ಆ್ಯಪ್ನಗರ

ನ್ಯಾಷನಲ್ ಹೈಸ್ಕೂಲ್‍ನಲ್ಲಿ ಭೇಲ್ ಪೂರಿ ಮಾರಿದ ಸೃಜನ್ ಲೋಕೇಶ್

'ಸದಾ ನಿಮ್ಮೊಂದಿಗೆ' ಕಾರ್ಯಕ್ರಮದ ಕಳೆದ ವಾರ ಸಂಚಿಕೆಯಲ್ಲಿ ರೋರಿಂಗ್ ಸ್ಟಾರ್ ಶ್ರೀಮುರಳಿ ಭಾಗವಹಿಸಿ ರೇಖಾ ಮಹಾಂತೇಶ್ ಕುಟುಂಬಕ್ಕಾಗಿ ಕಬ್ಬಿನ ಜ್ಯೂಸ್ ಮಾರಾಟ ಮಾಡಿದರು.

Vijaya Karnataka Web 2 Aug 2018, 12:44 pm
'ಸದಾ ನಿಮ್ಮೊಂದಿಗೆ' ಕಾರ್ಯಕ್ರಮದ ಕಳೆದ ವಾರ ಸಂಚಿಕೆಯಲ್ಲಿ ರೋರಿಂಗ್ ಸ್ಟಾರ್ ಶ್ರೀಮುರಳಿ ಭಾಗವಹಿಸಿ ರೇಖಾ ಮಹಾಂತೇಶ್ ಕುಟುಂಬಕ್ಕಾಗಿ ಕಬ್ಬಿನ ಜ್ಯೂಸ್ ಮಾರಾಟ ಮಾಡಿದರು. ಅವರು ಸಂಪಾದಿಸಿರೋ ಒಂದೊಂದು ರೂಪಾಯಿಗೆ ಉದಯ ವಾಹಿನಿ 100 ರೂ. ಸೇರಿಸಿ ಒಟ್ಟು 1,55,000 ರೂ.ಗಳನ್ನು ರೇಖಾ ಮಹಾಂತೇಶ್ ಕುಟುಂಬಕ್ಕೆ ನೀಡಿತ್ತು.
Vijaya Karnataka Web srujan1


ಅದೇ ರೀತಿ ಈ ವಾರದ ಸಂಚಿಕೆಯಲ್ಲಿ ಗಾರೇ ಕೆಲಸ ಮಾಡುವಾಗ ವಿದ್ಯುತ್ ಶಾಕ್ ಹೊಡೆದು 2 ಕೈ, 1 ಕಾಲು ಕಳೆದುಕೊಂಡಿರುವ ನಾಗೇಶ್ ಅವರಿಗಾಗಿ ಟಾಕಿಂಗ್ ಸ್ಟಾರ್ ಸೃಜನ್ ಲೋಕೇಶ್ ತಾವು ಓದಿದ ಶಾಲೆಗೆ ಹೋಗಿ ಅಲ್ಲಿನ ಮಕ್ಕಳಿಗೆ, ಶಿಕ್ಷಕರಿಗೆ ಪಾನಿಪೂರಿ, ಭೇಲ್ ಪೂರಿ ಮಾರಿದರು.

ಸಾರ್ವಜನಿಕ ಸ್ಥಳದಲ್ಲಿ ಗಾಡಿಯನ್ನು ನೂಕುತ್ತಾ ರಸ್ತೆಯಲ್ಲಿ ಭೇಲ್ ಪೂರಿ ಮಾರಿದರು, ಪಾನಿಪೂರಿ ಮಾರೋದು ಇವರ ಚಿಕ್ಕಂದಿನ ಕನಸಾಗಿತ್ತಂತೆ. ಇವರು ಬಸವನಗುಡಿಯ ನ್ಯಾಷನಲ್ ಹೈಸ್ಕೂಲ್‍ಗೆ ಹೋಗಿ ಕಾರ್ಯಕ್ರಮದ ಉದ್ದೇಶ ತಿಳಿಸಿದಾಗ ಅಲ್ಲಿನ ಮಕ್ಕಳು, ಶಿಕ್ಷಕರು ಸಂಪೂರ್ಣವಾಗಿ ಪ್ರೋತ್ಸಾಹ ನೀಡಿದರು. ಹಾಗೆ ಸೃಜನ್ ತಮ್ಮ ಅಭಿಮಾನಿಗಳ ಕೋರಿಕೆಯಂತೆ ಕೆಲವರ ಜೊತೆ ಸ್ಟೆಪ್ ಹಾಕಿ, ಕೆಲವರ ಜೊತೆ ಸೆಲ್ಫಿ ತೆಗೆಸಿಕೊಂಡು ಕಾರ್ಯಕ್ರಮದ ಉದ್ದೇಶವನ್ನು ಪೂರ್ಣಗೋಳಿಸಿವಲ್ಲಿ ಯಶಸ್ವಿಯಾಗಿದ್ದಾರೆ.

ಟಾಕಿಂಗ್ ಸ್ಟಾರ್ ಸೃಜನ್ ಲೋಕೇಶ್ ಭೇಲ್‍ಪೂರಿ ಮಾರಿ ತಂದ ಹಣವಾದರು ಎಷ್ಟು? ಎಂಬುದು ಇದೇ ಭಾನುವಾರ ರಾತ್ರಿ 9ಕ್ಕೆ ಪ್ರಸಾರವಾಗುವ 'ಸದಾ ನಿಮ್ಮೊಂದಿಗೆ' ಕಾರ್ಯಕ್ರಮದಲ್ಲಿ ವೀಕ್ಷಿಸಬಹುದು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ