ಆ್ಯಪ್ನಗರ

ಮೊಸಳೆಗಳೊಂದಿಗೆ ಈಜುವ ಹುಚ್ಚು ಸಾಹಸ...! : ಮುಂದೇನಾಯ್ತು ಗೊತ್ತಾ...?

ಇದೊಂದು ಹುಚ್ಚು ಸಾಹಸದ ದೃಶ್ಯ. ಈ ವಿಡಿಯೋ ನೋಡಿದ ನೆಟ್ಟಿಗರು ಈತ ಅಲ್ಲಿಗೆ ಹೋಗಿದ್ದು ಯಾಕೆ ಎಂದು ಪ್ರಶ್ನಿಸುತ್ತಿದ್ದಾರೆ.

Vijaya Karnataka Web 15 Oct 2020, 4:27 pm
ಕೆಲವರು ಬೇಕೆಂದೇ ಅಪಾಯಗಳನ್ನು ಮೈಮೇಲೆ ಎಳೆದುಕೊಳ್ಳುತ್ತಾರೆ. ಸಂಕಷ್ಟ ಎದುರಾಗುತ್ತದೆ ಎಂದು ಗೊತ್ತಿದ್ದರೂ ಭಂಡ ಧೈರ್ಯ ಪ್ರದರ್ಶಿಸಿ ಮುನ್ನುಗ್ಗುತ್ತಾರೆ. ಇದು ಕೂಡಾ ಅಂತಹದ್ದೇ ಒಂದು ಹುಚ್ಚು ಸಾಹಸದ ದೃಶ್ಯ.
Vijaya Karnataka Web Image by JamesDeMers from Pixabay
| Representative image | Image by JamesDeMers from Pixabay


ನೀವು ಶಾರ್ಕ್‌ನ ಪಕ್ಕದಲ್ಲಿ ಈಜಾಟ ನಡೆಸಿದ ದೃಶ್ಯಗಳನ್ನು ನೋಡಿರಬಹುದು. ಆದರೆ, ಎಂದಾದರೂ ಮೊಸಳೆಗಳೊಂದಿಗೆ ಯಾರಾದರೂ ಈಜಿದ್ದನ್ನು ನೋಡಿದ್ದೀರಾ...? ಬಹುಶಃ ಇರಲಿಕ್ಕಿಲ್ಲ. ಯಾಕೆಂದರೆ, ಎಲ್ಲರಿಗೂ ಮೊಸಳೆಗಳಿಂದಾಗುವ ಅಪಾಯ ಎಂತಹದ್ದು ಎಂಬುದರ ಅರಿವಿದೆ. ಹೀಗಾಗಿ, ಸಾಮಾನ್ಯವಾಗಿ ಯಾರೂ ಮೊಸಳೆಗಳೊಂದಿಗೆ ಈಜುವ ಸಾಹಸವನ್ನು ಮಾಡುವುದಿಲ್ಲ. ಆದರೆ, ಸದ್ಯ ಇಂತಹದ್ದೇ ಕೆಟ್ಟ ಕನಸಿನೊಂದಿಗೆ ವ್ಯಕ್ತಿಯೊಬ್ಬರು ನೀರಿಗಿಳಿದ ವಿಡಿಯೋ ವೈರಲ್ ಆಗುತ್ತಿದೆ.

Also Read : ಅಯ್ಯೋ... ಪಾಪ... ಜಿರಾಫೆಗೆ ಹುಲ್ಲು ತಿನ್ನಲು ಏನೆಲ್ಲಾ ಮಾಡ್ಬೇಕು ನೋಡಿ...!

@Animalsandfools ಎಂಬ ಟ್ವಿಟ್ಟರ್ ಖಾತೆಯಲ್ಲಿ ಅಪ್ಲೋಡ್ ಆದ ವಿಡಿಯೋ ಇದು. 8 ಸೆಕೆಂಡುಗಳ ಈ ಕ್ಲಿಪ್‌ನಲ್ಲಿ ವ್ಯಕ್ತಿಯೊಬ್ಬರು ಎರಡು ಮೊಸಳೆಗಳು ಇರುವಲ್ಲಿಯೇ ಈಜಲು ಹೋಗುವ ದೃಶ್ಯವಿದೆ. ಮರದ ನೆಲಹಾಸು ಇರುವಂತಹ ಜಾಗದಲ್ಲಿ ಈ ವ್ಯಕ್ತಿ ನೀರಿಗೆ ಇಳಿಯುವ ದೃಶ್ಯ ಇದು. ಆದರೆ, ಇಲ್ಲಿ ಸೂಕ್ಷ್ಮವಾಗಿ ಗಮನಿಸಿದರೆ ಪಕ್ಕದಲ್ಲಿಯೇ ಎರಡು ಮೊಸಳೆಗಳೂ ಕಾಣುತ್ತವೆ. ಈ ಎರಡು ಮೊಸಳೆಗಳು ತನ್ನ ಹತ್ತಿರಕ್ಕೆ ಬರುವಾಗ ಈ ವ್ಯಕ್ತಿಗೆ ಭಯವಾಗುತ್ತದೆ. ಈ ಭಯದಲ್ಲಿ ಅತ್ತಿಂದಿತ್ತ ನೋಡುವಾಗಲೇ ಒಂದು ಮೊಸಳೆ ಇವರ ಭುಜದ ಮೇಲೆ ದಾಳಿ ಮಾಡಲು ಯತ್ನಿಸುತ್ತದೆ. ಆಗ ಆ ವ್ಯಕ್ತಿ ಓಡಿ ಮೇಲೆ ಬರುತ್ತಾರೆ.

Also Read : ಮತ್ತೊಂದು ವಿವಾಹಕ್ಕೆ ಸಿದ್ಧತೆ : ಹಾಲ್‌ಗೆ ಬಂದು ಪತ್ನಿಯ ಗಲಾಟೆ! : ಇದು ಪಕ್ಕಾ ಫಿಲ್ಮಿ ಸ್ಟೈಲ್ ದೃಶ್ಯ


ಈ ದೃಶ್ಯವನ್ನು ನೋಡಿದಾಗಲೇ ಒಂದು ಕ್ಷಣ ದಿಗಿಲಾಗುತ್ತದೆ. ನಿರೀಕ್ಷೆಯಂತೆಯೇ ಈ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಹರಿದಾಡುತ್ತಿದೆ. ಈ ವಿಡಿಯೋ ನೋಡಿದ ಬಹುತೇಕರು ಆತಂಕ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಕೆಲವರು ಈ ವ್ಯಕ್ತಿ ಮೊಸಳೆಗಳು ಇದ್ದಲ್ಲಿಗೆ ಹೋಗಿದ್ದೇಗೆ ಎಂದು ಹಾಸ್ಯದ ದಾಟಿಯಲ್ಲಿಯೇ ಟೀಕಿಸಿದ್ದಾರೆ.

Also Read : ಚಕ್ರವ್ಯೂಹದಂತಿರುವ ಈ ಕಾಡಿನೊಳಗೆ ಹೋದರೆ ಜೀವಂತವಾಗಿ ಮರಳುವುದು ತುಂಬಾ ಕಷ್ಟವಂತೆ!

ಇವೆಲ್ಲಾ ಅಪಾಯಕಾರಿ ಸಾಹಸಗಳು. ಈ ವ್ಯಕ್ತಿಯ ಅದೃಷ್ಟ ಚೆನ್ನಾಗಿತ್ತು. ಹೀಗಾಗಿ, ಇವರು ಕೂದಳೆಲೆ ಅಂತರದಿಂದ ಮೊಸಳೆಗಳಿಂದ ತಪ್ಪಿಸಿಕೊಂಡಿದ್ದಾರೆ. ಆದರೆ, ಭಂಡ ಧೈರ್ಯ ತೋರಿದ ಎಲ್ಲಾ ಸಂದರ್ಭದಲ್ಲೂ ಹೀಗೆ ಅದೃಷ್ಟ ಕೈ ಹಿಡಿಯುತ್ತದೆ ಎಂದು ಖಂಡಿತಾ ನಿರೀಕ್ಷೆ ಮಾಡಲು ಸಾಧ್ಯವಿಲ್ಲ. ಹೀಗಾಗಿ, ಅವರವರ ಎಚ್ಚರಿಕೆ ಖಂಡಿತಾ ಅಗತ್ಯ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ