ಆ್ಯಪ್ನಗರ

ಕಿರುತೆರೆಯಲ್ಲಿ ವಿಜಯ್ ಸೂರ್ಯ ಎರಡನೇ ಇನ್ನಿಂಗ್ಸ್

ಕಿರುತೆರೆ ಚಾಕೋಲೇಟ್ ಹೀರೋಗಳಲ್ಲಿ ವಿಜಯ್ ಸೂರ್ಯ ಸಹ ಒಬ್ಬರು. 'ಅಗ್ನಿಸಾಕ್ಷಿ' ಧಾರಾವಾಹಿ ಮೂಲಕ ಹೆಂಗೆಳೆಯರ ಮನಗೆದ್ದ ನಟ. ಇದೀಗ ಕಾಮಿಡಿ ಶೋ ಮೂಲಕ ನಿರೂಪಣೆಗೂ ಇಳಿದಿದ್ದಾರೆ. ವಾರಾಂತ್ಯದಲ್ಲಿ ಪ್ರಸಾರವಾಗಲಿರುವ 'ಕಾಮಿಡಿ ಟಾಕೀಸ್' ಮೂಲಕ ಹೊಸ ಇನ್ನಿಂಗ್ಸ್ ಆರಂಭಿಸುತ್ತಿದ್ದಾರೆ ವಿಜಯ್ ಸೂರ್ಯ.

TNN 23 Oct 2017, 4:55 pm
ಕಿರುತೆರೆ ಚಾಕೋಲೇಟ್ ಹೀರೋಗಳಲ್ಲಿ ವಿಜಯ್ ಸೂರ್ಯ ಸಹ ಒಬ್ಬರು. 'ಅಗ್ನಿಸಾಕ್ಷಿ' ಧಾರಾವಾಹಿ ಮೂಲಕ ಹೆಂಗೆಳೆಯರ ಮನಗೆದ್ದ ನಟ. ಇದೀಗ ಕಾಮಿಡಿ ಶೋ ಮೂಲಕ ನಿರೂಪಣೆಗೂ ಇಳಿದಿದ್ದಾರೆ. ವಾರಾಂತ್ಯದಲ್ಲಿ ಪ್ರಸಾರವಾಗಲಿರುವ 'ಕಾಮಿಡಿ ಟಾಕೀಸ್' ಮೂಲಕ ಹೊಸ ಇನ್ನಿಂಗ್ಸ್ ಆರಂಭಿಸುತ್ತಿದ್ದಾರೆ ವಿಜಯ್ ಸೂರ್ಯ.
Vijaya Karnataka Web vijay suriya turns host for a new comedy show
ಕಿರುತೆರೆಯಲ್ಲಿ ವಿಜಯ್ ಸೂರ್ಯ ಎರಡನೇ ಇನ್ನಿಂಗ್ಸ್


'ಇದೇ ಮೊದಲ ಸಲ ನಿರೂಪಕನಾಗಿ ಕಿರುತೆರೆ ಪ್ರೇಕ್ಷಕರ ಮುಂದೆ ಬರುತ್ತಿದ್ದೇನೆ. ಹಾಗಾಗಿ ಸ್ವಲ್ಪ ದುಗುಡ ಇದ್ದೇ ಇದೆ. ಭಾನುವಾರದಿಂದ ಶೂಟಿಂಗ್ ಆರಂಭವಾಗಿದ್ದು ನವೆಂಬರ್‌ನಲ್ಲಿ ಕಾರ್ಯಕ್ರಮ ಮೂಡಿಬರಲಿದೆ. ವಿಶೇಷ ಎಂದರೆ 'ಅಗ್ನಿಸಾಕ್ಷಿ' ಸಮಯದಲ್ಲೇ ಇದು ಮೂಡಿಬರಲಿದೆ, ಅಂದರೆ ವೀಕೆಂಡ್‌ನಲ್ಲಿ ಮಾತ್ರ. ಅಗ್ನಿಸಾಕ್ಷಿಯ ಸಿದ್ದಾರ್ಥನನ್ನು ವಾರಾಂತ್ಯಗಳಲ್ಲೂ ಕಾಣಬಹುದು' ಎಂದಿದ್ದಾರೆ ವಿಜಯ್ ಸೂರ್ಯ.

ಕಾಮಿಡಿ ಟಾಕೀಸ್ ಶೋಗೆ ಇಬ್ಬರು ತೀರ್ಪುಗಾರರೂ ಇರುತ್ತಾರೆ. ಸೃಜನ್ ಲೋಕೇಶ್ ಹಾಗೂ ರಚಿತಾ ರಾಮ್. ಇವರ ಜತೆಗೆ ಪ್ರತಿವಾರ ಅತಿಥಿ ತೀರ್ಪುಗಾರರು ಇರುತ್ತಾರೆ. ನನ್ನ ಈ ಹೊಸ ಪ್ರಯತ್ನ ಕಿರುತೆರೆ ವೀಕ್ಷಕರಿಗೆ ಎಷ್ಟರ ಮಟ್ಟಿಗೆ ಇಷ್ಟ ಆಗುತ್ತದೆ ಎಂಬುದನ್ನು ಕಾದು ನೋಡಬೇಕು ಎನ್ನುತ್ತಾರೆ ವಿಜಯ್. ಕದ್ದುಮುಚ್ಚಿ ಹಾಗೂ ಇನ್ನೊಂದು ಲಖನೌ ಟು ಬೆಂಗಳೂರು ಎಂಬೆರೆಡು ಸಿನಿಮಾಗಳಲ್ಲೂ ವಿಜಯ್ ಸೂರ್ಯ ಬಿಝಿಯಾಗಿದ್ದಾರೆ.

Vijay Suriya turns host for a new comedy show

Television heartthrob and film actor Vijay Suriya of Agni Sakshi fame is all set to don a new hat. This time, he turns host for a comedy show, Comedy Talkies, which will be aired on prime time during weekends.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ