ಆ್ಯಪ್ನಗರ

ಸ್ಯಾಂಡಲ್‌ವುಡ್ 2019: ಕಿರುತೆರೆಗೆ ಕಾಲಿಟ್ಟ ಹಿರಿತೆರೆ ದಿಗ್ಗಜ ಕಲಾವಿದರು

ಹಿರಿತೆರೆಯಲ್ಲಿ ಹಲವು ವರ್ಷಗಳ ಕಾಲ ಪ್ರೇಕ್ಷಕರನ್ನು ರಂಜಿಸಿದ್ದ ಕೆಲವು ಹಿರಿಯ ಕಲಾವಿದರು ಈ ವರ್ಷ ಕಿರುತೆರೆಯಲ್ಲಿ ಕಾಣಿಸಿಕೊಂಡು ಪ್ರೇಕ್ಷಕರಿಗೆ ಮನರಂಜನೆಯನ್ನು ನೀಡಿದ್ದಾರೆ. ಇದರಿಂದಾಗಿ ಪ್ರೇಕ್ಷಕರು ಕೂಡ ತುಂಬ ಖುಷಿಯಾಗಿದ್ದಾರೆ. ಅವುಗಳ ವಿವರ ಇಲ್ಲಿದೆ.

Vijaya Karnataka Web 19 Dec 2019, 11:48 am
ಹಿರಿತೆರೆಯಲ್ಲಿ ಹಲವು ವರ್ಷಗಳ ಕಾಲ ಪ್ರೇಕ್ಷಕರನ್ನು ರಂಜಿಸಿದ್ದ ಕೆಲವು ಹಿರಿಯ ಕಲಾವಿದರು ಈ ವರ್ಷ ಕಿರುತೆರೆಯಲ್ಲಿ ಕಾಣಿಸಿಕೊಂಡು ಪ್ರೇಕ್ಷಕರಿಗೆ ಮನರಂಜನೆಯನ್ನು ನೀಡಿದ್ದಾರೆ. ಇದರಿಂದಾಗಿ ಪ್ರೇಕ್ಷಕರು ಕೂಡ ತುಂಬ ಖುಷಿಯಾಗಿದ್ದಾರೆ. ಅವುಗಳ ವಿವರ ಇಲ್ಲಿದೆ.
Vijaya Karnataka Web sandalwood report 2019 veteran artist who made their tv comebacks
ಸ್ಯಾಂಡಲ್‌ವುಡ್ 2019: ಕಿರುತೆರೆಗೆ ಕಾಲಿಟ್ಟ ಹಿರಿತೆರೆ ದಿಗ್ಗಜ ಕಲಾವಿದರು


ಭಾರತಿ ವಿಷ್ಣುವರ್ಧನ್

1966ರಿಂದಲೇ ಅಭಿನಯ ಆರಂಭಿಸಿದ್ದ ಭಾರತಿ ವಿಷ್ಣುವರ್ಧನ್ ಕಿರುತೆರೆ ಮತ್ತು ಹಿರಿತೆರೆ ಎರಡರಲ್ಲೂ ಮಿಂಚಿದ್ದರು. 50 ವರ್ಷಗಳ ಸಿನಿಪಯಣದಲ್ಲಿ 150 ಸಿನಿಮಾಗಳಲ್ಲಿ ನಟಿಸಿದ ಕೀರ್ತಿ ಭಾರತಿ ಅವರದ್ದು. 100 ಕನ್ನಡ ಸಿನಿಮಾಗಳ ಹೊರತಾಗಿ ಹಿಂದಿ, ತಮಿಳು, ತೆಲುಗು, ಮಲಯಾಳಂ ಸಿನಿಮಾಗಳಲ್ಲೂ ಕಾಣಿಸಿಕೊಂಡಿದ್ದಾರೆ. ಐತಿಹಾಸಿಕ, ಪೌರಾಣಿಕ, ರೋಮ್ಯಾಂಟಿಕ್, ವಿದ್ಯಾರ್ಥಿಯಾಗಿಯೂ ಕೂಡ ವಿಧ ವಿಧದ ಪಾತ್ರಗಳಿಗೆ ಬಣ್ಣ ಹಚ್ಚಿದ್ದಾರೆ ಭಾರತಿ. ಭಾರತ ಸರ್ಕಾರದಿಂದ 2017ರಲ್ಲಿ ಭಾರತಿ ಅವರು ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದಾರೆ. 2019ರಲ್ಲಿ 'ಸೇವಂತಿ' ಧಾರಾವಾಹಿ ಮೂಲಕ ಮತ್ತೆ ಕಿರುತೆರೆಗೆ ಮರಳಿದ್ದಾರೆ ಭಾರತಿ.

ವಿನಯಾ ಪ್ರಸಾದ್

ದಕ್ಷಿಣ ಭಾರತದ ಪ್ರಖ್ಯಾತ ನಟಿಯರಲ್ಲಿ ವಿನಯಾ ಪ್ರಸಾದ್ ಕೂಡ ಒಬ್ಬರು. ಅತಿ ಹೆಚ್ಚು ಕನ್ನಡ ಮತ್ತು ಮಲಯಾಳಂ ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ. ಕೆಲ ತಮಿಳು, ತೆಲುಗು ಸಿನಿಮಾಗಳಿಗೂ ಇವರು ಬಣ್ಣ ಹಚ್ಚಿದ್ದಾರೆ. 1993ರಲ್ಲಿಯೇ 'ಆತಂಕ' ಸಿನಿಮಾಗೆ ಉತ್ತಮ ನಟಿ ವಿಭಾಗದಲ್ಲಿ ರಾಜ್ಯ ಪ್ರಶಸ್ತಿ ಪಡೆದಿದ್ದಾರೆ. ಚಿರಂಜೀವಿ, ವಿಷ್ಣುವರ್ಧನ್, ರಜನಿಕಾಂತ್, ವಿ.ರವಿಚಂದ್ರನ್, ಶಿವರಾಜ್‌ಕುಮಾರ್, ಮಹೇಶ್ ಬಾಬು, ಎನ್‌.ಟಿ.ರಾಮ್‌ರಾವ್ ಅವರ ಜೊತೆ ತೆರೆ ಹಂಚಿಕೊಂಡಿದ್ದಾರೆ ವಿನಯಾ. 'ಪಾರು' ಧಾರಾವಾಹಿ ಮೂಲಕ ಅವರು ಕಿರುತೆರೆಗೆ ಕಂಬ್ಯಾಕ್ ಮಾಡಿದ್ದಾರೆ.

ಎಸ್.ನಾರಾಯಣ್

'ಕಲಾ ಸಾಮ್ರಾಟ್' ಎಂದು ಬಿರುದು ಪಡೆದಿರುವ ಎಸ್.ನಾರಾಯಣ್ ಡಾ.ರಾಜ್‌ಕುಮಾರ್ ಮತ್ತು ವಿಷ್ಣುವರ್ಧನ್ ಜೊತೆಗೆ ಸಿನಿಮಾಗಳನ್ನು ಮಾಡಿದ್ದಾರೆ. 'ಪಾರು' ಧಾರಾವಾಹಿ ಮೂಲಕ ಅವರು ಕಿರುತೆರೆಗೆ ಮರಳಿದ್ದಾರೆ.

ಪದ್ಮಜಾ ರಾವ್

93ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿರುವ ಪದ್ಮಜಾ ರಾವ್ 'ಮುಂಗಾರು ಮಳೆ, ಹಠವಾದಿ' ಸಿನಿಮಾಗಳ ಮೂಲಕ ಹೆಸರು ಪಡೆದಿದ್ದಾರೆ. 'ಅರಮನೆ ಗಿಳಿ' ಧಾರಾವಾಹಿಯಲ್ಲಿ ಪ್ರಸ್ತುತ ನಟಿಸುತ್ತಿದ್ದಾರೆ ಪದ್ಮಜಾ ರಾವ್.

ಹೇಮಾ ಚೌಧರಿ

ಪವಿತ್ರಾ ಲೋಕೇಶ್

ಭವ್ಯಾ

ಉಮಾಶ್ರೀ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ