ಆ್ಯಪ್ನಗರ

ನಿರಾಣಿ ನೀಡಿದ್ದ 1 ಕೋಟಿ ರೂ. ಕಾರು ಹಿಂದಿರುಗಿಸಿದ ಯಡಿಯೂರಪ್ಪ

ವಿವಿಧೆಡೆಯಿಂದ ಅಪಾರ ಟೀಕೆಗಳು ವ್ಯಕ್ತವಾದ ಹಿನ್ನೆಲೆಯಲ್ಲಿ ಮಾಜಿ ಸಚಿವ ಮುರುಗೇಶ್ ಆರ್ ನಿರಾಣಿ ಅವರು ಉಡುಗೊರೆಯಾಗಿ ನೀಡಿದ್ದ 1 ಕೋಟಿ ರೂ. ಮೌಲ್ಯದ ಎಸ್‌ಯುವಿ ಕಾರನ್ನು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹಿಂದಿರುಗಿಸಿದ್ದಾರೆ.

ಏಜೆನ್ಸೀಸ್ 17 Apr 2016, 3:42 pm
ಬೆಂಗಳೂರು: ವಿವಿಧೆಡೆಯಿಂದ ಅಪಾರ ಟೀಕೆಗಳು ವ್ಯಕ್ತವಾದ ಹಿನ್ನೆಲೆಯಲ್ಲಿ ಮಾಜಿ ಸಚಿವ ಮುರುಗೇಶ್ ಆರ್ ನಿರಾಣಿ ಅವರು ಉಡುಗೊರೆಯಾಗಿ ನೀಡಿದ್ದ 1 ಕೋಟಿ ರೂ. ಮೌಲ್ಯದ ಎಸ್‌ಯುವಿ ಕಾರನ್ನು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹಿಂದಿರುಗಿಸಿದ್ದಾರೆ.
Vijaya Karnataka Web under fire yeddyurappa returns rs 1 crore suv after furore
ನಿರಾಣಿ ನೀಡಿದ್ದ 1 ಕೋಟಿ ರೂ. ಕಾರು ಹಿಂದಿರುಗಿಸಿದ ಯಡಿಯೂರಪ್ಪ


'40 ವರ್ಷಗಳ ರಾಜಕಾರಣದಲ್ಲಿ ನಾನು ಸಂಪೂರ್ಣ ರಾಜ್ಯ ಸುತ್ತಿದ್ದು, ಕಾರು ಸೇರಿ ಎಲ್ಲ ರೀತಿಯ ಸಾರ್ವಜನಿಕ ಸಂಚಾರ ವ್ಯವಸ್ಥೆಯನ್ನು ಬಳಸಿದ್ದೇನೆ. ಇದೀಗ ಅದೇ ರೀತಿ ರಾಜ್ಯ ಪ್ರವಾಸ ಕೈಗೊಳ್ಳುತ್ತಿರುವುದು ದೊಡ್ಡ ವಿಷಯವಲ್ಲ. ಅದಕ್ಕೆ ನಿರಾಣಿಯವರು ನೀಡಿದ ಕಾರನ್ನು ನಿನ್ನೆ ಹಿಂದಿರುಗಿಸಿದ್ದೇನೆ,' ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

1 ಕೋಟಿ ರೂ. ಮೌಲ್ಯದ ಕಾರನ್ನು ನಿರಾಣಿ ಉಡುಗೊರೆ ನೀಡಿದ್ದಾಗಿ ಯಡಿಯೂರಪ್ಪ ನಿನ್ನೆ ಹೇಳಿದ್ದರು. ಅಲ್ಲದೇ ಬರ ವೀಕ್ಷಣೆಗೆ ಇಂಥ ಐಷಾರಾಮಿ ಕಾರಿನಲ್ಲಿ ತೆರಳುವ ಅಗತ್ಯವೇನೆಂದು ಪತ್ರಕರ್ತರು ಕೇಳಿದ್ದ ಪ್ರಶ್ನೆಗೆ, ಅವರೆಡನ್ನು ಹೋಲಿಸಲು ಆಗುವುದಿಲ್ಲವೆಂದು ಉತ್ತರಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ