ಆ್ಯಪ್ನಗರ

ಬೆದರಿಕೆಗಳಿಗೆ ತಕ್ಕ ಉತ್ತರ ನೀಡಿದ ಸುಹಾನಾ

ಸುಹಾನಾ ಸೈಯದ್‌ ಬೆದರಿಕೆಗಳಿಗೆ ಹೆದರದೇ ಹಾಡಿನ ಮೂಲಕವೇ ಉತ್ತರ ನೀಡಿದ್ದಾರೆ.

ಟೈಮ್ಸ್ ಆಫ್ ಇಂಡಿಯಾ 13 Mar 2017, 12:56 pm
ಖಾಸಗಿ ವಾಹಿನಿಯೊಂದರ ಸಂಗೀತ ಕಾರ್ಯಕ್ರಮದಲ್ಲಿ 'ಶ್ರೀಕಾರನೇ...ಶ್ರೀನಿವಾಸನೇ' ಎಂಬ ಹಿಂದೂ ಭಕ್ತಿಗೀತೆ ಹಾಡುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಕೆಲವರ ಕೆಂಗಣ್ಣಿಗೆ ಗುರಿಯಾಗಿದ್ದ ಸುಹಾನಾ ಸೈಯದ್‌, ಬೆದರಿಕೆಗಳಿಗೆ ಹೆದರದೇ ಹಾಡಿನ ಮೂಲಕವೇ ಉತ್ತರ ನೀಡಿದ್ದಾರೆ.
Vijaya Karnataka Web treat me like a human being says suhana sayed
ಬೆದರಿಕೆಗಳಿಗೆ ತಕ್ಕ ಉತ್ತರ ನೀಡಿದ ಸುಹಾನಾ


ಕಳೆದ ಎಪಿಸೋಡ್‌ನಲ್ಲಿ ಪ್ರಸಾರವಾದ ಸಂಗೀತ ಕಾರ್ಯಕ್ರಮದಲ್ಲಿ 'ಮುಕುಂದ ಮುರಾರಿ' ಚಿತ್ರದ ಭಕ್ತಿಗೀತೆಯೊಂದನ್ನು ಹಾಡುವ ಮೂಲಕ ಕಿಡಿಗೇಡಿಗಳ ಬೆದರಿಕೆಗೆ ಸರಿಯಾದ ಉತ್ತರವನ್ನೇ ನೀಡಿದರು. ಸುಹಾನಾ ಅವರ ಹಾಡಿಗೆ ಕಾರ್ಯಕ್ರಮದ ನಿರ್ಣಾಯಕರಾಗಿರುವ ಅರ್ಜುನ್‌ ಜನ್ಯ, ರಾಜೇಶ್‌ ಕೃಷ್ಣನ್‌ ಮತ್ತು ವಿಜಯ್‌ ಪ್ರಕಾಶ್‌ ಅಪಾರ ಮೆಚ್ಚುಗೆ ವ್ಯಕ್ತಪಡಿಸಿದರು. ಅದೇ ರೀತಿ ವೀಕ್ಷಕರ ಮನಸ್ಸನ್ನು ಗೆದ್ದರು ಸುಹಾನಾ.

ಹಾಡಿನ ನಂತರ ವೇದಿಕೆಯ ಮೇಲೆ ತಮ್ಮ ಅಭಿಪ್ರಯಾಗಳನ್ನು ಹಂಚಿಕೊಂಡ ಸುಹಾನಾ, 'ನನ್ನ ಹಾಡನ್ನು ನಿಲ್ಲಿಸಲು ಯಾರಿಗೂ ಸಾಧ್ಯವಿಲ್ಲ. ನಿಮ್ಮ ಆಲೋಚನೆಗಳಿಗೆ ಸುಹಾನಾಳ ಬಣ್ಣ ಹಚ್ಚದಿರಿ. ಸಂಗೀತಕ್ಕೆ ಯಾವ ಧರ್ಮದ ನಿರ್ಬಂಧವೂ ಇಲ್ಲ' ಎಂದು ಹೇಳಿದರು. ಅಷ್ಟೇ ಅಲ್ಲದೆ ತನ್ನನ್ನು ಒಬ್ಬ ಮನುಷ್ಯಳಂತೆ ನೋಡಿ,' ಎಂದು ಎಲ್ಲರಿಗೂ ಮನವಿ ಮಾಡಿಕೊಂಡರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ