ಆ್ಯಪ್ನಗರ

ರಾಮಾಯಣದ 'ರಾಮ' ಅರುಣ್ ಗೋವಿಲ್ ನಕಲಿ ಟ್ವಿಟರ್ ಖಾತೆಗೆ ಬಿತ್ತು ರಾಮಬಾಣ!

ರಾಮಾಯಣ ಧಾರಾವಾಹಿ ಮರುಪ್ರಸಾರವಾಗುತ್ತಿದ್ದಂತೆ ನಕಲಿ ಟ್ವಿಟರ್ ಖಾತೆಗಳು ಆಕ್ಟೀವ್ ಆಗಿವೆ. ರಾಮನ ಪಾತ್ರಧಾರಿ ಅರುಣ್ ಗೋವಿಲ್ ಹೆಸರಿನಲ್ಲಿ ನಕಲಿ ಖಾತೆ ಸೃಷ್ಟಿಯಾಗಿದ್ದು ಇದನ್ನು ಅರುಣ್ ಗೋವಿಲ್ ಗಮನಕ್ಕೂ ಬಂದಿದ್ದು, ಇದನ್ನು ಸಸ್ಪೆಂಡ್ ಮಾಡುವಂತೆ ವಿನಂತಿಸಿಕೊಂಡಿದ್ದಾರೆ.

Vijaya Karnataka Web 13 Apr 2020, 3:51 pm

ಕಳೆದ ಕೆಲ ವಾರಗಳಿಂದ ದೂರದರ್ಶನದಲ್ಲಿ ಪೌರಾಣಿಕ ಧಾರಾವಾಹಿ 'ರಾಮಾಯಣ' ಮರುಪ್ರಸಾರವಾಗುತ್ತಿದೆ. ಈ ಧಾರಾವಾಹಿಯಲ್ಲಿ ರಾಮ ಪಾತ್ರ ಪೋಷಿಸಿರುವ ಅರುಣ್ ಗೋವಿಲ್ ಅವರನ್ನು ಪ್ರಧಾನಿ ನರೇಂದ್ರ ಮೋದಿ ಸಹ ಅಭಿನಂದಿಸಿದ್ದಾರೆ. ಆದರೆ ಟ್ಯಾಗ್ ಮಾಡುವಾಗ 'RealArunGovil' ಎಂಬ ಹ್ಯಾಂಡಲ್‍ಗೆ ಟ್ಯಾಗ್ ಮಾಡಿದ್ದಾರೆ. ಆದರೆ ಇದು ಅಸಲಿ ಅಲ್ಲ ನಕಲಿ ಖಾತೆಯಾಗಿತ್ತು.
Vijaya Karnataka Web ಅರುಣ್ ಗೋವಿಲ್


ಇದು ಅರುಣ್ ಗೋವಿಲ್ ಗಮನಕ್ಕೂ ಬಂದಿದ್ದು ಬಳಿಕ ತಮ್ಮ ಅಸಲಿ ಟ್ವಿಟರ್ ಖಾತೆ @arungovil12 ಹಂಚಿಕೊಂಡಿದ್ದಾರೆ. ಅಷ್ಟೇ ಅಲ್ಲ ನಕಲಿ ಖಾತೆಯನ್ನು ಸಸ್ಪೆಂಡ್ ಮಾಡುವಂತೆಯೂ ವಿನಂತಿಸಿಕೊಂಡಿದ್ದಾರೆ. ಈಗ ಆ ನಕಲಿ ಖಾತೆ ಸಸ್ಪೆಂಡ್ ಆಗಿದ್ದು ಖಾತೆ ಸೃಷ್ಟಿಸಿದವ ತಾನು ಅರುಣ್ ಗೋವಿಲ್ ಅನುಯಾಯಿ ಎಂದಿದ್ದಾನೆ.

ಅರುಣ್ ಗೋವಿಲ್ ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದನ್ನು ಇವರು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದರು. ಆದರೆ ಈ ಖಾತೆಯನ್ನು ಯಾವುದೇ ಕಾರಣಕ್ಕೂ ತಾನು ಅಡ್ಡದಾರಿ ಹಿಡಿಸಲ್ಲ, ದುರುಪಯೋಗ ಮಾಡಿಕೊಳ್ಳಲ್ಲ ಎಂದಿದ್ದರು. ಆದರೆ ಈಗ ಆ ಖಾತೆ ಸಸ್ಪೆಂಡ್ ಆಗಿದೆ. ಕೊನೆಯದಾಗಿ ಆ ಖಾತೆಯಿಂದ ಮಾಡಿರುವ ಟ್ವೀಟನ್ನು ಸ್ಕ್ರೀನ್‌ಶಾಟ್‌ನಲ್ಲಿ ಕಾಣಬಹುದು.

ಕುಟುಂಬ ಸಮೇತ ರಾಮಾಯಣ ಧಾರಾವಾಹಿ ವೀಕ್ಷಿಸಿದ ರಾಮನ ಪಾತ್ರಧಾರಿ ಅರುಣ್ ಗೋವಿಲ್


ನಕಲಿ ಖಾತೆಯನ್ನು ತೊಲಗಿಸಿ ಎಂದು ಅರುಣ್ ಗೋವಿಲ್ ವಿನಂತಿಸಿಕೊಂಡಿದ್ದ ವಿಡಿಯೋ ಸಹ ವೈರಲ್ ಆಗಿತ್ತು. ಅವರು ವಿನಂತಿಸಿಕೊಂಡ ಬಳಿಕ ಇದು ನಕಲಿ ಎಂಬುದು ಗೊತ್ತಾಗಿತ್ತು. ರಮಾನಂದ ಸಾಗರ್ ನಿರ್ದೇಶನದ ರಾಮಾಯಣ (1987) ಧಾರಾವಾಹಿ ಮೂಲಕ ಅರುಣ್ ಗೋವಿಲ್, ದೀಪಿಕಾ ಚಿಕ್ಲಿಯಾ (ಸೀತೆ), ಸುನಿಲ್ ಲಾಹ್ರಿ (ಲಕ್ಷ್ಮಣ) ಹಾಗೂ ದಿವಂಗತ ದಾರಾ ಸಿಂಗ್ (ಹನುಮಂತ) ಜನಪ್ರಿಯರಾಗಿದ್ದರು.

ರಾಮಾಯಣ ಧಾರಾವಾಹಿಯ 'ಸುಗ್ರೀವ' ಪಾತ್ರಧಾರಿ ಶ್ಯಾಮ್ ಸುಂದರ್ ಕಲಾನಿ ಇನ್ನಿಲ್ಲ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ