ಆ್ಯಪ್ನಗರ

ಡೇಟ್ ಮಾಡೋದು ಓಕೆ, ಆದರೆ ಮದುವೆಗೂ ಮುನ್ನ ಮಂಚ ಹತ್ತಬೇಡಿ: ರಾಧಾ ರಮಣ ಧಾರಾವಾಹಿ ನಟಿ ಕಾವ್ಯಾ ಗೌಡ!

ಸಾಮಾನ್ಯ ಮಹಿಳೆಯಾಗಲೀ, ಸೆಲೆಬ್ರಿಟಿಯಾಗಲೀ ಮಹಿಳೆ ಎಂದಕೂಡಲೇ ಕೆಲ ಮನಸ್ಥಿತಿಗಳು ಮಹಿಳೆಯನ್ನು ಕೀಳಾಗಿ ಕಾಣುವುದಿದೆ. ಹುಡುಗಿಯರು ಕೂಡ ಕೆಲವರ ಮೋಸಕ್ಕೆ ಬಹಳ ಸುಲಭವಾಗಿ ಬಲಿಯಾಗುತ್ತಾರೆ. ಈ ಬಗ್ಗೆ ನಟಿ ಕಾವ್ಯಾ ಗೌಡ ಗೌಡ ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

Vijaya Karnataka Web 10 Sep 2020, 1:06 pm
ಪ್ರತಿನಿತ್ಯ ದೇಶದಲ್ಲಿ ಅತ್ಯಾಚಾರ, ದೌರ್ಜನ್ಯ, ವರದಕ್ಷಿಣೆ ಕಿರುಕುಳ, ಲಿಂಗ ತಾರತಮ್ಯದಂತಹ ಅನೇಕ ಚಟುವಟಿಕೆಗಳು ನಡೆಯುತ್ತಿರುತ್ತವೆ. ಹೀಗಾಗಿ ಹೆಣ್ಣುಮಕ್ಕಳ ಸುರಕ್ಷತೆ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿರುತ್ತದೆ. ಸರ್ಕಾರ ಕೂಡ ಮಹಿಳೆಯರ ಸುರಕ್ಷತೆಗೆ ಏನಾದರೊಂದು ಯೋಜನೆ, ವ್ಯವಸ್ಥೆ ರೂಪಿಸುತ್ತಿರುತ್ತದೆ. ಇದರ ಜೊತೆಗೆ ಹೆಣ್ಣುಮಕ್ಕಳು ಪ್ರೀತಿ-ಮದುವೆ ವಿಚಾರದಲ್ಲಿ ಮೋಸ ಹೋಗುವುದುಂಟು, ತಾಳ್ಮೆ ಕಳೆದುಕೊಳ್ಳುವುದು ಇದೆ. ಹೀಗಾಗಿ ಈ ವಿಚಾರವಾಗಿ 'ರಾಧಾ ರಮಣ' ಧಾರಾವಾಹಿ ನಟಿ ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
Vijaya Karnataka Web radha ramana serial actress kavya gowda speaks about safety of the girls
ಡೇಟ್ ಮಾಡೋದು ಓಕೆ, ಆದರೆ ಮದುವೆಗೂ ಮುನ್ನ ಮಂಚ ಹತ್ತಬೇಡಿ: ರಾಧಾ ರಮಣ ಧಾರಾವಾಹಿ ನಟಿ ಕಾವ್ಯಾ ಗೌಡ!


ಡೇಟ್ ಮಾಡೋದು ಓಕೆ ಎಂದ ಕಾವ್ಯಾ ಗೌಡ

'ನಿಮ್ಮ ಪ್ರೀತಿ ಸಾಬೀತುಪಡಿಸಲು ಬಟ್ಟೆ ತೆಗೆಯಬೇಡಿ. ಡೇಟ್ ಮಾಡೋದು ಓಕೆ, ಆದರೆ ಮದುವೆಗೂ ಮುನ್ನ ಮಂಚ ಹತ್ತಬೇಡಿ. ಕಾಂಡೋಮ್‌ ಬದಲು ಸೇಫ್ಟಿ ಪ್ಯಾಡ್ ಖರೀದಿ ಮಾಡುವ ಹುಡುಗನನ್ನು ಹುಡುಕಿಕೊಳ್ಳಿ. ಹೋಟೆಲ್‌ಗೆ ಕರೆದುಕೊಂಡು ಹೋಗುವ ಬದಲು, ಅವನ ಮನೆಗೆ ಕರೆದುಕೊಂಡು ಹೋಗುವ ಹುಡುಗನನ್ನು ಹುಡುಕಿಕೊಳ್ಳಿ. ಬೆತ್ತಲೆ ಬದಲಾಗಿ ನಿಮ್ಮ ಪೀರಿಯಡ್ ಪ್ಲ್ಯಾನ್ ಕೇಳುವ ಹುಡುಗನನ್ನು ಹುಡುಕಿಕೊಳ್ಳಿ. ನಿಮ್ಮ ದೇಹಕ್ಕಿಂತ ಬದಲು, ನಿಮ್ಮ ಆತ್ಮ, ಹೃದಯ ಬಯಸುವ ಹುಡುಗನನ್ನು ಆಯ್ಕೆ ಮಾಡಿಕೊಳ್ಳಿ' ಎಂದು ನಟಿ ಕಾವ್ಯಾ ಗೌಡ ಹೇಳಿದ್ದಾರೆ.

ಮಹಿಳೆ ಮನುಷ್ಯನಿಗೆ ಸಿಕ್ಕಿದ ಶ್ರೇಷ್ಠ ಉಡುಗೊರೆ: ಕಾವ್ಯಾ ಗೌಡ

'ಪ್ರೀತಿಯ ನಿಜವಾದ ಎಕ್ಸ್‌ಪ್ರೆಶನ್‌ನನ್ನು ಗೌರವಿಸಿ. ನಿಜವಾದ ಮನುಷ್ಯ ಮಹಿಳೆಯನ್ನು ನೋಯಿಸುವುದಿಲ್ಲ. ಗೃಹಿಣಿಯಾಗಿ ಆಕೆ ಅಡುಗೆ ಮಾಡುತ್ತ, ನಿಮ್ಮ ಬಟ್ಟೆಗಳನ್ನು ಒಗೆಯುತ್ತಿರುವುದಿಲ್ಲ. ನಿಮ್ಮ ಮನೆಗೆ ಬಂದಮೇಲೆ ಕುಟುಂಬವನ್ನು ನೋಡಿಕೊಳ್ಳುತ್ತ, ಎಲ್ಲವೂ ಪರ್ಫೆಕ್ಟ್ ಆಗಿರುವಂತೆ ನೋಡಿಕೊಳ್ಳುತ್ತಾಳೆ. ಮನುಷ್ಯನಿಗೆ ಸಿಕ್ಕಿದ ಶ್ರೇಷ್ಠ ಉಡುಗೊರೆಯೆಂದರೆ ಅದು ಮಹಿಳೆ' ಎಂದು ಕಾವ್ಯಾ ಸೋಶಿಯಲ್ ಮೀಡಿಯಾದಲ್ಲಿ ಅಭಿಪ್ರಾಯ ಹಂಚಿಕೊಂಡಿದ್ದಾರೆ.

Also Read-'ಸರಸು' ಧಾರಾವಾಹಿಗೋಸ್ಕರ ಜೊತೆಯಾದ ಸ್ಕಂದ ಅಶೋಕ್ ಹಾಗೂ ಸುಪ್ರೀತಾ ಸತ್ಯನಾರಾಯಣ್!

ಅನೇಕ ಧಾರಾವಾಹಿಗಳಲ್ಲಿ ನಟಿಸಿರುವ ಕಾವ್ಯಾ
ಕಾವ್ಯಾ ಗೌಡ ಅವರ ಈ ವಿಚಾರಕ್ಕೆ ಅನೇಕ ಜನರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಅದರ ಜೊತೆಗೆ ಕಾವ್ಯಾ ಮಾತನ್ನು ಅನೇಕ ಸೆಲೆಬ್ರಿಟಿಗಳು ಒಪ್ಪಿ, ಸತ್ಯ ಎಂದಿದ್ದಾರೆ. ಆದರೆ ಇದ್ದಕ್ಕಿದ್ದಂತೆ ಕಾವ್ಯಾ ಯಾಕೆ ಈ ವಿಚಾರವನ್ನು ಹೇಳಿಕೊಂಡಿದ್ದಾರೆ ಎಂಬುದು ಮಾತ್ರ ಆಶ್ಚರ್ಯದ ಸಂಗತಿ. ಕಾವ್ಯಾ 'ಬಕಾಸುರ' ಎಂಬ ಸಿನಿಮಾದಲ್ಲಿ ನಟಿಸಿದ್ದರು. 'ಮೀರಾ ಮಾಧವ', 'ಗಾಂಧಾರಿ', 'ರಾಧಾ ರಮಣ' ಧಾರಾವಾಹಿಯಲ್ಲಿ ನಟಿಸಿದ್ದರು. ಇತ್ತೀಚೆಗೆ ಅವರು ಸಾಕಷ್ಟು ಫೋಟೋಶೂಟ್‌ಗಳನ್ನು ಮಾಡುತ್ತಿರುತ್ತಾರೆ. ಸೋಶಿಯಲ್ ಮೀಡಿಯಾದಲ್ಲಿ ಇವರ ಫೋಟೋಗಳನ್ನು ನೋಡಿರುವ ಸಾಕಷ್ಟು ಜನರು ಮೆಚ್ಚಿಕೊಂಡಿದ್ದಾರೆ.

Also Read-'ಸರಸು' ಧಾರಾವಾಹಿಯಲ್ಲಿನ ತಮ್ಮ ಪಾತ್ರದ ಬಗ್ಗೆ ಮಾಹಿತಿ ನೀಡಿದ 'ರಾಧಾ ರಮಣ' ಸ್ಕಂದ!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ