ಆ್ಯಪ್ನಗರ

ಇಂದು, ನಾಳೆ ಜೀ ಕನ್ನಡ ವಾಹಿನಿ ಕುಟುಂಬ ಅವಾರ್ಡ್‌

ದೀಪಾವಳಿ ಹಬ್ಬಕ್ಕೆ ಮತ್ತಷ್ಟು ಮೆರಗು ತುಂಬಲು ರೆಡಿಯಾಗಿದೆ ಜೀ ಕನ್ನಡ ವಾಹಿನಿ ಸಾಲು ದೀಪಗಳ ಹಬ್ಬಕ್ಕಾಗಿ ವಾಹಿನಿಯು ಕುಟುಂಬ ಅವಾರ್ಡ್‌ ಜತೆ ನಿಮ್ಮ ಮನೆಗೆ ಬರಲಿದೆ...

Vijaya Karnataka 3 Nov 2018, 11:49 am
ಶರಣು ಹುಲ್ಲೂರು
Vijaya Karnataka Web ZEE


ಪ್ರತಿ ಹಬ್ಬದಂತೆಯೇ ದೀಪಾವಳಿ ಹಬ್ಬಕ್ಕೂ ಜೀ ಕನ್ನಡ ವಾಹಿನಿಯ ವಿಶೇಷ ಕಾರ್ಯಕ್ರಮಗಳೊಂದಿಗೆ ಪ್ರೇಕ್ಷಕರನ್ನು ರಂಜಿಸಲಿದೆ. ಬೆಳಕಿನ ಹಬ್ಬ ಆಚರಿಸಲು ಜೀ ಕನ್ನಡ ವಾಹಿಯ 'ಕುಟುಂಬ ಅವಾರ್ಡ್ಸ್ 2018' ಮೂಲಕ ನೋಡುಗರ ಮನೆಬಾಗಿಲಿಗೆ ಹೊರಟಿದೆ ಎಂದು ವಾಹಿನಿಯ ಮುಖ್ಯಸ್ಥ ರಾಘವೇಂದ್ರ ಹುಣಸೂರು ತಿಳಿಸಿದ್ದಾರೆ.

ಜೀ ಕುಟುಂಬದ ದೊಡ್ಡ ಹಬ್ಬ 'ಜೀ ಕುಟುಂಬ ಅವಾಡ್ಸ್‌ ರ್‍ 2018' ಸಿದ್ಧವಾಗಿದೆ. ವಾಹಿನಿಯ ಕುಟುಂಬದ ಸದಸ್ಯರಾದ ಧಾರಾವಾಹಿ, ರಿಯಾಲಿಟಿ ಶೋಗಳ ಕಲಾವಿದರು ಮತ್ತು ತಂತ್ರಜ್ಞರು, ರಿಯಾಲಿಟಿ ಶೋಗಳು ತೀರ್ಪುಗಾರರು ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡು ಹಬ್ಬಕ್ಕೆ ಮತ್ತಷ್ಟು ಮೆರಗು ತುಂಬಿದ್ದಾರೆ. ಹತ್ತಾರು ಕಾರ್ಯಕ್ರಮಗಳು, ನೂರಾರು ಕಲಾವಿದರು, ಅವರ ಕುಟುಂಬದ ಸದಸ್ಯರು, ಕೇವಲ ಕಿರುತೆರೆಯ ಕಲಾವಿದರು ಮಾತ್ರವಲ್ಲ, ಸ್ಯಾಂಡಲ್‌ವುಡ್‌ ಸಿಲೆಬ್ರಿಟಿಗಳು ಕೂಡ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ.

ಪ್ರಶಸ್ತಿ ವಿಜೇತರು ಮತ್ತು ಅವರಿಗೆ ಗೌರವಿಸಲು ಆಗಮಿಸಿದ್ದ ಸ್ಯಾಂಡಲ್‌ವುಡ್‌ ಸ್ಟಾರ್‌ಗಳ ಮಾತುಕತೆ, ವರ್ಷಪೂರ್ತಿ ಸಾಧನೆ ಮಾಡಿದ ಸಾಧಕರ ಶ್ರಮ, ಅವರನ್ನು ಸನ್ಮಾನಿಸಿದ ಸಂತೃಪ್ತಿಮತ್ತು ತಮ್ಮ ಶ್ರಮಕ್ಕೆ ಸಂದ ಗೌರವಕ್ಕಾಗಿ ಸಾಧಕರ ಭಾವುಕ ನುಡಿಗಳು ಖುಷಿ ಕಂಬನಿಯಾಗಿ ಇಳಿದಿವೆ. ಈ ಭಾವುಕ ಕ್ಷಣವೇ ಜೀ ಕುಟುಂಬ ಅವಾರ್ಡ್ಸ್ ಸಿಕ್ಕ ದೊಡ್ಡ ಜಯವಂತೆ.

22 ಬೆಸ್ಟ್‌ ಅವಾರ್ಡ್ಸ್, 7 ಫೇವರೆಟ್‌ ಕ್ಯಾಟಗರಿ ಅವಾರ್ಡ್ಸ್ ಜತೆಗೆ ಸ್ಪೆಷಲ್‌ ಕ್ಯಾಟಗರಿಯಲ್ಲಿ ಜೀ ಕನ್ನಡ ಹಿರಿಯ ಸದಸ್ಯರಿಗೂ ಪ್ರಶಸ್ತಿ ನೀಡಲಾಗಿದೆ. ಇವುಗಳ ಜತೆಗೆ ಪ್ರಾಮಿಸಿಂಗ್‌ ನ್ಯೂ ಫೇಸ್‌ ಆಫ್‌ ಮೇಲ್‌ ಮತ್ತು ಫಿಮೇಲ್‌, ಸ್ಟೈಲ್‌ ಐಕಾನ್‌ (ಮೇಲ್‌ ಮತ್ತು ಫಿಮೇಲ್‌) ಪ್ರೈಡ್‌ ಆಫ್‌ ಜೀ ಕನ್ನಡ ಹೀಗೆ ನಲವತ್ತು ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗಿದೆ. ವರ್ಣರಂಜಿತ ಈ ವೇದಿಕೆಯಲ್ಲಿ ತಾರೆಯರಾದ ರಾಗಿಣಿ ದ್ವಿವೇದಿ, ಶಾನ್ವಿ, ಅಜಯ್‌ ರಾವ್‌ ಮತ್ತು ಜೀ ಕನ್ನಡ ಧಾರಾವಾಹಿ ಮತ್ತು ರಿಯಾಲಿಟಿ ಶೋ ಪ್ರತಿಭೆಗಳು ಸೂಪರ್‌ ಹಿಟ್‌ ಹಾಡುಗಳಿಗೆ ಹೆಜ್ಜೆ ಹಾಕಿದ್ದಾರೆ. ಈ ಎಲ್ಲ ಕಾರ್ಯಕ್ರಮಗಳು ನವೆಂಬರ್‌ 3 ಮತ್ತು 4 ರಂದು (ಶನಿ-ಭಾನು) ಸಂಜೆ 7.30ಕ್ಕೆ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗಲಿವೆ.

ಅಚ್ಚರಿ ನೀಡಲು ಬರಲಿದ್ದಾರೆ ಯಶ್‌


ರಾಕಿಂಗ್‌ ಸ್ಟಾರ್‌ ಯಶ್‌ 'ಜೀ ಕನ್ನಡ ಕುಟುಂಬ ಅವಾರ್ಡ್ಸ್ 2018'ರ ವೇದಿಕೆಯಲ್ಲಿ ವಾಹಿನಿಯ ನೋಡುಗರಿಗೆ ಸರ್‌ಪ್ರೈಸ್‌ ನೀಡಲಿದ್ದಾರೆ. ಅದು ಯಾವ ರೀತಿಯ ಸರ್‌ಪ್ರೈಸ್‌ ಎನ್ನುವುದನ್ನು ಕಾದು ನೋಡಿ ಎಂದಿದ್ದಾರೆ ಜೀ ಕನ್ನಡ ವಾಹಿನಿಯ ಮುಖ್ಯಸ್ಥ ರಾಘವೇಂದ್ರ ಹುಣಸೂರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ