ಆ್ಯಪ್ನಗರ

ಮತ್ತೆ ಬರುತ್ತಿದೆ ನೈಜ ಘಟನೆಗಳ ಕುತೂಹಲಕಾರಿ ಶೋ 'ಶಾಂತಂ ಪಾಪಂ'! ಯಾವಾಗ ಶುರು?

ಕನ್ನಡ ಕಿರುತೆರೆಯಲ್ಲಿ 'ಶಾಂತಂ ಪಾಪಂ' ಶೋಗೆ ಆದರದ್ದೇ ಒಂದು ವಿಶೇಷ ವೀಕ್ಷಕ ವರ್ಗ ಇದೆ. ಕ್ರೈಂ ಕಥೆಗಳ ಮೂಲಕ ನೋಡುಗರಲ್ಲಿ ಅರಿವು ಮೂಡಿಸುವ ಪ್ರಯತ್ನವನ್ನು ಈ ಶೋನಲ್ಲಿ ಮಾಡಲಾಗುತ್ತಿದೆ. ಇದೀಗ 'ಶಾಂತಂ ಪಾಪಂ' ಮತ್ತೆ ಆರಂಭಗೊಳ್ಳಲಿದೆ.

Vijaya Karnataka Web 18 Nov 2020, 4:34 pm
ಕನ್ನಡ ಕಿರುತೆರೆಯಲ್ಲಿ ಕ್ರೈಂ ಕಥೆಗಳ ಜನಪ್ರಿಯ ಶೋ ಎಂದರೆ ಅದು, 'ಶಾಂತಂ ಪಾಪಂ'. ಕೆಲ ತಿಂಗಳ ಹಿಂದೆ ಈ ಶೋ ನಿಂತು ಹೋಗಿತ್ತು. ಇದೀಗ 'ಶಾಂತಂ ಪಾಪಂ' ಸೀಸನ್ 3 ಪ್ರಸಾರಕ್ಕೆ ಅಣಿಯಾಗಿದೆ. ನವೆಂಬರ್ 30ರಿಂದ ಆರಂಭಗೊಳ್ಳಲಿದೆ. ನಿಜ ಜೀವನದಲ್ಲಿ ನಡೆದ ಕ್ರೈಂ ಕಥೆಗಳನ್ನು 'ಶಾಂತಂ ಪಾಪಂ'ನಲ್ಲಿ ಕಾಣಬಹುದಾಗಿದೆ. ಈಗಾಗಲೇ ಸೀಸನ್‌ 1 ಮತ್ತು 2ಕ್ಕೆ ವೀಕ್ಷಕರಿಂದ ಸಿಕ್ಕಾಪಟ್ಟೆ ಮೆಚ್ಚುಗೆ ಸಿಕ್ಕಿತ್ತು. ಇದೀಗ ಮತ್ತಷ್ಟು ವಿಶೇಷತೆಗಳೊಂದಿಗೆ ಸೀಸನ್‌ 3 ಆರಂಭಗೊಳ್ಳುತ್ತಿದೆ.
Vijaya Karnataka Web Shantam Paapam


ಲಾಕ್‌ಡೌನ್‌ನಿಂದಾಗಿ ನಿಂತುಹೋಗಿತ್ತು 'ಶಾಂತಂ ಪಾಪಂ'
ಲಾಕ್‌ಡೌನ್‌ ಅವಧಿಯಲ್ಲಿ ಅನೇಕ ಕನ್ನಡದ ಧಾರಾವಾಹಿಗಳು ಮುಕ್ತಾಯವಾಗಿದ್ದವು. ಅದೇ ರೀತಿ 'ಶಾಂತಂ ಪಾಪಂ' ಸೀಸನ್‌ 2 ಕೂಡ ಮುಕ್ತಾಯವಾಗಿತ್ತು. ಹಾಗಾಗಿ, ಹಳೆಯ ಎಪಿಸೋಡ್‌ಗಳನ್ನೇ ಮತ್ತೆ ಪ್ರಸಾರ ಮಾಡಲಾಗುತ್ತಿತ್ತು. ಕ್ರೈಂ ಕಥೆಗಳ ಕುರಿತಾದ ಈ ಶೋ 2017ರಲ್ಲಿ ಆರಂಭಗೊಂಡಿತ್ತು. ರೋಚಕ ಸಂಚಿಕೆಗಳ ಮೂಲಕ ವೀಕ್ಷಕರ ಗಮನವನ್ನು ಬಹುಬೇಗನೇ ಸೆಳೆದುಕೊಂಡಿತ್ತು. ನೈಜ ಘಟನೆಗಳನ್ನೇ ಸಿನಿಮೀಯವಾಗಿ ಹೇಳಿದ್ದರಿಂದ ಕಡಿಮೆ ಅವಧಿಯಲ್ಲಿ ಒಳ್ಳೆಯ ಟಿಆರ್‌ಪಿಯನ್ನು 'ಶಾಂತಂ ಪಾಪಂ' ಪಡೆದುಕೊಂಡಿತ್ತು.

ಜನಪ್ರಿಯ ತಾರೆಯರ ನಿರೂಪಣೆ
ಅಂದಹಾಗೆ, 'ಶಾಂತಂ ಪಾಪಂ'ನ ಪ್ರತಿ ಸಂಚಿಕೆಯನ್ನು ಜನಪ್ರಿಯ ತಾರೆಯರಿಂದ ನಿರೂಪಣೆ ಮಾಡಿಸಲಾಗುತ್ತಿತ್ತು. ಧಾರಾವಾಹಿ, ಸಿನಿಮಾ, ಬಿಗ್ ಬಾಸ್ ಖ್ಯಾತಿಯ ಸೆಲೆಬ್ರಿಟಿಗಳು 'ಶಾಂತಂ ಪಾಪಂ' ಶೋನಲ್ಲಿ ಬರುವ ಕಥೆಗಳನ್ನು, ಘಟನೆಗಳನ್ನು ನಿರೂಪಣೆ ಮಾಡುವ ಮೂಲಕ ವೀಕ್ಷಕರಿಗೆ ಇನ್ನಷ್ಟು ಇಷ್ಟವಾಗುವಂತೆ ಮಾಡಿದ್ದರು. ಈ ಬಾರಿ ಯಾವೆಲ್ಲ ಸೆಲೆಬ್ರಿಟಿಗಳು ಈ ಶೋವನ್ನು ನಿರೂಪಣೆ ಮಾಡಲಿದ್ದಾರೆ ಎಂಬುದನ್ನು ಕಾದುನೋಡಬೇಕು.

ಬಿಗ್‌ ಬಾಸ್‌ನಿಂದ ಹೊರಬಂದ ಬಳಿಕ ಚೈತ್ರಾ ಕೋಟೂರ್‌ ಏನ್‌ ಮಾಡ್ತಿದ್ದಾರೆ? ಇಲ್ಲಿದೆ ಪೂರ್ತಿ ಡಿಟೈಲ್ಸ್‌

'ಶಾಂತಂ ಪಾಪಂ' ಬರೀ ಒಂದು ಕ್ರೈಂ ಶೋ ಮಾತ್ರ ಆಗಿರಲಿಲ್ಲ. ಇದರಲ್ಲಿ ಸಾಮಾಜಿಕ ಸಂದೇಶ ನೀಡುವ ಕೆಲಸ ನಡೆಯುತ್ತಿತ್ತು. ನಗರ ಪ್ರದೇಶದಲ್ಲಿ ಯಾವೆಲ್ಲ ರೀತಿಯ ಕ್ರೈಂಗಳು ನಡೆಯುತ್ತವೆ. ನಾಗರೀಕರು ಹೇಗೆಲ್ಲ ಎಚ್ಚರವಹಿಸಬೇಕು ಎಂಬುದನ್ನು ಶೋ ಮೂಲಕ ತೋರಿಸಲಾಗುತ್ತಿತ್ತು. ಸದ್ಯ ಕನ್ನಡದಲ್ಲಿ ಅನೇಕ ಡಬ್ಬಿಂಗ್ ಸಿನಿಮಾಗಳು, ಧಾರಾವಾಹಿಗಳು ಪ್ರಸಾರವಾಗುತ್ತಿವೆ. ವಿಶೇಷವೆಂದರೆ, 'ಶಾಂತಂ ಪಾಪಂ'ನ ಹಿಂದಿನ ಸೀಸನ್‌ನ ಸಂಚಿಕೆಗಳು ಬೆಂಗಾಲಿ ಭಾಷೆಗೆ ಡಬ್ ಆಗಿವೆ. ನವೆಂಬರ್‌ 16ರಿಂದ ಆ ಸಂಚಿಕೆಗಳು ಪ್ರಸಾರವಾಗುತ್ತಿವೆ.

ರಾಶಿ ಎಲ್ಲವನ್ನು ನಂಬುವ ಹಾಗೆ ನಾನು ನಂಬುವವಳಲ್ಲ: ಮಿಥುನ ರಾಶಿ ನಟಿ ವೈಷ್ಣವಿ!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ