ಆ್ಯಪ್ನಗರ

ಸರಿಗಮಪ ಹೊಸ ಸೀಸನ್‌‌ಗೆ ಎಂಟ್ರಿ ಕೊಟ್ಟ ರಾಜೇಶ್ ಕೃಷ್ಣನ್

ಕಳೆದ ವರ್ಷ ನಮ್ಮ ತಂದೆಯ ಅಗಲಿಕೆ ಬೇಸರ ತಂದಿತ್ತು. ಈಗ ಮತ್ತೆ ನಾನು ಇಲ್ಲಿಗೆ ಬರಲು ಕಾರಣ ನನ್ನ ಗುರುಗಳು. ಮತ್ತೊಮ್ಮೆ ಗೆಳೆಯರೆಲ್ಲರ ಜೊತೆ ಬೆರೆಯುವುದಕ್ಕೆ ಖುಷಿಯಾಗುತ್ತಿದೆ ಎಂದು ಹೇಳಿದರು ಗಾಯಕ ರಾಜೇಶ್ ಕೃಷ್ಣನ್.

Vijaya Karnataka Web 27 Sep 2018, 5:48 pm
ಕಿರುತೆರೆಯಲ್ಲಿ ಮತ್ತೊಂದು ಸಂಗೀತ ಹಬ್ಬ ಆರಂಭವಾಗುತ್ತಿದೆ. ಈವರೆಗೆ ಸರಿಗಮಪ ಸಂಗೀತ ಕಾರ್ಯಕ್ರಮ 14 ಸೀಜನ್‍ಗಳನ್ನು ಯಶಸ್ವಿಯಾಗಿ ಮುಗಿಸಿದ್ದು ಈಗ
Vijaya Karnataka Web saregamapa

15ನೇ ಸೀಜನ್ ಆರಂಭಕ್ಕೆ ವೇದಿಕೆ ಸಿದ್ಧವಾಗಿದೆ. ಈ ಸೀಜನ್‍ನಲ್ಲಿ ನಾದಬ್ರಹ್ಮ ಹಂಸಲೇಖ, ಸಂಗೀತ ನಿರ್ದೇಶಕ ಅರ್ಜುನ್ ಜನ್ಯ, ಗಾಯಕರಾದ ವಿಜಯ ಪ್ರಕಾಶ್ ಅಲ್ಲದೆ ರಾಜೇಶ್ ಕೃಷ್ಣನ್ ಕೂಡ ಕಾರ್ಯಕ್ರಮದ ತೀರ್ಪುಗಾರರ ಸ್ಥಾನದಲ್ಲಿರುತ್ತಾರೆ.

ಕಳೆದ ವರ್ಷ ಈ ಕಾರ್ಯಕ್ರಮದಿಂದ ದೂರ ಉಳಿದಿದ್ದ ಗಾಯಕ ರಾಜೇಶ್ ಕೃಷ್ಣನ್ ಅವರು ಈಬಾರಿ ತನ್ನ ಗುರುಗಳಾದ ಹಂಸಲೇಖ ಅವರ ಕರೆಗೆ ಓಗೊಟ್ಟು ಮತ್ತೆ ಎಂಟ್ರಿಯಾಗಿದ್ದಾರೆ. ಇದೇ ಶನಿವಾರದಿಂದ (ಸೆಪ್ಟೆಂಬರ್ 29) ಈ ಕಾರ್ಯಕ್ರಮ ಸಂಜೆ 7.30ಕ್ಕೆ ಪ್ರಸಾರವಾಗಲಿದೆ. ಶನಿವಾರ ಹಾಗೂ ಭಾನುವಾರ ಅಂದರೆ ವೀಕೆಂಡ್‍ನಲ್ಲಿ ಸರಿಗಮಪ 15 ಜೀ ಕನ್ನಡ ಪ್ರೇಕ್ಷಕರ ಮನೆಯ ಕಿರುತೆರೆಯಲ್ಲಿ ರಾರಾಜಿಸಲಿದೆ.

ಈ ಸಂದರ್ಭದಲ್ಲಿ ಮಾತನಾಡಿದ ಹಂಸಲೇಖ ನಾವಾಡುವ ಎಲ್ಲ ಮಾತುಗಳಿಗೂ ಜೀ ವಾಹಿನಿ ವೇದಿಕೆಯನ್ನು ಕಲ್ಪಿಸಿದೆ. ಈ 5 ತಿಂಗಳಲ್ಲಿ ನಾನು ಬಹಳಷ್ಟು ಕಡೆ ಅಭಿಮಾನಿಗಳನ್ನು ಸಂಪರ್ಕಿಸಿದ್ದೇನೆ. ನನ್ನ ಹಾಗೂ ರಾಜೇಶ್ ಕೃಷ್ಣನ್ ಅವರದು ಬರೀ ಸ್ನೇಹ ಅಲ್ಲ, ಬಾಂಧವ್ಯ. ನಮಗೆ ಗೊತ್ತಿಲ್ಲದ ಹಾಗೆ ಒಂದು ಗುರು ಶಿಷ್ಯರ
ಪರಂಪರೆ ಬೆಳೆದು ಬಂದಿದೆ. 10ರಿಂದ 12 ಜನ ಶಿಷ್ಯರು ಈ ಪರಂಪರೆಯಲ್ಲಿ ಬೆಳದಿದ್ದಾರೆ. ಇಲ್ಲಿ ಇಬ್ಬರು ಟ್ರೂ ಸಿಂಗರ್ಸ್ ಇದ್ದಾರೆ, ಅಲ್ಲದೆ ಮತ್ತಿಬ್ಬರು ಟ್ರೂ ಮ್ಯೂಸಿಕ್ ಕಂಪೋಜರ್ಸ್ ಕೂಡ ಇದ್ದಾರೆ. ಈ ಬಾರಿ ಪ್ರತಿ ಕಂಟೆಸ್ಟೆಂಟ್ ಮಾಸ್ಟರ್ ಕ್ಲಾಸ್‍ನಲ್ಲಿ ಬರಬೇಕಿದೆ ಎಂದಿದ್ದಾರೆ.

ಕಳೆದ ವರ್ಷ ನಮ್ಮ ತಂದೆಯ ಅಗಲಿಕೆ ಬೇಸರ ತಂದಿತ್ತು. ಈಗ ಮತ್ತೆ ನಾನು ಇಲ್ಲಿಗೆ ಬರಲು ಕಾರಣ ನನ್ನ ಗುರುಗಳು. ಮತ್ತೊಮ್ಮೆ ಗೆಳೆಯರೆಲ್ಲರ ಜೊತೆ ಬೆರೆಯುವುದಕ್ಕೆ ಖುಷಿಯಾಗುತ್ತಿದೆ
ರಾಜೇಶ್ ಕೃಷ್ಣನ್, ಗಾಯಕ.

ಸರಿಗಮಪ ಸೀಜನ್ 15 ಈ ಬಾರಿ ರಾಜ್ಯದ 30 ಜಿಲ್ಲೆಗಳಲ್ಲೂ ಸಂಚರಿಸಿ 30 ಜನರನ್ನು ಫೈನಲಿಸ್ಟ್‌ಗೆ ತಂದಿದ್ದೇವೆ.ಇದರಲ್ಲಿ ಕೊಡಗು ಜಿಲ್ಲೆಯನ್ನು ಬಿಟ್ಟು ಉಳಿದೆಲ್ಲ ಜಿಲ್ಲಾ
ಕೇಂದ್ರಗಳಲ್ಲೂ ಆಡಿಷನ್ ಮಾಡಿದ್ದೇವೆ, ಸುಮಾರು 4ರಿಂದ 5 ಲಕ್ಷ ಸ್ಪರ್ಧಿಗಳು ಇದರಲ್ಲಿ ಭಾಗವಹಿಸಿದ್ದರು ಎಂದು ಹೇಳಿದರು. ರಾಜ್ಯದ ಯಾವುದೇ ಪ್ರತಿಭಾವಂತರೂ ಮಿಸ್ ಆಗಬಾರದು ಎನ್ನುವುದೇ ನಮ್ಮ ಉದ್ದೇಶ ಎಂದಿದ್ದಾರೆ ವಾಹಿನಿಯ ಮುಖ್ಯಸ್ಥ ರಾಘವೇಂದ್ರ ಹುಣಸೂರ್.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ