ಆ್ಯಪ್ನಗರ

ವೀಕೆಂಡ್ ವಿತ್ ರಮೇಶ್ 'ಚೇರ್‌'ಗೆ ಯಾರೆಲ್ಲ ಬರಲಿದ್ದಾರೆ ಗೊತ್ತೇ?

ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಬಳಿಕ, ಹಿರಿಯ ನಟಿ ಪ್ರೇಮಾ ಮತ್ತು ನಟ ರಾಘವೇಂದ್ರ ರಾಜ್ ಕುಮಾರ್ ಎರಡನೇ ವಾರದಲ್ಲಿ ವೀಕೆಂಡ್ ವಿತ್ ರಮೇಶ್ ಶೋಗೆ ಬರುವುದು ಖಚಿತವಾಗಿದೆ. ಸದ್ಯಕ್ಕೆ ಈ ಮೂವರು ಹೆಸರು ಅಂತಿಮವಾಗಿದೆ.

Vijaya Karnataka Web 18 Apr 2019, 3:07 pm
ಇನ್ನೇನು ಸದ್ಯದಲ್ಲೇ 'ವೀಕೆಂಡ್ ವಿತ್ ರಮೇಶ್' ಶೋದ 'ನಾಲ್ಕನೇ ಆವೃತ್ತಿ'ಗೆ ದಿನಗಣನೆ ಶುರುವಾಗಿದೆ. ಈ ಸಲ ಯಾರೆಲ್ಲಾ ಅತಿಥಿಯಾಗಿ ಬರ್ತಾರೆ ಎಂಬುದು ಭಾರಿ ಕುತೂಹಲ ಮೂಡಿಸಿರುವ ಸಂಗತಿ. ಹೊಸ ಆವೃತ್ತಿಯ ಮೊದಲ ಅತಿಥಿಯಾಗಿ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಸಾಧಕರ ಸೀಟಿನಲ್ಲಿ ಕುಳಿತುಕೊಳ್ಳಲಿರುವುದು ಈಗಾಗಲೇ ಅಧಿಕೃತವಾಗಿದೆ. ಇನ್ನೂ ಯಾರ್ಯಾರು ಲಿಸ್ಟ್‌ನಲ್ಲಿದ್ದಾರೆ ಗೊತ್ತೇ?
Vijaya Karnataka Web ramesh1704


ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಬಳಿಕ, ಹಿರಿಯ ನಟಿ ಪ್ರೇಮಾ ಮತ್ತು ನಟ ರಾಘವೇಂದ್ರ ರಾಜ್ ಕುಮಾರ್ ಎರಡನೇ ವಾರದಲ್ಲಿ ವೀಕೆಂಡ್ ವಿತ್ ರಮೇಶ್ ಶೋಗೆ ಬರುವುದು ಖಚಿತವಾಗಿದೆ. ಸದ್ಯಕ್ಕೆ ಈ ಮೂವರು ಹೆಸರು ಅಂತಿಮವಾಗಿದ್ದು, ಇನ್ನು ಕೆಲವು ಗಣ್ಯರನ್ನ ಶೋಗೆ ಕರೆದುಕೊಂಡು ಬರಲು ಪ್ರಯತ್ನ ನಡೆಸಲಾಗುತ್ತಿದೆ. ಇನ್ನುಳಿದಂತೆ, ಸುಧಾ ಮೂರ್ತಿ, ಕ್ರಿಕೆಟಿಗ ರಾಹುಲ್ ದ್ರಾವಿಡ್, ಅನಿಲ್ ಕುಂಬ್ಳೆ, ಹಂಸಲೇಖ, ಸಾಲು ಮರದ ತಿಮ್ಮಕ್ಕ, ಡಿಸಿಪಿ ಅಣ್ಣಾಮಲೈ ಮುಂತಾದವರ ಹೆಸರು ಕೇಳಿ ಬರುತ್ತಿದೆ.

ಒಟ್ಟಿನಲ್ಲಿ, ಈ ಬಾರಿಯ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಹಲವು ಸಾಧಕರು ಎಂದಿನಂತೆ ಆ ಸೀಟಿನಲ್ಲಿ ಕುಳಿತು ತಮ್ಮ ಜೀವನಗಾಥೆಗಳನ್ನು ಹೇಳಲಿದ್ದಾರೆ. ಅದರೆ, ಈ ಬಾರಿ ನಿಜವಾದ ಸಾಧಕರು ಬರಬೇಖು ಎಂಬುದು ಬಹಳಷ್ಟು ಜನರ ಅಭಿಪ್ರಾಯವಾಗಿದೆ. ಏಕೆಂದರೆ, ಕಳೆದ ಸೀಸನ್‌ನಲ್ಲಿ, ಅಂದರೆ 3ನೇ ಸೀಸನ್‌ನಲ್ಲಿ ಹಲವು ಹಿರಿಯ ಸಾಧಕರನ್ನು ಬಿಟ್ಟು ಕೆಲವು ಹೊಸಬರನ್ನು ಕರೆಸಿ ಆ ಸೀಟಿನಲ್ಲಿ ಕುಳ್ಳಿರಿಸಲಾಗಿತ್ತು. ಅದು ಸಾಕಷ್ಟು ಟೀಕೆಗೆ ಗುರಿಯಾಗಿತ್ತು. ಈ ಬಾರಿ ಹಾಗಾಗದಿರಲಿ ಎಂಬುದು ಕಿರುತೆರೆ ವೀಕ್ಷಕರ ಅಭಿಪ್ರಾಯ ಎನ್ನಲಾಗಿದೆ. ಒಟ್ಟಿನಲ್ಲಿ, ಮತ್ತೆ ವೀಕೆಂಡ್ ವಿತ್ ರಮೇಶ್ ಶುರುವಾಗಲಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ