ಆ್ಯಪ್ನಗರ

ಗಟ್ಟಿಮೇಳ, ಪಾರು, ಜೊತೆ ಜೊತೆಯಲಿ ಮುಂತಾದ ಸೀರಿಯಲ್‌ಗಳು ಜೂ.1ರಿಂದ ಆರಂಭ! ವೇಳಾಪಟ್ಟಿ ಇಲ್ಲಿದೆ...

ಜೀ಼ ಕನ್ನಡ ವಾಹಿನಿಯ ಜನಪ್ರಿಯ ಧಾರಾವಾಹಿಗಳಾದ ಗಟ್ಟಿಮೇಳ, ಪಾರು, ಜೊತೆ ಜೊತೆಯಲಿ, ಕಮಲಿ, ನಾಗಿಣಿ 2, ಯಾರೇ ನೀ ಮೋಹಿನಿ, ಬ್ರಹ್ಮಗಂಟು ಪುನಃ ಪ್ರಸಾರ ಆರಂಭಿಸುತ್ತಿವೆ. ಆದರೆ 'ರಾಧಾ ಕಲ್ಯಾಣ' ಮತ್ತು 'ಸುಬ್ಬಲಕ್ಷ್ಮಿ ಸಂಸಾರ' ಇಷ್ಟಪಡುವವರಿಗೆ ಬೇಸರ ಆಗಿದೆ!

Vijaya Karnataka Web 25 May 2020, 6:38 pm
ಇಷ್ಟು ದಿನ ಧಾರಾವಾಹಿಗಳನ್ನು ಮಿಸ್‌ ಮಾಡಿಕೊಂಡಿದ್ದವರಿಗೆ ಅಂತೂ ಇಂತೂ ಈಗ ಸಿಹಿ ಸುದ್ದಿ ಸಿಕ್ಕಿದೆ. ಎಲ್ಲ ವಿಘ್ನಗಳನ್ನು ನಿವಾರಿಸಿಕೊಂಡು ಹೊಸ ಸಂಚಿಕೆಗಳನ್ನು ಪ್ರಸಾರ ಮಾಡಲು ಮನರಂಜನಾ ವಾಹಿನಿಗಳು ಸಜ್ಜಾಗಿವೆ. ಅದರಲ್ಲೂ ಜೀ಼ ಕನ್ನಡ ವಾಹಿನಿಯು ಜೂನ್‌ 1ರಿಂದಲೇ ತನ್ನ ಫೇಮಸ್‌ ಸೀರಿಯಲ್‌ಗಳನ್ನು ಬಿತ್ತರಿಸಲು ಪ್ಲ್ಯಾನ್‌ ಮಾಡಿಕೊಂಡಿದೆ.
Vijaya Karnataka Web ಗಟ್ಟಿಮೇಳ ಪಾರು ಜೊತೆ ಜೊತೆಯಲಿ


ಕರ್ನಾಟಕದಲ್ಲಿ ಜೀ಼ ಕನ್ನಡ ಚಾನಲ್‌ ಯಶಸ್ವಿಯಾಗಿ 14 ವರ್ಷಗಳನ್ನು ಪೂರೈಸಿದೆ. “ಬಯಸಿದ ಬಾಗಿಲು ತೆಗೆಯೋಣ” ಎಂಬ ಟ್ಯಾಗ್ ಲೈನ್ ಮೂಲಕ ಕನ್ನಡಿಗರ ಮನೆ ಮನೆಗೆ ತಲುಪಿದ ಕುಟುಂಬದ ಸಮಗ್ರ ಮನರಂಜನೆಯ ಕನ್ನಡ ವಾಹಿನಿಯಾಗಿದೆ. ಲಾಕ್‌ಡೌನ್‌ ಕಾರಣದಿಂದ ಹಲವು ಸಮಸ್ಯೆಗಳು ಎದುರಾದ ಕಾರಣ ಎಲ್ಲ ಸೀರಿಯಲ್‌ಗಳ ಪ್ರಸಾರವನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿತ್ತು. ಈಗ ಅವುಗಳ ಪುನಾರಂಭಕ್ಕೆ ದಿನಾಂಕ ನಿಗದಿ ಆಗಿದೆ.

ರಾಜ್ಯ ಸರ್ಕಾರವು ಸಾಮಾಜಿಕ ಅಂತರ ಹಾಗೂ ನೈರ್ಮಲ್ಯ ಕಾಪಾಡಿಕೊಂಡು ಧಾರಾವಾಹಿಗಳ ಚಿತ್ರೀಕರಣಕ್ಕೆ ಅನುಮತಿ ನೀಡಿರುವುದರಿಂದ ಧಾರಾವಾಹಿಗಳ ಚಿತ್ರೀಕರಣ ಮತ್ತೆ ಪ್ರಾರಂಭಗೊಂಡಿದ್ದು ಜೂನ್ 1ರಿಂದ ವೀಕ್ಷಕರು ತಮ್ಮ ನೆಚ್ಚಿನ ಧಾರಾವಾಹಿಗಳನ್ನು ವೀಕ್ಷಿಸಬಹುದಾಗಿದೆ.
ವಿಶೇಷ ಏನೆಂದರೆ, ಈಗ ಪ್ರಸಾರವಾಗಲಿರುವ ಧಾರಾವಾಹಿಗಳಲ್ಲಿ ಕೆಲವು ಬದಲಾವಣೆಗಳಾಗಿವೆ!

also read: 'ನಾಗಿನ್‌' ಧಾರಾವಾಹಿಯಿಂದ ಹೊರದಬ್ಬಿಸಿಕೊಂಡ ನಟಿ! ಇಂಥ ಕಹಿ ಘಟನೆಗೆ ಕಾರಣ ಏನು?

'ರಾಧಾ ಕಲ್ಯಾಣ' ಮತ್ತು 'ಸುಬ್ಬಲಕ್ಷ್ಮಿ ಸಂಸಾರ' ಧಾರಾವಾಹಿಗಳ ಪ್ರಸಾರ ಇರುವುದಿಲ್ಲ. ಇದರಿಂದ ಆ ಧಾರಾವಾಹಿಗಳನ್ನು ಇಷ್ಟಪಡುತ್ತಿದ್ದ ಪ್ರೇಕ್ಷಕರಿಗೆ ಸಹಜವಾಗಿಯೇ ನಿರಾಸೆ ಆಗಿದೆ. ಉಳಿದ ಧಾರಾವಾಹಿಗಳ ಪ್ರಸಾರದ ವೇಳಾ ಪಟ್ಟಿ ಕೂಡ ಈಗ ಲಭ್ಯವಾಗಿದೆ. ಸಂಜೆ 6.30ಕ್ಕೆ ಮಾಲ್ಗುಡಿ ಡೇಸ್, 7 ಗಂಟೆಗೆ ಕಮಲಿ, ರಾತ್ರಿ 7.30ಕ್ಕೆ ಪಾರು, ರಾತ್ರಿ 8ಕ್ಕೆ ಗಟ್ಟಿಮೇಳ, 8.30ಕ್ಕೆ ಜೊತೆ ಜೊತೆಯಲಿ, ರಾತ್ರಿ 9ಕ್ಕೆ ನಾಗಿಣಿ 2, ರಾತ್ರಿ 9.30ಕ್ಕೆ ಯಾರೇ ನೀ ಮೋಹಿನಿ ಹಾಗೂ ರಾತ್ರಿ 10 ಗಂಟೆಗೆ ಬ್ರಹ್ಮಗಂಟು ಧಾರಾವಾಹಿಗಳು ಪ್ರಸಾರವಾಗಲಿವೆ.

also read: 8 ತಿಂಗಳ ಮಗುವಿಗಾಗಿ ನಟಿ ಶ್ವೇತಾ ಚೆಂಗಪ್ಪ ಈ ಲಾಕ್‌ಡೌನ್‌ ಅವಧಿಯಲ್ಲಿ ಪಟ್ಟ ಕಷ್ಟ ಒಂದೆರಡಲ್ಲ!

ಕೊರೊನಾ ವೈರಸ್‌ ಹಾವಳಿ ಇನ್ನೂ ಪೂರ್ತಿಯಾಗಿ ಕಡಿಮೆ ಆಗಿಲ್ಲ. ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಅದರ ನಡುವೆಯೂ ಲಾಕ್‌ಡೌನ್‌ ಸಡಿಲಿಕೆ ಮಾಡಲಾಗಿದೆ. ಸಾಕಷ್ಟು ಮುಂಜಾಗೃತಾ ಕ್ರಮಗಳನ್ನು ತೆಗೆದುಕೊಂಡು ಶೂಟಿಂಗ್‌ ಮಾಡಲಾಗುತ್ತಿದೆ. ಇಷ್ಟು ದಿನ ಮರು ಪ್ರಸಾರದ ಸಂಚಿಕೆಗಳನ್ನು ನೋಡುತ್ತಿದ್ದ ಪ್ರೇಕ್ಷಕರು ಜೂ.1ರಿಂದ ಹೊಸ ಎಪಿಸೋಡ್‌ಗಳನ್ನು ವೀಕ್ಷಿಸಲಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ