ಆ್ಯಪ್ನಗರ

ಹೊಸ ಕಾರ್ ಖರೀದಿ ಮಾಡಿದ ಖುಷಿಯಲ್ಲಿ 'ಸತ್ಯ' ಧಾರಾವಾಹಿ ನಟಿ ಗೌತಮಿ ಜಾಧವ್!

ನಂಬರ್ 1 ಕನ್ನಡ ಧಾರಾವಾಹಿ 'ಸತ್ಯ' ಈಗ ಎಲ್ಲರ ಮೆಚ್ಚುಗೆ ಗಳಿಸಿದೆ. ಈ ಧಾರಾವಾಹಿಯಲ್ಲಿ ಸತ್ಯ ಪಾತ್ರಕ್ಕೆ ಜೀವ ತುಂಬಿರುವ ನಟಿ ಗೌತಮಿ ಜಾಧವ್ ಅವರು ಹೊಸ ವರ್ಷಕ್ಕೆ ಹೊಸ ಕಾರ್ ಖರೀದಿ ಮಾಡಿರುವ ಖುಷಿಯಲ್ಲಿದ್ದಾರೆ. ಈ ಬಗ್ಗೆ ಮಾಹಿತಿ ಇಲ್ಲಿದೆ.

Authored byಟೀನಾ | Vijaya Karnataka Web 3 Jan 2021, 11:24 am
ಪ್ರಸ್ತುತ ಕನ್ನಡ ಧಾರಾವಾಹಿ ಲೋಕದಲ್ಲಿ 'ಸತ್ಯ' ಸೀರಿಯಲ್ ನಂಬರ್ 1 ಸ್ಥಾನದಲ್ಲಿದೆ. ಸಾಕಷ್ಟು ಮೆಚ್ಚುಗೆಯನ್ನು ಪಡೆದಿರುವ ಈ ಸೀರಿಯಲ್ ಉಳಿದವುಗಳಿಗೆ ಹೋಲಿಕೆ ಮಾಡಿ ನೋಡಿದರೆ ತುಂಬ ವಿಭಿನ್ನವಾಗಿದೆ. ಈಗ ಈ ಧಾರಾವಾಹಿಯಲ್ಲಿ 'ಸತ್ಯ' ಪಾತ್ರಕ್ಕೆ ಬಣ್ಣ ಹಚ್ಚಿರುವ ನಟಿ ಗೌತಮಿ ಜಾಧವ್ ಅವರು ಹೊಸ ವರ್ಷಕ್ಕೆ ಕಾರ್ ಖರೀದಿ ಮಾಡಿರುವ ಖುಷಿ ಹಂಚಿಕೊಂಡಿದ್ದಾರೆ.
Vijaya Karnataka Web sathya kannada serial actress gouthami jadav bought new car
ಹೊಸ ಕಾರ್ ಖರೀದಿ ಮಾಡಿದ ಖುಷಿಯಲ್ಲಿ 'ಸತ್ಯ' ಧಾರಾವಾಹಿ ನಟಿ ಗೌತಮಿ ಜಾಧವ್!


ಗೌತಮಿ ಮನೆಯಲ್ಲಿ ಹೊಸ ಕಾರ್
ಕಾರ್ ಖರೀದಿಸಿರುವ ಬಗ್ಗೆ ಸೋಶಿಯಲ್ ಮೀಡಿಯಾ ಪೋಸ್ಟ್ ಹಾಕಿದ್ದಾರೆ. ಹೊಸ ಕಾರ್‌ನೊಂದಿಗೆ ಗಂಡ ಅಭಿಷೇಕ್ ಕಾಸರಗೋಡು ಜೊತೆ ನಿಂತಿರುವ ಫೋಟೋವನ್ನು ಗೌತಮಿ ಶೇರ್ ಮಾಡಿದ್ದಾರೆ. ಅಭಿಷೇಕ್ ಕಾಸರಗೋಡು ಕೂಡ ನಟ. ಇತ್ತೀಚೆಗಷ್ಟೇ ಈ ಜೋಡಿ 1ನೇ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡಿತ್ತು.

ಈ ಹಿಂದೆ ಧಾರಾವಾಹಿ, ಸಿನಿಮಾಗಳಲ್ಲಿ ಗೌತಮಿ ನಟನೆ
'ಸತ್ಯ' ಸೀರಿಯಲ್ ಆರಂಭವಾದಾಗಿನಿಂದ ಈ ಧಾರಾವಾಹಿ ಪ್ರಥಮ ಸ್ಥಾನಕ್ಕೆ ಲಗ್ಗೆ ಇಟ್ಟಿತ್ತು. ಅಲ್ಲಿಯವರೆಗೂ ನಂಬರ್ 1, 2 ಸ್ಥಾನದಲ್ಲಿದ್ದ 'ಗಟ್ಟಿಮೇಳ' ಹಾಗೂ 'ಜೊತೆ ಜೊತೆಯಲಿ' ಸೀರಿಯಲ್‌ಗಳನ್ನು ಹಿಂದಕ್ಕೆ ಹಾಕಿರೋದು ವಿಶೇಷ. 2012ರ ಸಮಯದಲ್ಲಿ ಪ್ರಸಾರವಾಗುತ್ತಿದ್ದ ಪ್ರಖ್ಯಾತ ಧಾರಾವಾಹಿ 'ನಾಗಪಂಚಮಿ'ಯಲ್ಲಿ ಗೌತಮಿ ನಟಿಸಿದ್ದರು. ಇದಾದ ನಂತರದಲ್ಲಿ ಅವರು ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. 'ಲೂಟಿ', 'ಆದ್ಯಾ', 'ಕಿನಾರೆ' ಸಿನಿಮಾ ಸೇರಿದಂತೆ ತಮಿಳಿನ ಸಿನಿಮಾವೊಂದರಲ್ಲಿ ಬಣ್ಣ ಹಚ್ಚಿದ್ದರು. ಮತ್ತೆ ವಿಭಿನ್ನ ಪಾತ್ರದ ಮೂಲಕ 'ಸತ್ಯ' ಸೀರಿಯಲ್‌ ಮೂಲಕ ಕನ್ನಡ ಕಿರುತೆರೆಗೆ ಎಂಟ್ರಿ ನೀಡಿದ್ದಾರೆ.

Also Read-'ಟಾಮ್‌ ಬಾಯ್‌' ಅವತಾರದಲ್ಲಿರುವ ಸತ್ಯಳ ಕಥೆ ಏನು? ಶುರುವಾಗಲಿದೆ ಹೊಸ ಧಾರಾವಾಹಿ!

ಸತ್ಯ ಧಾರಾವಾಹಿ ಕಥೆಯೇನು?

ತನ್ನಿಷ್ಟದಂತೆ ಬದುಕುವ ಹುಡುಗಿ ಸತ್ಯ ಟಾಮ್‌ಬಾಯ್ ರೀತಿ ಇರುತ್ತಾಳೆ. ಸತ್ಯ ಹೇಳಿದ್ದೇ ನ್ಯಾಯ. ಕಾಕತಾಳೀಯ ಎಂಬಂತೆ ಶ್ರೀಮಂತರ ಮನೆಯ ಮುಗ್ಧ ಹುಡುಗ ಕಾರ್ತಿಕ್ ಪ್ರಭು ಹಾಗೂ ಸತ್ಯ ಮುಖಾಮುಖಿಯಾಗುತ್ತದೆ. ಈ ನಡುವೆ ಸತ್ಯಳ ಅಕ್ಕನನ್ನು ಕಾರ್ತಿಕ್ ಪ್ರೀತಿ ಮಾಡುತ್ತಾನೆ. ಹಣ ಹಣ ಎಂದು ಬಾಯಿ ಬಿಡುವ ಸತ್ಯಳ ಅಕ್ಕ ಈ ಹಿಂದೆ ಪ್ರೀತಿ ಮಾಡಿದ ಹುಡುಗನಿಗೆ ಕೈಕೊಡುತ್ತಾಳೆ. ಇವುಗಳನ್ನು ಸತ್ಯ ಹೇಗೆ ನಿಭಾಯಿಸುತ್ತಾಳೆ? ಎಂಬುದೇ ಈ ಧಾರಾವಾಹಿ ಕಥೆ.

Also Read-'ಗಟ್ಟಿಮೇಳ', 'ಜೊತೆ ಜೊತೆಯಲಿ' ಧಾರಾವಾಹಿಗೆ ಸೋಲುಣಿಸಿದ ಹೊಸ ಧಾರಾವಾಹಿ ಯಾವುದು?

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ