ಆ್ಯಪ್ನಗರ

ವೀಕೆಂಡ್‌ನಲ್ಲಿ ಕಣ್ಣೀರಿಟ್ಟ ಅರ್ಜುನ್‌ ಜನ್ಯ

ಸಾಧಕರ ಸಾಧನೆಯನ್ನು ಸೆಲೆಬ್ರೇಟ್‌ ಮಾಡುವ 'ವೀಕೆಂಡ್‌ ವಿತ್‌ ರಮೇಶ್‌' ಶೋನಲ್ಲಿ ಈ ವಾರದ ಅತಿಥಿಯಾಗಿ ಅರ್ಜುನ್‌ ಜನ್ಯ ಕಾಣಿಸಿಕೊಳ್ಳಲಿದ್ದಾರೆ.

ವಿಕ ಸುದ್ದಿಲೋಕ 6 Apr 2017, 12:39 pm
ಸದ್ಯಕ್ಕೆ ಸ್ಯಾಂಡಲ್‌ವುಡ್‌ನಲ್ಲಿ ಟಾಕ್‌ ಕ್ರಿಯೇಟ್‌ ಮಾಡಿರುವ ಸಂಗೀತ ನಿರ್ದೇಶಕರಲ್ಲಿ ಅರ್ಜುನ್‌ ಜನ್ಯ ಸಹ ಒಬ್ಬರು. ಮೂರ್ತಿ ಚಿಕ್ಕದಾದರೂ ಸ್ಯಾಂಡಲ್‌ವುಡ್‌ ಸಂಗೀತ ಕ್ಷೇತ್ರದಲ್ಲಿ ಇವರ ಸಾಧನೆ ಮಾತ್ರ ದೊಡ್ಡದು.
Vijaya Karnataka Web this music director breakdown in weekend with ramesh episode
ವೀಕೆಂಡ್‌ನಲ್ಲಿ ಕಣ್ಣೀರಿಟ್ಟ ಅರ್ಜುನ್‌ ಜನ್ಯ


ಸಾಧಕರ ಸಾಧನೆಯನ್ನು ಸೆಲೆಬ್ರೇಟ್‌ ಮಾಡುವ 'ವೀಕೆಂಡ್‌ ವಿತ್‌ ರಮೇಶ್‌' ಶೋನಲ್ಲಿ ಈ ವಾರದ ಅತಿಥಿಯಾಗಿ ಅರ್ಜುನ್‌ ಜನ್ಯ ಕಾಣಿಸಿಕೊಳ್ಳಲಿದ್ದಾರೆ. ಸಾಧಕರ ಸೀಟ್‌ನಲ್ಲಿ ಕುಳಿತು ತಮ್ಮ ಜೀವನದ ನೋವು-ನಲಿವುಗಳನ್ನು ಹಂಚಿಕೊಂಡಿದ್ದಾರೆ. ಹಳೆಯ ನೆನಪುಗಳನ್ನು ಮೆಲಕು ಹಾಕಿ ಕಣ್ಣೀರಿಟ್ಟಿದ್ದಾರೆ ಅರ್ಜುನ್‌.


ಜೀ ಕನ್ನಡ ವಾಹಿನಿಯ ಫೇಸ್‌ಬುಕ್‌ ಪೇಜ್‌ನಲ್ಲಿ ಅರ್ಜುನ್‌ ಜನ್ಯ ಕುರಿತಾದ ಕೆಲ ವೀಡಿಯೋ ತುಣುಕುಗಳು ವೈರಲ್‌ ಆಗಿವೆ. ಅರ್ಜುನ್‌ ಜನ್ಯ ಭಾಗವಹಿಸಲಿರುವ ಎಪಿಸೋಡ್‌ ಕುರಿತಾಗಿ ಸಾಕಷ್ಟು ಕುತೂಹಲ ಮೂಡಿಸಿವೆ ಈ ವೀಡಿಯೋ ತುಣುಕುಗಳು.


ಜೀ ಕನ್ನಡ ವಾಹಿನ, ಅರ್ಜುನ್‌ ಜನ್ಯಗೆ ಸಂಬಂಧಿಸಿ ಬಿಡುಗಡೆಗೊಳಿಸಿದ ಮೊದಲ ವೀಡಿಯೋ ತುಣುಕಲ್ಲಿ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಮತ್ತು ಕಿಚ್ಚ ಸುದೀಪ್‌ ಕಾಣಿಸಿಕೊಂಡಿದ್ದಾರೆ. ಅರ್ಜುನ್‌ ಜನ್ಯ ಅವರ ಸಂಗೀತ ಸಂಯೋಜನೆಯನ್ನು ಮನಸಾರೆ ಮೆಚ್ಚಿ, ಹೊಗಳಿದ್ದಾರೆ ದರ್ಶನ್‌ ಮತ್ತು ಸುದೀಪ್‌. ಮತ್ತೊಂದು ವೀಡಿಯೋ ತುಣುಕಿನಲ್ಲಿ ಅರ್ಜುನ್‌ ಜನ್ಯ ತಮ್ಮ ತಂದೆಯನ್ನು ನೆನೆದು ಭಾವುಕರಾಗಿದ್ದಾರೆ. ಬಾಲ್ಯದಲ್ಲಿ ಘಟಿಸಿದ ಹೃದಯ ವಿದ್ರಾವಕ ಕ್ಷಣವನ್ನು ಹಂಚಿಕೊಳ್ಳುತ್ತ ಕಣ್ಣೀರಿಟಿದ್ದಾರೆ ಅರ್ಜುನ್‌. ಶರವೇಗದಿಂದ ಮುನ್ನುಗ್ಗುತ್ತಿರುವ ಸಂಗೀತ ನಿರ್ದೇಶಕನ ಜೀವನದ ಕಥೆಗಳು ಈ ವೀಕೆಂಡ್‌ ಅಂದರೆ ಶನಿವಾರ-ಭಾನುವಾರ ರಾತ್ರಿ 9 ಗಂಟೆಗೆ ಪ್ರೇಕ್ಷಕರ ಎದುರಿಗೆ ಬರಲಿವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ