ಆ್ಯಪ್ನಗರ

Shree Gowri Serial: ಪಂಚಾಯತಿ ರಂಪಾಟ: ಶರಣ ವಿರುದ್ಧ ಸಿಡಿದೇಳ್ತಾರಾ ಗೌರಿ, ಅಪ್ಪು?

Shree Gowri Kannada Serial Today Episode: ಗೌರಿ - ಅಪ್ಪು ಕುರಿತಾಗಿ ಪಂಚಾಯತಿ ಆರಂಭವಾಗುವ ಮುನ್ನವೇ ಶರಣ, ಸುಗಂಧ ಕ್ಯಾತೆ ತೆಗೆದಿದ್ದಾರೆ. ಅಧ್ಯಕ್ಷ ಕುರ್ಚಿ ಮೇಲೆ ಕೂರುವ ಅರ್ಹತೆ ರಘುರಾಮ್ ಹೆಗಡೆಗಿಲ್ಲ.. ಕುರ್ಚಿ ಇನ್ಮುಂದೆ ನಮ್ಮದು ಅಂತ ಸುಗಂಧ ಹೇಳಿದ್ದಾಳೆ. ಮುಂದೆ ಇನ್ನೇನು ತಿರುವು ಕಾದಿದ್ಯೋ..?

Authored byಹರ್ಷಿತಾ ಎನ್ | Vijaya Karnataka Web 1 May 2024, 11:14 pm

ಹೈಲೈಟ್ಸ್‌:

  • ಪಂಚಾಯತಿ ಕಟ್ಟೆಯಲ್ಲಿ ಹೈಡ್ರಾಮಾ ಮಾಡಿದ ಶರಣ, ಸುಗಂಧ
  • ಗೌರಿ - ಅಪ್ಪು ಕುರಿತಾಗಿ ಪಂಚಾಯತಿ ನಡೆಸೋದು ಯಾರು?
  • ಶರಣ ಕುರಿತಾಗಿ ಸತ್ಯ ಬಾಯಿಬಿಡ್ತಾಳಾ ಗೌರಿ?

ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web shree gowri serial written update may 1 2024 episode sharana and sugandha create hungama in panchayathi
Shree Gowri Serial: ಪಂಚಾಯತಿ ರಂಪಾಟ: ಶರಣ ವಿರುದ್ಧ ಸಿಡಿದೇಳ್ತಾರಾ ಗೌರಿ, ಅಪ್ಪು?
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಟಾಪ್ ಧಾರಾವಾಹಿಗಳ ಪೈಕಿ ‘ಶ್ರೀಗೌರಿ’ ಕೂಡ ಒಂದು. ‘ಶ್ರೀಗೌರಿ’ ಧಾರಾವಾಹಿ ಇದೀಗ ರೋಚಕ ಹಂತ ತಲುಪಿದೆ. ಗೌರಿ ಹಾಗೂ ಅಪ್ಪು ಊರಿಗೆ ವಾಪಸ್ ಆಗಿದ್ದಾರೆ. ಗೌರಿ ಮನೆ ತಲುಪುವ ಮುನ್ನವೇ ಪಂಚಾಯತಿ ಕಟ್ಟೆ ಹತ್ತಿರ ಶರಣ ತಡೆದಿದ್ದಾನೆ. ಪಂಚಾಯತಿ ನಡೆಸಲೇಬೇಕು ಅಂತ ಸುಗಂಧ ಹಠ ಹಿಡಿದಿದ್ದಾಳೆ. ಇತ್ತ ಪಂಚಾಯತಿ ನಡೆಸಿ ಅಂತ ಗೌರಿ ಕೂಡ ಹೇಳಿದ್ದಾಳೆ. ಪಂಚಾಯತಿ ಆರಂಭವಾಗುವ ಮುನ್ನವೇ ಶರಣ, ಸುಗಂಧ ರಂಪ ಮಾಡಿದ್ದಾರೆ. ಮುಂದೇನಾಗಬಹುದು?

ಪಂಚಾಯತಿಯಲ್ಲಿ ಅಧ್ಯಕ್ಷನ ಕುರ್ಚಿ ಮೇಲೆ ಕೂರುವ ತವಕ!

ಸುಗಂಧ ಮತ್ತವಳ ಪುತ್ರ ಶರಣನಿಗೆ ಊರಿನ ಅಧ್ಯಕ್ಷಗಾದಿ ಮೇಲೆ ಕಣ್ಣು. ‘’ಅಧ್ಯಕ್ಷ ಕುರ್ಚಿ ನಮಗೆ ಸೇರಬೇಕು’’ ಅಂತ ಪದೇ ಪದೇ ಹೇಳುವ ಸುಗಂಧ ಮತ್ತು ಶರಣ.. ಅಧ್ಯಕ್ಷ ಕುರ್ಚಿಗಾಗಿ ಮಾಡಿರುವ, ಮಾಡುತ್ತಿರುವ ಕುತಂತ್ರಗಳು ಒಂದೆರಡಲ್ಲ. ಈಗ ಗೌರಿ ನೆಪವೊಡ್ಡಿ.. ಗೌರಿಯ ಮಾನ ಮರ್ಯಾದೆಯನ್ನ ಬೀದಿಯಲ್ಲಿ ಹರಾಜು ಹಾಕಿ.. ಅಧ್ಯಕ್ಷ ಸ್ಥಾನದಿಂದ ರಘುರಾಮ್ ಹೆಗಡೆಯನ್ನ ಕೆಳಗೆ ಇಳಸಿ.. ಊರಿನ ಅಧ್ಯಕ್ಷ ಸ್ಥಾನ ಕಸಿಯುವ ಪ್ಲ್ಯಾನ್ ಸುಗಂಧ ಹಾಗೂ ಶರಣನದ್ದು. ಹೀಗಾಗಿ, ಗೌರಿಯ ಇಂದಿನ ಪರಿಸ್ಥಿತಿ ಹಿಂದೆ ಶರಣನ ಕೈವಾಡವಿದ್ದರೂ.. ಬೇಕು ಅಂತಲೇ ಸುಗಂಧ ಪಂಚಾಯತಿ ಕರೆದಿದ್ದಾಳೆ.


ಪಂಚಾಯತಿ ನಡೆಸಲು ಬಂದ ಸುಗಂಧ

‘’ನನ್ನ ಮೇಲೆ ನಂಬಿಕೆ ಇದ್ದರೆ ಪಂಚಾಯತಿ ನಡೆಸಿ’’ ಅಂತ ಅಪ್ಪನಿಗೆ ಗೌರಿ ಹೇಳಿದ್ದಳು. ಮಗಳ ಮಾತಿಗೆ ಬೆಲೆ ಕೊಟ್ಟು ಪಂಚಾಯತಿ ನಡೆಸಲು ರಘುರಾಮ್ ಹೆಗಡೆ ಬಂದರು. ಆದರೆ, ಅಧ್ಯಕ್ಷ ಕುರ್ಚಿಯಲ್ಲಿ ರಘುರಾಮ್ ಹೆಗಡೆಯನ್ನ ಕೂರಲು ಬಿಡದೆ ಶರಣ ಹಾಗೂ ಸುಗಂಧ ರಂಪ ಮಾಡಿದರು. ಪಂಚಾಯತಿ ನಡೆಸಲು ಸುಗಂಧ ಮುಂದಾದರು. ಆದರೆ, ಅದಕ್ಕೆ ಅಪ್ಪು ಬಿಡಲಿಲ್ಲ!
Shree Gowri Serial: ಮಂಗಳಮ್ಮನಿಗೆ ಪ್ರಜ್ಞೆ ಬಂತು, ಪಂಚಾಯತಿಗೆ ಸಿದ್ಧ ಎಂದ ಗೌರಿ!

‘’ಪಂಚಾಯತಿಯನ್ನ ರಘುರಾಮ್ ಹೆಗಡೆ ಅವರೇ ನಡೆಸಬೇಕು’’ ಅಂತ ಅಪ್ಪು ಒತ್ತಾಯಿಸುತ್ತಾನೆ. ಊರಿನವರು ದನಿ ಸೇರಿಸುತ್ತಾರೆ. ಶರಣ ಹಾಗೂ ಸುಗಂಧಗೆ ಮುಖಭಂಗವಾಗುತ್ತದೆ. ಹಾಗಾದ್ರೆ, ರಘುರಾಮ್ ಹೆಗಡೆ ಅವರೇ ಪಂಚಾಯತಿ ನಡೆಸುತ್ತಾರಾ? ಪಂಚಾಯತಿ ಆರಂಭವಾಗುವ ಮುನ್ನವೇ ಶರಣ, ಸುಗಂಧ ಕೋಲಾಹಲ ಮಾಡ್ತಾರಾ? ಎಂಬುದೇ ಸದ್ಯದ ಪ್ರಶ್ನೆ.
Shree Gowri Serial: ಅಂತೂ ಊರಿಗೆ ಗೌರಿ, ಅಪ್ಪು ವಾಪಸ್ ಬಂದಿದ್ದಾಯ್ತು! ಶರಣನಿಗೆ ನಡುಕ ಶುರುವಾಯ್ತು!

ಸತ್ಯ ಬಾಯಿಬಿಡ್ತಾರಾ ಗೌರಿ, ಅಪ್ಪು?

ಗೌರಿ ಪ್ರಜ್ಞೆ ತಪ್ಪಿ ಬೀಳಲು ಕಾರಣ ಶರಣ.. ಗೌರಿಯನ್ನ ಕೊಲ್ಲಲು ಶರಣ ಸುಪಾರಿ ಕೊಟ್ಟಿದ್ದ.. ಗೌರಿಯನ್ನ ಕಾಪಾಡಿ ಊರಿಗೆ ವಾಪಸ್ ಕರೆತಂದಿದ್ದು ಅಪ್ಪು. ಈ ಸತ್ಯ ಗೌರಿಗೆ ಚೆನ್ನಾಗಿ ಗೊತ್ತು. ಇದೇ ಸತ್ಯವನ್ನ ಊರಿನ ಜನರೆದುರು ಗೌರಿ ಬಾಯಿಬಿಡ್ತಾಳಾ? ಶರಣನ ಅಸಲಿ ಬಣ್ಣವನ್ನ ಗೌರಿ ಹಾಗೂ ಅಪ್ಪು ಬಯಲು ಮಾಡ್ತಾರಾ ಎಂಬುದನ್ನು ಕಾದುನೋಡಬೇಕಿದೆ. ಅಂದ್ಹಾಗೆ, ‘ಶ್ರೀಗೌರಿ’ ಧಾರಾವಾಹಿಯಲ್ಲಿ ಅಪ್ಪು ಆಗಿ ಕಾರ್ತಿಕ್ ಅತ್ತಾವರ್, ಗೌರಿ ಆಗಿ ಅಮೂಲ್ಯ ಗೌಡ, ಮಂಗಳಮ್ಮ ಆಗಿ ನಟಿ ನಂದಿನಿ ಗೌಡ, ರಘುರಾಮ್ ಹೆಗಡೆ ಆಗಿ ಸುನೀಲ್ ಪುರಾಣಿಕ್, ಶರಣ ಆಗಿ ರಾಜೇಶ್ ಧ್ರುವ, ಅರ್ಚನಾ ಆಗಿ ಆರೋಹಿ ನೈನಾ, ಗೌರಿ ಅಜ್ಜನಾಗಿ ಸಂಜಯ್ ಸೂರಿ ಅಭಿನಯಿಸುತ್ತಿದ್ದಾರೆ.
ಲೇಖಕರ ಬಗ್ಗೆ
ಹರ್ಷಿತಾ ಎನ್
ವಿಜಯ ಕರ್ನಾಟಕ ಆನ್‌ಲೈನ್‌ನಲ್ಲಿ 2021ರ ಮಾರ್ಚ್‌ನಿಂದ ಕಾರ್ಯನಿರ್ವಹಿಸುತ್ತಿದ್ದಾರೆ. 2011ರಿಂದ ಮಾಧ್ಯಮ ರಂಗದಲ್ಲಿ ಸಕ್ರಿಯರಾಗಿದ್ದಾರೆ. ಕನ್ನಡ ಸುದ್ದಿ ವಾಹಿನಿಗಳು ಹಾಗೂ ಡಿಜಿಟಲ್ ಮೀಡಿಯಾಗಳಲ್ಲಿ ಸಿನಿಮಾ ವರದಿಗಾರ್ತಿಯಾಗಿ ಕೆಲಸ ಮಾಡಿದ ಅನುಭವ ಇವರಿಗೆ ಇದೆ. ಸಿನಿಮಾ ವರದಿಗಾರಿಕೆ ಇವರ ಪ್ರಮುಖ ಆಸಕ್ತಿ ವಿಭಾಗ.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ