ಆ್ಯಪ್ನಗರ

ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಿದ ರಾಮಾಯಣದ ‘ರಾವಣ’ ಅರವಿಂದ್ ತ್ರಿವೇದಿ ನಿಧನವಾರ್ತೆ

ರಮಾನಂದ ಸಾಗರ್ ನಿರ್ದೇಶನದಲ್ಲಿ ಮೂಡಿಬಂದ ರಾಮಾಯಣ ಧಾರಾವಾಹಿಯಲ್ಲಿ ರಾವಣನಾಗಿ ಅಬ್ಬರಿಸಿರುವ ಅರವಿಂದ್ ತ್ರಿವೇದಿ ನಿಧನರಾಗಿದ್ದರೆ ಎಂಬ ಸುದ್ದಿ ಹಬ್ಬಿದೆ. ಈ ಸಂಬಂಧ ಅವರ ಕುಟುಂಬ ಸದಸ್ಯರು ಸ್ಪಷ್ಟೀಕರಣ ನೀಡಿದ್ದಾರೆ.

TIMESOFINDIA.COM 5 May 2020, 1:52 pm

ರಾಮಾಯಣ ಧಾರಾವಾಹಿಯಲ್ಲಿ ರಾವಣನ ಪಾತ್ರದಲ್ಲಿ ಅಬ್ಬರಿಸಿರುವ ನಟ ಅರವಿಂದ್ ತ್ರಿವೇದಿ ನಿಧನರಾಗಿದ್ದಾರೆ ಎಂಬ ಸುದ್ದಿ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದೆ. ಈ ಸಂಬಂಧ ಅವರ ಕುಟುಂಬದ ಸದಸ್ಯರು ಗರಂ ಆಗಿದ್ದಾರೆ.
Vijaya Karnataka Web ರಾಮಾಯಣದ ರಾವಣ ಅರವಿಂದ್ ತ್ರಿವೇದಿ


ಅರವಿಂದ್ ತ್ರಿವೇದಿ ಅವರ ನಿಧನಸುದ್ದಿಯನ್ನು ತಳ್ಳಿ ಹಾಕಿರುವ ಅವರ ಕುಟುಂಬದ ಸದಸ್ಯರು, ಅವರು ಸದ್ಯಕ್ಕೆ ಆರಾಮವಾಗಿರುವುದಾಗಿ ತಿಳಿಸಿದ್ದಾರೆ. ಈ ಸಂಬಂಧ ಅರವಿಂದ್ ತ್ರಿವೇದಿ ಅವರ ಸೋದರಳಿಯ ಕೌಸ್ತುಬ್ ಟ್ವೀಟ್ ಮಾಡಿ ತಿಳಿಸಿದ್ದಾರೆ.

ನನ್ನ ಅಂಕಲ್ ಆರೋಗ್ಯವಾಗಿದ್ದಾರೆ. ದಯವಿಟ್ಟು ಅವರ ಬಗ್ಗೆ ಸುಳ್ಳು ಸುದ್ದಿಗಳನ್ನು ಹಬ್ಬಿಸಬೇಡಿ ಎಂದು ವಿನಂತಿಸಿಕೊಂಡಿದ್ದಾರೆ. “ಡಿಯರ್ ಆಲ್, ನಮ್ಮ ಅಂಕಲ್ ಅರವಿಂದ ತ್ರಿವೇದಿ ಲಂಕೇಶ್ ಸುರಕ್ಷಿತವಾಗಿ ಹಾಗೂ ಆರೋಗ್ಯವಾಗಿ ಇದ್ದಾರೆ. ಅವರ ಬಗ್ಗೆ ಸುಳ್ಳು ಸುದ್ದಿಗಳನ್ನು ಹರಡುವುದನ್ನು ದಯವಿಟ್ಟು ಮಾಡಬೇಡಿ ಎಂದು ವಿನಂತಿಸಿಕೊಳ್ಳುತ್ತೇನೆ. ಅವರು ಆರೋಗ್ಯವಾಗಿದ್ದಾರೆ ಎಂದು ಹೇಳಲು ಇಚ್ಛಿಸುತ್ತೇನೆ” ಎಂದಿದ್ದಾರೆ.
ರಾಮಾಯಣದ 'ಸೀತಾಪಹರಣ' ದೃಶ್ಯ ನೋಡಿ ಭಾವುಕರಾದ 'ರಾವಣ' ಪಾತ್ರಧಾರಿ ಅರವಿಂದ್ ತ್ರಿವೇದಿ


ದೂರದರ್ಶನ ವಾಹಿನಿಯಲ್ಲಿ ರಾಮಾಯಣ ಧಾರಾವಾಹಿ ಮರುಪ್ರಸಾರವಾದ ಬಳಿಕ ಸಿಕ್ಕಾಪಟ್ಟೆ ಜನಪ್ರಿಯತೆ ಪಡೆದುಕೊಂಡಿತು. ಏಪ್ರಿಲ್ 16ರಂದು 7.7 ಕೋಟಿ ವೀಕ್ಷಿಸುವ ಮೂಲಕ ವಿಶ್ವದಾಖಲೆ ಸೃಷ್ಟಿಸಿದ್ದು ಗೊತ್ತೇ ಇದೆ.

ರಾಮಾಯಣ ಧಾರಾವಾಹಿ ನೋಡಿ ಬಾಲ್ಯದ ದಿನಗಳಿಗೆ ಹೊರಳಿದ ನಟಿ ಕಾಜಲ್ ಅಗರವಾಲ್

ಈ ಹಿಂದೊಮ್ಮೆ ಸೀತಾಪರಹಣದ ಸನ್ನಿವೇಶವನ್ನು ಅರವಿಂದ್ ತ್ರಿವೇದಿ ನೋಡುತ್ತಾ ಭಾವುಕರಾದ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿತ್ತು. ಇದೀಗ ಅವರು ನಿಧನರಾಗಿದ್ದಾರೆ ಎಂಬ ಸುಳ್ಳು ಸುದ್ದಿ ಹಬ್ಬಿದೆ. ಈಗವರಿಗೆ ಸರಿಸುಮಾರು 83 ವರ್ಷ. ಈ ಇಳಿ ವಯಸ್ಸಿನಲ್ಲಿ ಟಿವಿ ಮುಂದೆ ಕುಳಿತು ರಾಮಾಯಣ ಧಾರಾವಾಹಿಯನ್ನು ವೀಕ್ಷಿಸುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದ್ದು ನೋಡುಗರು ಥ್ರಿಲ್ ಆಗಿದ್ದರು.

ಅರುಣ್ ಗೋವಿಲ್‌ಗೆ ರಾಮಾಯಣದಲ್ಲಿ ಇಷ್ಟವಾದ ಪಾತ್ರ ಯಾವುದು ಅಂತ ಗೊತ್ತಾದರೆ ಚಕಿತರಾಗುತ್ತೀರ!

ರಮಾನಂದ ಸಾಗರ್ ನಿರ್ಮಾಣ, ನಿರ್ದೇಶನದಲ್ಲಿ ಮೂಡಿಬಂದ ರಾಮಾಯಣ ಧಾರಾವಾಹಿ 33 ವರ್ಷಗಳ ಬಳಿಕ ದೂರದರ್ಶನ ನ್ಯಾಶನಲ್ ವಾಹಿನಿಯಲ್ಲಿ ಮರುಪ್ರಸಾರವಾಗುತ್ತಿದೆ. 1987ರಲ್ಲಿ ಪ್ರಸಾರವಾದ ಈ ಪೌರಾಣಿಕ ಧಾರಾವಾಹಿ ಈಗಲೂ ಮನೆಮನೆಗಳಲ್ಲಿ ಹೌಸ್‍‍ಫುಲ್ ಪ್ರದರ್ಶನ ಕಾಣುತ್ತಿದ್ದು ಇದರ ಜನಪ್ರಿಯತೆ ಎಳ್ಳಷ್ಟೂ ಕಡಿಮೆಯಾಗಿಲ್ಲ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ