ಆ್ಯಪ್ನಗರ

ಸರಿಗಮಪ 'ಮರಿ ಕೋಗಿಲೆ' ರುಬೀನಾ ಮುಡಿಗೆ ಇನ್ನೊಂದು ಗರಿ

ಹಾವೇರಿ ಜಿಲ್ಲೆಯ ಮೇವುಂಡಿ ಸರಕಾರಿ ಶಾಲೆಯಲ್ಲಿ ರುಬೀನಾ ಓದುತ್ತಿದ್ದಾರೆ. ತನ್ನ ಹಾಡಿನ ಮೂಲಕ ತಾನು ಓದುತ್ತಿರುವ ಸರಕಾರಿ ಶಾಲೆಯ ಮಹತ್ವ ಸಾರಿದ್ದಳು. ಈ ಹಾಡು ಈಗ ಸಾಮಾಜಿಕ ಮಾಧ್ಯಮಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

Vijaya Karnataka Web 30 Mar 2019, 1:11 pm
ಜೀ ಕನ್ನಡ ವಾಹಿನಿಯ ಮ್ಯೂಸಿಕ್ ರಿಯಾಲಿಟಿ ಶೋ 'ಸರಿಗಮಪ'ದ ಮರಿ ಕೋಗಿಲೆ ರುಬೀನಾಗೆ ಈಗಾಗಲೆ ತಮ್ಮ ಸುಮಧುರ ಕಂಠದ ಮೂಲಕ ನಾಡಿನ ಗಮನಸೆಳೆದಿದ್ದಾರೆ. ಇದೀಗ ಈ ಪೋರಿಗೆ ಇನ್ನೊಂದು ಸಂಭ್ರಮ. ಸಾರ್ವಜನಿಕ ಶಿಕ್ಷಣ ಇಲಾಖೆ ಪ್ರಾಥಮಿಕ ಶಿಕ್ಷಣ ಇಲಾಖೆ ಪ್ರಶಂಸಾ ಪತ್ರ ನೀಡಿ ಗೌರವಿಸಿದೆ.
Vijaya Karnataka Web rubina


ಹಾವೇರಿ ಜಿಲ್ಲೆಯ ಮೇವುಂಡಿ ಸರಕಾರಿ ಶಾಲೆಯಲ್ಲಿ ರುಬೀನಾ ಓದುತ್ತಿದ್ದಾರೆ. ತನ್ನ ಹಾಡಿನ ಮೂಲಕ ತಾನು ಓದುತ್ತಿರುವ ಸರಕಾರಿ ಶಾಲೆಯ ಮಹತ್ವ ಸಾರಿದ್ದಳು. ಈ ಹಾಡು ಈಗ ಸಾಮಾಜಿಕ ಮಾಧ್ಯಮಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ರುಬೀನಾ ಕಂಠಸಿರಿಗೆ ಶಿಕ್ಷಣ ಇಲಾಖೆ ಬೆರಗಾಗಿದ್ದು ಅಭಿನಂದಿಸಿದೆ.

ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅಭಿನಯದ 'ರಾಜಕುಮಾರ' ಸಿನಿಮಾದ ಬೊಂಬೆ ಹೇಳುತೈತೆ ಹಾಡಿನ ಸಾಹಿತ್ಯಕ್ಕೆ ಬದಲಾಗಿ ತನ್ನ ಸರಕಾರಿ ಶಾಲೆಯ ಮಹತ್ವ ತಿಳಿಸುವಂತೆ ಸಾಹಿತ್ಯ ಬದಲಾಯಿಸಿಕೊಂಡು ಹಾಡಿದ್ದಳು. ಈ ಹಾಡಿಗೆ ತೀರ್ಪುಗಾರರಾಗಿರುವ ರಾಜೇಶ್ ಕೃಷ್ಣನ್, ಅರ್ಜುನ್ ಸರ್ಜಾ ಹಾಗೂ ವಿಜಯ್ ಪ್ರಕಾಶ್ ತಲೆದೂಗಿದ್ದರು.

ಕಡೆ ಸ್ವತಃ ಪುನೀತ್ ರಾಜ್ ಕುಮಾರ್ ಅವರೇ ಈ ಬಾಲಕಿಯನ್ನು ಮನೆಗೆ ಕರೆಸಿಕೊಂಡು ಹಾಡು ಕೇಳಿ ಆನಂದಿಸಿದ್ದಾರೆ. ಬಳೀಕ ರುಬೀನಾರ ಹಿನ್ನೆಲೆ ತಿಳಿದು ಗ್ರೇಟ್ ಎಂದು ಬೆನ್ನು ತಟ್ಟಿದ್ದಾರೆ. ರುಬೀನಾಳ ಧ್ವನಿಗೆ ತಲೆದೂಗಿದ್ದಾರೆ. ಅವರ ತಂದೆಯನ್ನು ಅಭಿನಂದಿಸಿದ್ದಾರೆ. ರುಬೀನಾ ಹಾಡಿರುವ ಹಾಡು ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗ್ಗುತ್ತಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ