ಆ್ಯಪ್ನಗರ

ರಜನೀಕಾಂತ್‌ಗಾಗಿ 'ವೀಕೆಂಡ್' ಕೆಂಪು ಕುರ್ಚಿಯೇ ಚೆನ್ನೈಗೆ!

ವೀಕೆಂಡ್ ವಿತ್ ರಮೇಶ್ ಈ ಬಾರಿಯ ಶೋ ವಿಶೇಷವೆಂಬಂತೆ, ನಟ ರಜನಿಕಾಂತ್ ಅವರು ಈ ಬಾರಿಯ ಶೋದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಹೌದು, ಈ ವಿಷಯವನ್ನು ಸ್ವತಃ ನಟ, ನಿರೂಪಕ ರಮೇಶ್ ಅರವಿಂದ್ ಅವರು ಖಚಿತ ಪಡಿಸಿದ್ದಾರೆ.

Vijaya Karnataka Web 18 Apr 2019, 4:45 pm
ಸದ್ಯದಲ್ಲೇ 'ವೀಕೆಂಡ್ ವಿತ್ ರಮೇಶ್' ಶೋದ 'ನಾಲ್ಕನೇ ಆವೃತ್ತಿ ಶುರುವಾಗಲಿದೆ. ಕಳೆದ ಸೀಸನ್‌ನಲ್ಲಿ ಈ ಶೋ ರಾತ್ರಿ 9 ಗಂಟೆಯಿಂದ 10ಗೆ ಪ್ರಸಾರವಾಗುತ್ತಿತ್ತು. ಆದರೆ, ಈ 4ನೇ ಸೀಸನ್ ಟೈಮಿಂಗ್ಸ್‌ ಬದಲಾಗಿದೆ ಎನ್ನಲಾಗಿದೆ. ಮುಂಬರುವ ವೀಕೆಂಡ್ ವಿತ್ ರಮೇಶ್ 4ನೇ ಆವೃತ್ತಿಯು ವಾರದ ಕೊನೆಯಲ್ಲಿ ಶನಿವಾರ ಮತ್ತು ಭಾನುವಾರ ರಾತ್ರಿ 9-30ರಿಂದ 10-30ರವೆರೆಗೆ ಪ್ರಸಾರವಾಗಲಿದೆ ಎನ್ನಲಾಗಿದೆ.
Vijaya Karnataka Web rajani1804


ವೀಕೆಂಡ್ ವಿತ್ ರಮೇಶ್ ಈ ಬಾರಿಯ ಶೋ ವಿಶೇಷವೆಂಬಂತೆ, ನಟ ರಜನಿಕಾಂತ್ ಅವರು ಈ ಬಾರಿಯ ಶೋದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಹೌದು, ಈ ವಿಷಯವನ್ನು ಸ್ವತಃ ನಟ, ನಿರೂಪಕ ರಮೇಶ್ ಅರವಿಂದ್ ಅವರು ಖಚಿತ ಪಡಿಸಿದ್ದಾರೆ. ಆದರೆ, ಯಾವಾಗ, ಎಷ್ಟನೇ ಎಪಿಸೋಡ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎಂಬ ಬಗ್ಗೆ ಸದ್ಯಕ್ಕೆ ಮಾಹಿತಿ ಕೊಡಲು ಸಾಧ್ಯವಿಲ್ಲ ಎನ್ನಲಾಗಿದೆ. ಕಾರಣ, ರಜನಿಕಾಂತ್ ಸಂಚಿಕೆಯಲ್ಲಿ ನಟ ರಜನಿಕಾಂತ್ ರ ಸಂಪೂರ್ಣ ಫ್ಯಾಮಿಲಿ ಕಾಣಿಸಿಕೊಳ್ಳಲಿದೆಯಂತೆ.

ಈ ಬಗ್ಗೆ ಮಾತನಾಡಿರುವ ನಿರೂಪಕ ರಮೇಶ್ ಅರವಿಂದ್ "ನಾವು ರಜನಿಕಾಂತ್ ಸಂಪೂರ್ಣ ಫ್ಯಾಮಿಲಿಯನ್ನು ಶೂಟ್ ಮಾಡಲಿದ್ದೇವೆ. ಈ ಕಾರಣಕ್ಕೆ ಅವರು ಇರುವಲ್ಲಿಗೇ ಹೋಗಿ ಶೂಟ್ ಮಾಡಿಕೊಂಡು ಬರಲು ಕೂಡ ಸಿದ್ಧರಾಗಿದ್ದೇವೆ. ಎಲ್ಲರೂ ಒಗ್ಗೂಡಿ ಬರಲು ಸಮಯ ಕೂಡಿ ಬರಬೇಕು ಅಷ್ಟೇ" ಎಂದಿದ್ದಾರೆ.

ಉಳಿದಂತೆ ಈ ಸಲ ಯಾರೆಲ್ಲಾ ಅತಿಥಿಯಾಗಿ ಬರ್ತಾರೆ ಎಂಬುದು ಭಾರಿ ಕುತೂಹಲ ಮೂಡಿಸಿರುವ ಸಂಗತಿ. ಹೊಸ ಆವೃತ್ತಿಯ ಮೊದಲ ಅತಿಥಿಯಾಗಿ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಸಾಧಕರ ಸೀಟಿನಲ್ಲಿ ಕುಳಿತುಕೊಳ್ಳಲಿರುವುದು ಈಗಾಗಲೇ ಅಧಿಕೃತವಾಗಿದೆ. ಇನ್ನುಳಿದವರಲ್ಲಿ ಕೆಲವರ ಹೆಸರು ಈಗಾಗಲೇ ಹೊರಬಂದಿದೆ.

ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಬಳಿಕ, ಹಿರಿಯ ನಟಿ ಪ್ರೇಮಾ ಮತ್ತು ನಟ ರಾಘವೇಂದ್ರ ರಾಜ್ ಕುಮಾರ್ ಎರಡನೇ ವಾರದಲ್ಲಿ ವೀಕೆಂಡ್ ವಿತ್ ರಮೇಶ್ ಶೋಗೆ ಬರುವುದು ಖಚಿತವಾಗಿದೆ. ಸದ್ಯಕ್ಕೆ ಈ ಮೂವರು ಹೆಸರು ಅಂತಿಮವಾಗಿದ್ದು, ಇನ್ನು ಕೆಲವು ಗಣ್ಯರನ್ನ ಶೋಗೆ ಕರೆದುಕೊಂಡು ಬರಲು ಪ್ರಯತ್ನ ನಡೆಸಲಾಗುತ್ತಿದೆ. ಇನ್ನುಳಿದಂತೆ, ಸುಧಾ ಮೂರ್ತಿ, ಕ್ರಿಕೆಟಿಗ ರಾಹುಲ್ ದ್ರಾವಿಡ್, ಅನಿಲ್ ಕುಂಬ್ಳೆ, ಹಂಸಲೇಖ, ಸಾಲು ಮರದ ತಿಮ್ಮಕ್ಕ, ಡಿಸಿಪಿ ಅಣ್ಣಾಮಲೈ ಮುಂತಾದವರ ಹೆಸರು ಕೇಳಿ ಬರುತ್ತಿದೆ.

ಒಟ್ಟಿನಲ್ಲಿ, ಈ ಬಾರಿಯ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಹಲವು ಸಾಧಕರು ಎಂದಿನಂತೆ ಆ ಸೀಟಿನಲ್ಲಿ ಕುಳಿತು ತಮ್ಮ ಜೀವನಗಾಥೆಗಳನ್ನು ಹೇಳಲಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ