ಆ್ಯಪ್ನಗರ

ಮತ್ತೆ ಬರುತ್ತಿದ್ದಾರೆ ಕಾಮಿಡಿ ಕಿಲಾಡಿಗಳು! ಹೊಸ ಸೀಸನ್‌ನಲ್ಲಿ ಕಾದಿದೆ ಬಹುದೊಡ್ಡ ಟ್ವಿಸ್ಟ್‌!

ವೀಕ್ಷಕರನ್ನು ನಗೆಗಡಲಲ್ಲಿ ತೇಲಿಸುವ 'ಕಾಮಿಡಿ ಕಿಲಾಡಿಗಳು' ಶೋ ಮತ್ತೆ ಬರುತ್ತಿದೆ. ಆದರೆ ಈ ಬಾರಿ ಒಂದು ದೊಡ್ಡ ಟ್ವಿಸ್ಟ್‌ ಕೂಡ ಇದೆ. ಆ ಮೂಲಕ ಹೊಸ ಸೀಸನ್‌ನಲ್ಲಿ ವೀಕ್ಷಕರಿಗೆ ಭರಪೂರ ಮನರಂಜನೆ ಸಿಗುವುದು ಗ್ಯಾರಂಟಿ.

Vijaya Karnataka Web 18 Aug 2020, 12:51 pm
ಲಾಕ್‌ಡೌನ್‌ನಿಂದಾಗಿ ಕಿರುತೆರೆಯ ಅನೇಕ ಕಾರ್ಯಕ್ರಮಗಳು ಸ್ಥಗಿತಗೊಂಡಿದ್ದವು. ಈಗ ಅವುಗಳೆಲ್ಲ ಮತ್ತೆ ಶುರು ಆಗುತ್ತಿವೆ. ಅದರ ಜೊತೆಗೆ ಹೊಸ ಸೀಸನ್‌ಗಳಿಗೂ ಮನರಂಜನಾ ವಾಹಿನಿಗಳು ಸಿದ್ಧತೆ ಮಾಡಿಕೊಳ್ಳುತ್ತಿವೆ. ಹಾಸ್ಯಪ್ರಿಯರ ಮೆಚ್ಚಿನ ಶೋ ಕಾಮಿಡಿ ಕಿಲಾಡಿಗಳು ಕೂಡ ಹೊಸ ಸೀಸನ್‌ ಆರಂಭಿಸುತ್ತಿದೆ. ಅದು ಕೂಡ ಒಂದು ಟ್ವಿಸ್ಟ್‌ ಮೂಲಕ ಎಂಬುದು ವಿಶೇಷ.
Vijaya Karnataka Web zee kannada all set to premiere comedy kiladigalu championship 2
ಮತ್ತೆ ಬರುತ್ತಿದ್ದಾರೆ ಕಾಮಿಡಿ ಕಿಲಾಡಿಗಳು! ಹೊಸ ಸೀಸನ್‌ನಲ್ಲಿ ಕಾದಿದೆ ಬಹುದೊಡ್ಡ ಟ್ವಿಸ್ಟ್‌!


ಏನು ಆ ಟ್ವಿಸ್ಟ್‌? ಈ ಬಾರಿ ಹ್ಯಾಸ್ಯ ಕಲಾವಿದರ ನಡುವಿನ ಸ್ಪರ್ಧೆ ಇನ್ನೂ ಭರ್ಜರಿಯಾಗಿ ಇರಲಿದೆ. ಅಂದರೆ, ಇದು 'ಕಾಮಿಡಿ ಕಿಲಾಡಿಗಳು ಚಾಂಪಿಯನ್‌ಶಿಪ್‌ 2'! ಈ ಹಿಂದಿನ ಸೀಸನ್‌ಗಳಲ್ಲಿ ಭಾಗವಹಿಸಿದ ಕಲಾವಿದರು ಮತ್ತೆ ಈಗ ತಂಡ-ತಂಡವಾಗಿ ಪೈಪೋಟಿ ನೀಡಲಿದ್ದಾರೆ. ಇದರಿಂದ ವೀಕ್ಷಕರಿಗೆ ಸಿಕ್ಕಾಪಟ್ಟೆ ಮನರಂಜನೆ ಸಿಗಲಿದೆ. ಹೊಸ ಹೊಸ ಸ್ಕಿಟ್‌ಗಳ ಮೂಲಕ ನಗುವಿನ ಅಲೆ ಮೂಡಿಸಲು ಅವರೆಲ್ಲ ಸಜ್ಜಾಗುತ್ತಿದ್ದಾರೆ.

ಕಳೆದ ಸೀಸನ್‌ಗಳಲ್ಲಿ 'ನವರಸ ನಾಯಕ' ಜಗ್ಗೇಶ್‌, ನಟಿ ರಕ್ಷಿತಾ, ನಿರ್ದೇಶಕ ಯೋಗರಾಜ್‌ ಭಟ್‌ ನಿರ್ಣಾಯಕರಾಗಿದ್ದರು. 'ಕಾಮಿಡಿ ಕಿಲಾಡಿಗಳು ಚಾಂಪಿಯನ್‌ಶಿಪ್‌ 2' ಕೂಡ ಅವರ ನಿರ್ಣಾಯಕತ್ವದಲ್ಲೇ ಮುಂದುವರಿಯಲಿದೆ. ಎಂದಿನಂತೆ ಮಾಸ್ಟರ್‌ ಆನಂದ್ ನಿರೂಪಣೆ ಮಾಡಲಿದ್ದಾರೆ. ಇವರೆಲ್ಲರ ಜುಗಲ್‌ಬಂಧಿಯಿಂದಾಗಿ ಈ ಬಾರಿಯ 'ಕಾಮಿಡಿ ಕಿಲಾಡಿಗಳು' ವೇದಿಕೆಯ ರಂಗು ಇನ್ನಷ್ಟು ಹೆಚ್ಚಾಗಲಿದೆ.

also read: ಕನ್ನಡದ ವಿಚಾರದಲ್ಲಿ ತಪ್ಪು ಮಾಡಿದ ನಯನಾಗೆ ಕಿವಿ ಹಿಂಡಿದ ಜಗ್ಗೇಶ್‌! ಇದು ಅನುಭವದ ಮಾತು

2020ರ ಮಾರ್ಚ್‌ನಲ್ಲಿ ಮುಕ್ತಾಯ ಆದ 'ಕಾಮಿಡಿ ಕಿಲಾಡಿಗಳು ಸೀಸನ್‌ 3'ರಲ್ಲಿ ರಾಕೇಶ್‌ ಪೂಜಾರಿ ವಿನ್ನರ್‌ ಆಗಿದ್ದರು. ಅವರಿಗೆ ಟ್ರೋಫಿ ಜೊತೆ 8 ಲಕ್ಷ ರೂ. ಬಹುಮಾನ ಸಿಕ್ಕಿತ್ತು. ಹೊಸ ಪ್ರತಿಭೆಗಳನ್ನು ಚಿತ್ರರಂಗಕ್ಕೆ ಪರಿಚಯಿಸುವಲ್ಲಿಯೂ ಈ ಕಾರ್ಯಕ್ರಮ ಯಶಸ್ವಿ ಆಗಿದೆ. ಶಿವರಾಜ್‌ ಕೆ.ಆರ್‌. ಪೇಟೆ ಮುಂತಾದ ಕಲಾವಿದರು 'ಕಾಮಿಡಿ ಕಿಲಾಡಿಗಳು' ವೇದಿಕೆಯಲ್ಲಿ ಮಿಂಚಿದ ಬಳಿಕ ಸಿನಿಮಾ ಕ್ಷೇತ್ರದಲ್ಲಿ ಒಳ್ಳೊಳ್ಳೆಯ ಅವಕಾಶ ಪಡೆದುಕೊಂಡಿದ್ದಾರೆ.

also read: ಮಹತ್ವದ ನಿರ್ಧಾರ ಕೈಗೊಳ್ಳುವ ಬಗ್ಗೆ ಜನತೆಯನ್ನೇ ಪ್ರಶ್ನಿಸಿದ ನಟ ಜಗ್ಗೇಶ್!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ