ಆ್ಯಪ್ನಗರ

ಸರಿಗಮಪ ವೇದಿಕೆಯಲ್ಲಿ ಮೋಡಿ ಮಾಡಲಿವೆ ಮರಿಕೋಗಿಲೆಗಳು

ಸಂಗೀತ ಕ್ಷೇತ್ರದ ಮಹಾ ರಿಯಾಲಿಟಿ ಶೋ 'ಸರಿಗಮಪ ಸೀಸನ್‌ 16' ನಾಳೆಯಿಂದ, ಮಾರ್ಚ್ 02, 2019ರಿಂದ ಜೀ ಕನ್ನಡ ವಾಹಿನಿಯಲ್ಲಿ ಪ್ರಾರಂಭವಾಗಲಿದೆ. ಕರುನಾಡ ಮರಿ ಕೋಗಿಲೆಗಳು ಇಲ್ಲಿ ಸಂಗೀತ ಸುಧೆ ಹರಿಸಲಿದ್ದಾರೆ. ಇದು, ಪ್ರತಿ ಶನಿವಾರ ಮತ್ತು ಭಾನುವಾರ ರಾತ್ರಿ 8 ಗಂಟೆಗೆ ಪ್ರಸಾರವಾಗಲಿದೆ.

Vijaya Karnataka Web 1 Mar 2019, 3:12 pm
ಕನ್ನಡದ ಮುಖ್ಯ ಮನರಂಜನಾ ವಾಹಿನಿಗಳಲ್ಲೊಂದಾದ ಜೀ ಕನ್ನಡ ವಾಹಿನಿಯಲ್ಲಿ ಮತ್ತೆ 'ಸರಿಗಮಪ' ರಿಯಾಲಿಟಿ ಶೋ ಪ್ರಾರಂಭವಾಗಿದೆ. ಮತ್ತದೇ ಪುಟಾಣಿಗಳ ತೊದಲು ಮಾತು, ಮರಿ ಕೋಗಿಲೆಗಳ ಸುಶ್ರಾವ್ಯ ಗೀತೆ, ತೀರ್ಪುಗಾರರ ಅಂಕಗಳು, ಸಂಗೀತ ಮಹಾಗುರುವಿನ ಅನುಭವದ ನುಡಿಗಳು, ತರ್ಲೆ-ತಮಾಷೆ ಹೀಗೆ ಸಂಗೀತದ ಒಟ್ಟು ಆಯಾಮವನ್ನು ಹೊತ್ತು ತರುತ್ತಿರುವ ಜೀ ಕನ್ನಡ ವಾಹಿನಿಯ 'ಸರಿಗಮಪ' ಕಾರ್ಯಕ್ರಮವು ಇದೀಗ 'ಸೀಸನ್‌ 16'ಕ್ಕೆ ಸಜ್ಜಾಗಿದೆ.
Vijaya Karnataka Web saregamapa


ನಾಳೆಯಿಂದ, ಮಾರ್ಚ್ 02, 2019ರಿಂದ ಪ್ರಾರಂಭವಾಗಲಿರುವ ಜೀ ಸರಿಗಮಪ ರಿಯಾಲಿಟಿ ಸೋ, ಪ್ರತಿ ಶನಿವಾರ ಮತ್ತು ಭಾನುವಾರ ರಾತ್ರಿ 8 ಗಂಟೆಗೆ ಪ್ರಸಾರವಾಗುವ ಸರಿಗಮಪ ಲಿಟಲ್‌ ಚಾಂಪ್ಸ್- ಸೀಸನ್‌ 16' ರಲ್ಲಿ, ನಾಡಿನ ಮೂವತ್ತು ಜಿಲ್ಲೆಗಳಿಂದ ಮರಿ ಕೋಗಿಲೆಗಳು ಆಗಮಿಸಿವೆ. ಎಂದಿನಂತೆ ಮಹಾಗುರುವಿನ ಸ್ಥಾನ ಅಲಂಕರಿಸಿದ್ದಾರೆ ಹಂಸಲೇಖ. ನಿರ್ಣಾಯಕರಾಗಿ ಗಾಯಕರಾದ ರಾಜೇಶ್‌ ಕೃಷ್ಣನ್‌, ವಿಜಯ ಪ್ರಕಾಶ್‌ ಮತ್ತು ಸಂಗೀತ ನಿರ್ದೇಶಕ ಅರ್ಜುನ್‌ ಜನ್ಯ ಇದ್ದಾರೆ. ಅನುಶ್ರೀ ಅವರ ನಿರೂಪಣೆಯು ಕಾರ್ಯಕ್ರಮಕ್ಕೆ ಮತ್ತಷ್ಟು ಮೆರಗು ತುಂಬಲಿದೆ" ಎಂದು ಜೀ ವಾಹಿನಿಯ ಮುಖ್ಯಸ್ಥ ರಾಘವೇಂದ್ರ ಹುಣಸೂರು ತಿಳಿಸಿದ್ದಾರೆ.

'ಸಂಗೀತ ಕ್ಷೇತ್ರದ ಇತಿಹಾಸದಲ್ಲಿ ಹೊಸ ದಾಖಲೆ ಬರೆದ ಶೋ ಸರಿಗಮಪ. ಯಶಸ್ವಿಯಾಗಿ 15 ಸೀಸನ್‌ ಮುಗಿಸಿ ಇದೀಗ 16ನೇ ಸೀಸನ್‌ಗಾಗಿ ರಾಜ್ಯದ ಉದ್ದಗಲಕ್ಕೂ ನಮ್ಮ ತಂಡ ಸಂಚರಿಸಿ ಹೊಸ ಹೊಸ ಪುಟಾಣಿ ಗಾಯಕ ಗಾಯಕಿಯರನ್ನು ಆಯ್ಕೆ ಮಾಡಿದೆ. ಪ್ರತಿಯೊಬ್ಬರೂ ತಮ್ಮದೇ ಆದ ಕಾರಣಗಳಿಂದಾಗಿ ವಿಶೇಷ ಪ್ರತಿಭೆ ಹೊಂದಿದ್ದಾರೆ. ಮೆಗಾ ಆಡಿಷನ್‌ನಲ್ಲಿ ಪ್ರತಿಯೊಬ್ಬರೂ ಮೋಡಿ ಮಾಡಲಿದ್ದಾರೆ. ಸಂಗೀತ ಸಾಧಕರಿಗೆ ವೇದಿಕೆಯಾಗಿ, ಕಲಿಯುವವರ ಸ್ಫೂರ್ತಿಯಾಗಿ ಎಲ್ಲರ ಮನಸ್ಸು ಗೆದ್ದಿದೆ ಸರಿಗಮಪ ಶೋ. ಸೀಸನ್‌ 16 ಕೂಡ ತನ್ನದೇ ಕಾರಣಗಳಿಂದಾಗಿ ವಿಶೇಷವಾಗಿದೆ" ಎಂದಿದ್ದಾರೆ ರಾಘವೇಂದ್ರ ಹುಣಸೂರು.

"ಸರಿಗಮಪ ಕಾರ್ಯಕ್ರಮಕ್ಕೆ ತನ್ನದೇ ಆದ ಇತಿಹಾಸವಿದೆ. ಇಲ್ಲಿಂದ ಅನೇಕ ಗಾಯಕ ಗಾಯಕಿಯರು ಸಂಗೀತ ಕ್ಷೇತ್ರದಲ್ಲಿ ತಮ್ಮದೇ ಆದ ಹೆಸರು ಮಾಡಿದ್ದಾರೆ. ಸ್ಯಾಂಡಲ್‌ವುಡ್‌ಗೆ ಅನೇಕ ಹೊಸ ಗಾಯಕ-ಗಾಯಕಿಯರನ್ನು ಕೊಟ್ಟ ಹೆಗ್ಗಳಿಕೆ ಕೂಡ 'ಸರಿಗಮಪ' ರಿಯಾಲಿಟಿ ಶೊಗೆ ಸೇರಲಿದೆ" ಎಂದು ರಾಘವೇಂದ್ರ ಹಣಸೂರು ಹೇಳಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ