ಕರುನಾಡ ಚಕ್ರವರ್ತಿ, ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್ ಅವರಿಗೆ ತಾಯಿ ಕಂಡ್ರೆ ಪಂಚಪ್ರಾಣ. ಅಮ್ಮ ಪಾರ್ವತಮ್ಮ ರಾಜ್ಕುಮಾರ್ ಅವರೆಂದರೆ ಶಿವರಾಜ್ಕುಮಾರ್ಗೆ ಎಲ್ಲಿಲ್ಲದ ಪ್ರೀತಿ. ಈಗಾಗಲೇ ಅನೇಕ ಕಾರ್ಯಕ್ರಮಗಳಲ್ಲಿ ತಮ್ಮ ತಾಯಿಯ ಬಗ್ಗೆ ಶಿವರಾಜ್ಕುಮಾರ್ ಮಾತನಾಡಿದ್ದಾರೆ. ಇದೀಗ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್’ ರಿಯಾಲಿಟಿ ಶೋನಲ್ಲಿ ಪಾರ್ವತಮ್ಮ ರಾಜ್ಕುಮಾರ್ ಅವರನ್ನು ನೆನೆದು ಶಿವರಾಜ್ಕುಮಾರ್ ಕಣ್ಣೀರು ಹಾಕಿದ್ದಾರೆ. ಅದ್ಭುತ ಪರ್ಫಾಮೆನ್ಸ್ ಕೊಟ್ಟ ಸಹನಾ
ಜೀ ಕನ್ನಡ ವಾಹಿನಿಯ ಜನಪ್ರಿಯ ರಿಯಾಲಿಟಿ ಶೋಗಳ ಪೈಕಿ ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್’ ಕೂಡ ಒಂದು. ಈಗಾಗಲೇ ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್’ ಕಾರ್ಯಕ್ರಮದ ಐದು ಆವೃತ್ತಿಗಳು ಪೂರ್ಣಗೊಂಡಿದ್ದು, ಇದೀಗ ಆರನೇ ಸೀಸನ್ ಶುರುವಾಗಿದೆ. ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ - 6’ ಕಾರ್ಯಕ್ರಮದಕ್ಕೆ ಸೆಂಚುರಿ ಸ್ಟಾರ್ ಶಿವರಾಜ್ಕುಮಾರ್ ‘ಮಹಾಗುರು’ ಸ್ಥಾನ ಅಲಂಕರಿಸಿದ್ದಾರೆ.
ಪಾರ್ವತಮ್ಮ & ಪುನೀತ್ ರಾಜ್ಕುಮಾರ್ ಸ್ಮರಣಾರ್ಥ ಎರಡು ಚಿನ್ನದ ಪದಕ ಘೋಷಣೆ ಮಾಡಿದ ಅಶ್ವಿನಿ
‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ - 6’ ಕಾರ್ಯಕ್ರಮದಲ್ಲಿ ಕಳೆದ ವಾರಾಂತ್ಯದಲ್ಲಿ ಪ್ರಸಾರವಾದ ಸಂಚಿಕೆಯಲ್ಲಿ ತಾಯಂದಿರ ದಿನಾಚರಣೆಯ ಅಂಗವಾಗಿ ಸ್ಪರ್ಧಿ ಸಹನ ‘ಅಮ್ಮ’ನ ಕುರಿತಾಗಿ ಅದ್ಭುತ ಡ್ಯಾನ್ಸ್ ಪರ್ಫಾಮೆನ್ಸ್ ನೀಡಿದರು. ಪರ್ಫಾಮೆನ್ಸ್ ಅಂತ್ಯದಲ್ಲಿ ರಕ್ಷಿತಾ ಮತ್ತವರ ತಾಯಿ, ಚಿನ್ನಿಪ್ರಕಾಶ್ ಮತ್ತವರ ಅಮ್ಮ, ಅರ್ಜುನ್ ಜನ್ಯ ಮತ್ತವರ ತಾಯಿ, ಅನುಶ್ರೀ ಮತ್ತವರ ಅಮ್ಮನ ಫೋಟೋವನ್ನು ಸಹನ ಪ್ರದರ್ಶಿಸಿದರು.
ಡಾ.ರಾಜ್ ನಿಧನದ ನಂತರ ‘ದೊಡ್ಮನೆ’ ಎರಡು ಮನೆ ಆಗಿದ್ದು ಯಾಕೆ? ಕಟು ಸತ್ಯ ಬಹಿರಂಗ!
ಹಾಗೇ, ಕೊನೆಯಲ್ಲಿ ಶಿವರಾಜ್ಕುಮಾರ್ ಮತ್ತವರ ತಾಯಿ ಪಾರ್ವತಮ್ಮ ರಾಜ್ಕುಮಾರ್ ಅವರ ಫೋಟೋವನ್ನೂ ಸಹನ ತೋರಿಸಿದರು. ಇದನ್ನ ಕಂಡ ಕೂಡಲೆ ಶಿವರಾಜ್ಕುಮಾರ್ ಭಾವುಕರಾದರು. ಅಮ್ಮನನ್ನು ನೆನೆದ ಶಿವಣ್ಣನಿಗೆ ದುಃಖ ಉಮ್ಮಳಿಸಿ ಬಂತು. ಪಾರ್ವತಮ್ಮ ಅವರನ್ನು ನೆನಪಿಸಿಕೊಂಡು ಶಿವಣ್ಣ ಕಣ್ಣೀರು ಹಾಕಿದರು. ಶಿವಣ್ಣ ಕಣ್ಣೀರಿಟ್ಟಿದ್ದನ್ನು ನೋಡಿ ನಿರೂಪಕಿ ಅನುಶ್ರೀ ಕ್ಷಮೆ ಕೇಳಿದರು.
ಚಿತ್ರರಂಗಕ್ಕೆ ನಟಿ ಮಾಲಾಶ್ರೀ, ಪ್ರೇಮಾ, ಸುಧಾರಾಣಿ, ರಕ್ಷಿತಾ, ರಮ್ಯಾರನ್ನು ಪರಿಚಯಿಸಿದ್ದು ಪಾರ್ವತಮ್ಮ ರಾಜ್ಕುಮಾರ್: ಗಾಲಿ ಜನಾರ್ಧನ ರೆಡ್ಡಿ
ಶಿವಣ್ಣ ಹೇಳಿದ್ದೇನು?
‘’ಏನು ಮಾತನಾಡಬೇಕು ಅಂತ ನನಗೆ ಗೊತ್ತಾಗುತ್ತಿಲ್ಲ. ಎಲ್ಲರ ಫೋಟೋವನ್ನೂ ನೋಡುತ್ತಿರುವಾಗ ನನ್ನದೂ ಬಂದು ಬಿಡುತ್ತಾ ಅಂತ ಭಯ ಆಗ್ತಿತ್ತು, ಹಾಗೇ ಬಂದು ಬಿಡ್ತು. ಅಮ್ಮನನ್ನು ನೆನೆಸಿಕೊಂಡರೆ ನಿಜವಾಗಿಯೂ ಅಳು ಬರುತ್ತೆ. ಯಾವ ಫೀಲಿಂಗ್ ಮಾತ್ರ ಮರೆಯಬಹುದು, ಆದರೆ ತಾಯಿ ಫೀಲಿಂಗ್ ಮಾತ್ರ ಮರೆಯಲು ಸಾಧ್ಯವಿಲ್ಲ. ಅದು ಯಾವಾಗಲೂ ಕಾಡುತ್ತಲೇ ಇರುತ್ತದೆ. ನನಗೆ ತುಂಬಾ ಇಷ್ಟವಾದ ಫೋಟೋ ಅದು. ಎಲ್ಲರೂ ಕೂಡ ತಂದೆ-ತಾಯಿಯನ್ನ ಚೆನ್ನಾಗಿ ನೋಡಿಕೊಳ್ಳಿ. ಕೈಬಿಡಬೇಡಿ. ಇವತ್ತು ಫೋಟೋ ನೋಡಿದಾಗ ನನ್ನ ಕೈಯಲ್ಲಿ ತಡೆಯಲು ಆಗಲಿಲ್ಲ’’ ಅಂತ ಶಿವರಾಜ್ಕುಮಾರ್ ಹೇಳಿದರು.
ಜೊತೆಗೆ ‘‘ಬೇಡುವನು ವರವನ್ನು ಕೊಡೆ ತಾಯಿ ಜನ್ಮವನು ಕಡೆ ತನಕ ಮರೆಯಲ್ಲ ಜೋಗಿ..’’ ಹಾಡನ್ನ ಶಿವರಾಜ್ಕುಮಾರ್ ಹಾಡಿದರು.
Fill this survey and get a chance to win an attractive gift
ಜೀ ಕನ್ನಡ ವಾಹಿನಿಯ ಜನಪ್ರಿಯ ರಿಯಾಲಿಟಿ ಶೋಗಳ ಪೈಕಿ ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್’ ಕೂಡ ಒಂದು. ಈಗಾಗಲೇ ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್’ ಕಾರ್ಯಕ್ರಮದ ಐದು ಆವೃತ್ತಿಗಳು ಪೂರ್ಣಗೊಂಡಿದ್ದು, ಇದೀಗ ಆರನೇ ಸೀಸನ್ ಶುರುವಾಗಿದೆ. ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ - 6’ ಕಾರ್ಯಕ್ರಮದಕ್ಕೆ ಸೆಂಚುರಿ ಸ್ಟಾರ್ ಶಿವರಾಜ್ಕುಮಾರ್ ‘ಮಹಾಗುರು’ ಸ್ಥಾನ ಅಲಂಕರಿಸಿದ್ದಾರೆ.
ಪಾರ್ವತಮ್ಮ & ಪುನೀತ್ ರಾಜ್ಕುಮಾರ್ ಸ್ಮರಣಾರ್ಥ ಎರಡು ಚಿನ್ನದ ಪದಕ ಘೋಷಣೆ ಮಾಡಿದ ಅಶ್ವಿನಿ
‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ - 6’ ಕಾರ್ಯಕ್ರಮದಲ್ಲಿ ಕಳೆದ ವಾರಾಂತ್ಯದಲ್ಲಿ ಪ್ರಸಾರವಾದ ಸಂಚಿಕೆಯಲ್ಲಿ ತಾಯಂದಿರ ದಿನಾಚರಣೆಯ ಅಂಗವಾಗಿ ಸ್ಪರ್ಧಿ ಸಹನ ‘ಅಮ್ಮ’ನ ಕುರಿತಾಗಿ ಅದ್ಭುತ ಡ್ಯಾನ್ಸ್ ಪರ್ಫಾಮೆನ್ಸ್ ನೀಡಿದರು. ಪರ್ಫಾಮೆನ್ಸ್ ಅಂತ್ಯದಲ್ಲಿ ರಕ್ಷಿತಾ ಮತ್ತವರ ತಾಯಿ, ಚಿನ್ನಿಪ್ರಕಾಶ್ ಮತ್ತವರ ಅಮ್ಮ, ಅರ್ಜುನ್ ಜನ್ಯ ಮತ್ತವರ ತಾಯಿ, ಅನುಶ್ರೀ ಮತ್ತವರ ಅಮ್ಮನ ಫೋಟೋವನ್ನು ಸಹನ ಪ್ರದರ್ಶಿಸಿದರು.
ಡಾ.ರಾಜ್ ನಿಧನದ ನಂತರ ‘ದೊಡ್ಮನೆ’ ಎರಡು ಮನೆ ಆಗಿದ್ದು ಯಾಕೆ? ಕಟು ಸತ್ಯ ಬಹಿರಂಗ!
ಹಾಗೇ, ಕೊನೆಯಲ್ಲಿ ಶಿವರಾಜ್ಕುಮಾರ್ ಮತ್ತವರ ತಾಯಿ ಪಾರ್ವತಮ್ಮ ರಾಜ್ಕುಮಾರ್ ಅವರ ಫೋಟೋವನ್ನೂ ಸಹನ ತೋರಿಸಿದರು. ಇದನ್ನ ಕಂಡ ಕೂಡಲೆ ಶಿವರಾಜ್ಕುಮಾರ್ ಭಾವುಕರಾದರು. ಅಮ್ಮನನ್ನು ನೆನೆದ ಶಿವಣ್ಣನಿಗೆ ದುಃಖ ಉಮ್ಮಳಿಸಿ ಬಂತು. ಪಾರ್ವತಮ್ಮ ಅವರನ್ನು ನೆನಪಿಸಿಕೊಂಡು ಶಿವಣ್ಣ ಕಣ್ಣೀರು ಹಾಕಿದರು. ಶಿವಣ್ಣ ಕಣ್ಣೀರಿಟ್ಟಿದ್ದನ್ನು ನೋಡಿ ನಿರೂಪಕಿ ಅನುಶ್ರೀ ಕ್ಷಮೆ ಕೇಳಿದರು.
ಚಿತ್ರರಂಗಕ್ಕೆ ನಟಿ ಮಾಲಾಶ್ರೀ, ಪ್ರೇಮಾ, ಸುಧಾರಾಣಿ, ರಕ್ಷಿತಾ, ರಮ್ಯಾರನ್ನು ಪರಿಚಯಿಸಿದ್ದು ಪಾರ್ವತಮ್ಮ ರಾಜ್ಕುಮಾರ್: ಗಾಲಿ ಜನಾರ್ಧನ ರೆಡ್ಡಿ
ಶಿವಣ್ಣ ಹೇಳಿದ್ದೇನು?
‘’ಏನು ಮಾತನಾಡಬೇಕು ಅಂತ ನನಗೆ ಗೊತ್ತಾಗುತ್ತಿಲ್ಲ. ಎಲ್ಲರ ಫೋಟೋವನ್ನೂ ನೋಡುತ್ತಿರುವಾಗ ನನ್ನದೂ ಬಂದು ಬಿಡುತ್ತಾ ಅಂತ ಭಯ ಆಗ್ತಿತ್ತು, ಹಾಗೇ ಬಂದು ಬಿಡ್ತು. ಅಮ್ಮನನ್ನು ನೆನೆಸಿಕೊಂಡರೆ ನಿಜವಾಗಿಯೂ ಅಳು ಬರುತ್ತೆ. ಯಾವ ಫೀಲಿಂಗ್ ಮಾತ್ರ ಮರೆಯಬಹುದು, ಆದರೆ ತಾಯಿ ಫೀಲಿಂಗ್ ಮಾತ್ರ ಮರೆಯಲು ಸಾಧ್ಯವಿಲ್ಲ. ಅದು ಯಾವಾಗಲೂ ಕಾಡುತ್ತಲೇ ಇರುತ್ತದೆ. ನನಗೆ ತುಂಬಾ ಇಷ್ಟವಾದ ಫೋಟೋ ಅದು. ಎಲ್ಲರೂ ಕೂಡ ತಂದೆ-ತಾಯಿಯನ್ನ ಚೆನ್ನಾಗಿ ನೋಡಿಕೊಳ್ಳಿ. ಕೈಬಿಡಬೇಡಿ. ಇವತ್ತು ಫೋಟೋ ನೋಡಿದಾಗ ನನ್ನ ಕೈಯಲ್ಲಿ ತಡೆಯಲು ಆಗಲಿಲ್ಲ’’ ಅಂತ ಶಿವರಾಜ್ಕುಮಾರ್ ಹೇಳಿದರು.
ಜೊತೆಗೆ ‘‘ಬೇಡುವನು ವರವನ್ನು ಕೊಡೆ ತಾಯಿ ಜನ್ಮವನು ಕಡೆ ತನಕ ಮರೆಯಲ್ಲ ಜೋಗಿ..’’ ಹಾಡನ್ನ ಶಿವರಾಜ್ಕುಮಾರ್ ಹಾಡಿದರು.
Fill this survey and get a chance to win an attractive gift