ಆ್ಯಪ್ನಗರ

'ಜೊತೆ ಜೊತೆಯಲಿ' ಧಾರಾವಾಹಿಯಲ್ಲಿ ಸುಧಾರಾಣಿ- ವಿಜಯ್ ಸೂರ್ಯಗೆ ಏನು ಪಾತ್ರ?

ಅನಿರುದ್ಧ ಮತ್ತು ಮೇಘಾ ಶೆಟ್ಟಿ ಕಾಂಬಿನೇಷನ್‌ನ 'ಜೊತೆ ಜೊತೆಯಲಿ' ಧಾರಾವಾಹಿ ಕಿರುತೆರೆಯಲ್ಲಿ ಹಲವು ದಾಖಲೆಗಳನ್ನು ಮಾಡಿದೆ. ಇದೀಗ ಈ ಧಾರಾವಾಹಿಗೆ ಒಂದು ಮಹತ್ತರ ತಿರುವು ಸಿಕ್ಕಿದೆ. ಆ ಬಗ್ಗೆ ಇಲ್ಲಿದೆ ಮಾಹಿತಿ.

Vijaya Karnataka Web 29 Dec 2020, 1:56 pm
ಕನ್ನಡ ಕಿರುತೆರೆಯ ಜನಪ್ರಿಯ ಧಾರಾವಾಹಿಗಳಲ್ಲಿ 'ಜೊತೆ ಜೊತೆಯಲಿ' ಕೂಡ ಒಂದು. ಅನಿರುದ್ಧ ಮತ್ತು ಮೇಘಾ ಶೆಟ್ಟಿ ಜೊತೆಯಾಗಿ ನಟಿಸುತ್ತಿರುವ ಈ ಧಾರಾವಾಹಿ ಈಗಾಗಲೇ ಟಿಆರ್‌ಪಿ ವಿಚಾರದಲ್ಲಿ ಹಲವು ದಾಖಲೆಗಳನ್ನು ಬರೆಯುತ್ತಿದೆ. ಇದೀಗ ಈ ಸೂಪರ್ ಹಿಟ್ ಸೀರಿಯಲ್‌ಗೆ ಮತ್ತಿಬ್ಬರು ತಾರೆಯರು ಎಂಟ್ರಿ ನೀಡುತ್ತಿದ್ದಾರೆ. ಅವರೇ ನಟಿ ಸುಧಾರಾಣಿ ಮತ್ತು ವಿಜಯ್ ಸೂರ್ಯ. ಹಾಗಾದರೆ, ಇವರಿಬ್ಬರಿಗೆ ಧಾರಾವಾಹಿಯಲ್ಲಿ ಏನು ಪಾತ್ರ? ಇಲ್ಲಿದೆ ಮಾಹಿತಿ.
Vijaya Karnataka Web Sudha Rani vijay surya


ಅಮ್ಮ-ಮಗನಾಗಿ ಬಂದ ಸುಧಾರಾಣಿ-ವಿಜಯ್ ಸೂರ್ಯ
'ಜೊತೆ ಜೊತೆಯಲಿ' ಧಾರಾವಾಹಿ ಈಗ ಅತ್ಯಂತ ಕುತೂಹಲಕಾರಿ ಘಟ್ಟಕ್ಕೆ ಬಂದು ನಿಂತಿದೆ. ಈ ಧಾರಾವಾಹಿಗೆ ಖ್ಯಾತ ನಟಿ ಸುಧಾರಾಣಿ ಹಾಗೂ ನಟ ವಿಜಯ್ ಸೂರ್ಯ ಪ್ರವೇಶ ಪಡೆದಿದ್ದಾರೆ. 45 ವರ್ಷದ ಯಶಸ್ವಿ ಉದ್ಯಮಿ, ಶ್ರೀಮಂತ ಆರ್ಯವರ್ಧನ್ 20 ವರ್ಷದ ಅನು ಸಿರಿಮನೆಯನ್ನು ಪ್ರೀತಿಸುತ್ತಾನೆ. ಆರ್ಯವರ್ಧನ್ ಪ್ರವೇಶದಿಂದ ಅನು ಜೀವನ ಬದಲಾಗುತ್ತದೆ. ಆರ್ಯವರ್ಧನ್ ಆಕೆಯನ್ನು ವಿವಾಹವಾಗಲು ಬಯಸಿದ್ದರೂ ವಿಧಿಯ ಆಟ ಬೇರೆಯೇ ಇರುತ್ತದೆ. ಈಗ ಕಥೆಯಲ್ಲಿ ಮಹತ್ತರ ತಿರುವು ಸಿಗುತ್ತಿದೆ. ಅನು ಜೀವನದಲ್ಲಿ ವಿಜಯ್ ಸೂರ್ಯ ಪ್ರವೇಶ ಪಡೆದಿದ್ದಾರೆ. ಅವರು ಫಾರಿನ್ ರಿಟರ್ನ್ಡ್. ಅವರ ಅಮ್ಮ ಸುಧಾರಾಣಿ, ಅವರು ನಿವೃತ್ತ ಶಿಕ್ಷಕಿ.

ಅಮ್ಮನ ಆರೈಕೆ ಮಾಡಲು ಬಂದ ಮಗ
ಶಸ್ತ್ರಚಿಕಿತ್ಸೆ ಪಡೆದುಕೊಂಡಿರುವ ತಾಯಿಯ ಆರೈಕೆ ಮಾಡಲೆಂದು ವಿಜಯ್ ಸೂರ್ಯ ವಿದೇಶದಿಂದ ಬರುತ್ತಾರೆ. ವಿದೇಶದಿಂದ ಬಂದ ವಿಜಯ್ ಸೂರ್ಯ ಸುಬ್ಬುವಿನ ಅಂಗಡಿಗೆ ಸೀರೆ ಕೊಳ್ಳಲು ಹೋಗುತ್ತಾರೆ. ಆ ಸಂದರ್ಭದಲ್ಲಿ ಸುಬ್ಬು ಪ್ರಜ್ಞೆ ತಪ್ಪುತ್ತಾನೆ. ಸುಬ್ಬಿಗೆ ವಿಜಯ್ ಸೂರ್ಯ ನೆರವಾಗುತ್ತಾರೆ. ಅಲ್ಲಿಂದ ಅವರಿಬ್ಬರ ವಿಶೇಷ ಸ್ನೇಹ ಪ್ರಾರಂಭವಾಗುತ್ತದೆ. ಸೂರ್ಯನ ತಾಯಿ ಸುಧಾರಾಣಿ ಹೆಸರೂ ಅನುರಾಧ. ಅದೂ ಕೂಡ ವಿಶೇಷವಾದ ಬಾಂಧವ್ಯ ಬೆಳೆಸುತ್ತದೆ. ಸುಬ್ಬುವಿಗೆ ಸೂರ್ಯನನ್ನು ನೋಡಿದಾಗಲೆಲ್ಲ ತನ್ನ ಮಗಳಿಗೆ ಒಳ್ಳೆಯ ವರ ಎನ್ನಿಸಲು ಪ್ರಾರಂಭವಾಗುತ್ತದೆ. ಇನ್ನೊಂದು ಕಡೆ ಆರ್ಯವರ್ಧನ್, ಸೂರ್ಯನನ್ನು ಭೇಟಿಯಾಗುತ್ತಾನೆ. ಅವರಿಬ್ಬರ ನಡುವೆ ಸ್ನೇಹ ಬೆಳೆಯುತ್ತದೆ. ಅನು ಯಾರನ್ನು ವಿವಾಹವಾಗುತ್ತಾಳೆ ಎನ್ನುವುದೇ ಸದ್ಯದ ಸಸ್ಪೆನ್ಸ್.

ಕುಟುಂಬದೊಂದಿಗೆ ಮಾಲ್ಡೀವ್ಸ್‌ಗೆ ಪ್ರವಾಸ ಹೋದ 'ಜೊತೆ ಜೊತೆಯಲಿ' ಅನಿರುದ್ಧ

ಅನಿರುದ್ಧ ಧಾರಾವಾಹಿಯಿಂದ ಹೊರನಡೆಯುವುದಿಲ್ಲ!
ಇನ್ನು ಕೆಲ ದಿನಗಳ ಹಿಂದೆ ಒಂದು ಸುದ್ದಿ ಹಬ್ಬಿತ್ತು. ಅದೇನೆಂದರೆ, ಅನಿರುದ್ಧ ಈ ಧಾರಾವಾಹಿಯಿಂದ ಹೊರಹೋಗುತ್ತಾರೆ ಅಂತ. ಅದಕ್ಕೆ ಆರ್ಯವರ್ಧನ್‌ ಪಾತ್ರಧಾರಿ ಅನಿರುದ್ಧ ಸ್ಪಷ್ಟನೆ ನೀಡಿದ್ದರು. 'ನಾನು ಬೇರೆ ಒಂದು ಕಾರ್ಯಕ್ರಮಕ್ಕೋಸ್ಕರ ನಮ್ಮ 'ಜೊತೆ ಜೊತೆಯಲಿ' ಧಾರಾವಾಹಿಯನ್ನು ಬಿಡುತ್ತಿದ್ದೇನೆ ಅಂತ ಸುದ್ದಿಗಳು ಸೋಶಿಯಲ್ ಮೀಡಿಯಾದಲ್ಲಿ ಹರಡುತ್ತಿದೆ. ದಯವಿಟ್ಟು ಯಾರೂ ಕೂಡ ಅಂಥ ಸುದ್ದಿಗಳಿಗೆ ಕಿವಿಗೊಡಬೇಡಿ, ಗಮನಕೊಡಬೇಡಿ. ನಾನು ಯಾವುದೇ ಕಾರಣಕ್ಕೂ 'ಜೊತೆ ಜೊತೆಯಲಿ' ಧಾರಾವಾಹಿಯನ್ನು ಬಿಡುತ್ತಿಲ್ಲ. ತಮ್ಮ ಪ್ರೀತಿ, ಹಾರೈಕೆ, ಆಶೀರ್ವಾದ ನನ್ನ ಮೇಲೆ ಮತ್ತು ನಮ್ಮ ತಂಡದ ಮೇಲೆ ಯಾವ ರೀತಿಯಲ್ಲಿ ಇಷ್ಟು ದಿನ ಇತ್ತೋ, ಇನ್ನುಮುಂದೆಯೂ ಅದೇ ಥರ ಇರಲಿ ಎಂದು ತಮ್ಮಲ್ಲಿ ಕಳಕಳಿಯಿಂದ ಕೇಳಿಕೊಳ್ಳುತ್ತೇನೆ' ಎಂದು ಹೇಳಿದ್ದರು ಅವರು.

'ಜೊತೆ ಜೊತೆಯಲಿ' ಆರ್ಯವರ್ಧನ್ ಬಗ್ಗೆ ಹಬ್ಬಿದೆ ಸುಳ್ಳು ಸುದ್ದಿ! ನಟ ಅನಿರುದ್ಧ ಹೇಳಿದ್ದೇನು?

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ