ಆ್ಯಪ್ನಗರ

'ಗಟ್ಟಿಮೇಳ', 'ಜೊತೆ ಜೊತೆಯಲಿ' ಧಾರಾವಾಹಿಗೆ ಸೋಲುಣಿಸಿದ ಹೊಸ ಧಾರಾವಾಹಿ ಯಾವುದು?

ವರ್ಷಗಳಿಂದ ನಂಬರ್ 1 ಹಾಗೂ ನಂಬರ್ 2 ಸ್ಥಾನದಲ್ಲಿದ್ದ 'ಗಟ್ಟಿಮೇಳ' ಹಾಗೂ 'ಜೊತೆ ಜೊತೆಯಲಿ' ಧಾರಾವಾಹಿಗಳು ಸೋಲು ಕಂಡಿವೆ. ಇತ್ತೀಚೆಗೆ ಪ್ರಸಾರವಾದ ಹೊಸ ಧಾರಾವಾಹಿಯೊಂದು ಮೊದಲ ಸ್ಥಾನಕ್ಕೆ ಬಂದು ಕೂತಿದೆ.

Authored byಟೀನಾ | Vijaya Karnataka Web 24 Dec 2020, 5:25 pm
ಪ್ರತಿ ವಾರ ಧಾರಾವಾಹಿಗಳ ಟಿಆರ್‌ಪಿ ಹೊರಬೀಳುವುದು. ಅಂತೆಯೇ ಈ ವಾರ ಕೂಡ ಸೀರಿಯಲ್ ಟಿಆರ್‌ಪಿ ಹೊರಬಿದ್ದಿದೆ. ಕಳೆದ ಬಾರಿ ಸೀರಿಯಲ್‌ಗಳ ಸ್ಥಾನದಲ್ಲಿ ತುಂಬ ವ್ಯತ್ಯಾಸ ಇತ್ತು. ಈ ಬಾರಿ ಕೂಡ ದೊಡ್ಡ ಅಚ್ಚರಿಯೊಂದು ಕಾದಿದೆ. ಇಷ್ಟು ವಾರಗಳ ಕಾಲ ನಂಬರ್ 1 ಹಾಗೂ ನಂಬರ್ 2 ಸ್ಥಾನದಲ್ಲಿದ್ದ 'ಗಟ್ಟಿಮೇಳ' ಹಾಗೂ 'ಜೊತೆ ಜೊತೆಯಲಿ' ಧಾರಾವಾಹಿಗಳನ್ನು ಹೊಸ ಧಾರಾವಾಹಿಯೊಂದು ಹಿಂದಕ್ಕೆ ಹಾಕಿದೆ.
Vijaya Karnataka Web trp of kannada serials this week december 2020 17 to 24 complete list sathya serial is on top
'ಗಟ್ಟಿಮೇಳ', 'ಜೊತೆ ಜೊತೆಯಲಿ' ಧಾರಾವಾಹಿಗೆ ಸೋಲುಣಿಸಿದ ಹೊಸ ಧಾರಾವಾಹಿ ಯಾವುದು?


ನಂಬರ್ 1 ಧಾರಾವಾಹಿ ಯಾವುದು?

ಕಳೆದ ವಾರ ಗಟ್ಟಿಮೇಳ ಧಾರಾವಾಹಿ 1 ಸ್ಥಾನದಲ್ಲಿತ್ತು. ಜೊತೆ ಜೊತೆಯಲಿ ಧಾರಾವಾಹಿ 2 ಸ್ಥಾನದಲ್ಲಿತ್ತು. ಆರಂಭವಾದ ಮೊದಲ ವಾರದಲ್ಲಿಯೇ 2 ನೇ ಸ್ಥಾನಕ್ಕೆ ಬಂದು ಆಕ್ರಮಿಸಿದ್ದ 'ಸತ್ಯ' ಧಾರಾವಾಹಿ ಈಗ ನಂಬರ್ ಸ್ಥಾನಕ್ಕೆ ಬಂದು ಕೂತಿದೆ. ಇದು ನಿಜಕ್ಕೂ ಅಚ್ಚರಿಕರ ಬೆಳವಣಿಗೆ. ಈ ಮೂಲಕ 'ಗಟ್ಟಿಮೇಳ', 'ಜೊತೆ ಜೊತೆಯಲಿ' ಧಾರಾವಾಹಿಗಳಿಗೆ ಸೋಲುಣಿಸಿದೆ.

ಯಾಕೆ 'ಗಟ್ಟಿಮೇಳ', 'ಜೊತೆ ಜೊತೆಯಲಿ' ಧಾರಾವಾಹಿ ಸೋತಿತು?

'ಗಟ್ಟಿಮೇಳ' ಧಾರಾವಾಹಿಯಲ್ಲಿ ವೇದಾಂತ್-ಅಮೂಲ್ಯ ಪ್ರೀತಿ, ಸುಹಾಸಿನಿ ದ್ವೇಷ-ಕುತಂತ್ರ, ವಿಕ್ರಾಂತ್-ಆರತಿ ಮುನಿಸು-ಜಗಳ, ಆದ್ಯಾ ತರಲೆ ಬಿಟ್ಟರೆ ವಿಶೇಷವಾಗಿ ಆಸಕ್ತಿಕರವಾದ ಎಪಿಸೋಡ್‌ಗಳು ಪ್ರಸಾರ ಆಗುತ್ತಿಲ್ಲ. 'ಜೊತೆ ಜೊತೆಯಲಿ' ಧಾರಾವಾಹಿಯಲ್ಲಿ ಅನು-ಆರ್ಯ ಪ್ರೇಮಕಥೆ ಕುಂಟುತ್ತ ಸಾಗುತ್ತಿದೆ. ಅನು ಇನ್ನೂ ಪ್ರೀತಿ ವಿಚಾರವನ್ನು ಅಪ್ಪನಿಗೆ ತಿಳಿಸಿಲ್ಲ. ಒಟ್ಟಿನಲ್ಲಿ ಒಂದೇ ಒಂದು ಎಳೆ ಇಟ್ಟುಕೊಂಡು ತಿಂಗಳಾನುಗಟ್ಟಲೇ ಎಪಿಸೋಡ್ ಚಿತ್ರೀಕರಿಸಿ ಪ್ರಸಾರ ಮಾಡುತ್ತಿರುವುದರಿಂದ ಜನರಿಗೆ ಬೇಸರ ಬಂದಿರಬಹುದು. ಹೀಗಾಗಿ 'ಗಟ್ಟಿಮೇಳ', 'ಜೊತೆ ಜೊತೆಯಲಿ' ಧಾರಾವಾಹಿ ಹಿಂದೆ ಬಿದ್ದಿರಬಹುದು.

Also Read-ದಾಖಲೆ ಬರೆಯಲು ಸಿದ್ಧವಾಗಿರುವ ಗ್ರಾಮದ ಪರಿಚಯ ಮಾಡಿಕೊಟ್ಟ 'ಜೊತೆ ಜೊತೆಯಲಿ' ನಟ ಅನಿರುದ್ಧ!

ಸತ್ಯ ಧಾರಾವಾಹಿ ಕಥೆಯೇನು?

ಡಿ.7ರಿಂದ ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 9 ಗಂಟೆಗೆ 'ಸತ್ಯ' ಪ್ರಸಾರವಾಗುತ್ತಲಿದೆ. ನಟ ಸಾಗರ್ ಬಿಳಿಗೌಡ, ಗೌತಮಿ ಜಾಧವ್ ನಟನೆಯ ಈ ಧಾರಾವಾಹಿಯಲ್ಲಿ ನಟಿ ಪ್ರಿಯಾಂಕಾ ಕೂಡ ಮುಖ್ಯ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಸ್ವಪ್ನಾ ಕೃಷ್ಣ 'ಸತ್ಯ' ನಿರ್ದೇಶನ ಮಾಡುತ್ತಿದ್ದಾರೆ. ನಿರ್ದೇಶಕ ಕೃಷ್ಣ ಅವರು ಈ ಸೀರಿಯಲ್‌ಗೆ ಹಣ ಹೂಡಿದ್ದಾರೆ. ಪ್ರತಿ ಮನೆಯ ತಾಯಿಯು ಕೂಡ ತನ್ನ ಮಗಳು ಹೀಗೆ ಧೈರ್ಯಶಾಲಿಯಾಗಿರಬೇಕು ಅಂತ ಬಯಸುವ ಟಾಮ್‌ಬಾಯ್ ಹುಡುಗಿಯ ಕಥೆಯೇ 'ಸತ್ಯ'. ಈ ಸೀರಿಯಲ್‌ನ ಪಾತ್ರ, ಟ್ವಿಸ್ಟ್‌, ಕುತೂಹಲ ಪ್ರೇಕ್ಷಕರಿಗೆ ತುಂಬ ಇಷ್ಟವಾಗಿದೆ.

Also Read-ಯಾವ ಕನ್ನಡ ಧಾರಾವಾಹಿಯ ಸಿಕ್ವೇಲ್ ನೋಡಲು ಬಯಸುತ್ತೀರಿ?‌

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ