ಆ್ಯಪ್ನಗರ

Ramachari: ಕಣ್ಣು ಬಂದ್ರೆ ಚಾರು ಬದುಕಲ್ಲಿ ರಾಮಾಚಾರಿ ಇರಲ್ವಂತೆ, ಮುಂದಿನ ಕಥೆ ಏನು?

ರಾಮಾಚಾರಿ ಧಾರಾವಾಹಿಯಲ್ಲಿ ಚಾರುಗೆ ಕಣ್ಣಿಲ್ಲ. ಚಿಕಿತ್ಸೆ ಪಡೆಯುತ್ತಿರುವ ಚಾರುಗೆ ಕಣ್ಣು ಬರುತ್ತಾ ಇಲ್ಲವಾ ಎಂದು ಕಾದು ನೋಡಬೇಕಿದೆ. ಇದರ ಮಧ್ಯೆ ಚಾರುಗೆ ಕಣ್ಣು ಬಂದರೆ ಅವಳ ಜೊತೆ ರಾಮಾಚಾರಿ ಇರೋದಿಲ್ವಂತೆ. ರಾಮಾಚಾರಿಯು ಚಾರು ಪ್ರೀತಿಯನ್ನು ಒಪ್ಪುತ್ತಾನಾ? ತಾನು ಮೆಚ್ಚಿದ ಹುಡುಗನ ಜೊತೆ ಚಾರು ಮದುವೆ ಮಾಡ್ತಾಳಾ ಮಾನ್ಯತಾ?

Authored byಪದ್ಮಶ್ರೀ ಭಟ್ | Vijaya Karnataka Web 17 Feb 2023, 3:52 pm

ಹೈಲೈಟ್ಸ್‌:

  • ರಾಮಾಚಾರಿ ಧಾರಾವಾಹಿಯಲ್ಲಿ ಚಾರುಗೆ ಕಣ್ಣು ಬರತ್ತಾ?
  • ಕಣ್ಣು ಬಂದ್ರೆ ಚಾರು ಬದುಕಲ್ಲಿ ರಾಮಾಚಾರಿ ಇರೋದಿಲ್ವಂತೆ
  • ತಾನು ಮೆಚ್ಚಿದ ಹುಡುಗನ ಜೊತೆ ಚಾರು ಮದುವೆ ಮಾಡಿಸ್ತಾಳಾ ಮಾನ್ಯತಾ?

ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web ramachari serial
ರಾಮಾಚಾರಿ ಧಾರಾವಾಹಿಯಲ್ಲಿ ಚಾರು ಕಣ್ಣಿಲ್ಲದೆ ಒದ್ದಾಡುತ್ತಿದ್ದಾಳೆ. ತನ್ನಿಂದಲೇ ಚಾರು ಕಣ್ಣು ಹೋಯ್ತು ಎನ್ನೋದು ರಾನಾಚಾರಿಗೆ ಅರಗಿಸಿಕೊಳ್ಳಲಾಗದ ಸಂಗತಿ. ಹೀಗಾಗಿ ಒಂದು ಕುಟೀರದಲ್ಲಿ ಚಾರುಳನ್ನು ನೋಡಿಕೊಳ್ಳುತ್ತ ಅವಳಿಗೆ ಕಣ್ಣು ಬರುವ ಎಲ್ಲ ಪ್ರಯತ್ನಗಳಿಗೂ ರಾಮಾಚಾರಿ ಸಾಥ್ ಕೊಡುತ್ತಿದ್ದಾನೆ. ಏನೇ ಆದರೂ ನಾನು ರಾಮಾಚಾರಿಯ ಜೊತೆಯೇ ಇರಬೇಕು ಎನ್ನುವ ಚಾರು ಆಸೆಗೆ ಇದೇ ಮುಳುವಾಗಬಹುದು.

ಚಾರುಳನ್ನು ಮದುವೆಯಾಗಲು ರಾಮಾಚಾರಿ ರೆಡಿಯಿಲ್ಲ

ಗುರೂಜಿಯು ರಾಮಾಚಾರಿ ಬಳಿ ನೀನು, ಚಾರು ಒಳ್ಳೆಯ ಜೋಡಿ. ಇಬ್ಬರೂ ಮದುವೆಯಾಗ್ತೀರಾ ಎಂದು ಪ್ರಶ್ನೆ ಮಾಡಿದಾಗ ರಾಮಾಚಾರಿ "ಖಂಡಿತ ಇಲ್ಲ. ನಾನು ಮಾಡಿದ ತಪ್ಪಿಗೆ ಪ್ರಾಯಶ್ಚಿತ ಎಂದು ಈ ಕೆಲಸ ಮಾಡುತ್ತಿದ್ದೇನೆ. ನಾನು ನನ್ನ ಬದುಕಿನಲ್ಲಿ ಚಾರು ಮೇಡಂನ್ನು ಯಾವತ್ತೂ ಒಂದು ಭಾಗವಾಗಿ ನೋಡಿಲ್ಲ. ನಾನು ಅವರನ್ನು ಯಾವತ್ತೂ ಆ ರೀತಿ ನೋಡಿಯೇ ಇಲ್ಲ. ಚಾರು ಅವರಿಗೆ ಕಣ್ಣು ಬಂದಮೇಲೆ ನನ್ನ ದಾರಿ ಬೇರೆ, ಅವರ ದಾರಿ ಬೇರೆ" ಎಂದು ಹೇಳಿದ್ದಾನೆ.

ಚಾರು ಆಸೆ ಹಾಳಾಯ್ತು

ರಾಮಾಚಾರಿ ಮಾತು ಕೇಳಿ ಚಾರು ತುಂಬ ಬೇಸರ ಮಾಡಿಕೊಂಡಿದ್ದಾಳೆ. ಕಣ್ಣು ಬಂದರೆ ರಾಮಾಚಾರಿ ನನ್ನ ಜೊತೆ ಇರೋದಿಲ್ವಾ ಎಂದು ಚಾರು ಚಿಂತಾಕ್ರಾಂತಳಾಗಿದ್ದಾಳೆ. ಕಣ್ಣು ಬಂದಮೇಲೆ ರಾಮಾಚಾರಿಗೆ ತನ್ನ ಪ್ರೀತಿಯನ್ನು ಹೇಳಿಕೊಳ್ಳಬೇಕು ಎನ್ನೋದು ಚಾರು ಆಶಯವಾಗಿತ್ತು. ಆದರೆ ಈಗ ರಾಮಾಚಾರಿಯ ಯೋಚನೆಯೇ ಬೇರೆ ಇದೆ. ಈಗ ಚಾರು ಏನು ಮಾಡುತ್ತಾಳೆ ಎಂದು ಕಾದು ನೋಡಬೇಕಿದೆ.
ಕಣ್ಣಿಲ್ಲದ ಚಾರುಲತಾ ಮನೆಯಿಂದ ಗೇಟ್‌ಪಾಸ್ ಕೊಟ್ಟ ಕೋದಂಡ

ರಾಮಾಚಾರಿ ಧಾರಾವಾಹಿಯಲ್ಲಿ ಭರ್ಜರಿ ಟ್ವಿಸ್ಟ್

ಇನ್ನೊಂದು ಕಡೆ ಮಾನ್ಯತಾಳ ಸಹೋದರನ ಮಗ ಕೂಡ ಚಾರುಳನ್ನು ಮದುವೆಯಾಗೋದಿಲ್ಲ ಎಂದು ಹೇಳಿದ್ದಾನೆ. ಕಣ್ಣಿಲ್ಲದ ನನ್ನ ಮಗಳನ್ನು ಯಾರು ಮದುವೆಯಾಗ್ತಾರೆ ಅಂತ ಮಾನ್ಯತಾ ಚಿಂತಾಕ್ರಾಂತಳಾಗಿದ್ದಾಳೆ. ಈಗ ಬೇರೆ ಹುಡುಗನನ್ನು ನೋಡಿ ಚಾರು ಜೊತೆ ಮದುವೆ ಮಾಡಿಸಬೇಕು ಎಂದು ಮಾನ್ಯತ್ಯಾ ಪ್ಲ್ಯಾನ್ ಮಾಡಿದ್ದಾಳೆ. ಮಾನ್ಯತಾ ಕಂಪೆನಿಯ ಕಾಂಪಿಟೇಟರ್ ಮಗನ ಜೊತೆ ಚಾರು ಮದುವೆ ಮಾಡಲು ಎಲ್ಲ ಪ್ಲ್ಯಾನ್ ಸಿದ್ಧವಾಗಿದೆ. ಈಗ ಚಾರು ಕಣ್ಣು ಬರತ್ತಾ? ರಾಮಾಚಾರಿಯು ಚಾರು ಪ್ರೀತಿಯನ್ನು ಒಪ್ಪುತ್ತಾನಾ? ಒಂದು ವೇಳೆ ರಾಮಾಚಾರಿ ಜೊತೆ ಚಾರು ಮದುವೆ ನಡೆಯಲು ಮಾನ್ಯತಾ ಬಿಡುತ್ತಾಳಾ ಎಂದು ಕಾದು ನೋಡಬೇಕಿದೆ.

ಚಾರುಗೆ ಕಣ್ಣೇ ಬರಲ್ವಾ? ರಾಮಾಚಾರಿ ಧಾರಾವಾಹಿಯ ಮುಂದಿನ ಕಥೆ ಏನು?

ದೊಡ್ಡ ತಾರಾಬಳಗ
ಚಾರುಲತಾ ಪಾತ್ರದಲ್ಲಿ ಮೌನ ಗುಡ್ಡೇಮನೆ ( Mouna Guddemane ), ರಾಮಾಚಾರಿ ಪಾತ್ರದಲ್ಲಿ ರಿತ್ವಿಕ್ ಕೃಪಾಕರ್ ( Rithvik Krupakar ), ಅಂಜಲಿ ( Anjali ), ಶಂಕರ್ ಅಶ್ವತ್ಥ್ ( Shankar Ashwath ), ಝಾನ್ಸಿ ಕಾವೇರಪ್ಪ ( Jhansi Kaverappa ), ಗುರುದತ್, ಸಿರಿ ಮುಂತಾದವರು ಈ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಮಹಿಳಾ ಪ್ರಧಾನ ಕಥೆಯುಳ್ಳ ಧಾರಾವಾಹಿಗಳ ಮಧ್ಯದಲ್ಲಿ ಪುರುಷ ಪ್ರಧಾನ ಕಥೆಯುಳ್ಳ ಈ ಧಾರಾವಾಹಿ ಮೆಚ್ಚುಗೆ ಪಡೆದಿದೆ.
ಲೇಖಕರ ಬಗ್ಗೆ
ಪದ್ಮಶ್ರೀ ಭಟ್
ವಿಜಯ ಕರ್ನಾಟಕ' ವೆಬ್‌ನಲ್ಲಿ ಸಿನಿಮಾ ಪತ್ರಕರ್ತೆಯಾಗಿ 2019ರಿಂದ ಪದ್ಮಶ್ರೀ ಭಟ್ ಕಾರ್ಯನಿರ್ವಹಿಸುತ್ತಿದ್ದಾರೆ. ಇದಕ್ಕೂ ಮುನ್ನ ರಾಜ್ಯಮಟ್ಟದಲ್ಲಿ ಪತ್ರಿಕೆಯಲ್ಲಿ ಕೆಲಸ ಮಾಡಿದ ಅನುಭವ ಇವರಿಗೆ ಇದೆ. 'ವಿಜಯ ಕರ್ನಾಟಕ' ವೆಬ್‌ನಲ್ಲಿ ಲೇಖನಗಳನ್ನು ಬರೆಯುವುದರ ಜೊತೆಗೆ ಸೆಲೆಬ್ರಿಟಿಗಳ ಸಂದರ್ಶನಗಳನ್ನು ಮಾಡುತ್ತಿದ್ದಾರೆ. ಪುಸ್ತಕ ಓದುವುದು, ಪ್ರವಾಸ ಪದ್ಮಶ್ರೀ ಅವರ ಇಷ್ಟದ ಹವ್ಯಾಸಗಳು.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ