1997ರಲ್ಲಿ ಬಿಡುಗಡೆಯಾದ ಕನ್ನಡ ಸಿನಿಮಾ ‘ನಾಗಮಂಡಲ’. ಟಿ ಎಸ್ ನಾಗಾಭರಣ ನಿರ್ದೇಶನದ ‘ನಾಗಮಂಡಲ’ ಸಿನಿಮಾದಲ್ಲಿ ಪ್ರಕಾಶ್ ರಾಜ್, ವಿಜಯಲಕ್ಷ್ಮೀ, ಮಂಡ್ಯ ರಮೇಶ್, ಬಿ ಜಯಶ್ರೀ ಮುಂತಾದವರು ಅಭಿನಯಿಸಿದ್ದರು. ಈ ಸಿನಿಮಾದಲ್ಲಿ ಕಥಾನಾಯಕಿ ರಾಣಿ ಹುತ್ತಕ್ಕೆ ಕೈಹಾಕಿ ಹಾವು ಹಿಡಿದು ನಿಲ್ಲುವ ದೃಶ್ಯ ಹೈಲೈಟ್ ಆಗಿತ್ತು. ವಿಜಯಲಕ್ಷ್ಮೀ ಅವರ ಅಭಿನಯ ವ್ಯಾಪಕ ಮೆಚ್ಚುಗೆಗೂ ಪಾತ್ರವಾಗಿತ್ತು. ಈಗ ‘ನಾಗಮಂಡಲ’ ಸಿನಿಮಾ ಹಾಗೂ ಹಾವಿನ ದೃಶ್ಯದ ಬಗ್ಗೆ ನಾವು ಪೀಠಿಕೆ ಹಾಕುತ್ತಿರುವುದಕ್ಕೆ ಕಾರಣ ‘ತ್ರಿಪುರ ಸುಂದರಿ’ ಧಾರಾವಾಹಿ.! ‘ತ್ರಿಪುರ ಸುಂದರಿ’ ಧಾರಾವಾಹಿಯಲ್ಲೂ ಇಂಥದ್ದೇ ಸನ್ನಿವೇಶ ಸೃಷ್ಟಿಯಾಗಿದೆ. ‘ನಾಗಮಂಡಲ’ ಸಿನಿಮಾದ ಹಾವಿನ ದೃಶ್ಯವನ್ನ ‘ತ್ರಿಪುರ ಸುಂದರಿ’ ಸೀರಿಯಲ್ನಲ್ಲಿ ಮರುಸೃಷ್ಟಿಸಲಾಗಿದೆ.
ಇತ್ತ ದೇವಿಯ ಒಡವೆಗಳು ಇರುವ ಬ್ಯಾಗ್ ಹೊತ್ತು ತರುತ್ತಿರುವ ಯುಕ್ತಿಗೆ ಪದೇ ಪದೇ ಹಾವು ಕಾಣಿಸಿಕೊಳ್ಳುತ್ತಿದೆ. ಆಮ್ರಪಾಲಿಗೆ ಕೆಡುಕು ಮಾಡಲು ಹೋದ ಈಶ್ವರಿ ಮತ್ತು ಪುತ್ರಿ ಯುಕ್ತಿಗೆ ನಾಗರಾಜನೇ ತಕ್ಕ ಪಾಠ ಕಲಿಸುತ್ತಾನಾ ಎಂಬುದು ಕಾದುನೋಡಬೇಕಿದೆ. ಆದರೆ, ಸದ್ಯಕ್ಕೆ ‘ತ್ರಿಪುರ ಸುಂದರಿ’ ಧಾರಾವಾಹಿಯ ಸಂಚಿಕೆ ನೋಡಿದ ಸಿನಿಪ್ರಿಯರಿಗೆ ‘ನಾಗಮಂಡಲ’ ಸಿನಿಮಾವಂತೂ ಥಟ್ ಅಂತ ನೆನಪಾಗಿದೆ.
ಪ್ರದ್ಯುಮ್ನನೇ ರಾಜಕುಮಾರ ಎಂದು ಆಮ್ರಪಾಲಿಗೆ ತಿಳಿದಿಲ್ಲ. ಆಮ್ರಪಾಲಿ ಹುಡುಕುತ್ತಿರುವ ಗಂಧರ್ವ ಲೋಕದ ರಾಜಕುಮಾರ ಪ್ರದ್ಯುಮ್ನನೇ ಅಂತ ದೇವಯಾನಿಗೂ ಗೊತ್ತಿಲ್ಲ. ಇದನ್ನೆಲ್ಲಾ ತಿಳಿದಿರುವ ಈಶ್ವರಿಯ ಆಟವೇ ಬೇರೆ. ಪ್ರದ್ಯಮ್ನನಿಗೆ ತನ್ನ ಮಗಳು ಯುಕ್ತಿಯನ್ನ ಕೊಟ್ಟು ಮದುವೆ ಮಾಡುವ ತವಕ. ಅದಕ್ಕೆ ಅಡ್ಡಲಾಗಿರುವ ಆಮ್ರಪಾಲಿ ವಿರುದ್ಧ ಈಶ್ವರಿ ಸಂಚು ರೂಪಿಸಿದ್ದಾಳೆ. ದೇವಿಯ ಒಡವೆಗಳ ಕಳ್ಳತನದ ಆರೋಪ ಹೊರಿಸಿದ್ದಾಳೆ. ನಾಗರಾಜನ ಕೃಪೆಯಿಂದ ಆಮ್ರಪಾಲಿ ನಿರ್ದೋಷಿಯಾಗಿದ್ದಾಳೆ. ಆದರೆ, ತಾನೇ ಬೀಸಿದ ಬಲೆಗೆ ಈಗ ಈಶ್ವರಿಯೇ ಸಿಲುಕುತ್ತಾಳಾ?
ಆಮ್ರಪಾಲಿ ಮೇಲೆ ಅಪವಾದ
ದೇವಿಯ ಒಡವೆಗಳನ್ನು ಕದ್ದ ಆರೋಪ ಆಮ್ರಪಾಲಿ ಮೇಲೆ ಬಂದಿದೆ. ಒಡವೆಗಳನ್ನ ಆಮ್ರಪಾಲಿ ಕದ್ದಿಲ್ಲ. ಇದೆಲ್ಲಾ ಈಶ್ವರಿಯ ಕುತಂತ್ರ. ಆದರೆ, ಅರಸು ಕುಟುಂಬಸ್ಥರಿಗೆ ಈಶ್ವರಿಯ ಕುತಂತ್ರದ ಬಗ್ಗೆ ಗೊತ್ತಿಲ್ಲ. ದೇವಿಯ ಒಡವೆ ಕಳ್ಳತನವಾಗಿರೋದ್ರಿಂದ ಪಂಚಾಯತಿ ನಡೆಯುತ್ತಿದೆ. ಆಮ್ರಪಾಲಿ ಕಳ್ಳಿ ಅಲ್ಲ ಎಂಬು ಸಾಬೀತಾಗಬೇಕಾದರೆ ಹುತ್ತಕ್ಕೆ ಕೈಹಾಕಿ ಹಾವನ್ನು ಹಿಡಿದು ನಿಲ್ಲಬೇಕು. ಆಮ್ರಪಾಲಿ ಕದ್ದಿಲ್ಲ ಎಂದಾದರೆ ಹಾವು ಕಚ್ಚುವುದಿಲ್ಲ. ಈ ಆಚರಣೆಗೆ ಒಪ್ಪಿಕೊಳ್ಳುವ ಆಮ್ರಪಾಲಿ ನಾಗರಾಜನಿಗೆ ಭಕ್ತಿಯಿಂದ ನಮಿಸಿ, ಹುತ್ತಕ್ಕೆ ಕೈಹಾಕಿ, ಹಾವನ್ನು ಹಿಡಿದು ನಿಲ್ಲುತ್ತಾಳೆ. ಆಮ್ರಪಾಲಿಯ ಕೈಯಲ್ಲಿ ಹಾವನ್ನ ಕಂಡು ನೆರೆದಿದ್ದ ಜನರಿಗೆಲ್ಲಾ ಆಶ್ಚರ್ಯವಾಗುತ್ತದೆ.ಇತ್ತ ದೇವಿಯ ಒಡವೆಗಳು ಇರುವ ಬ್ಯಾಗ್ ಹೊತ್ತು ತರುತ್ತಿರುವ ಯುಕ್ತಿಗೆ ಪದೇ ಪದೇ ಹಾವು ಕಾಣಿಸಿಕೊಳ್ಳುತ್ತಿದೆ. ಆಮ್ರಪಾಲಿಗೆ ಕೆಡುಕು ಮಾಡಲು ಹೋದ ಈಶ್ವರಿ ಮತ್ತು ಪುತ್ರಿ ಯುಕ್ತಿಗೆ ನಾಗರಾಜನೇ ತಕ್ಕ ಪಾಠ ಕಲಿಸುತ್ತಾನಾ ಎಂಬುದು ಕಾದುನೋಡಬೇಕಿದೆ. ಆದರೆ, ಸದ್ಯಕ್ಕೆ ‘ತ್ರಿಪುರ ಸುಂದರಿ’ ಧಾರಾವಾಹಿಯ ಸಂಚಿಕೆ ನೋಡಿದ ಸಿನಿಪ್ರಿಯರಿಗೆ ‘ನಾಗಮಂಡಲ’ ಸಿನಿಮಾವಂತೂ ಥಟ್ ಅಂತ ನೆನಪಾಗಿದೆ.
‘ತ್ರಿಪುರ ಸುಂದರಿ’ ಧಾರಾವಾಹಿಯ ಕಥೆ
ಗಂಧರ್ವ ಲೋಕದ ರಾಜಕುಮಾರನನ್ನ ಹುಡುಕಿಕೊಂಡು ಗಂಧರ್ವ ಕನ್ಯೆ ಆಮ್ರಪಾಲಿ ಭೂಲೋಕಕ್ಕೆ ಬರುತ್ತಾಳೆ. ದುಷ್ಟ ಶಕ್ತಿಯಿಂದ ಗಂಧರ್ವ ಲೋಕವನ್ನ ಕಾಪಾಡಲು ರಾಜಕುಮಾರನಿಂದ ಮಾತ್ರ ಸಾಧ್ಯ. ರಾಜಕುಮಾರ ಯಾರು ಎಂಬುದನ್ನ ಕಂಡುಹಿಡಿಯಲು ಆಮ್ರಪಾಲಿ ಬಳಿಯಿರುವುದು ಸೂರ್ಯನ ಪದಕ ಮಾತ್ರ. ಭೂಲೋಕದಲ್ಲಿ ಸೂರ್ಯನ ಪದಕವನ್ನ ಕಳೆದುಕೊಂಡ ಆಮ್ರಪಾಲಿ ಹುಡುಕಾಟ ನಡೆಸುತ್ತಿದ್ದಾಳೆ. ಅರಸು ಮನೆಯಲ್ಲಿ ಆಶ್ರಯ ಪಡೆದಿರುವ ಆಮ್ರಪಾಲಿ, ರಾಜಕುಮಾರನನ್ನ ಹುಡುಕಲು ಅನೇಕ ಸವಾಲುಗಳನ್ನು ಎದುರಿಸುತ್ತಿದ್ದಾಳೆ. ಗಂಧರ್ವ ಲೋಕದ ರಾಜಕುಮಾರ ಎಂದು ಗೊತ್ತಿಲ್ಲದೆ ಪುಟಾಣಿ ಪ್ರದ್ಯುಮ್ನನನ್ನ ಅರಸು ಕುಟುಂಬದ ಸೊಸೆ ದೇವಯಾನಿ ಸಾಕುತ್ತಾಳೆ. ಹೆತ್ತ ಮಗನಂತೆ ಪ್ರದ್ಯುಮ್ನನನ್ನ ಪ್ರೀತಿಯಿಂದ ದೇವಯಾನಿ ಬೆಳೆಸಿದ್ದಾಳೆ. ಪ್ರದ್ಯುಮ್ನನ ಭೂಲೋಕದ ಋಣ ಮುಗಿಯಿತು ಎಂದು ತಿಳಿದು ದೇವಯಾನಿ ಮತ್ತು ಅಜ್ಜಿ ಮಾಯಿ ಆತಂಕಗೊಂಡಿದ್ದಾರೆ.ಪ್ರದ್ಯುಮ್ನನೇ ರಾಜಕುಮಾರ ಎಂದು ಆಮ್ರಪಾಲಿಗೆ ತಿಳಿದಿಲ್ಲ. ಆಮ್ರಪಾಲಿ ಹುಡುಕುತ್ತಿರುವ ಗಂಧರ್ವ ಲೋಕದ ರಾಜಕುಮಾರ ಪ್ರದ್ಯುಮ್ನನೇ ಅಂತ ದೇವಯಾನಿಗೂ ಗೊತ್ತಿಲ್ಲ. ಇದನ್ನೆಲ್ಲಾ ತಿಳಿದಿರುವ ಈಶ್ವರಿಯ ಆಟವೇ ಬೇರೆ. ಪ್ರದ್ಯಮ್ನನಿಗೆ ತನ್ನ ಮಗಳು ಯುಕ್ತಿಯನ್ನ ಕೊಟ್ಟು ಮದುವೆ ಮಾಡುವ ತವಕ. ಅದಕ್ಕೆ ಅಡ್ಡಲಾಗಿರುವ ಆಮ್ರಪಾಲಿ ವಿರುದ್ಧ ಈಶ್ವರಿ ಸಂಚು ರೂಪಿಸಿದ್ದಾಳೆ. ದೇವಿಯ ಒಡವೆಗಳ ಕಳ್ಳತನದ ಆರೋಪ ಹೊರಿಸಿದ್ದಾಳೆ. ನಾಗರಾಜನ ಕೃಪೆಯಿಂದ ಆಮ್ರಪಾಲಿ ನಿರ್ದೋಷಿಯಾಗಿದ್ದಾಳೆ. ಆದರೆ, ತಾನೇ ಬೀಸಿದ ಬಲೆಗೆ ಈಗ ಈಶ್ವರಿಯೇ ಸಿಲುಕುತ್ತಾಳಾ?