ಆ್ಯಪ್ನಗರ

Weekend With Ramesh: ‘ಎಕ್ಸ್‌ಕ್ಯೂಸ್ ಮಿ’ ಚಿತ್ರ ಮಾಡೋಕೆ ಇಷ್ಟವಿರಲಿಲ್ಲ: ‘ಸಂಜು ವೆಡ್ಸ್ ಗೀತಾ’ ಕಂಪ್ಲೀಟ್ ಮಾಡಲು ದುಡ್ಡಿರಲಿಲ್ಲ!

Weekend With Ramesh Season 5 Episode 1: Ramya: ಪ್ರೇಮ್ ನಿರ್ದೇಶನದ ‘ಎಕ್ಸ್‌ಕ್ಯೂಸ್ ಮಿ’ ಹಾಗೂ ನಾಗಶೇಖರ್ ನಿರ್ದೇಶನದ ‘ಸಂಜು ವೆಡ್ಸ್ ಗೀತಾ’ ಸಿನಿಮಾದಲ್ಲಿ ನಾಯಕಿಯಾಗಿ ರಮ್ಯಾ ಅಭಿನಯಿಸಿದ್ದರು. ಈ ಸಿನಿಮಾ ಮೇಕಿಂಗ್ ಬಗ್ಗೆ ‘ವೀಕೆಂಡ್ ವಿತ್ ರಮೇಶ್’ ಕಾರ್ಯಕ್ರಮದಲ್ಲಿ ರಮ್ಯಾ ಮಾತನಾಡಿದ್ದಾರೆ.

Authored byಹರ್ಷಿತಾ ಎನ್ | Vijaya Karnataka Web 26 Mar 2023, 1:45 am

ಹೈಲೈಟ್ಸ್‌:

  • ಸಾಧಕರ ಸೀಟ್‌ನಲ್ಲಿ ನಟಿ ರಮ್ಯಾ
  • ‘ಎಕ್ಸ್‌ಕ್ಯೂಸ್ ಮಿ’ ಚಿತ್ರದಲ್ಲಿ ನಟಿಸಲು ರಮ್ಯಾಗೆ ಇಷ್ಟವಿರಲಿಲ್ಲವಂತೆ
  • ‘ಸಂಜು ವೆಡ್ಸ್ ಗೀತಾ’ ಸಿನಿಮಾದ ಕಂಪ್ಲೀಟ್‌ ಆಗೋಕೆ ಕಾರಣ ನಟಿ ರಮ್ಯಾ!

ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web weekend with ramesh season 5 episode 1 ramya speaks about making of excuse me and sanju weds geetha
Weekend With Ramesh: ‘ಎಕ್ಸ್‌ಕ್ಯೂಸ್ ಮಿ’ ಚಿತ್ರ ಮಾಡೋಕೆ ಇಷ್ಟವಿರಲಿಲ್ಲ: ‘ಸಂಜು ವೆಡ್ಸ್ ಗೀತಾ’ ಕಂಪ್ಲೀಟ್ ಮಾಡಲು ದುಡ್ಡಿರಲಿಲ್ಲ!
‘ವೀಕೆಂಡ್ ವಿತ್ ರಮೇಶ್’ ಕಾರ್ಯಕ್ರಮದ ಐದನೇ ಸೀಸನ್ ಆರಂಭಗೊಂಡಿದೆ. ಮೊದಲ ಅತಿಥಿಯಾಗಿ ನಟಿ ರಮ್ಯಾ ಭಾಗವಹಿಸಿದ್ದಾರೆ. ಮೊದಲ ಸಂಚಿಕೆಯಲ್ಲಿ ತಮ್ಮ ಸಿನಿ ಜರ್ನಿ ಬಗ್ಗೆ ರಮ್ಯಾ ಮಾತನಾಡಿದ್ದಾರೆ. ರಮ್ಯಾ ಅಭಿನಯದ ಎರಡನೇ ಸಿನಿಮಾ ‘ಎಕ್ಸ್‌ಕ್ಯೂಸ್ ಮಿ’. ಈ ಚಿತ್ರದಲ್ಲಿ ನಟಿಸಲು ರಮ್ಯಾಗೆ ಇಷ್ಟವಿರಲಿಲ್ಲವಂತೆ. ‘’ಪ್ರೇಮ್ ‘ಮಂಡ್ಯದ ಗೌಡ್ರು’. ಅವರ ಸಿನಿಮಾ ಮಾಡು’’ ಅಂತ ತಾಯಿ ಹೇಳಿದ್ಮೇಲೆ ರಮ್ಯಾ ಒಪ್ಪಿಕೊಂಡರಂತೆ.
ಇನ್ನೂ, ದುಡ್ಡಿಲ್ಲದೆ ‘ಸಂಜು ವೆಡ್ಸ್ ಗೀತಾ’ ಚಿತ್ರವನ್ನ ಕಂಪ್ಲೀಟ್ ಮಾಡಲಾಗದೆ ನಾಗಶೇಖರ್‌ ಚಿತ್ರೀಕರಣವನ್ನ ನಿಲ್ಲಿಸಿಬಿಟ್ಟಿದ್ದರು. ಈ ವೇಳೆ ನಾಗಶೇಖರ್ ಪಾಲಿಗೆ ದೇವತೆಯಾದವರು ರಮ್ಯಾ. ತಮ್ಮ ಕೈಯಿಂದ ದುಡ್ಡು ಕೊಟ್ಟು ‘ಸಂಜು ವೆಡ್ಸ್ ಗೀತಾ’ ಚಿತ್ರ ಕಂಪ್ಲೀಟ್ ಆಗುವಂತೆ ಮಾಡಿದವರು ರಮ್ಯಾ. ‘ಸಂಜು ವೆಡ್ಸ್ ಗೀತಾ’ ಚಿತ್ರ ಸೂಪರ್ ಹಿಟ್ ಆಯ್ತು. ಇದೇ ಚಿತ್ರದಲ್ಲಿನ ಅಭಿನಯಕ್ಕಾಗಿ ರಮ್ಯಾ ಅವರಿಗೆ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ, ಫಿಲ್ಮ್ ಫೇರ್ ಪ್ರಶಸ್ತಿ ಹಾಗೂ ಸೈಮಾ ಪ್ರಶಸ್ತಿಯನ್ನ ರಮ್ಯಾ ಮುಡಿಗೇರಿಸಿಕೊಂಡರು.

Weekend With Ramesh: ಮಿಸ್ ವರ್ಲ್ಡ್ ಆಗ್ಬೇಕು ಅಂತಿದ್ದ ರಮ್ಯಾಗೆ ಮೊದಲ ಚೆಕ್ ಕೊಟ್ಟಿದ್ದು ಅಪ್ಪು! ಅದೂ ಅತೀ ಹೆಚ್ಚು ಪೇಮೆಂಟ್!

‘ಎಕ್ಸ್‌ಕ್ಯೂಸ್ ಮಿ’ ಮಾಡೋಕೆ ಇಷ್ಟವಿರಲಿಲ್ಲ!

‘‘ಎಕ್ಸ್‌ಕ್ಯೂಸ್ ಮಿ’ ಸಿನಿಮಾ ಮಾಡೋಕೆ ನನಗೆ ಇಷ್ಟ ಇರಲಿಲ್ಲ. ‘’ಅಭಿ’ ರಿಲೀಸ್ ಆಗಲಿ ಆಮೇಲೆ ನೋಡೋಣ’’ ಅಂತ ಇದ್ದೆ. ಆದ್ರೆ, ಪ್ರೇಮ್ ಮಂಡ್ಯದವರು. ನನ್ನ ತಾಯಿಯನ್ನ ಮಂಡ್ಯದಲ್ಲಿ ಭೇಟಿ ಮಾಡಿದ್ದರು. ‘ಅಭಿ’ ಸಿನಿಮಾದಲ್ಲಿ ನನಗೆ ಸ್ಕ್ರಿಪ್ಟ್ ಹೇಳಿರಲಿಲ್ಲ. ಹೀಗಾಗಿ, ಸಿನಿಮಾ ಕಥೆ ಕೇಳಿಯೇ ಒಪ್ಪಿಕೊಳ್ಳೋದು ಅಂತ ನಾನು ಹೇಳಿದ್ದೆ. ಪ್ರೇಮ್ ಅವರು ಮೊದಲು ನನಗೆ ಫಸ್ಟ್ ಹಾಫ್ ಕಥೆಯನ್ನ ಮಾತ್ರ ಹೇಳಿದ್ದರು. ಸೆಕೆಂಡ್ ಹಾಫ್ ಕಥೆ ಅವರಿನ್ನೂ ಬರೆದಿರಲಿಲ್ಲ. ‘’ಮಂಡ್ಯ ಗೌಡ್ರು ಮಾಡು’’ ಅಂತ ಅಮ್ಮ ಹೇಳಿದ್ದಕ್ಕೆ ನಾನು ಒಪ್ಪಿಕೊಂಡೆ’’

‘’ಎಕ್ಸ್‌ಕ್ಯೂಸ್ ಮಿ’ ಸಿನಿಮಾದ ಒಂದು ಹಾಡಿನಲ್ಲಿ ಶಾರ್ಟ್ ಸ್ಕರ್ಟ್ ಹಾಕಲ್ಲ.. ಈ ಸೀನ್ ಮಾಡಲ್ಲ ಅಂತ ನಾನು ಹೋಗ್ಬಿಟ್ಟಿದ್ದೆ. ಆಮೇಲೆ ಕನ್ವಿನ್ಸ್ ಮಾಡಿ ಕರ್ಕೊಂಡು ಬಂದರು. ಕ್ಲೈಮ್ಯಾಕ್ಸ್‌ನ ಪ್ರೇಮ್ ಅವರು ಲೊಕೇಷನ್‌ನಲ್ಲಿ ಸ್ಕ್ರಿಪ್ಟ್ ಬರೆಯುತ್ತಿದ್ದರು. ಏನಾಗಬಹುದು ಅಂತ ನಾವೆಲ್ಲಾ ಕೂತು ಕಾಯುತ್ತಿದ್ವಿ’’ ಎಂದಿದ್ದಾರೆ ರಮ್ಯಾ.

Weekend With Ramesh: ರಮ್ಯಾ ನನಗೆ ಯಾಕೆ ಇಷ್ಟ ಅಂದ್ರೆ.. ಕನ್ನಡದಲ್ಲಿ ಪತ್ರ ಬರೆದ ಪೂಜಾ ಗಾಂಧಿ

ರಮ್ಯಾಗೆ ಕೋಪ ಜಾಸ್ತಿ?

‘’ನಾನು ಪರ್ಫೆಕ್ಷನಿಸ್ಟ್. ನಾನು ಅಂದುಕೊಂಡ ಹಾಗೆಯೇ ಆಗಬೇಕು. ಪರಿಸ್ಥಿತಿ ಕೈತಪ್ಪುತ್ತಿದೆ ಎನ್ನುವಾಗ ನನಗೆ ಕೋಪ ಬರುತ್ತೆ. ಈಗ ಹತ್ತಿರದವರ ಮೇಲೆ ಮಾತ್ರ ಕೋಪ ಮಾಡಿಕೊಳ್ತೀನಿ. ಹೆಚ್ಚು ತಾಳ್ಮೆಯಿಂದ ಇದ್ದೀನಿ’’ ಅಂತ ರಮ್ಯಾ ಹೇಳಿದರು.

Weekend With Ramesh 5: 'ಅಮೃತಧಾರೆ' ಸಿನಿಮಾ ಶೂಟಿಂಗ್‌ ವೇಳೆ ಪ್ರಾಣಾಪಾಯಕ್ಕೆ ಸಿಲುಕಿದ್ರಂತೆ ನಟಿ ರಮ್ಯಾ

ರಮ್ಯಾಗೆ ಉಡುಗೊರೆ ಕೊಟ್ಟ ನಾಗಶೇಖರ್

‘ಸ್ಯಾಂಡಲ್‌ವುಡ್ ಕ್ವೀನ್’ ಅಂತ ರಮ್ಯಾಗೆ ಟೈಟಲ್ ಕೊಟ್ಟಿದ್ದು ನಿರ್ದೇಶಕ ನಾಗಶೇಖರ್. ರಮ್ಯಾ ಅಭಿನಯದ ‘ಸಂಜು ವೆಡ್ಸ್ ಗೀತಾ’ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದವರು ನಾಗಶೇಖರ್. ‘‘ಸಂಜು ವೆಡ್ಸ್ ಗೀತಾ’ ಸಿನಿಮಾ ಆಗೋದಕ್ಕೆ ಕಾರಣ ರಮ್ಯಾ. ನನ್ನ ಹತ್ತಿರ ದುಡ್ಡಿಲ್ಲದೆ ಸಿನಿಮಾ ನಿಂತುಹೋಗಿದ್ದಾಗ, ತಮ್ಮ ಕೈಯಿಂದ ದುಡ್ಡು ಹಾಕಿ ಚಿತ್ರವನ್ನ ಪೂರ್ತಿ ಮಾಡಿಕೊಟ್ಟಿದ್ದು ರಮ್ಯಾ. ನನ್ನ ವೃತ್ತಿ ಬದುಕಿಗೆ ಮೇಜರ್ ಟರ್ನ್ ಕೊಟ್ಟ ಸಿನಿಮಾ ‘ಸಂಜು ವೆಡ್ಸ್ ಗೀತಾ’’ ಅಂತ ಹೇಳಿದ ನಾಗಶೇಖರ್‌, ‘ವೀಕೆಂಡ್ ವಿತ್ ರಮೇಶ್’ ಕಾರ್ಯಕ್ರಮದಲ್ಲಿ ರಮ್ಯಾಗಾಗಿ ‘ಸಂಜು ವೆಡ್ಸ್ ಗೀತಾ’ ಕ್ಲಾಪ್ ಬೋರ್ಡ್ ಅನ್ನು ಉಡುಗೊರೆಯಾಗಿ ನೀಡಿದರು. ಅಸಲಿಗೆ, ನಾಗಶೇಖರ್ ತಮ್ಮ ಮನೆಯಲ್ಲಿ ‘ಸಂಜು ವೆಡ್ಸ್ ಗೀತಾ’ ಕ್ಲಾಪ್ ಬೋರ್ಡ್‌ಗೆ ದಿನನಿತ್ಯ ಪೂಜೆ ಸಲ್ಲಿಸುತ್ತಿದ್ದರಂತೆ.

‘ಸಂಜು ವೆಡ್ಸ್ ಗೀತಾ’ ಕ್ಲಾಪ್ ಬೋರ್ಡ್‌ ಬಗ್ಗೆ ಮತ್ತೊಂದು ಇಂಟ್ರೆಸ್ಟಿಂಗ್ ಕಹಾನಿಯನ್ನ ಶ್ರೀನಗರ ಕಿಟ್ಟಿ ಬಾಯ್ಬಿಟ್ಟರು. ‘‘ಸಂಜು ವೆಡ್ಸ್ ಗೀತಾ’ಗೆ ಮೊದಲು ಕ್ಲಾಪ್ ಮಾಡಿದ್ದು ನನ್ನ ಹೆಂಡತಿ. ಆಗ ಅವಳು ಗರ್ಭಿಣಿಯಾಗಿದ್ದಳು. ಅವಳು ಕ್ಲಾಪ್ ಮಾಡಿದ ತಕ್ಷಣ ಹೊಟ್ಟೆಯಲ್ಲಿ ನನ್ನ ಮಗಳು ಒದ್ಲಂತೆ. ಅದನ್ನ ನಾಗಶೇಖರ್‌ಗೆ ಹೇಳಿದಾಗ, ಸಿನಿಮಾ ಸೂಪರ್ ಹಿಟ್ ಗ್ಯಾರೆಂಟಿ ಅಂತ ಹೇಳಿದ್ದ. ಹಾಗೇ ಆಯ್ತು’’ ಎಂದರು ಶ್ರೀನಗರ ಕಿಟ್ಟಿ.

ರಮ್ಯಾ ತಂದೆ ಹೇಳಿದ್ದೇನು?

‘‘ಸಂಜು ವೆಡ್ಸ್ ಗೀತಾ’ ಸಿನಿಮಾದ ಬಗ್ಗೆ ಮಾತನಾಡುವಾಗ ರಮ್ಯಾ ಅವರ ತಂದೆಯನ್ನ ನೆನಪಿಸಿಕೊಳ್ಳಬೇಕು. ಚೈಲ್ಡ್ ಅಬ್ಯೂಸ್‌ನ ಹೇಗೆ ತೋರಿಸ್ತೀರಾ ಅಂತ ನನಗೆ ಕೇಳಿದ್ದರು. ನಮ್ಮ ಪ್ಲಾನ್ ಅವರಿಗೆ ಇಷ್ಟವಾಗಿತ್ತು. ಸಿನಿಮಾ ರಿಲೀಸ್ ಆಗೋಕೆ ಮುಂಚೆ ಮೊದಲು ನೋಡಿದ್ದೇ ಅವರು. ಆಮೇಲೆ ರಿಲೀಸ್ ಮಾಡಿದ್ವಿ’’ ಅಂತ ನಾಗಶೇಖರ್ ಹೇಳಿದರು.


ರಮ್ಯಾ ಅವರ ದೊಡ್ಡ ಗುಣ

‘ಸಂಜು ವೆಡ್ಸ್ ಗೀತಾ’ ಶೂಟಿಂಗ್ ವೇಳೆ, ಊಟಿಯಲ್ಲಿ ಚಿತ್ರೀಕರಣ ಮಾಡುವಾಗ ಚಳಿ, ಮಳೆ ತುಂಬಾ ಇತ್ತಂತೆ. ಅಲ್ಲಿ ಯಾರ ಬಳಿಯೂ ಜ್ಯಾಕೆಟ್, ರೇನ್ ಕೋಟ್ ಇರಲಿಲ್ಲವಂತೆ. ಹೀಗಾಗಿ, ಸ್ವಲ್ಪ ಹೊತ್ತು ಗ್ಯಾಪ್ ಪಡೆದು ಇಡೀ ಸೆಟ್‌ಗೆ ಜ್ಯಾಕೆಟ್, ಬೂಟ್ಸ್, ರೇನ್ ಕೋಟ್ಸ್ ತಂದುಕೊಟ್ಟಿದ್ರಂತೆ ನಟಿ ರಮ್ಯಾ.
ಲೇಖಕರ ಬಗ್ಗೆ
ಹರ್ಷಿತಾ ಎನ್
ವಿಜಯ ಕರ್ನಾಟಕ ಆನ್‌ಲೈನ್‌ನಲ್ಲಿ 2021ರ ಮಾರ್ಚ್‌ನಿಂದ ಕಾರ್ಯನಿರ್ವಹಿಸುತ್ತಿದ್ದಾರೆ. 2011ರಿಂದ ಮಾಧ್ಯಮ ರಂಗದಲ್ಲಿ ಸಕ್ರಿಯರಾಗಿದ್ದಾರೆ. ಕನ್ನಡ ಸುದ್ದಿ ವಾಹಿನಿಗಳು ಹಾಗೂ ಡಿಜಿಟಲ್ ಮೀಡಿಯಾಗಳಲ್ಲಿ ಸಿನಿಮಾ ವರದಿಗಾರ್ತಿಯಾಗಿ ಕೆಲಸ ಮಾಡಿದ ಅನುಭವ ಇವರಿಗೆ ಇದೆ. ಸಿನಿಮಾ ವರದಿಗಾರಿಕೆ ಇವರ ಪ್ರಮುಖ ಆಸಕ್ತಿ ವಿಭಾಗ.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ