ಆ್ಯಪ್ನಗರ

'ಮಹಾಭಾರತ' ಧಾರಾವಾಹಿ ವೀಕ್ಷಕರಿಗೊಂದು ಬೇಸರದ ಸುದ್ದಿ: ಏನದು?

ಹಿಂದಿಯಲ್ಲಿ ತಯಾರಾಗಿದ್ದ 'ಮಹಾಭಾರತ' ಧಾರಾವಾಹಿ ಕನ್ನಡಕ್ಕೆ ಡಬ್ ಆಗಿ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿತ್ತು. ಬಹಳ ಕಡಿಮೆ ಸಮಯದಲ್ಲಿ ಈ ಧಾರಾವಾಹಿ ದೊಡ್ಡ ಪ್ರೇಕ್ಷಕ ವರ್ಗವನ್ನು ಗಳಿಸಿಕೊಂಡಿತ್ತು. ಈಗ ಈ ಧಾರಾವಾಹಿ ತಂಡದಿಂದ ಬೇಸರದ ವಿಷಯ ಹೊರಬಿದ್ದಿದೆ.

THE TIMES OF INDIA NEWS SERVICE 26 Oct 2020, 1:02 pm
ಲಾಕ್‌ಡೌನ್ ಘೋಷಣೆಯಾದಮೇಲೆ ಕೆಲ ದಿನಗಳ ಕಾಲ ಧಾರಾವಾಹಿಗಳ ಫ್ರೆಶ್ ಎಪಿಸೋಡ್ ಪ್ರಸಾರವಾಯಿತು. ಆನಂತರದಲ್ಲಿ ಹಳೆಯ ಧಾರಾವಾಹಿಗಳು, ವಿಶೇಷ ಶೋಗಳನ್ನು ಮತ್ತೆ ಪ್ರಸಾರ ಮಾಡುವ ಸಂದರ್ಭ ಬಂತು. ಆಗ 'ಮಹಾಭಾರತ', 'ರಾಮಾಯಣ'ದಂತಹ ಪೌರಾಣಿಕ ಧಾರಾವಾಹಿಗಳು ಪ್ರಸಾರ ಮಾಡಲಾಯಿತು. ಚಿಕ್ಕ ಮಕ್ಕಳಿಂದ ವೃದ್ಧರವರೆಗೆ ಎಲ್ಲರೂ ಈ ಸೀರಿಯಲ್ ನೋಡಿ ಖುಷಿಪಟ್ಟರು. ಈಗ ಈ ವಿಚಾರವಾಗಿ ಪ್ರೇಕ್ಷಕರಿಗೆ ಕಹಿಸುದ್ದಿಯಿದೆ.
Vijaya Karnataka Web star suvarna kannada mahabharata serial will end soon
'ಮಹಾಭಾರತ' ಧಾರಾವಾಹಿ ವೀಕ್ಷಕರಿಗೊಂದು ಬೇಸರದ ಸುದ್ದಿ: ಏನದು?


ಹಿಂದಿಯ ಧಾರಾವಾಹಿಯಿದು
ಮೇ 11ರಿಂದ 'ಮಹಾಭಾರತ' ಧಾರಾವಾಹಿ ಪ್ರಸಾರವಾಗಿತ್ತು. 2013-14ರ ಸಮಯದಲ್ಲಿ ಹಿಂದಿಯಲ್ಲಿ ಮೂಡಿಬಂದಿದ್ದ ಆ ಧಾರಾವಾಹಿಯನ್ನು ಕನ್ನಡಕ್ಕೆ ಡಬ್ ಆಗಿ 5 ತಿಂಗಳುಗಳ ಕಾಲ ಪ್ರಸಾರವಾಗಿದೆ. ಕನ್ನಡಕ್ಕೆ ಡಬ್ ಆದ ಮೊದಲ ಧಾರಾವಾಹಿ ಇದಾಗಿದೆ. ಅನೇಕ ಜನರ ಮನಸ್ಸನ್ನು ಗೆದ್ದಿರುವ ಈ ಸೀರಿಯಲ್ ಹೆಚ್ಚಿನ ಟಿಆರ್‌ಪಿ ಗಳಿಸಿತ್ತು.

ಬಿಎಸ್ ಯಡಿಯೂರಪ್ಪ ಕೂಡ ಈ ಸೀರಿಯಲ್ ನೋಡುತ್ತಿದ್ದರು
ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪ ಅವರು ಮಹಾಭಾರತ ಧಾರಾವಾಹಿ ನೋಡುತ್ತಿರುವ ಒಂದು ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿತ್ತು. ಕಿರುತೆರೆ ವೀಕ್ಷಕರಿಂದ ಇದಕ್ಕೆ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗಿದೆ. ಯಡಿಯೂರಪ್ಪ ಕೂಡ ಈ ಧಾರಾವಾಹಿ ನೋಡುತ್ತಾರೆ ಎಂಬುದು ವಿಶೇಷ. 'ಜನರಿಗೆ ಜೀವನ ಮೌಲ್ಯ ಕಲಿಸುವಲ್ಲಿ ಇಂಥ ಧಾರಾವಾಹಿಗಳು ಮಹತ್ವದ ಪಾತ್ರ ವಹಿಸುತ್ತವೆ. ಮಹಾಭಾರತ ಸೀರಿಯಲ್ ಪ್ರಸಾರ ಶುರು ಆದಾಗಿನಿಂದ ನಾನು ಇದರ ಅಭಿಮಾನಿ ಆಗಿದ್ದೇನೆ. ಕೃಷ್ಣನ ಪಾತ್ರಕ್ಕೆ ಇಂಪ್ರೆಸ್‌ ಆಗಿದ್ದೇನೆ. ಕೃಷ್ಣನ ಮಾತುಗಳು ಎಲ್ಲರ ಜೀವನಕ್ಕೂ ಅನ್ವಯ ಆಗುತ್ತವೆ' ಎಂದು ಆಗ ಅವರು ಹೇಳಿದ್ದರು.

Also Read-'ಮಹಾಭಾರತ' ಧಾರಾವಾಹಿಯ ಸೌರಭ್ ಜೈನ್‌ರನ್ನು ಹೊಗಳಿದ ಸಿಎಂ ಬಿಎಸ್ ಯಡಿಯೂರಪ್ಪ!

ಕೃಷ್ಣನ ಪಾತ್ರದಲ್ಲಿ ಸೌರಭ್ ಜೈನ್
ಜನರ ಒತ್ತಾಯದ ಮೇರೆಗೆ ಅರ್ಧ ಗಂಟೆ ಹೆಚ್ಚಿಸಿ, ಒಟ್ಟಾರೆ ಒಂದೂವರೆ ಗಂಟೆಗಳ ಕಾಲ 'ಮಹಾಭಾರತ' ಪ್ರಸಾರ ಮಾಡಲಾಗುತ್ತಿತ್ತು. ನಟ ಸೌರಭ್ ಜೈನ್ ಅವರು ಕೃಷ್ಣ ಪಾತ್ರದಲ್ಲಿ ನಟಿಸಿದ್ದರು. ಪೂಜಾ ಶರ್ಮಾ, ಶಾಹೀರ್ ಶೇಖ್, ಅಹಂ ಶರ್ಮಾ, ಆರವಿ ಚೌಧರಿ, ಅರ್ಪಿತ್ ರ್ಯಾಂಕ್ ಮುಂತಾದವರು ಈ ಧಾರಾವಾಹಿಯ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಲಾಕ್‌ಡೌನ್ ಆದಾಗಿನಿಂದ ಹಿಂದಿಯಲ್ಲೂ ಕೂಡ ಈ ಧಾರಾವಾಹಿ ಮರುಪ್ರಸಾರವಾಗುತ್ತಿತ್ತು. ಈಗ ಈ ಧಾರಾವಾಹಿ ಮುಕ್ತಾಯವಾಗುತ್ತಿದೆಯಂತೆ ಎಂದು ಹೇಳಲಾಗಿದೆ.

Also Read-'ಕಲಾವಿದರ ಬದುಕುವ ಹಕ್ಕನ್ನು ಕಿತ್ತುಕೊಳ್ಳಲು ಯಾರಿಗೂ ಹಕ್ಕಿಲ್ಲ'- ಡಬ್ಬಿಂಗ್ ವಿರುದ್ಧ ಲಿಂಗದೇವರು ಗುಡುಗು

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ