Video: ಶಿವನ ಪಾತ್ರಕ್ಕೆ ವಿದಾಯ ಹೇಳಿದ ನಟ ವಿನಯ್ ಗೌಡ!

Vijaya Karnataka Web 4 May 2021, 4:56 pm
ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಎಡೆಯೂರು ಶ್ರೀ ಸಿದ್ಧಲಿಂಗೇಶ್ವರ' ಧಾರಾವಾಹಿಯಲ್ಲಿ ಶಿವನ ಪಾತ್ರ ಮಾಡುತ್ತಿದ್ದ ನಟ ವಿನಯ್ ಗೌಡ ಅವರು ಈ ಸೀರಿಯಲ್‌ನಿಂದ ಹೊರಬಂದಿದ್ದಾರೆ. ಅವರು ನಾಲ್ಕನೇ ಬಾರಿ ಶಿವನ ಪಾತ್ರ ಹಾಕಿದ್ದರು. 'ಹರ ಹರ ಮಹಾದೇವ' ಸೀರಿಯಲ್ ಅವರಿಗೆ ದೊಡ್ಡ ಮಟ್ಟದ ಜನಪ್ರಿಯತೆ ತಂದುಕೊಟ್ಟಿತ್ತು. ಪ್ರೇಕ್ಷಕರು ಕೂಡ ಅವರ ಶಿವನ ಪೋಷಾಕನ್ನು ಮೆಚ್ಚಿದ್ದರು. ಈ ಪೌರಾಣಿಕ ಪಾತ್ರ ಮಾಡಲು ವಿನಯ್ ಕೂಡ ಸಾಕಷ್ಟು ಕಷ್ಟಪಟ್ಟಿದ್ದರು, ಮಾಂಸಾಹಾರ ತ್ಯಜಿಸಿದ್ದರು, ಮೂರು ಬಾರಿ ಬಾಡಿ ಟ್ರಾನ್ಸ್‌ಫರೇಟ್ ಕೂಡ ಮಾಡಿದ್ದರು. ಇನ್ನು ಅನೇಕ ಸಂದರ್ಶನಗಳಲ್ಲಿಯೂ ಕೂಡ ಶಿವನ ಪಾತ್ರ ಮಾಡಲು ನನಗೆ ಇಷ್ಟ ಎಂದಿದ್ದ ವಿನಯ್ ಈಗ ಶಿವನ ಪಾತ್ರದಿಂದ ಹೊರಬಂದಿದ್ದಾರೆ. ಇನ್ನು ಕನ್ನಡ ಕೆಲ ಧಾರಾವಾಹಿ ಹಾಗೂ ಸಿನಿಮಾಗಳಲ್ಲಿ ನಟಿಸಿರುವ ವಿನಯ್ ಗೌಡ ಅವರು ಈ ನಿರ್ಧಾರಕ್ಕೆ ಬರಲು ಕಾರಣವೇನು? ಆ ಬಗ್ಗೆ ಸ್ವತಃ ವಿನಯ್ ಅವರು ಮಾಹಿತಿ ನೀಡಿದ್ದಾರೆ.

Also Read-'ಎಡೆಯೂರು ಶ್ರೀ ಸಿದ್ಧಲಿಂಗೇಶ್ವರ' ಧಾರಾವಾಹಿಯಿಂದ ಹೊರಬಂದ ನಟ ವಿನಯ್ ಗೌಡ! ಕಾರಣ ಏನು?
Loading ...