ಆ್ಯಪ್ನಗರ

ಉದಯ ಸಿಂಗರ್ ಜೂನಿಯರ್ಸ್‍ನಲ್ಲಿ ಸುಮಾ ಶಾಸ್ತ್ರಿ ಭಾವುಕ

ಉದಯ ಸಿಂಗರ್ ಜೂನಿಯರ್ಸ್ ವಾರವಾರಕ್ಕೂ ಸಂಗೀತದ ಕಂಪು ನೀಡುತ್ತಿದೆ. ಅಂತೆಯೇ ಚಿತ್ರರಂಗದ ದಿಗ್ಗಜರುಗಳು ಆಗಮಿಸಿ ಮಕ್ಕಳಿಗೆ ಹಾರೈಸಿದ್ದನ್ನು ಇಲ್ಲಿ ಸ್ಮರಿಸಬಹುದು.

Vijaya Karnataka Web 12 Dec 2017, 5:36 pm
ಉದಯ ಸಿಂಗರ್ ಜೂನಿಯರ್ಸ್ ವಾರವಾರಕ್ಕೂ ಸಂಗೀತದ ಕಂಪು ನೀಡುತ್ತಿದೆ. ಅಂತೆಯೇ ಚಿತ್ರರಂಗದ ದಿಗ್ಗಜರುಗಳು ಆಗಮಿಸಿ ಮಕ್ಕಳಿಗೆ ಹಾರೈಸಿದ್ದನ್ನು ಇಲ್ಲಿ ಸ್ಮರಿಸಬಹುದು. ಈ ವಾರದ ಸಂಚಿಕೆಯಲ್ಲಿಯೂ ಕೂಡ ಆದಿನಗಳು ನಾಯಕನಟ ಆಗಮಿಸಿ ಮತ್ತಷ್ಟು ವೇದಿಕೆಗೆ ರಂಗನ್ನು ತಂದಿದ್ದಾರೆ.
Vijaya Karnataka Web suma shastry weeps at udaya singer juniors spl episode
ಉದಯ ಸಿಂಗರ್ ಜೂನಿಯರ್ಸ್‍ನಲ್ಲಿ ಸುಮಾ ಶಾಸ್ತ್ರಿ ಭಾವುಕ


ತಮ್ಮ ಅತಿರಥ ಚಿತ್ರದ ಪ್ರಮೋಶನ್‍ಗಾಗಿ ಬಂದಿದ್ದ ಚೇತನ್ ಮತ್ತು ನಿರ್ದೇಶಕ ಮಹೇಶಬಾಬು ಕಾರ್ಯಕ್ರಮದ ಬಗೆಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು. ಉದಯ ಸಿಂಗರ್ ಜೂನಿಯರ್ಸ್‍ನಲ್ಲಿ 5 ವರ್ಷದ ಮೈಸೂರಿನ ಪುಟ್ಟ ಪ್ರತಿಭೆ ಶಿಖಾ ಜೊತೆ ಒಂದಿಷ್ಟು ಸ್ಟೆಪ್ ಹಾಕಿ ಎಲ್ಲರನ್ನು ರಂಜಿಸಿದ್ದಾರೆ. ಹಾಗೆ ಶಿಖಾ ಕಾರ್ಯಕ್ರಮದ ನಿರೂಪಣೆ ಮಾಡುತ್ತ ಎಲ್ಲರನ್ನು ಆಕರ್ಷಿಸಿದ್ದಾಳೆ.

ಇದಲ್ಲದೇ ತನುಷ್ ರೆಟ್ರೋ ಸ್ಟೈಲ್‍ನಲ್ಲಿಯ ಹಾಡನ್ನು ಹಾಡಿದರ ಜೊತೆಗೆ ಆ ಹಾಡಿಗೆ ತಕ್ಕಂತೆ ಉಡುಪು ಧರಿಸಿದ್ದು ಎಲ್ಲರ ಗಮನ ಸೆಳೆಯಿತು. ಇಷ್ಟಲ್ಲದೆ ನಿರ್ಣಾಯಕರಾದ ಮನೋ ರಾಕ್ ಅ್ಯಂಡ್ ರೋಲ್ ಗೆ ಡ್ಯಾನ್ಸ್ ಮಾಡಿ ವೀಕ್ಷಕರಿಗೆ ಮನರಂಜನೆಯನ್ನು ನೀಡಿದ್ದಾರೆ.

ಈ ಮನರಂಜನೆಯ ನಡುವೆ ಸುಮಾ ಶಾಸ್ತ್ರಿ ಭಾವುಕರಾದ ಪ್ರಸಂಗ ನಡೆದಿದೆ. ಸುಮಾ ಶಾಸ್ತ್ರಿ ದಿವಂಗತ ಎಲ್.ಎನ್ ಶಾಸ್ತ್ರಿಯವರ ಪತ್ನಿ. ಉದಯ ಸಿಂಗರ್ ಜೂನಿಯರ್ಸ್‍ನಲ್ಲಿ ಮಕ್ಕಳಿಗೆ ಮೆಂಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ರಕ್ಷಿತ್ ಭಟ್ ಎಂಬ ಸ್ಪರ್ಧಿ ಲವ್ ಇನ್ ಮಂಡ್ಯಾ ಚಿತ್ರದ ಹಾಡನ್ನು ಹಾಡಿದ. ಆ ಹಾಡು ಮೂಲತಃ ದಿವಂಗತ ಎಲ್ ಎನ್ ಶಾಸ್ತ್ರಿಯವರು ಹಾಡಿದ್ದು.

ಇದೇ ಸಂದರ್ಭದಲ್ಲಿ ಸುಮಾ ಶಾಸ್ತ್ರಿಯವರು ವೇದಿಕೆಗೆ ಆಗಮಿಸಿ ತಮ್ಮ ಪತಿಯ ಬಗೆಗೆ ಹೇಳುತ್ತಾ ಈ ಹಾಡಿನ ಕೊನೆಯ ಸಾಲಾದ "ನಿಂತು ಹೋಯಿತೆ ಜೀವಗಾನ" ಕೇಳಿ ಭಾವುಕರಾದರು. ಕ್ಯಾನ್ಸರ್ ಕೊನೆಯ ಸ್ಟೇಜ್‍ನಲ್ಲಿ ಬಳಲುತ್ತಿದ್ದಾಗ ಶಾಸ್ತ್ರಿಯವರಿಗೆ ತಾವು ಈ ಹಾಡನ್ನು ಹಾಡಬೇಡಿ ಎಂದು ಎಷ್ಟೇ ಹೇಳಿದರು, 'ಇಲ್ಲಾ ಇದು ನಂದೆ ಹಾಡು' ಎಂದು ಹೇಳಿದ್ದರು ಹಾಗೆ ಅದೇ ಅವರ ಕೊನೆಯ ಹಾಡು ಆಗಿಹೋಯಿತು ಎಂದು ಈ ಸಂದರ್ಭದಲ್ಲಿ ಸುಮಾ ಶಾಸ್ತ್ರಿಯವರು ನೆನಸಿಕೊಂಡಾಗ ಅಲ್ಲಿದ್ದ ಎಲ್ಲರೂ ಭಾವುಕರಾಗಿ ಕಣ್ಣು ಒದ್ದೆಯಾಯಿತು. ಈ ವಿಶೇಷ ಸಂಚಿಕೆ ಇದೇ ಶನಿವಾರ (ಡಿ.16) ಮತ್ತು ಭಾನುವಾರ (ಡಿ.17) ರಾತ್ರಿ 9ಕ್ಕೆ ಉದಯ ಟಿವಿಯಲ್ಲಿ ಪ್ರಸಾರವಾಗುತ್ತದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ