ಆ್ಯಪ್ನಗರ

ಕಿರುತೆರೆಗೆ ಕಾಲಿಟ್ಟ ಸ್ಯಾಂಡಲ್‌ವುಡ್ ನಟ ಅನಿರುದ್ಧ

ಜೀ ಕನ್ನಡ ವಾಹಿನಿಯಲ್ಲಿ ಈ ಮೊದಲು ಪ್ರಸಾರವಾಗುತ್ತಿದ್ದ ಜನಪ್ರಿಯ ಧಾರಾವಾಹಿ 'ಜೊತೆ ಜೊತೆಯಲಿ' ಈಗ ಬೇರೆ ಹೊಸ ರೂಪ ಪಡೆದಿದೆ. ವಿಷ್ಣುವರ್ಧನ್ ಅಳಿಯ ಅನಿರುದ್ಧ ಅವರು ಧಾರಾವಾಹಿಯ ಮೂಲಕ ತಮ್ಮ ಮನಸ್ಸಿಗೆ ಇನ್ನೂ ಹತ್ತಿರವಾಗಲಿರುವುದು ಅವರ ಅಭಿಮಾನಿಗಳಲ್ಲಿ ಸಂತಸ ಮೂಡಿಸಿದೆ ಎನ್ನಬಹುದು.

Vijaya Karnataka Web 25 Jul 2019, 4:44 pm
ಜೀ ಕನ್ನಡ ವಾಹಿನಿಯಲ್ಲಿ ಈ ಮೊದಲು ಪ್ರಸಾರವಾಗುತ್ತಿದ್ದ ಜನಪ್ರಿಯ ಧಾರಾವಾಹಿ 'ಜೊತೆ ಜೊತೆಯಲಿ' ಈಗ ಬೇರೆ ರೂಪ ಪಡೆದಿದೆ. ವಿರಾಟ್ ಹಾಗೂ ಆಶಿತಾ ಚಂದ್ರಪ್ಪ ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿದ್ದ 'ಜೊತೆ ಜೊತೆಯಲಿ' ಧಾರಾವಾಹಿ ಬಹಳಷ್ಟು ವೀಕ್ಷಕರನ್ನು ಸೆಳೆದಿತ್ತು. ಇದೀಗ ಈ ಧಾರಾವಾಹಿ ಅದೇ ಹೆಸರಿನಲ್ಲಿ 'ಹೊಸ ಕಥೆ'ಯೊಂದಿಗೆ ಮತ್ತೆ ಶುರುವಾಗಲಿದೆ. ಆದರೆ ಈ ಬಾರಿ ಧಾರಾವಾಹಿಯ ಮುಖ್ಯ ಭೂಮಿಕೆಯಲ್ಲಿ ವಿರಾಟ್-ಆಶಿತಾ ಚಂದ್ರಪ್ಪ ಕಾಣಿಸಿಕೊಳ್ಳುತ್ತಿಲ್ಲ.
Vijaya Karnataka Web Anirudh2507


ಸ್ಯಾಂಡಲ್‌ವುಡ್ ನಟ, ಹಾಗೂ ಈ ಮೊದಲು 'ತುಂಟಾಟ', 'ನೀನೆಲ್ಲೋ ನಾನಲ್ಲೇ', 'ರಾಮ ಶಾಮ ಭಾಮ', 'ಜೇಷ್ಠ', 'ಸತ್ಯವಾನ್ ಸಾವಿತ್ರಿ' ಮುಂತಾದ ಹಲವು ಕನ್ನಡ ಚಿತ್ರಗಳಲ್ಲಿ ನಟಿಸಿರುವ ಜನಪ್ರಿಯ ನಟ ಅನಿರುದ್ಧ ಜತ್ಕರ್ ಇದೀಗ ಜೀ ಕನ್ನಡದಲ್ಲಿ ಪ್ರಸಾರವಾಗಲಿರುವ 'ಜೊತೆ ಜೊತೆಯಲಿ' ಧಾರಾವಾಹಿಯಲ್ಲಿ ನಾಯಕ ನಟರಾಗಿ ನಟಿಸುತ್ತಿದ್ದಾರೆ. ವಿಷ್ಣುವರ್ಧನ್ ಅಳಿಯ ಅನಿರುದ್ಧ ಅವರು ಧಾರಾವಾಹಿಯ ಮೂಲಕ ತಮ್ಮ ಮನಸ್ಸಿಗೆ ಇನ್ನೂ ಹತ್ತಿರವಾಗಲಿರುವುದು ಅವರ ಅಭಿಮಾನಿಗಳಲ್ಲಿ ಸಂತಸ ಮೂಡಿಸಿದೆ ಎನ್ನಬಹುದು.

ಈಗಾಗಲೇ ಧಾರಾವಾಹಿಯ ಫ್ರೋಮೊ ಬಿಡುಗಡೆಯಾಗಿದ್ದು, 20 ವರ್ಷದ ಹುಡುಗಿ ಹಾಗೂ 45 ವರ್ಷದ ಹುಡುಗನ ಪ್ರೇಮಕಥೆ ಈ ಧಾರಾವಾಹಿಯಲ್ಲಿದೆ. 20 ವರ್ಷದ ಹುಡುಗಿ, ಅವಳ ಎರಡು ಪಟ್ಟು ಹಾಗೂ ಪ್ಲಸ್ 5 ವರ್ಷ ದೊಡ್ಡ ವಯಸ್ಸಿನ ಹುಡುಗ ಅವರಿಬ್ಬರ ಲವ್‌ ಸ್ಟೋರಿ ಈ ಧಾರಾವಾಹಿಯ ಹೈಲೈಟ್ಸ್ ಎನ್ನಲಾಗಿದೆ. ಮಾನಸಿಕವಾಗಿ ಬೇರೆ ಬೇರೆ ಜಗತ್ತು ಮತ್ತು ಜನರೇಷನ್ ಗ್ಯಾಪ್ ಇರುವ ಎರಡು ಜೀವಗಳು 'ಜೊತೆ ಜೊತೆಯಲಿ' ಧಾರಾವಾಹಿಯ ಕಥೆಯಲ್ಲಿ ಜೋಡಿಯಾಗಿದ್ದು, ಶೀಘ್ರದಲ್ಲೇ ಈ ಧಾರಾವಾಹಿಯು 'ಜೀ ಕನ್ನಡ' ವಾಹಿನಿಯಲ್ಲಿ ಪ್ರಸಾರವಾಗಲಿದೆ.

ಸಿನಿಮಾಗಳಲ್ಲಿ ಮಿಂಚಿ ಮರೆಯಾಗಿದ್ದ ನಟ ಅನಿರುದ್ದ್ ಇದೀಗ ಕಿರುತೆರೆಯಲ್ಲಿ ಮೋಡಿ ಮಾಡಲು ಹೊರಟಿದ್ದಾರೆ. ಈಗಾಗಲೇ ತಮ್ಮದೇ ಚಾನೆಲ್‌ನಲ್ಲಿ ಪ್ರಸಾರವಾಗಿದ್ದ ಧಾರಾವಾಹಿಯ ಹೆಸರನ್ನೇ ಇಟ್ಟುಕೊಂಡು ಹೊಸ ಪಾತ್ರವರ್ಗದೊಂದಿಗೆ ಮತ್ತೆ ಸೀರಿಯಲ್ ಪ್ರೇಕ್ಷಕರಿಗೆ ಜೀ ಕನ್ನಡ ವಾಹಿನಿ ಕಮಾಲ್ ಮಾಡಲು ಹೊರಟಿದೆ ಎನ್ನಬಹುದು. ಒಟ್ಟಿನಲ್ಲಿ, ಇಷ್ಟು ಕಾಲ ಸಿನಿಮಾಗಳಲ್ಲಿ ನೋಡಿದ್ದ ಅನಿರುದ್ಧ ಜತ್ಕರ್ ಅವರನ್ನು ಇನ್ಮುಂದೆ ಸೀರಿಯಲ್ ಮೂಲಕ ಮನೆಮನೆಗಳಲ್ಲಿ ನೋಡಬಹುದು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ