ಆ್ಯಪ್ನಗರ

ಇದೇ ಶುಕ್ರವಾರ 'ಸರಯೂ' ಕೊನೆಯ ಎಪಿಸೋಡ್

ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿ 'ಸರಯೂ' ಅಂತಿಮ ಘಟ್ಟಕ್ಕೆ ಬಂದು ನಿಂತಿದೆ. ಇದೇ ಶುಕ್ರವಾರ ಅಂತಿಮ ಎಪಿಸೋಡ್ ಪ್ರಸಾರವಾಗಲಿದೆ.

Vijaya Karnataka Web 21 Feb 2018, 7:00 pm
ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿ 'ಸರಯೂ' ಅಂತಿಮ ಘಟ್ಟಕ್ಕೆ ಬಂದು ನಿಂತಿದೆ. ಇದೇ ಶುಕ್ರವಾರ ಅಂತಿಮ ಎಪಿಸೋಡ್ ಪ್ರಸಾರವಾಗಲಿದೆ. ಮೊಟ್ಟಮೊದಲ ಬಾರಿಗೆ ಕನ್ನಡ ಕಿರುತೆರೆಯಲ್ಲಿ ಬ್ಯಾಂಕಾಕ್ ನಲ್ಲಿ ಚಿತ್ರೀಕರಣಗೊಂಡ ಹೆಗ್ಗಳಿಕೆ ಈ ಧಾರಾವಾಹಿಯದ್ದು. ಅಭಿಷೇಕ್ ದಾಸ್ ಹಾಗೂ ಶ್ವೇತಾ ಹೆಗಡೆ ಈ ಧಾರಾವಾಹಿಯ ಮುಖ್ಯಪಾತ್ರಧಾರಿಗಳು.
Vijaya Karnataka Web sarayu serial to end on friday
ಇದೇ ಶುಕ್ರವಾರ 'ಸರಯೂ' ಕೊನೆಯ ಎಪಿಸೋಡ್


ಸರಯೂ ಧಾರಾವಾಹಿಯ ಬಗ್ಗೆ ಶ್ವೇತಾ ತಮ್ಮ ಫೇಸ್‌ಬುಕ್ ಪುಟದಲ್ಲಿ ಈ ರೀತಿ ಬರೆದುಕೊಂಡಿದ್ದು ತಮ್ಮ ಅನುಭವ ಹಂಚಿಕೊಂಡಿದ್ದಾರೆ. 'ಸರಯೂ ಅದ್ಭುತ ಧಾರಾವಾಹಿ. ಇದು ನನಗೆ ಮಗು ಇದ್ದಂತೆ. ಇದರ ಮೂಲಕ ನಾನು ಧಾರಾವಾಹಿ ಲೋಕಕ್ಕೆ ಅಡಿಯಿಟ್ಟೆ. ಈ ಧಾರಾವಾಹಿ ಮುಕ್ತಾಯವಾಗುತ್ತಿದೆ ಎಂದು ಹೇಳಲು ದುಃಖವಾಗುತ್ತಿದೆ' ಎಂದಿದ್ದಾರೆ.



ಸರಯೂ ಒಬ್ಬ ಬಡ ಆರ್ಚಕನ ಮುಗ್ಧ ಮಗಳು. ಅಪ್ಪನ ಆದರ್ಶವನ್ನೆ ಪಾಲಿಸೋ ಈಕೆಗೆ ಎದುರಾಗೋ ಕ್ರೂರತನದಲ್ಲಿರೋ ದೇಶಪಾಂಡೆ ಮನೆ ಹುಡುಗ ಎಬಿಡಿ (ಅಭಿರಾಮ್ ದೇಶಪಾಂಡೆ) ಇವನು ಮಾಡೊ ಕ್ರೂರತೆಯನ್ನು ಕಣ್ಣಾರೆ ನೋಡೋ ಸರಯೂ, ಅವನ ಮೇಲೆ ದೂರು ನೀಡುತ್ತಾಳೆ. ಅದಕ್ಕೆ ಸೇಡು ತೀರಿಸಿಕೊಳ್ಳಲು ಎಬಿಡಿ ಅವಳನ್ನ ಪ್ರೀತಿಸೊ ನಾಟಕವಾಡಿ ಅವಳನ್ನ ಮದುವೆಯಾಗುತ್ತಾನೆ. ಮದುವೆಯಾದ ಮೇಲೂ ಇವನ ದ್ವೇಷ ಇನ್ನೂ ಹೆಚ್ಚಾಗಿ ಹೋಗುವುದು. ಸರಯೂಳಿಗೆ ದಿನೇದಿನೆ ನರಕಯಾತನೆ ಅನುಭವಿಸುವಂತೆ ಮಾಡೊ ಎಬಿಡಿ ಆಕೆಯನ್ನ ಕಾಡುತ್ತಲೇ ಹೋಗುತ್ತಾನೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ