ಆ್ಯಪ್ನಗರ

ಧಾರಾವಾಹಿ ನಿರ್ಮಾಪಕರಿಂದ ಮೋಸ? ವಿಡಿಯೋ ಮಾಡಿ ನೋವು ತೋಡಿಕೊಂಡ ಕಿರುತೆರೆ ನಟಿ!

ಲಾಕ್ ಡೌನ್ ಆರಂಭವಾದಾನಿಂದ ಹಲವರಿಗೆ ಆರ್ಥಿಕ ಸಮಸ್ಯೆ ಕಾಡುತ್ತಿದೆ. ಈಗ ನಿರ್ಮಾಪಕರೊಬ್ಬರು ಇಡೀ ಧಾರಾವಾಹಿ ತಂಡಕ್ಕೆ ಮೋಸ ಮಾಡಿದ್ದಾರಂತೆ. ಈ ಕುರಿತು ವಾಹಿನಿ ಕ್ರಮ ಕೈಗೊಳ್ಳಲಿ, ಸಹಾಯ ಮಾಡಲಿ ಎಂದು ನಟಿಯೋರ್ವರು ವಿಡಿಯೋ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಅಪ್‌ಲೋಡ್ ಮಾಡಿದ್ದಾರೆ. ಏನದು ಮೋಸ?

Vijaya Karnataka Web 9 Jun 2020, 4:49 pm
ಲಾಕ್ ಡೌನ್ ಆದಾಗಿನಿಂದ ಎಲ್ಲ ಉದ್ಯಮಗಳಿಗೂ ಹೊಡೆತ ಬಿದ್ದಿದೆ, ಆರ್ಥಿಕ ಸ್ಥಿತಿ ಕುಸಿದಿದೆ. ಸಾಕಷ್ಟು ಜನರು ಉದ್ಯೋಗ ಕಳೆದುಕೊಂಡಿದ್ದಾರೆ, ಇನ್ನೂ ಕೆಲವರಿಗೆ ಉದ್ಯೋಗ ಸಿಗುತ್ತಿಲ್ಲ. ಈ ನಡುವೆ ಮನರಂಜನಾ ಇಂಡಸ್ಟ್ರಿ ಕೂಡ ಚಿಂತೆಯಲ್ಲಿದೆ. ಹಲವು ಕಲಾವಿದರಿಗೆ ಸಂಬಳ ಸಿಕ್ಕಿಲ್ಲ. ಈ ಬಗ್ಗೆ ನಟಿಯೊಬ್ಬರು ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಮಾಡಿ ಅಪ್‌ಲೋಡ್ ಮಾಡಿದ್ದಾರೆ.
Vijaya Karnataka Web 1gh


5-6 ತಿಂಗಳಿಂದ ಸಂಬಳ ಇಲ್ಲ
ನಟಿ ವಂದನಾ ವಿಟ್ಲಾನೆ 'ಹಮಾರಿ ಬಹು ಸಿಲ್ಕ್' ಧಾರಾವಾಹಿಯ ನಿರ್ಮಾಪಕರು ಸಂಬಳ ನೀಡಿಲ್ಲವೆಂದು ವಿಡಿಯೋ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಅಪ್‌ಲೋಡ್ ಮಾಡಿದ್ದಾರೆ. ಅವರು ತಮ್ಮನ್ನು ತಾವು ಸೆಲೆಬ್ರಿಟಿ ಎಂದು ಇದುವರೆಗೂ ಪರಿಚಯಿಸಿಕೊಂಡಿರಲಿಲ್ಲ. ಕಲಾವಿದೆಯಾಗಿರಲು ಇಷ್ಟಪಟ್ಟಿದ್ದರು. 'ಸಾಥ್ ನಿಭಾನಾ ಸಾಥಿಯಾ', 'ಸಸುರಾಲ್ ಸಿಮರ್ ಕಾ', 'ಮುಸ್ಕಾನ್ & ಹಮಾರಿ ಬಹು ಸಿಲ್ಕ್' ಧಾರಾವಾಹಿಗಳಲ್ಲಿ ಇವರು ಬಣ್ಣ ಹಚ್ಚಿದ್ದರು. 2019ರ ಏಪ್ರಿಲ್‌ನಲ್ಲಿ ಈ ಸೀರಿಯಲ್ ಆರಂಭವಾಯಿತು. ಜೂನ್‌ವರೆಗೂ ಇದರ ಸಂಬಳವನ್ನೇ ನೀಡಿರಲಿಲ್ಲ. ನವೆಂಬರ್‌ನಲ್ಲಿ ಹಲವು ಕಾರಣಗಳಿಂದ ಈ ಧಾರಾವಾಹಿ ಅಂತ್ಯವಾಗಿತ್ತು. ಅಂದರೆ 5-6 ತಿಂಗಳ ಸಂಬಳವನ್ನು ಧಾರಾವಾಹಿ ತಂಡ ನೀಡಿರಲಿಲ್ಲ.

ವಾಹಿನಿ ಮತ್ತು ನಿರ್ಮಾಪಕರ ಮಧ್ಯೆ ಸಿಕ್ಕಿಹಾಕಿಕೊಂಡಿರುವ ಕಲಾವಿದರು, ತಂತ್ರಜ್ಞರು, ನಿರ್ದೇಶಕರು
ವಂದನಾ ಹೇಳುವಂತೆ ಕಲಾವಿದರು, ತಂತ್ರಜ್ಷರು, ನಿರ್ದೇಶಕರು ಯಾರಿಗೂ ಕೂಡ ಹಣ ನೀಡಲಾಗಿಲ್ಲ. ಈ ಬಗ್ಗೆ ನಿರ್ಮಾಪಕರನ್ನು ಕೇಳಿದರೆ ನಿರ್ಮಾಪಕರು ಮಾತ್ರ ವಾಹಿನಿ ವಿರುದ್ಧ ದೂರು ಹೇಳುತ್ತಾರಂತೆ. ವಾಹಿನಿಗೆ ಇದರ ಬಗ್ಗೆ ಪ್ರಶ್ನಿಸಿದರೆ, ನಿರ್ಮಾಪಕರಿಗೆ ಹಣ ನೀಡಲಾಗಿದೆ, ಒಂದು ವೇಳೆ ಅವರು ನೀಡದೆ ಹೋದಲ್ಲಿ, ನಿರ್ಮಾಪಕರ ವಿರುದ್ಧ ಫೈಟ್ ಮಾಡಿ ಎಂದು ಹೇಳಿದೆಯಂತೆ. ಈ ಟೈಮ್‌ನಲ್ಲಿ ನಾವು ಹೇಗೆ ಪ್ರತಿನಿತ್ಯ ಜೀವನ ನಡೆಸಬೇಕು ಎಂದು ವಂದನಾ ಪ್ರಶ್ನಿಸಿದ್ದಾರೆ. ನಾವು ನಿರ್ಮಾಪಕರು, ವಾಹಿನಿಯ ಮಧ್ಯೆ ಸಿಕ್ಕಿಹಾಕಿಕೊಂಡಿದ್ದೇವೆ. ತಂತ್ರಜ್ಞರು, ನಿರ್ದೇಶಕರು ಬೇರೆ ದಾರಿಯಿಲ್ಲದೆ, ಸಾಕಾಗಿ ಹೋಗಿ ದೂರ ಸರಿದಿದ್ದಾರೆ.

Also read-ಚಿತ್ರರಂಗದಿಂದ ಬೇಸತ್ತು ನಟನೆಗೆ ಗುಡ್‌ಬೈ ಹೇಳಿದ್ದ 'ಮಿಲನ' ಧಾರಾವಾಹಿ ನಟಿ ಸೌಮ್ಯಾ ಈಗ ಕಂಪನಿಯೊಂದರ ಮಾಲಕಿ!

90 ದಿನದ ಸಂಬಳ ಕೊಡಿ ಎಂದು ಬೇಡುತ್ತಿರುವ ನಟಿ ವಂದನಾ
41 ವರ್ಷದ ನಟಿ ವಂದನಾ 90 ದಿನದ ಸಂಬಳವನ್ನಾದರೂ ನೀಡಿ ಎಂದು ಹೇಳುತ್ತಿದ್ದಾರೆ. ಒಂದು ತಂಡ 12-15 ಗಂಟೆಗಳ ಕಾಲ ಧಾರಾವಾಹಿಯಲ್ಲಿ ಕೆಲಸ ಮಾಡುತ್ತದೆ. ವಾಹಿನಿಗೆ ಅದರದ್ದೇ ಆದ ನಿಯಮಗಳಿರುತ್ತವೆ, ಅದನ್ನು ನಾವು ಅರ್ಥ ಮಾಡಿಕೊಳ್ಳುತ್ತೇವೆ, ಆದರೆ ನಿರ್ಮಾಪಕರು ಮೋಸ ಮಾಡಿದಾಗ ವಾಹಿನಿ ಬಂದು ಸಹಾಯ ಮಾಡಬೇಕು ಎಂದು ವಂದನಾ ಅಭಿಪ್ರಾಯ ಪಟ್ಟಿದ್ದಾರೆ. ನಾವು ವಾಹಿನಿ ಮತ್ತು ನಿರ್ಮಾಪಕರಿಗೆ ನೀಡಿದ ಒಪ್ಪಂದದ ಮೇಲೆ ದಿನದಲ್ಲಿ 12-15 ಗಂಟೆ ಕೆಲಸ ಮಾಡಬೇಕು. ಈ ಟೈಮ್‌ನಲ್ಲಿ ನಮ್ಮ ವೈಯಕ್ತಿಕ ಜೀವನದ ಬಗ್ಗೆ ಹೇಗೆ ಗಮನಹರಿಸೋದು? ಒಂದುವೇಳೆ ಕಲಾವಿದರ ಅವರ ಶೋನಲ್ಲಿ ಇರಬೇಕು ಎಂದಾಗ ಮಾತ್ರ ಸ್ವಲ್ಪ ಸ್ವಾತಂತ್ರ್ಯ ನೀಡಲಾಗುತ್ತದೆಯಷ್ಟೇ. ಮನೆಯಿದೆ, ಮಕ್ಕಳಿದ್ದಾರೆ, ಶಾಲೆ-ಕಾಲೇಜು ಫೀಸ್ ಕಟ್ಟಬೇಕು. ಈಗಾಗಲೇ ಇಷ್ಟು ದಿನ ಇರುವ ಹಣದಲ್ಲೇ ಜೀವನ ನಡೆಸಿದ್ದೇವೆ. ಲಾಕ್ ಡೌನ್‌ನಿಂದ ಏನಾಗಿದೆ, ಏನಾಗುತ್ತಿದೆ ಎಂಬುದು ತಿಳಿದಿದೆ. ಹೀಗಾಗಿ ಆ ಧಾರಾವಾಹಿ ತಂಡದಿಂದ ಸಂಬಳ ಕೊಡಿಸಿ ಎಂದು ವಂದನಾ ಮನವಿ ಮಾಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ