರಿಯಾಗಿ ತಾಯಿ ಕಳೆದುಕೊಂಡೆ. ಆದರೆ ಇದರಿಂದ ಪ್ರಾಜೆಕ್ಟ್ಗೆ ಪರಿಣಾಮ ಆಗೋದಿಕ್ಕೆ ಬಿಡಲಿಲ್ಲ. ತಾಯಿ ತುಂಬ ಚಿಂತಾಜನಕ ಸ್ಥಿತಿಯಲ್ಲಿದ್ದಾಗಲೂ ಕೂಡ ನಾನು ಶೂಟಿಂಗ್ನಲ್ಲಿ ಪಾಲ್ಗೊಂಡಿದ್ದೆ. ಎಪಿಸೋಡ್ಗಳ ಬ್ಯಾಂಕಿಂಗ್ ಇಟ್ಟುಕೊಳ್ಳೋದು ಧಾರಾವಾಹಿ ತಂಡಕ್ಕೆ ಎಷ್ಟು ಮಹತ್ವದ್ದಾಗಿರುತ್ತದೆ ಎಂದು ಗೊತ್ತಿತ್ತು. ನಾನು ನನ್ನಿಂದ ತಂಡ ಸಮಸ್ಯೆಗೆ ಗುರಿಯಾಗಬಾರದು ಎಂದುಕೊಂಡಿದ್ದೆ. ನನ್ನ ತಂದೆ ಈ ಧಾರಾವಾಹಿ ನಡೆಯಬೇಕು, ಶೆಡ್ಯೂಲ್ ಫಾಲೋ ಮಾಡು ಎಂದು ಹೇಳಿದ್ದರು. ನನಗೆ ರಾಧಾ ರಮಣ ಧಾರಾವಾಹಿಯ ತಾಂತ್ರಿಕ ವರ್ಗದಿಂದ ಮಾತ್ರ ಸಹಕಾರ ಸಿಕ್ಕಿತ್ತು' ಅಂತ ಬೇಸರ ಹೊರಹಾಕಿದರು ಆಶಿತಾ.
ಸೆ.27ಕ್ಕೆ 'ಕಿಸ್' ಕೊಡೋಕೆ ರೆಡಿಯಾದ ಸ್ಯಾಂಡಲ್ವುಡ್ ಹೀರೋಯಿನ್ ಶ್ರೀಲೀಲಾ
ತಾಯಿ ತೀರಿಕೊಂಡ ನಾಲ್ಕು ದಿನಕ್ಕೆ ಶೂಟಿಂಗ್ ಸೆಟ್ಗೆ ಹೋದೆ
'ಪ್ರೊಡಕ್ಷನ್ ಹುಡುಗರಿಂದ ಹಿಡಿದು, ಡೈರೆಕ್ಷನ್ ತಂಡ ನನ್ನ ಪರ ನಿಂತು ಕಾಪಾಡಿದ್ದರು. ನನಗೆ ಹೇಳಿದ್ದ ಪ್ರಕಾರ ನನ್ನ ಪಾತ್ರ ಕೇವಲ ನಾಲ್ಕು ತಿಂಗಳದ್ದಾಗಿತ್ತು, ಆದರೆ ಮುಂದುವರಿದಿದ್ದು ಮಾತ್ರ 1 ವರ್ಷ. ಇದರ ಬಗ್ಗೆ ನಾನು ಯಾವತ್ತೂ ದೂರು ಹೇಳಲಿಲ್ಲ. ಯಾವುದೇ ಬೇಸರ ಇಲ್ಲದೆ ಶೂಟಿಂಗ್ನಲ್ಲಿ ಪಾಲ್ಗೊಂಡೆ. ಪರೋಕ್ಷವಾಗಿ ಜನರು ನನ್ನ ಬಗ್ಗೆ ಮಾತನಾಡುತ್ತಿದ್ದರು. ನನಗೆ ಇದು ಇಷ್ಟ ಆಗುತ್ತಿರಲಿಲ್ಲ. ನನ್ನ ತಾಯಿ ತೀರಿಕೊಂಡ ನಾಲ್ಕು ದಿನದ ನಂತರ ನಾನು ಶೂಟಿಂಗ್ ಸೆಟ್ಗೆ ಬಂದೆ. ಶೂಟಿಂಗ್ ಟೈಮ್ನಲ್ಲಿ ತುಂಬ ಭಾವುಕಳಾಗುತ್ತಿದ್ದೆ. ನಿರ್ದೇಶಕರು ಆಗೆಲ್ಲ ನನಗೆ ತುಂಬ ಸಹಾಯ ಮಾಡಿ, ಉಳಿದವರಿಗೂ ಕೂಡ ಪರಿಸ್ಥಿತಿ ಅರ್ಥ ಮಾಡಿಕೊಳ್ಳಿ ಎಂದು ಹೇಳುತ್ತಿದ್ದಾರೆ ' ಎಂದಿದ್ದಾರೆ ಆಶಿತಾ.
ಪರೋಕ್ಷವಾಗಿ 'ರಾಧಾ ರಮಣ' ತಂಡದವರು ನನ್ನ ಬಗ್ಗೆ ಕೆಟ್ಟದಾಗಿ ಮಾತನಾಡಿದರು
ರಾಧಾ ರಮಣ ತಂಡದ ಸಹಕಲಾವಿದರೊಬ್ಬರು 'ನನಗೆ 8 ಗಂಟೆಯಾಯ್ತು, ನನ್ನ ಕಾಲ್ಶೀಟ್ ಮೀರಿದ ಸಮಯವಿದು, ಲೇಟ್ ಆಯ್ತು' ಅಂತ ಹೇಳಿಹೋದರಂತೆ. ಇದು ಆಶಿತಾ ಅವರಿಗೆ ತುಂಬ ಬೇಸರ ತಂದಿತು. ಎಲ್ಲರ ಮುಂದೆ ಆಶಿತಾ ತಪ್ಪಿತಸ್ಥೆಯಾದರಂತೆ'
'ನನಗೆ ತುಂಬ ಪ್ರಾಜೆಕ್ಟ್ಗಳು ಸಿಗುತ್ತಿದ್ದರೂ ಕೂಡ 'ರಾಧಾ ರಮಣ' ತಂಡದ ಪ್ರೊಡಕ್ಷನ್ ಹೌಸ್ ನನ್ನ ಬಗ್ಗೆ ಕೆಟ್ಟದಾಗಿ ಮಾತನಾಡಲು ಆರಂಭಿಸಿದರು. ಇದಾದನಂತರ ನನಗೆ ಕಠಿಣ ಶ್ರಮದಿಂದ ಯಾವುದೇ ಪ್ರಯೋಜನ ಇಲ್ಲ ಎಂದು ಅರ್ಥವಾಯ್ತು. ಇದರ ಜೊತೆಗೆ ಇನ್ನೊಂದು ಹೊಸ ಶೋ ಬಗ್ಗೆ ಆಫರ್ ಬಂದಾಗಲೂ ಕೂಡ ನನ್ನ ಬಗ್ಗೆ, ವೃತ್ತಿ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದ 'ರಾಧಾ ರಮಣ' ತಂಡದವರು ಇದ್ದರು. ನನ್ನ ವಿರುದ್ಧವಾಗಿ ನಿಂತಿದ್ದರು' ಎಂದಿದ್ದಾರೆ ಆಶಿತಾ.
ಈ ಇಂಡಸ್ಟ್ರಿ ನನ್ನಂತವರಿಗಲ್ಲ ಎಂದು ಅಂದೇ ಅನಿಸಿತು
'ಪಾತ್ರ, ಪ್ರಾಜೆಕ್ಟ್ಗೆ ನಾನು ಮೊದಲ ಆದ್ಯತೆ ನೀಡಿದ್ದರೂ ಕೂಡ ನನ್ನ ಪರಿಶ್ರಮಕ್ಕೆ ಯಾವುದೇ ಬೆಲೆ ಸಿಗಲಿಲ್ಲ. ನಾನು ಹಣಕ್ಕಾಗಿ ದುಡಿಯುತ್ತಿರಲಿಲ್ಲ. ಸಂಭಾವನೆ ವಿಚಾರದಲ್ಲಿ ನಿರ್ಮಾಪಕರ ಮೊದಲ ಆಯ್ಕೆ ಆಗಿರುತ್ತಿದ್ದೆ. ತಾಂತ್ರಿಕ ವರ್ಗದ ಹೊರತಾಗಿ ಯಾರೂ ಕೂಡ ನನ್ನ ಜೊತೆ ನಿಲ್ಲುತ್ತಿರಲಿಲ್ಲ. ನಾವು ಕಷ್ಟದಲ್ಲಿದ್ದಾಗ ಯಾರೂ ಕೂಡ ಬರೋದಿಲ್ಲ ಎಂದು ಅರ್ಥ ಆಯ್ತು, ಯಾರೂ ಕೂಡ ನನ್ನನ್ನು ಅರ್ಥ ಮಾಡಿಕೊಳ್ಳುವ ಪ್ರಯತ್ನ ಮಾಡಲಿಲ್ಲ. ಇದು ನನಗೆ ತುಂಬ ನೋವು ಉಂಟುಮಾಡಿದೆ. ಸೋಲು-ಗೆಲುವಿನ ನಂತರದಲ್ಲಿ ಈ ಇಂಡಸ್ಟ್ರಿ ನನಗಲ್ಲ ಅಂತ ಅನಿಸಿತು. ಇಂಡಸ್ಟ್ರಿಯಲ್ಲಿ ಇದ್ದಾಗಲೂ ಕೂಡ ನಾನು ಇಲ್ಲಿ ಇದ್ದೆ ಎಂದು ಅನಿಸಿರಲಿಲ್ಲ. ನಾನು ತುಂಬ ಪ್ರಾಮಾಣಿಕಳು. ನನಗೆ ಮುಖವಾಡ ಹಾಕಿಕೊಂಡು ಇರಲು ಬರೋದಿಲ್ಲ. ಕೆಲಸ ಎಂದು ಬಂದಾಗ ಕಾಂಪ್ರಮೈಸ್ ಆಗಬೇಕೋ ಅಥವಾ ಒಳ್ಳೆಯದನ್ನು ನೀಡಬೇಕೋ ಗೊತ್ತಾಗೋದಿಲ್ಲ. ರಾಧಾ ರಮಣ ಟೈಮ್ನಲ್ಲಿ ನನಗೆ ಸರ್ಜರಿ ಆಗಿತ್ತು. ಹೀಗಿದ್ದಾಗ್ಯೂ ಕೆಲಸದ ವಿಚಾರವಾಗಿ ರಿಸ್ಕ್ ತೆಗೆದುಕೊಂಡೆ. ಆದರೆ ಇದೆಲ್ಲ ಡೆಡಿಕೇಶನ್ ಎಂದು ಪರಿಗಣಿಸೋದಿಲ್ಲ' ಎಂದು ಹೇಳುತ್ತಾರೆ ಆಶಿತಾ.
ಪ್ರತಿ ಬಾರಿ ನನ್ನ ತಂದೆಗೆ ನಟನೆ ಕುರಿತಾದ ಆಸಕ್ತಿ ಬಗ್ಗೆ ಹೇಳುತ್ತಿದ್ದೆ. ಆಗ ಅವರು ಅದನ್ನು ವಿರೋಧಿಸುತ್ತಿದ್ದರು. ನಾನು ಸಿಟ್ಟುಮಾಡಿಕೊಂಡು ಹೊರಗೆ ಬಂದೆ. ಈಗ ನನ್ನ ತಂದೆ ಯಾಕೆ ಎಚ್ಚರಿಕೆ ನೀಡಿದ್ದರು ಎಂದು ಈಗ ಅರ್ಥವಾಯ್ತು. ಈಗ ಅವರ ಮಾತನ್ನು ಅಕ್ಷರಶಃ ಒಪ್ಪುತ್ತೇನೆ ಎಂದು ಹೇಳುತ್ತಾರೆ ಆಶಿತಾ.