ಆ್ಯಪ್ನಗರ

'ಜೊತೆ ಜೊತೆಯಲಿ' ಧಾರಾವಾಹಿಗೆ ಸೋಲುಣಿಸಿದ ಹೊಸ ಸೀರಿಯಲ್‌ ಯಾವುದು?

ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ 'ಜೊತೆ ಜೊತೆಯಲಿ' ಧಾರಾವಾಹಿಗೆ ದೊಡ್ಡ ಅಭಿಮಾನಿ ಬಳಗವಿದೆ. ಆದರೆ ಇತ್ತೀಚೆಗಷ್ಟೇ ಆರಂಭವಾದ ಧಾರಾವಾಹಿಯೊಂದು 'ಜೊತೆ ಜೊತೆಯಲಿ' ಸೀರಿಯಲ್‌ಗೆ ಸೋಲಿನ ರುಚಿ ತೋರಿಸಿದೆ. ಯಾವುದು ಆ ಸೀರಿಯಲ್?

Authored byಟೀನಾ | Vijaya Karnataka Web 17 Dec 2020, 4:14 pm
ಪ್ರತಿ ಗುರುವಾರದಂದು ಧಾರಾವಾಹಿ ಹಣೆಬರಹ ನಿರ್ಧಾರವಾಗುತ್ತದೆ. ವಾರದಿಂದ ವಾರಕ್ಕೆ ಧಾರಾವಾಹಿ ನೋಡುಗರ ಸಂಖ್ಯೆ ಹೇಗಿದೆ ಎಂಬ ಲೆಕ್ಕಾಚಾರ ಸಿಗುತ್ತದೆ. ಯಾವ ಧಾರಾವಾಹಿ ಯಾವ ಸ್ಥಾನದಲ್ಲಿದೆ? ಯಾವ ಧಾರಾವಾಹಿಯನ್ನು ಇನ್ನೊಂದು ಧಾರಾವಾಹಿ ಹಿಂದೆ ಹಾಕಿದೆ ಎಂಬ ವಿವರ ತಿಳಿಯುವುದು. ಆದರೆ ಈ ಬಾರಿ ದೊಡ್ಡ ಮಟ್ಟದ ಬದಲಾವಣೆಯಾಗಿದೆ.
Vijaya Karnataka Web trp of kannada serials this week december 2020 11 to 17 complete list gattimela serial is on top
'ಜೊತೆ ಜೊತೆಯಲಿ' ಧಾರಾವಾಹಿಗೆ ಸೋಲುಣಿಸಿದ ಹೊಸ ಸೀರಿಯಲ್‌ ಯಾವುದು?


ಗಟ್ಟಿಮೇಳ, ಜೊತೆ ಜೊತೆಯಲಿ ಧಾರಾವಾಹಿಗೆ ಸ್ಪರ್ಧೆ
ಇತ್ತೀಚೆಗೆ ಆರಂಭವಾದ ಧಾರಾವಾಹಿಯೊಂದು 'ಜೊತೆ ಜೊತೆಯಲಿ' ಸೀರಿಯಲ್‌ಗೆ ಸೋಲಿನ ರುಚಿ ತೋರಿಸಿದೆ. ಧಾರಾವಾಹಿ ಆರಂಭವಾದಾಗಿನಿಂದ ಒಂದು ಅಥವಾ ಎರಡನೇ ಸ್ಥಾನದಲ್ಲಿ ಭದ್ರವಾಗಿ ಕುಳಿತಿದ್ದ 'ಜೊತೆ ಜೊತೆಯಲಿ' ಧಾರಾವಾಹಿ ಈ ಬಾರಿ ಮೂರನೇ ಸ್ಥಾನಕ್ಕೆ ಬಂದು ತಲುಪಿದೆ. ಮೊದಲ ಸ್ಥಾನದಲ್ಲಿ 'ಗಟ್ಟಿಮೇಳ' ಸೀರಿಯಲ್ ಇದೆ. ಒಟ್ಟಿನಲ್ಲಿ 'ಗಟ್ಟಿಮೇಳ' ಸೀರಿಯಲ್‌ಗೂ ಸ್ಪರ್ಧೆ ನೀಡೋಕೆ ಇನ್ನೊಂದು ಸೀರಿಯಲ್ ಎಂಟ್ರಿಯಾದ ಹಾಗಾಯ್ತು.

'ಜೊತೆ ಜೊತೆಯಲಿ' ಸೋಲಿಸಿದ ಧಾರಾವಾಹಿ ಯಾವುದು?
ಸಾಗರ್ ಬಿಳಿಗೌಡ, ಗೌತಮಿ ಜಾಧವ್ ಅಭಿನಯದ 'ಸತ್ಯ' ಧಾರಾವಾಹಿ 2ನೇ ಸ್ಥಾನವನ್ನು ಅಲಂಕರಿಸಿದೆ. ಕಳೆದ ಡಿಸೆಂಬರ್ 7ರಿಂದ ಈ ಸೀರಿಯಲ್ ಆರಂಭವಾಗಿತ್ತು. ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 9 ಗಂಟೆಗೆ 'ಸತ್ಯ' ಪ್ರಸಾರವಾಗಲಿದೆ. ನಿರ್ದೇಶಕ ಕೃಷ್ಣ ಅವರ ಆರ್‌ಆರ್‌ಆರ್ ಕ್ರಿಯೇಷನ್ಸ್ ಮೂಲಕ 'ಸತ್ಯ' ಧಾರಾವಾಹಿಗೆ ಬಂಡವಾಳ ಹಾಕಿದ್ದಾರೆ. ಸ್ವಪ್ನಾ ಕೃಷ್ಣ ಇದರ ನಿರ್ದೇಶನ ಮಾಡುತ್ತಿದ್ದಾರೆ. ಶ್ರೀನಿವಾಸಮೂರ್ತಿ, ಅಭಿಜಿತ್, ತ್ರಿವೇಣಿ ಮುಂತಾದ ಹಿರಿಯ ಕಲಾವಿದರು 'ಸತ್ಯ' ಧಾರಾವಾಹಿಯ ಭಾಗವಾಗಿದ್ದಾರೆ.

Also Read-ಸತ್ಯ ಧಾರಾವಾಹಿಯಲ್ಲಿ ನಟಿಸುತ್ತಿರುವ ಈ ಖ್ಯಾತ ನಟಿ ಯಾರು ಎಂದು ಗುರುತಿಸಬಲ್ಲಿರಾ?

ಜೊತೆ ಜೊತೆಯಲಿ ಸೋತಿದ್ದೇಕೆ?

'ಜೊತೆ ಜೊತೆಯಲಿ' ಧಾರಾವಾಹಿಯಲ್ಲಿ ಅನು-ಆರ್ಯ ಇಬ್ಬರ ಪ್ರೀತಿ ವಿಚಾರವನ್ನು ಅನು ಮನೆಯವರು ಒಪ್ಪಬೇಕು. ಮೀರಾ ಹೆಗಡೆ ಕೂಡ ಈ ಜೋಡಿ ಮಧ್ಯೆ ತಂದಿಡುವ ಕೆಲಸ ಮಾಡುತ್ತಿದ್ದಾಳೆ. ಅನು-ಆರ್ಯ ಆಗಾಗ ಪರಸ್ಪರ ಬೇಸರ ಮಾಡಿಕೊಳ್ಳುತ್ತಾರೆ. ಇದರ ಸುತ್ತವೇ ಕಥೆ ಸಾಗುತ್ತಿದೆ. ಹೀಗಾಗಿ ವೀಕ್ಷಕರಿಗೂ ಬೇಸರ ಬಂದಿರಬಹುದು. ಸತ್ಯ ಧಾರಾವಾಹಿಯಲ್ಲಿ ಪಾತ್ರಗಳು, ಚಿತ್ರಕಥೆ, ಹೀರೋನನ್ನು ಯಾರು ಮದುವೆಯಾಗುತ್ತಾರೆ ಎಂಬ ಕುತೂಹಲ ಪ್ರೇಕ್ಷಕರಿಗೆ ಹೆಚ್ಚು ಇಷ್ಟವಾಗಿರುವ ಸಾಧ್ಯತೆಯಿದೆ.

Also Read-ಸತ್ಯ ಧಾರಾವಾಹಿ ಒಪ್ಪಿಕೊಳ್ಳಲು ಕಾರಣ ಬಿಚ್ಚಿಟ್ಟ ನಟ ಸಾಗರ್ ಬಿಳಿಗೌಡ!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ