ಆ್ಯಪ್ನಗರ

ಕನ್ನಡ ಧಾರಾವಾಹಿಯಲ್ಲಿ ಜೋಡಿಕೊಲೆ; ಪ್ರಕರಣದ ಹಿಂದೆ ಬಿದ್ದ ರಮೇಶ್!

ಜೋಡಿ ಕೊಲೆ ಸುತ್ತ ಹೆಣೆದಿರುವ ಕಥೆಯನ್ನು ಈ ಬಾರಿ ರಮೇಶ್ ಇಂದಿರಾ ಆಯ್ದುಕೊಂಡು ಧಾರಾವಾಹಿ ಮಾಡುತ್ತಿದ್ದಾರೆ. ಇದೊಂದು ಮೈಥಾಲಾಜಿ ಧಾರಾವಾಹಿ ಅಂತಲೂ ಕರೆಯಬಹುದು. ಅಷ್ಟೇ ಅಲ್ಲದೆ ಧಾರಾವಾಹಿಯ ನಿರ್ಮಾಣ ಕಾರ್ಯವನ್ನೂ ಕೂಡ ರಮೇಶ್ ಮಾಡುತ್ತಿದ್ದಾರೆ.

Vijaya Karnataka Web 24 Jan 2020, 11:30 am
ಕಿರುತೆರೆಯ ಜನಪ್ರಿಯ ನಿರ್ದೇಶಕ ರಮೇಶ್‌ ಇಂದಿರಾ ಇದೀಗ ಮತ್ತೊಂದು ಧಾರಾವಾಹಿಗೆ ಆ್ಯಕ್ಷನ್‌ ಕಟ್‌ ಹೇಳುತ್ತಿದ್ದಾರೆ. ಮಹಾದೇವಿ ನಂತರ ಅವರು 'ಅಮ್ನೋರು' ಹೆಸರಿನ ಸೀರಿಯಲ್‌ ಮಾಡುತ್ತಿದ್ದು, ಜೋಡಿ ಕೊಲೆ ಸುತ್ತ ಹೆಣೆದಿರುವ ಕಥೆಯನ್ನು ಆಯ್ಕೆ ಮಾಡಿಕೊಂಡಿದ್ದಾರೆ. 'ಇದೊಂದು ಜೋಡಿ ಕೊಲೆ ಸುತ್ತ ನಡೆಯುವ ಧಾರಾವಾಹಿ ಆಗಿದ್ದರೂ, ಸೋಷಿಯಲ್‌ ಕನ್ಸರ್ನ್‌ ಇರುವಂಥ ಅಂಶಗಳನ್ನು ಒಳಗೊಂಡಿದೆ. ಮೈಥಾಲಾಜಿ ಧಾರಾವಾಹಿ ಅಂತಲೂ ಕರೆಯಬಹುದು.
Vijaya Karnataka Web ramesh indira new project is amnoru serial in udaya tv channel
ಕನ್ನಡ ಧಾರಾವಾಹಿಯಲ್ಲಿ ಜೋಡಿಕೊಲೆ; ಪ್ರಕರಣದ ಹಿಂದೆ ಬಿದ್ದ ರಮೇಶ್!


ಕಿರುತೆರೆಯಲ್ಲಿ ಹೊಸ ಸೂಪರ್ ನ್ಯಾಚುರಲ್ ಧಾರಾವಾಹಿ 'ಅಮ್ನೋರು'

ಕೊಲೆಯಾದ ವ್ಯಕ್ತಿಗಳು ಮರುಹುಟ್ಟು ಪಡೆದು, ಕೊಲೆಗಡುಕರ ಮನೆಗೆ ಬರುವುದು ಮತ್ತು ರಿವೇಂಜ್‌ ತೀರಿಸಿಕೊಳ್ಳುವುದು ಧಾರಾವಾಹಿಯ ಪ್ರಮುಖ ಅಂಶ' ಎಂದರು ರಮೇಶ್‌. ಈವರೆಗೂ ಸಾಮಾಜಿಕ ಬದ್ಧತೆ ಇರುವಂತಹ ಧಾರಾವಾಹಿಗಳನ್ನೇ ಮಾಡುತ್ತಾ ಬಂದಿರುವ ನಿರ್ದೇಶಕರು, ಪ್ರೀಮಿಯರ್‌ ಪದ್ಮಿನಿ ಎಂಬ ಸಿನಿಮಾಗೂ ಆ್ಯಕ್ಷನ್‌ ಕಟ್‌ ಹೇಳಿದ್ದರು.

ಈ ವಿಚಾರದಲ್ಲಿ ಸೀರಿಯಲ್‌ಗಳೇಕೆ ಬರೀ ಕಾಪಿ-ಪೇಸ್ಟ್‌? ಹೆಸರಿಗಾಗಿ ಸಿನಿಮಾಗಳ ಹಿಂದೆ ಬಿದ್ದ ಸೀರಿಯಲ್‌ ಮಂದಿ!

ಸ್ಯಾಂಡಲ್‌ವುಡ್‌ನಲ್ಲೂ ಈ ಸಿನಿಮಾದ ಮೂಲಕ ಭರವಸೆ ಮೂಡಿಸಿದ್ದರು. ಇದಾದ ನಂತರ ಮತ್ತೆ ಅವರು ಕಿರುತೆರೆ ಕ್ಷೇತ್ರದತ್ತ ಮುಖ ಮಾಡಿದ್ದಾರೆ. 'ದೈನಂದಿನ ಬದುಕಿಗೆ ಧಾರಾವಾಹಿ. ಖುಷಿಗೆ ಸಿನಿಮಾ. ಹಾಗಾಗಿ ಎರಡೂ ರಂಗದಲ್ಲೂಕೆಲಸ ಮಾಡಲು ನನಗೆ ಇಷ್ಟ. ಜುಲೈ ನಂತರ ಮತ್ತೆ ಸಿನಿಮಾ ಮಾಡಲಿದ್ದೇನೆ. ಈಗಾಗಲೇ ಕಥೆ ಕೂಡ ರೆಡಿಯಾಗಿದೆ' ಎನ್ನುವುದು ರಮೇಶ್‌ ಮಾತು. ಈ ಧಾರಾವಾಹಿಯಲ್ಲಿ ಶಶಿಧರ ಹೆಗಡೆ ನಾಯಕನಾಗಿ ನಟಿಸಿದ್ದರೆ, ಸುಕೀರ್ತಿ ನಾಯಕಿ. ಮಧು ಹೆಗಡೆ, ಶರ್ಮಿಳಾ, ಕೀರ್ತಿರಾಜ್‌, ಸಂಗೀತಾ ಭಟ್‌, ಅನಂತವೇಲು ಮೊದಲಾದವರು ನಟಿಸಿದ್ದಾರೆ. ಹರೀಶ್‌ ನಿರ್ದೇಶನದ ಧಾರಾವಾಹಿ­ಯಾಗಿದ್ದು, ಪ್ರಧಾನ ನಿರ್ದೇಶನದ ಜತೆಗೆ ನಿರ್ಮಾಣವನ್ನೂ ರಮೇಶ್‌ ಇಂದಿರಾ ಮಾಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ