Renukacharya: 'ಹೊನ್ನಾಳಿ ಜನತೆಗೆ ಇಂತಹ ಶಾಸಕ ಸಿಕ್ಕಿರುವುದು ನಿಜಕ್ಕೂ ಭಾಗ್ಯ'-ಗಾಯಕ ರಾಜೇಶ್ ಕೃಷ್ಣನ್‌

Vijaya Karnataka Web 1 Jul 2021, 11:31 pm
ಸಿಎಂ ರಾಜಕೀಯ ಕಾರ್ಯದರ್ಶಿ ಹಾಗೂ ದಾವಣಗೆರೆ ಜಿಲ್ಲೆಯ ಹೊನ್ನಾಳಿ ಶಾಸಕ ಎಂ ಪಿ ರೇಣುಕಾಚಾರ್ಯ ಕೊರೊನಾ ಸಂದರ್ಭದಲ್ಲಿ ಜನರ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಶ್ರಮಿಸಿದ್ದಕ್ಕಾಗಿ ಸ್ಯಾಂಡಲ್ ವುಡ್ ನ ಖ್ಯಾತ ಹಿನ್ನಲೆ ಗಾಯಕ ರಾಜೇಶ್ ಕೃಷ್ಣನ್ ಪ್ರಶಂಸೆಯನ್ನು ವ್ಯಕ್ತಪಡಿಸಿದ್ದಾರೆ.

ದಾವಣಗೆರೆ: ಅನಾಥ ಬಾಲಕಿಯ ದತ್ತು ಪಡೆಯಲು ರೇಣುಕಾಚಾರ್ಯ ನಿರ್ಧಾರ

'ಶಾಸಕ ರೇಣುಕಾಚಾರ್ಯ ಹೆಮ್ಮಾರಿ ಕೋರೊನಾ ಸಮಯದಲ್ಲಿ ಸೋಂಕಿತರಿಗೆ ನಿಶ್ವಾರ್ಥದಿಂದ ಸೇವೆ ಸಲ್ಲಿಸುತ್ತಿದ್ದಾರೆ. ಅಲ್ಲದೇ, ಮುಖ್ಯವಾಗಿ ರೇಣುಕಾಚಾರ್ಯ ಕೋವಿಡ್ ಕೇರ್ ಸೆಂಟರ್‌ನಲ್ಲೇ ವಾಸ್ತವ್ಯ ಮಾಡುವ ಮೂಲಕ ಕೋರೊನಾ ಸೋಂಕಿತರಿಗೆ ಆತ್ಮಸ್ಥೈರ್ಯ ತುಂಬುತ್ತಿದ್ದಾರೆ. ಸೋಂಕಿತರ ಹಿತಕ್ಕಾಗಿ 24/7 ಸೇವೆ ಸಲ್ಲಿಸುತ್ತಿದ್ದಾರೆ. ಹ್ಯಾಟ್ಸ್ ಆಫ್ ಟು ಯು ರೇಣುಕಾಚಾರ್ಯ. ಇಂತಹ ಶಾಸಕರು ಹೊನ್ನಾಳಿ ಕ್ಷೇತ್ರದ ಜನರಿಗೆ ಸಿಕ್ಕಿರುವುದು ನಿಜವಾಗಿಯೂ ಅವರ ಭಾಗ್ಯ. ನಿಮ್ಮ ಸೇವೆ ಇದೇ ರೀತಿ ಮುಂದುವರಿಯಲಿ. ನಮ್ಮೆಲ್ಲ ಬೆಂಬಲ ನಿಮಗೆ ಸದಾ ಇದೆ. ಅಲ್ಲದೇ, ಶುಭ ಹಾರೈಕೆಗಳು ನಿಮ್ಮ ಜೊತೆಗಿವೆ. ಥ್ಯಾಂಕ್ ಯು ಸೋ ಮಚ್ ಸರ್, ಗಾಡ್ ಬ್ಲೆಸ್ ಯು ವಿಥ್ ಆಲ್ ದಿ ಪೀಸ್ ಆಂಡ್ ಜಾಯ್ ಸರ್. ಬೇರೆ ಸೇವೆ ಮಾಡುವ ನಿಮ್ಮ ಬಗ್ಗೆ ನಮಗೆ ಹೆಮ್ಮ ಆಗುತ್ತಿದೆ' ಎಂದು ಹೇಳಿ ಶುಭ ಹಾರೈಕೆ ಹಾಗೂ ಧನ್ಯವಾದಗಳನ್ನು ಹೇಳಿ ರಾಜೇಶ್ ಕೃಷ್ಣನ್ ಮೆಚ್ಚುಗೆ ಸಂದೇಶ ಕಳಿಸಿದ್ದಾರೆ.

ಶಾಸಕ ರೇಣುಕಾಚಾರ್ಯ ಕೆಲಸಕ್ಕೆ 'ಹ್ಯಾಟ್ಸ್ ಆಫ್ ಟು ಯೂ' ಎಂದ ಗಾಯಕ ರಾಜೇಶ್ ಕೃಷ್ಣನ್!
Loading ...