Please enable javascript.Lakshmi Govindaraj,ಅಪ್ಪು ಇಲ್ಲದೆ ನಾವು ಇಷ್ಟು ಜನ ಕಾಲ ಕಳೆಯುತ್ತಿದ್ದೇವೆ ಅಂತ ಬೇಜಾರು ಆಗುತ್ತೆ - ಲಕ್ಷ್ಮೀ ಗೋವಿಂದರಾಜ್ ಕಣ್ಣೀರು - lakshmi govindaraj speaks about her brother kannada actor puneeth rajkumar in an exclusive interview - Vijay Karnataka

ಅಪ್ಪು ಇಲ್ಲದೆ ನಾವು ಇಷ್ಟು ಜನ ಕಾಲ ಕಳೆಯುತ್ತಿದ್ದೇವೆ ಅಂತ ಬೇಜಾರು ಆಗುತ್ತೆ - ಲಕ್ಷ್ಮೀ ಗೋವಿಂದರಾಜ್ ಕಣ್ಣೀರು

Vijaya Karnataka Web 20 Oct 2022, 8:18 pm
Embed
ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ನಮ್ಮೊಂದಿಗೆ ಇಲ್ಲದಿರಬಹುದು. ಆದರೆ, ಅವರ ನೆನಪುಗಳು ಮಾತ್ರ ಶಾಶ್ವತವಾಗಿವೆ. ಪುನೀತ್ ರಾಜ್‌ಕುಮಾರ್ ಜೊತೆಗಿನ ನೆನಪುಗಳನ್ನ ಅವರ ಹಿರಿಯ ಸಹೋದರಿ ಲಕ್ಷ್ಮೀ ಗೋವಿಂದರಾಜ್ ‘ವಿಜಯ ಕರ್ನಾಟಕ ವೆಬ್‌’ಗೆ ನೀಡಿರುವ ವಿಶೇಷ ಸಂದರ್ಶನದಲ್ಲಿ ಹಂಚಿಕೊಂಡಿದ್ದಾರೆ.

ಪುನೀತ್ ರಾಜ್‌ಕುಮಾರ್ ಹೇಳಿದ ಆ ಮಾತು ನನಗೆ ತುಂಬಾ ಖುಷಿ ಆಗಿತ್ತು: ಪೂರ್ಣಿಮಾ ರಾಮ್‌ಕುಮಾರ್

‘’ಅಪ್ಪುಗೆ ಹುಷಾರಿಲ್ಲ ಅಂತ ವಿಷಯ ಬಂದಾಗ ಯಾರಿಗೆ ಫೋನ್ ಮಾಡೋದು ಅಂತ ಗೊತ್ತಾಗಲಿಲ್ಲ. ಅಶ್ವಿನಿಗೆ ಫೋನ್ ಮಾಡಿದರೆ, ಅವರು ತೆಗೆಯಲಿಲ್ಲ. ಆಮೇಲೆ ಮಂಗಳಾಗೆ ಫೋನ್ ಮಾಡಿದರೆ ‘’ಅಪ್ಪು ನಮ್ಮನ್ನೆಲ್ಲಾ ಬಿಟ್ಟು ಹೋಗ್ಬಿಟ್ಟ’’ ಅಂತ ಹೇಳಿದರು. ಆಗ ಮನಸ್ಸಿಗೆ ಬಹಳ ಕಷ್ಟ ಆಗಿತ್ತು. ಆಸ್ಪತ್ರೆಯಲ್ಲಿ ಅವನು ಮಲಗಿದ್ದ ನೋಡಿ ತುಂಬಾ ನೋವಾಯಿತು. ಇವತ್ತಿಗೂ ಅಪ್ಪು ಇಲ್ಲ ಅಂತ ನೆನೆಸಿಕೊಂಡರೆ ಹೊಟ್ಟೆಯಲ್ಲಿ ಸಹಿಸಲಾಗದ ನೋವು ಬಂದುಬಿಡುತ್ತೆ’’

ಅಪ್ಪು ಮಾಮ ನನ್ನ ಜೊತೆಗೇ ಇದ್ದಾರೆ ಅನ್ಸತ್ತೆ - ಧನ್ಯಾ ರಾಮ್‌ಕುಮಾರ್

‘’ಅಪ್ಪು ಬದಲು ನಮ್ಮನ್ನ ಯಾರನ್ನಾದರೂ ಕರ್ಕೊಂಡಿದ್ರೆ ಚೆನ್ನಾಗಿರುತ್ತಿತ್ತು. ಅಪ್ಪು ಇಲ್ಲದೆ ನಾವು ಇಷ್ಟು ಜನ ಕಾಲ ಕಳೆಯುತ್ತಿದ್ದೇವೆ ಅಂತ ಬೇಜಾರು ಆಗುತ್ತೆ’’ ಎಂದು ಹೇಳುತ್ತಾ ‘ವಿಜಯ ಕರ್ನಾಟಕ ವೆಬ್‌’ಗೆ ನೀಡಿರುವ ಸಂದರ್ಶನದಲ್ಲಿ ಲಕ್ಷ್ಮೀ ಗೋವಿಂದರಾಜ್ ಕಣ್ಣೀರು ಹಾಕಿದ್ದಾರೆ.