ಆ್ಯಪ್ನಗರ

ನೂತನ ಮನೆ ಕಟ್ಟಿದ ಖುಷಿಯಲ್ಲಿ ಕನ್ನಡ ನಟ ಸುಂದರ್, ವೀಣಾ ಸುಂದರ್ ದಂಪತಿ!

ಸಿನಿಮಾ ಹಾಗೂ ಕಿರುತೆರೆಯಲ್ಲಿ ಸಕ್ರಿಯವಾಗಿರುವ ನಟ ಸುಂದರ್ ಹಾಗೂ ವೀಣಾ ದಂಪತಿ ಹೊಸ ಮನೆ ಕಟ್ಟಿಸಿದ್ದಾರೆ. ಈ ಸಮಾರಂಭಕ್ಕೆ ಕಿರುತೆರೆ ಕಲಾವಿದರು ಭಾಗಿಯಾಗಿದ್ದರು. ಇದರ ಜೊತೆಗೆ ನಿರ್ದೇಶಕರಾದ ಶ್ರುತಿ ನಾಯ್ಡು ಹಾಗೂ ರಮೇಶ್ ಇಂದಿರಾ ಕೂಡ ಈ ಶುಭ ಸಂದರ್ಭಕ್ಕೆ ಸಾಕ್ಷಿಯಾಗಿದ್ದರು.

Vijaya Karnataka Web 7 Sep 2020, 2:52 pm
ಅನೇಕ ಸಿನಿಮಾ ಹಾಗೂ ಧಾರಾವಾಹಿಗಳಲ್ಲಿ ನಟಿಸಿರುವ ಕನ್ನಡ ಚಿತ್ರರಂಗದ ತಾರಾ ದಂಪತಿ ಸುಂದರ್ ರಾಜ್ ಹಾಗೂ ವೀಣಾ ಸುಂದರ್ ಅವರ ಮನೆಯಲ್ಲಿ ಖುಷಿ ತುಂಬಿದೆ. ಇದಕ್ಕೆ ಕಾರಣ ಅವರ ಮನೆ. ಹೌದು, ಸುಂದರ್ ದಂಪತಿಯ ನೂತನ ಗೃಹ ಪ್ರವೇಶ ಇತ್ತೀಚೆಗಷ್ಟೇ ನಡೆದಿದೆ. ಕಿರುತೆರೆಯ ಕಲಾವಿದರು, ನಿರ್ದೇಶಕರು, ನಿರ್ಮಾಪಕರು ಈ ಸಮಾರಂಭದಲ್ಲಿ ಭಾಗಿಯಾಗಿದ್ದರು.
Vijaya Karnataka Web shruti naidu participate in sundar and veena sundar home inauguration ceremony
ನೂತನ ಮನೆ ಕಟ್ಟಿದ ಖುಷಿಯಲ್ಲಿ ಕನ್ನಡ ನಟ ಸುಂದರ್, ವೀಣಾ ಸುಂದರ್ ದಂಪತಿ!


ವೀಣಾ ಮನೆಯ ಪ್ರವೇಶದಲ್ಲಿ ಶ್ರುತಿ ನಾಯ್ಡು ಭಾಗಿ

ಅನೇಕ ವರ್ಷಗಳಿಂದ ವೀಣಾ ಹಾಗೂ ಸುಂದರ್ ಚಿತ್ರರಂಗದಲ್ಲಿ ಕೆಲಸ ಮಾಡುತ್ತಿದ್ದಾರೆ. ನಟನೆ, ಸಂಭಾಷಣೆ, ಚಿತ್ರಕಥೆಯಲ್ಲಿಯೂ ಕೂಡ ಸುಂದರ್ ತೊಡಗಿಸಿಕೊಂಡಿದ್ದಾರೆ. ಹೀಗಾಗಿ ಸಿನಿಮಾ ಮತ್ತು ಟಿವಿ ಕಲಾವಿದರು, ತಂತ್ರಜ್ಞರ ಜೊತೆ ಇವರಿಗೆ ಉತ್ತಮ ಸಂಬಂಧ ಇದೆ. ನಟಿ/ನಿರ್ದೇಶಕಿ ಶ್ರುತಿ ನಾಯ್ಡು, ನಿರ್ದೇಶಕ ರಮೇಶ್ ಇಂದಿರಾ ಕೂಡ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಶ್ರುತಿ ನಾಯ್ಡು ಜೊತೆಗೆ ವೀಣಾ ದಂಪತಿ ಅನೇಕ ಪ್ರಾಜೆಕ್ಟ್ ಮಾಡಿದ್ದರು. ಹೀಗಾಗಿ ಇವರಿಬ್ಬರ ಮಧ್ಯೆ ಒಳ್ಳೆಯ ಬಾಂಧವ್ಯ ಹೊಂದಿದ್ದಾರೆ.

ನಾಟಕ ತಂಡ ಹೊಂದಿರುವ ವೀಣಾ ದಂಪತಿ

ವೀಣಾ ಬಾಲನಟಿಯಾಗಿ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ಸುಂದರ್ ಕೂಡ ರಂಗಭೂಮಿಯಿಂದ ಹಿನ್ನಲೆ ಹೊಂದಿದ್ದರು. 'ಸುವ್ವಿ' ಎಂಬ ಹೆಸರಿನಲ್ಲಿ ಇವರಿಬ್ಬರು ನಾಟಕ ತಂಡ ರಚಿಸಿದ್ದಾರೆ. ಅಮೆರಿಕಾ, ಸಿಂಗಾಪುರದಲ್ಲಿ ಇವರ ನಾಟಕಗಳು ಪ್ರದರ್ಶನವಾಗಿವೆ. ಈ ದಂಪತಿಗೆ ಅನಘ್ರ್ಯ ಹಾಗೂ ಅಭಿಜ್ಞ ಎಂಬ ಮಕ್ಕಳಿದ್ದಾರೆ. ಸುಂದರ್ ಕೇವಲ ನಟರಾಗಿ ಅಲ್ಲದೆ ಬರಹಗಾರರಾಗಿಯೂ ಗುರುತಿಸಿಕೊಂಡಿದ್ದಾರೆ.

Also read-ಧಾರಾವಾಹಿ ಪ್ರಿಯರಿಗೆ ಗುಡ್‌ ನ್ಯೂಸ್‌! ಇಂದಿನಿಂದ ಶೂಟಿಂಗ್‌ ಶುರು; ಹೊಸ ಸಂಚಿಕೆ ಯಾವಾಗಿಂದ?

ಧಾರಾವಾಹಿಗಳಿಗೆ ಸಂಭಾಷಣೆ ಬರೆಯುವ ಸುಂದರ್

'ಮನ್ವಂತರ', 'ಚಿ ಸೌ ಸಾವಿತ್ರಿ', 'ಅರಸಿ' ಮುಂತಾದ ಧಾರಾವಾಹಿಗಳಿಗೆ ಸುಂದರ್ ಸಂಭಾಷಣೆ ಬರೆದಿದ್ದರು. 'ಮಂಗಳೂರು ಹುಡುಗಿ ಹುಬ್ಬಳ್ಳಿ ಹುಡುಗ' ಧಾರಾವಾಹಿಗೆ ಸುಂದರ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದಿದ್ದರು. ಈ ಧಾರಾವಾಹಿ ಕಲರ್ಸ್ ಸೂಪರ್‌ನಲ್ಲಿ ಒಳ್ಳೆಯ ಯಶಸ್ಸು ಕಂಡಿತ್ತು. ಪ್ರಸ್ತುತ ಅವರು 'ಬ್ರಹ್ಮಗಂಟು', 'ಬಯಸದೆ ಬಳಿ ಬಂದೆ' ಧಾರಾವಾಹಿಗೆ ಸಂಭಾಷಣೆ ಬರೆಯುತ್ತಿದ್ದಾರೆ. ವೀಣಾ ಸುಂದರ್ ದಂಪತಿ ಸುಮಾರು 12 ಸಿನಿಮಾಗಳಲ್ಲಿ ಜೋಡಿಯಾಗಿ ನಟಿಸಿದ್ದಾರೆ.

ALso Read-ಟಿಕ್ ಟಾಕ್ ನೋಡಿ ಮಂಡ್ಯದ ಹುಡುಗನಿಗೆ ಧಾರಾವಾಹಿಯಲ್ಲಿ ಅವಕಾಶ ಕೊಟ್ಟ ಶ್ರುತಿ ನಾಯ್ಡು!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ