ಆ್ಯಪ್ನಗರ

'ಕಾಮಿಡಿ ಕಿಲಾಡಿಗಳು' ಶೋಗೆ ರಕ್ಷಿತಾ ಪ್ರೇಮ್ ಗೈರು, ಗೋಲ್ಡನ್ ಸ್ಟಾರ್ ಗಣೇಶ್ ಹಾಜರ್ ; ಕಾರಣ ಬಿಚ್ಚಿಟ್ಟ ಜಗ್ಗೇಶ್

'ಕಾಮಿಡಿ ಕಿಲಾಡಿಗಳು ಸೀಸನ್ 3' ಜೀ ಕನ್ನಡದ ಪ್ರಖ್ಯಾತ ಧಾರಾವಾಹಿಗಳಲ್ಲಿ ಒಂದು. ಪ್ರೇಕ್ಷಕರನ್ನು ನಕ್ಕು ಸಗಿಸುವ ಕನ್ನಡ ಕಿರುತೆರೆಯ ಟಾಪ್ ರೇಟೆಡ್ ಶೋಗಳಲ್ಲಿ ಕಾಮಿಡಿ ಕಿಲಾಡಿಗಳು ಸ್ಥಾನ ಪಡೆದುಕೊಂಡಿದೆ. ಈ ಎಪಿಸೋಡ್‌ಗೆ ಗೋಲ್ಡನ್ ಸ್ಟಾರ್ ಗಣೇಶ್ ಜಡ್ಜ್ ಆಗಿ ಬಂದಿದ್ದಾರೆ, ರಕ್ಷಿತಾ ಬಂದಿಲ್ಲ. ಕಾರಣ ಏನು?

Vijaya Karnataka Web 17 Sep 2019, 11:44 am
'ಕಾಮಿಡಿ ಕಿಲಾಡಿಗಳು ಸೀಸನ್ 3' ರಿಯಾಲಿಟಿ ಶೋದ ನಿರ್ಣಾಯಕರಾಗಿ ಜಗ್ಗೇಶ್, ಯೋಗರಾಜ್ ಭಟ್, ರಕ್ಷಿತಾ ಪ್ರೇಮ್ ಕಾರ್ಯ ನಿರ್ವಹಿಸುತ್ತಿದ್ದಾರೆ. ಎಂದಿನಂತೆ ಈ ಬಾರಿ ಕೂಡ ವಿವಿಧ ಊರುಗಳಿಂದ ಜನರನ್ನು ನಕ್ಕು ನಗಿಸುವ ಹಾಸ್ಯ ಪ್ರತಿಭೆಗಳು ಕಾರ್ಯಕ್ರಮದಲ್ಲಿವೆ. ಎಪಿಸೋಡ್‌ನಿಂದ ಎಪಿಸೋಡ್‌ಗೆ ಹೊಸ ಹೊಸ ಕಾನ್ಸೆಪ್ಟ್‌ಗಳನ್ನು ತಂದು ಜನರನ್ನು ರಂಜಿಸಲಾಗುತ್ತಿದೆ. ಈ ಕಾರ್ಯಕ್ರಮಕ್ಕೆ ಹಲವು ಸೆಲೆಬ್ರಿಟಿಗಳು, ಚಿತ್ರತಂಡ ಆಗಮಿಸುತ್ತವೆ, ಅವರ ಸಿನಿಮಾದ ಬಗ್ಗೆ ಮಾಹಿತಿ ನೀಡುತ್ತವೆ. ಆದರೆ ರಕ್ಷಿತಾ ಪ್ರೇಮ್ ಒಂದು ಎಪಿಸೋಡ್ ಶೂಟ್‌ಗೆ ಬಂದಿಲ್ಲ.
Vijaya Karnataka Web comedy kiladi

ಪುನೀತ್ ರಾಜ್‌ಕುಮಾರ್ ನಿಜವಾದ ಜಾತಕ ಬಿಚ್ಚಿಟ್ಟ ಜಗ್ಗೇಶ್: ಕಂಗಾಲಾದ ಅಪ್ಪು
ರಕ್ಷಿತಾ ಪ್ರೇಮ್ ಬದಲಾಗಿ ಗೋಲ್ಡನ್ ಸ್ಟಾರ್ ಗಣೇಶ್ 'ಕಾಮಿಡಿ ಕಿಲಾಡಿ' ಶೋಗೆ ನಿರ್ಣಾಯಕರಾಗಿ ಆಗಮಿಸಿದ್ದಾರೆ. ಹಾಗಿದ್ದರೆ ಕ್ರೇಜಿ ಕ್ವೀನ್ ರಕ್ಷಿತಾ ಕಾರ್ಯಕ್ರಮದಿಂದ ಹೊರಬಿದ್ದರಾ ಎಂಬ ಪ್ರಶ್ನೆ ಮೂಡಬಹುದು. ಇಲ್ಲ. ಅನಾರೋಗ್ಯದ ನಿಮಿತ್ತ ರಕ್ಷಿತಾ ಕಾಮಿಡಿ ಕಿಲಾಡಿ ಶೋದ ಶೂಟಿಂಗ್‌ನಲ್ಲಿ ಭಾಗವಹಿಸಿಲ್ಲ ಎಂದು ನವರಸನಾಯಕ ಜಗ್ಗೇಶ್ ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಗಣೇಶ್ ಮೊದಲು ಕಾಮಿಡಿ ಶೋದಲ್ಲಿ ಕಾಣಿಸಿಕೊಂಡಿದ್ದರು. ಅವರಿಗೆ ಹಾಸ್ಯಪ್ರಜ್ಞೆ ಚೆನ್ನಾಗಿರೋದು ಗೊತ್ತೇ ಇದೆ. ಹೀಗಾಗಿ ಈ ಬಾರಿ ಇನ್ನಷ್ಟು ಹಾಸ್ಯವನ್ನು ಕಾಮಿಡಿ ಕಿಲಾಡಿ ಶೋದಿಂದ ನಿರೀಕ್ಷಿಸಬಹುದು. ಗಣೇಶ್ ಏನೆಲ್ಲ ಮಾತನಾಡಿದ್ದಾರೆ ಎಂದು ತಿಳಿಯುವ ಕುತೂಹಲ ಪ್ರೇಕ್ಷಕರಲ್ಲಿದೆ.
'ಜಗ್ಗೇಶ್ ಬಳಿ ಹಣ ಇಲ್ವಾ? ದುಡ್ಡು ಮಾಡೋಕೆ ಅಂಥ ಕೋಟ್ಯಧಿಪತಿಗೆ ಬಂದ್ರಾ?'
ಆಗಸ್ಟ್ 31ರಿಂದ ಸೀಸನ್ 3ಶುರುವಾಗಿತ್ತು. ರಾಜ್ಯಾದ್ಯಂತ 9 ಜಿಲ್ಲೆಗಳಲ್ಲಿ ಆಡಿಷನ್ ನಡೆಸಲಾಗಿತ್ತು. ಮಾಸ್ಟರ್ ಆನಂದ್ ಕಾರ್ಯಕ್ರಮ ನಿರ್ವಹಣೆ ಜವಾಬ್ದಾರಿ ಹೊತ್ತಿದ್ದಾರೆ. ಪ್ರತಿ ಶನಿವಾರ ಮತ್ತು ಭಾನುವಾರ ರಾತ್ರಿ 7.30ಕ್ಕೆ ಕಾಮಿಡಿ ಕಿಲಾಡಿಗಳು ಕಾರ್ಯಕ್ರಮ ಪ್ರಸಾರವಾಗುತ್ತದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ