ಆ್ಯಪ್ನಗರ

ಹೊಸ ಮೈಲಿಗಲ್ಲು ತಲುಪಿದ ಸಿಂದೂರ ಧಾರಾವಾಹಿ

ಕೌಟುಂಬಿಕ ಕಥಾಹಂದರವುಳ್ಳ ಧಾರಾವಾಹಿ ಸಿಂದೂರ 500 ಸಂಚಿಕೆಗಳನ್ನು ಯಶಸ್ವಿಯಾಗಿ ಪೂರೈಸಿ ಕುತೂಹಲಭರಿತ ಸಂಚಿಕೆಗಳಿಂದ ಪ್ರೇಕ್ಷಕರನ್ನು ಮನರಂಜಿಸುತ್ತಿದೆ.

Vijaya Karnataka Web 28 Nov 2018, 12:42 pm
ಸದಾ ವೀಕ್ಷಕರಿಗೆ ತನ್ನ ವೈವಿಧ್ಯಮಯ ಕಾರ್ಯಕ್ರಮಗಳ ಮೂಲಕ ಮನೋರಂಜಿಸುತ್ತಿರುವ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುವ ಸಿಂದೂರ ಧಾರಾವಾಹಿ ಮತ್ತೊಂದು ಮೈಲಿಗಲ್ಲನ್ನು ಪೂರೈಸುತ್ತಿದೆ.
Vijaya Karnataka Web sindoora


ಮಾರ್ಚ್ 20- 2017ರಂದು ಪ್ರಾರಂಭವಾದ ಸಿಂದೂರ ಧಾರಾವಾಹಿ, ಇದೇ ನವೆಂಬರ್ 29ರ ಗುರುವಾರದಂದು ಯಶಸ್ವಿ 500 ಕಂತುಗಳನ್ನು ಪೂರೈಸುತ್ತಿದೆ. ಸಿಂದೂರ ಧಾರಾವಾಹಿಯನ್ನು ತಮ್ಮ ಅಂಬರ ನಿರ್ಮಾಣ ಸಂಸ್ಥೆಯಡಿ ಅದ್ವೈತ ನಿರ್ಮಿಸುತ್ತಿದ್ದಾರೆ. ಹಲವಾರು ಹಿಟ್ ಧಾರಾವಾಹಿಗಳನ್ನು ನಿರ್ದೇಶಿಸಿದ ಸಕ್ರೆಬೈಲ್ ಶ್ರೀನಿವಾಸ್ ಅವರ ನಿರ್ದೇಶನ ಸಿಂದೂರಕ್ಕಿದೆ. ನಿಂಗೇಗೌಡರವರ ಛಾಯಾಗ್ರಹಣ, ಸುದರ್ಶನ್ ರವರ ಸಂಕಲನ ಈ ಧಾರಾವಾಹಿಗೆ ಇದೆ, ಧಾರಾವಾಹಿಯ ಸಂಭಾಷಣೆ ಮತ್ತು ಚಿತ್ರಕತೆಯ
ಜವಾಬ್ದಾರಿಯನ್ನು ಶುಭರಾಜ್ ಕೂದೂರ್ ಹೊತ್ತಿದ್ದಾರೆ.

ಸೌಮ್ಯಲತಾ, ಆಕರ್ಷ್ ಆದಿತ್ಯ, ಚಂದನ ರಾಘವೇಂದ್ರ, ಭೂಮಿಕ ಪ್ರಕಾಶ್, ವಿಕಾಸ್ ಶೆಟ್ಟಿ , ಆನಂದ್ ನಗರ್ಕರ್ ಮುಂತಾದ ದೊಡ್ಡ ತಾರಾಬಳಗವೆ ಸಿಂದೂರದಲ್ಲಿ ಕಾಣಬಹುದಾಗಿದೆ. ಅಕ್ಕ ತಂಗಿಯರ ಸುಮಧುರ ಬಾಂಧವ್ಯ ಮತ್ತು ಕೌಟುಂಬಿಕ ಕಲಹಗಳಿಂದ ಸಂಸಾರದಲ್ಲಿ ಉಂಟಾಗುವ ಭಿನ್ನಾಭಿಪ್ರಾಯಗಳ ನಡುವೆಯೂ ಸಂಬಂಧಗಳ ಮೌಲ್ಯವನ್ನು ಹೇಗೆ ಕಾಯ್ದುಕೊಳ್ಳಬೇಕೆಂದು ಸಾರುವ ಕೌಟುಂಬಿಕ ಕಥಾಹಂದರವುಳ್ಳ ಧಾರಾವಾಹಿ ಸಿಂದೂರ 500 ಸಂಚಿಕೆಗಳನ್ನು ಯಶಸ್ವಿಯಾಗಿ ಪೂರೈಸಿ ಕುತೂಹಲಭರಿತ ಸಂಚಿಕೆಗಳಿಂದ ಪ್ರೇಕ್ಷಕರನ್ನು ಮನರಂಜಿಸುತ್ತಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ